Tuesday, December 2, 2008

ಉಗ್ರ ಉಪ­ಟಳ

ಮುಂಬೈ­ನಲ್ಲಿ `ಉಗ್ರ'ರು ನಡೆ­ಸಿದ ಪೈಶಾ­ಚಿಕ ಕೃತ್ಯ­ದಿಂದ ಇಡೀ ದೇಶ ದಂಗು ಬಡಿದು ಹೋಗಿದೆ. ಅಲ್ಲಲ್ಲಿ ಆಗಾಗ್ಗೆ ನಡೆ­ಯು­ತ್ತಿದ್ದ ಭಯೋ­ತ್ಪಾ­ದಕ ವಿಧ್ವಂ­ಸ­ಗಳ ಮಾದ­ರಿ­ಗಿಂತ ಭಿನ್ನ­ವಾಗಿ ವ್ಯವ­ಸ್ಥಿತ, ಯೋಜ­ನಾ­ಬ­ದ್ಧ­ವಾಗಿ ಉಗ್ರರು ನಡೆ­ಸಿದ ದಾಳಿ ದೇಶದ ಭದ್ರತಾ ವ್ಯವಸ್ಥೆ ಸಂಪೂರ್ಣ ಬಿಡಾ­ಸೆದ್ದು ಹೋಗಿ­ರುವ ಸ್ಪಷ್ಟ ಸೂಚ­ನೆ­ಯಾ­ಗಿದೆ.
ಕೇಂದ್ರ ಗುಪ್ತ­ಚರ, ಕರಾ­ವಳಿ ರಕ್ಷಣಾ ಪಡೆ, ಆಂತ­ರಿಕ ಭದ್ರತೆ ಹಾಗೂ ಶುದ್ಧಾಂ­ಗ­ವಾಗಿ ಕೇಂದ್ರ ಸರ್ಕಾ­ರದ ಆಡ­ಳಿತ ವೈಫ­ಲ್ಯ­ವನ್ನು ಇದು ಎತ್ತಿ ತೋರಿ­ಸು­ತ್ತದೆ. ಕೇಂದ್ರ ಹಾಗೂ ಮಹಾ­ರಾಷ್ಟ್ರ ರಾಜ್ಯ ಸರ್ಕಾ­ರದ ವಕ್ತಾ­ರರು ಈಗ ಹೇಳು­ತ್ತಿ­ರು­ವುದು `ದೇಶ­ದೊ­ಳಕ್ಕೆ ನುಸು­ಳಿದ 20 ಮಂದಿ ವಿದೇಶಿ ಉಗ್ರರು ಈ ಕೃತ್ಯ­ವೆ­ಸ­ಗಿ­ದ್ದಾರೆ' ಎಂದು. ಕೇವಲ ಅಷ್ಟೇ ಮಂದಿ ಇಡೀ ದೇಶ­ವನ್ನು ಮೂರು ದಿನ­ಗಳ ಕಾಲ ಉಸಿ­ರು­ಗ­ಟ್ಟಿಸಿ ನಿಲ್ಲಿ­ಸುವ ಶಕ್ತಿ ಹೊಂದಿ­ದ್ದರೆ, ದೇಶ­ದು­ದ್ದಕ್ಕೂ ತಲೆ ಮರೆ­ಸಿ­ಕೊಂ­ಡಿ­ರುವ ಪಾಕಿ­ಸ್ತಾನಿ, ಬಾಂಗ್ಲಾ­ದೇ­ಶಿ­ಯರು ಅಷ್ಟೂ ಮಂದಿ ಸೇರಿ­ದರೆ ವಾರ­ದೊ­ಳಗೆ ದೇಶದ ಸಾರ್ವ­ಭೌ­ಮ­ತ್ವನ್ನು ಕೆಡವಿ, ತಮ್ಮದೇ ಸರ್ಕಾರ ಸ್ಥಾಪಿ­ಸು­ವಷ್ಟು ಬಲ­ಶಾ­ಲಿ­ಯಾ­ಗಿ­ಲ್ಲ­ವೆಂದು ನಂಬು­ವು­ದಾ­ದರೂ ಹೇಗೆ?
ಸದಾ ತಮ್ಮ ಡ್ರೆಸ್‌ ಬಗ್ಗೆ ಕಾಳ­ಜಿ­ಯಿ­ಟ್ಟು­ಕೊಂ­ಡಿ­ರುವ ಘನ­ತೆ­ವೆತ್ತ ದೇಶದ ಗೃಹ ಸಚಿವ ಶಿವ­ರಾ­ಜ್‌­ಪಾ­ಟೀ­ಲ್‌­ರಿಗೆ ಕನಿಷ್ಠ ನೈತಿ­ಕತೆ ಇದ್ದಿ­ದ್ದರೆ ದೇಶದ ಜನರ ಡ್ರೆಸ್‌ ಅಲ್ಲಾ, ಅಮೂಲ್ಯ ಜೀವವೇ ಬಂದೂ­ಕಿನ ಮೊನೆ­ಯಲ್ಲಿ ನಿಂತಿ­ರುವ ಬಗ್ಗೆ ಕಾಳಜಿ ತೋರಿ­ಸ­ಬೇ­ಕಿತ್ತು. ಕನಿಷ್ಠ ತನ್ನ ಬಳಿ ಗೃಹ­ಖಾತೆ ನಿಭಾ­ಯಿ­ಸಲು ಆಗು­ವು­ದಿ­ಲ್ಲ­ವೆಂದು ರಾಜೀ­ನಾ­ಮೆ­ಯ­ನ್ನಾ­ದರೂ ಬಿಸಾಕಿ ವೃದ್ಧಾ­ಪ್ಯ­ದಲ್ಲಿ ದೇವರ ಮುಂದೆ ಭಜನೆ ಮಾಡುತ್ತಾ ಕೂರ­ಬ­ಹು­ದಿತ್ತು.
ಕ್ರಿಯಾ­ಶಕ್ತಿ, ಚಿಂತ­ನಾ­ಶ­ಕ್ತಿ­ಯಿ­ಲ್ಲದ, ಅವ­ಲಂ­ಬ­ನೆ­ಯಿ­ಲ್ಲದೇ ಸ್ವತಃ ನಡೆ­ಯಲೂ ಆಗದ, ಅಧಿ­ಕಾ­ರಕ್ಕೆ ಅಂಟಿ­ಕೂ­ರುವ ಜಾಢ್ಯ ಹಿಡಿದ ಮುದಿ ರಾಜ­ಕಾ­ರ­ಣಿ­ಗ­ಳಿಂ­ದಾಗಿ ದೇಶಕ್ಕೆ ಇಂತಹ ದುರ್ಗತಿ ಬಂದಿ­ರು­ವುದು. ಉಗ್ರರ ವಿರುದ್ಧ ಜೀವದ ಹಂಗು ತೊರೆದು ಹೋರಾ­ಡುವ, ದೇಶೀಯ ವಿದ್ರೋ­ಹಿ­ಗ­ಳನ್ನು ಮುಲಾ­ಜಿ­ಲ್ಲದೇ ಬಗ್ಗು ಬಡಿ­ಯುವ ಸೈನ್ಯ-ಪೊಲೀ­ಸರ ಆತ್ಮ­ಬಲ ಹೆಚ್ಚಿ­ಸುವ ಶಕ್ತಿ ಒಬ್ಬನೇ ಒಬ್ಬ ರಾಜ­ಕಾ­ರ­ಣಿಗೆ ಇಲ್ಲ. ಉರಿವ ಮನೆ­ಯಲ್ಲಿ ಗಳ ಎಣಿ­ಸುವ ಕುಯು­ಕ್ತಿ­ಯನ್ನು ಎಲ್ಲಾ ರಾಜ­ಕಾ­ರ­ಣಿ­ಗಳೂ ಮಾಡು­ತ್ತಿ­ದ್ದಾರೆ. ಭಯೋ­ತ್ಪಾ­ದ­ಕ­ರನ್ನು ದೇಶ­ದ್ರೋ­ಹಿ­ಗಳ ಪಟ್ಟಿಗೆ ಸೇರಿಸಿ, ಯಾವ ರಾಜ­ಕೀಯ, ಸೈದ್ಧಾಂ­ತಿಕ ಹಂಗಿ­ಲ್ಲದೇ ಗಲ್ಲಿ­ಗೇ­ರಿ­ಸುವ ಕಠಿಣ ನಿರ್ಧಾರ ತೆಗೆ­ದು­ಕೊ­ಳ್ಳು­ವ­ವ­ರೆಗೆ ಈ ದೇಶದ ಶಾಂತಿಗೆ ಉಳಿ­ಗಾ­ಲ­ವಿ­ಲ್ಲ­ವೆಂ­ಬುದು ಎಲ್ಲ­ರಿಗೂ ಸ್ಪಷ್ಟ­ವಾ­ಗ­ಬೇಕು. ನಮ್ಮ ಹಣ­ವನ್ನು ತೆರಿಗೆ ರೂಪ­ದಲ್ಲಿ ವಸೂಲು ಮಾಡಿ ತಾವು ಮಜಾ ಉಡಾ­ಯಿ­ಸುವ ರಾಜ­ಕಾ­ರ­ಣಿ­ಗಳು ಇನ್ನಾ­ದರೂ ಸ್ಪಷ್ಟ ನಿಲುವು ತೆಗೆ­ದು­ಕೊ­ಳ್ಳ­ದಿ­ದ್ದರೆ ಜನ ಬೀದಿ­ಬೀ­ದಿ­ಯಲ್ಲಿ ಛೀ ಥೂ ಎಂದು ಉಗಿ­ಯುವ ದಿನ ದೂರ­ವಿಲ್ಲ.
ಏನಾ­ಗಿದೆ ದೇಶಕ್ಕೆ?
ಕಾಶ್ಮೀರ, ಮಣಿ­ಪುರ, ತ್ರಿಪುರ, ಅಸ್ಸಾಂ, ನಾಗಾ­ಲ್ಯಾಂಡ್‌, ಪಂಜಾಬ್‌ ಹೀಗೆ ದೇಶ­ದು­ದ್ದಕ್ಕೂ ಎರಡು ದಶ­ಕ­ಗಳ ಹಿಂದೆ ನಡೆ­ಯು­ತ್ತಿದ್ದ ಸ್ವಾತಂತ್ರ್ಯ ಹೋರಾಟ ರೂಪದ ಹಿಂಸಾ­ತ್ಮಕ ಚಳ­ವಳಿ ಈಗ ಹದ್ದು­ಬ­ಸ್ತಿಗೆ ಬಂದಿದೆ. 1992 ರ ಈಚೆಗೆ ಬಾಬ್ರಿ ಮಸೀ­ದಿ­ಯನ್ನು ಕೆಡ­ವಿದ ಮೇಲೆ ಭಯೋ­ತ್ಪಾ­ದ­ನೆಯ ಮತ್ತೊಂದು ಮಜಲು ಶುರು­ವಾ­ಯಿತು. ಬಾಬ್ರಿ ಮಸೀ­ದಿ­ಯನ್ನು ಕೆಡವಿ ಹಿಂದೂ ಕೋಮು­ವಾ­ದಿ­ಗಳು ವಿೃಂ­ಭಿ­ಸಿದ ಡಿಸೆಂ­ಬರ್‌ 6 ರ ಕರಾ­ಳ­ದಿ­ನದ ಬೆಳ­ಕಿ­ನಲ್ಲಿ ಈ ಭಯೋ­ತ್ಪಾ­ದನೆ ವಿಧ್ವಂ­ಸ­ವನ್ನು ನೋಡದೇ ಹೋದರೆ ಕತ್ತ­ಲೆ­ಯಲ್ಲಿ ಬೀಗದ ಕೈಯನ್ನು ಕಳೆ­ದು­ಕೊಂಡು ಬೆಳ­ಕಿ­ನಲ್ಲಿ ಬೀಗದ ಕೈಯನ್ನು ಹುಡು­ಕಿ­ದಂ­ತಹ ವ್ಯರ್ಥ ಪ್ರಯ­ತ್ನ­ವಾ­ಗು­ತ್ತದೆ. ಇದನ್ನು ಆಳು­ವ­ವರು, ಸಮಾಜ ಚಿಂತ­ಕರು, ರಕ್ಷಣಾ ವಿಶ್ಲೇ­ಷ­ಕರು ಅರ್ಥ ಮಾಡಿ­ಕೊ­ಳ್ಳ­ಬೇಕು.
ಇತ್ತೀ­ಚೆಗೆ `ವಿಜಯ ಕರ್ನಾ­ಟಕ' ಪತ್ರಿ­ಕೆ­ಯಲ್ಲಿ ನಿವೃತ್ತ ಮುಖ್ಯ ನ್ಯಾಯ­ಮೂರ್ತಿ, ಹಾಲಿ ರಾಜ್ಯ­ಸಭಾ ಸದಸ್ಯ ಶ್ರೀಮಾನ್‌ ಎಂ. ರಾಮಾ­ಜೋ­ಯಿ­ಸ್‌­ರ­ವರು ಬರೆದ ಲೇಖ­ನ­ದಲ್ಲಿ `ದೇಶ­ದು­ದ್ದಕ್ಕೂ ನಡೆದ ಮುಸ್ಲಿಂ ಭಯೋ­ತ್ಪಾ­ದನಾ ಕೃತ್ಯ­ಗ­ಳಿಗೆ ಪ್ರತೀ­ಕಾ­ರ­ವಾಗಿ ಸಾಧ್ವಿ ಪ್ರಗ್ಯಾ ಸಿಂಗ್‌ ಠಾಕೂರ್‌ ಮತ್ತ­ವರ ಸಂಗಾ­ತಿ­ಗಳು ಭಯೋ­ತ್ಪಾ­ದನೆ ಕೃತ್ಯಕ್ಕೆ ಇಳಿ­ದರು. ಇದು ಪ್ರತಿ­ಸ್ಪಂ­ದ­ನಾ­ತ್ಮ­ಕ­ವಾಗಿ ಬೆಳೆ­ದು­ಬಂದ ಉದ್ಧೇ­ಶಿತ ಕೃತ್ಯವೇ ವಿನಃ ಹಿಂದೂ ಭಯೋ­ತ್ಪಾ­ದನೆ ಎಂದು ಕರೆ­ಯ­ಬಾ­ರದು. ಅವ­ರೆಲ್ಲಾ ಭಗ­ತ್‌­ಸಿಂಗ್‌, ಸುಖ­ದೇವ್‌, ರಾಜ­ಗು­ರು­ರಂ­ತ­ಹ­ವರ ಹೋರಾ­ಟದ ಪರಂ­ಪ­ರೆಗೆ ಸೇರಿ­ದ­ವರು' ಎಂದು ಬಣ್ಣಿ­ಸಿ­ದ್ದರು.
ಕ್ರಿಯೆ ಇಲ್ಲದೇ ಪ್ರತಿ­ಕ್ರಿಯೆ ಇರು­ವು­ದಿ­ಲ್ಲ­ವೆಂ­ಬುದು ವಿಜ್ಞಾ­ನದ ನಿಯಮ. ರಾಮಾ­ಜೋ­ಯಿಸ್‌ ಮಾತು­ಗ­ಳನ್ನೇ ಮುಂದು­ವ­ರೆ­ಸು­ವು­ದಾ­ದರೆ ಈಗ ನಡೆ­ಯು­ತ್ತಿ­ರುವ ಪಾತಕೀ ಕೃತ್ಯ­ಗ­ಳಿಗೂ ಒಂದು ಕ್ರಿಯಾ­ಸ್ವ­ರೂ­ಪದ ಮೂಲ ಇರ­ಲೇ­ಬೇ­ಕ­ಲ್ಲವೇ. ಅದನ್ನೇ ಬಾಬ್ರಿ ಮಸೀದಿ ಕೆಡ­ವಿದ ಕೃತ್ಯ ಎಂದು ಹೇಳ­ಬ­ಹುದು.
ಹಾಗಂತ ರಾಮ­ಜೋ­ಯಿ­ಸ್‌­ರ­ವರು ಸಮ­ರ್ಥಿ­ಸಿ­ಕೊಂ­ಡಂತೆ ದೇಶ­ದ­ಲ್ಲಿನ ಭಯೋ­ತ್ಪಾ­ದನೆ ಕೃತ್ಯ­ಗ­ಳನ್ನು ಸಮ­ರ್ಥಿ­ಸು­ವುದು ಹಿಂಸಾ­ವಿ­ನೋ­ದ­ವಾ­ಗು­ತ್ತದೆ. ಹಿಂಸೆ­ಯನ್ನು ಸಂಭ್ರ­ಮಿ­ಸು­ವುದು, ಅದನ್ನು ಪ್ರತ್ಯಕ್ಷ ಯಾ ಪರೋ­ಕ್ಷ­ವಾಗಿ ಸಮ­ರ್ಥಿ­ಸು­ವುದು ಎರಡೂ ಕೂಡ ಶಾಂತಿ ಪ್ರಿಯ­ರಿಗೆ ತಕ್ಕು­ದಲ್ಲ. ಭಯೋ­ತ್ಪಾ­ದನೆ ಯಾವುದೇ ಮೂಲ­ದಿಂದ ಬರಲಿ ಅದು ಖಂಡ­ನಾರ್ಹ, ಶಿಕ್ಷಾರ್ಹ. ಹಿಂದು­ಗಳು ಮಾಡಿ­ದಾ­ಕ್ಷಣ ಅದು ಒಪ್ಪಿತ, ಮುಸ್ಲಿ­ಮರು ಮಾಡಿ­ದಾ­ಕ್ಷಣ ಅದು ಖಂಡ­ನೀ­ಯ­ವೆಂ­ಬುದು ಶಾಂತಿ­ಪ್ರಿ­ಯ­ರಿಗೆ ಶೋಭೆ ತರುವ ಸಂಗ­ತಿ­ಯಲ್ಲ. ಹಾಗೆ ಹೇಳುತ್ತಾ ಹೋದರೆ 80 ರ ದಶ­ಕ­ದಲ್ಲಿ ಪಂಜಾ­ಬಿ­ನಲ್ಲಿ ಪ್ರತ್ಯೇಕ ಖಾಲಿ­ಸ್ತಾ­ನ್‌­ಗಾಗಿ ಬಿಂದ್ರ­ನ್‌­ವಾಲೆ, ಅಸ್ಸಾಂನ ಉಲ್ಫಾ ಉಗ್ರರು, ತ್ರಿಪುರ ವಿಮೋ­ಚನಾ ಹೋರಾ­ಟ­ಗಾ­ರರು ಹೀಗೆ ಎಲ್ಲ­ವನ್ನೂ ಸಮ­ರ್ಥಿ­ಸ­ಬೇ­ಕಾ­ಗು­ತ್ತದೆ. ಏಕೆಂ­ದರೆ ರಾಮಾ­ಜೋ­ಯಿಸ್‌ ಲೆಕ್ಕ­ದಲ್ಲಿ ಇವ­ರ್ಯಾರು ಸಾಬ­ರಲ್ಲ. ಅವ­ರೆ­ಲ್ಲರೂ `ಸೋಕಾಲ್ಡ್‌ ಹಿಂದು­ಗಳೇ' ಆಗು­ತ್ತಾರೆ.
ಮುಂ`ಭಯ':
ಮುಂಬೈ ಎಂದರೆ ಭಯ ಪಡುವ ಸ್ಥಿತಿ ಈಗಿ­ನ­ದಲ್ಲ. ಬಾಬ್ರಿ ಮಸೀದಿ ಧ್ವಂಸದ ನಂತರ ನಡೆದ ಮುಂಬೈ ಕೋಮು­ಗ­ಲಭೆ ಕುರಿತು ನ್ಯಾಯ­ಮೂರ್ತಿ ಶ್ರೀಕೃಷ್ಣ ಅವರು ಸಲ್ಲಿ­ಸಿದ `ಶ್ರೀಕೃಷ್ಣ ರಿಪೋರ್ಟ್‌' ಓದಿ­ದರೆ ಎದೆ ಝಲ್ಲ­ನೆ­ನಿ­ಸು­ತ್ತದೆ. ಆದರೆ ಇವ­ತ್ತಿಗೂ ಶ್ರೀ ಕೃಷ್ಣ ಕಮಿ­ಶನ್‌ ರಿಪೋ­ರ್ಟ್‌­ನಲ್ಲಿ ಆರೋ­ಪಿ­ತ­ರೆಂದು ಹೆಸರು ಪಡೆದ ಯಾರಿಗೂ ಶಿಕ್ಷೆ­ಯಾ­ಗಿಲ್ಲ. ಅವ­ರೆಲ್ಲಾ ಹಾಗೆ ಸರಾ­ಗ­ವಾಗಿ ಓಡಾ­ಡಿ­ಕೊಂ­ಡಿ­ದ್ದಾರೆ. ಇದಕ್ಕೆ ಯಾರು ಹೊಣೆ?
ಮುಂಬೈ­ನಲ್ಲಿ ನಡೆದ ವಿಧ್ವಂ­ಸಕ ದಾಳಿಯ ಚಿತ್ರ­ವನ್ನು ಟಿ.ವಿ.ಯಲ್ಲಿ ನೋಡು­ತ್ತಿ­ದ್ದರೆ ಮೈ ನಡು­ಗು­ತ್ತದೆ. ತಾಜ್‌, ಟ್ರೆಡೆಂಟ್‌, ಒಬೆ­ರಾಯ್‌ ಹಾಗೂ ನಾರಿ­ಮ­ನ್‌­ಹೌ­ಸ್‌ನ್ನು ಸುಮಾರು 3 ದಿನ­ಗಳ ಕಾಲ ತಮ್ಮ ಹಿಡಿ­ತ­ದ­ಲ್ಲಿ­ಟ್ಟು­ಕೊಂಡ ಉಗ್ರರು ಅಸಾ­ಮಾ­ನ್ಯ­ರೇ­ನಲ್ಲ. ಬೂಟಿನ ತುದಿ­ಯಿಂದ ಹೊಸ­ಕಿ­ಹಾ­ಕು­ವಷ್ಟು ಬೆರ­ಳೆ­ಣಿ­ಕೆಯ ಜನ ಅಲ್ಲಿ­ದ್ದರು. ಆದರೆ ಅವ­ರಿಗೆ ಬೆಂಬ­ಲಿಸಿ ನಿಂತ­ರಲ್ಲ. ಅವರ ಬಗ್ಗೆ ಸರ್ಕಾರ ಎಚ್ಚ­ರ­ವ­ಹಿ­ಸ­ಬೇ­ಕಾ­ಗಿದೆ.
ಈಗ ಬರು­ತ್ತಿ­ರುವ ವರ­ದಿ­ಗಳ ಪ್ರಕಾರ ಈ ಕೆಲವು ಹೋಟೆ­ಲ್‌­ಗ­ಳಲ್ಲಿ ಕೆಲವು ದಿನ­ಗ­ಳಿಗೆ ಮೊದಲೇ ಉಗ್ರರು ನೌಕ­ರಿಗೆ ಸೇರಿ­ದ್ದರು. ಅಲ್ಲಿಂ­ದಲೇ ಹೊಂಚು ಹಾಕಿ­ದ್ದರು. ಮೊದಲೇ ಆಗ­ಮಿಸಿ ಸಿದ್ಧತೆ ಮಾಡಿ­ಕೊಂಡ ಉಗ್ರರ ಅಪ್ಪಣೆ ಮೇರೆಗೆ ಗಡಿ­ಭಾ­ಗ­ದಿಂದ ಕೆಲ­ವರು ಒಳಗೆ ನುಸು­ಳಿ­ದರು. ಇಡೀ ದೇಶ­ವನ್ನೇ ನಡು­ಗಿ­ಸಿ­ದರು.
ಹಾಗಾ­ದರೆ ದೇಶ­ದೊ­ಳ­ಗಿನ ದ್ರೋಹಿ­ಗಳು ಈ ವಿದೇ­ಶಿ­ಯ­ರಿಗೆ ಸಪೋರ್ಟ್‌ ಮಾಡಿದ್ದು ಸುಳ್ಳಲ್ಲ. ಅಲ್ಲದೇ ದೇಶ­ದೊ­ಳಕ್ಕೆ ನುಸು­ಳುವ ವಿದೇ­ಶಿ­ಯ­ರನ್ನು ತಡೆ­ಯುವ ಶಕ್ತಿ ನಮ್ಮ ರಕ್ಷಣಾ ವ್ಯವ­ಸ್ಥೆಗೆ ಇಲ್ಲವೆ?
ದೇಶದ ರಕ್ಷಣಾ ವ್ಯವಸ್ಥೆ ಎಷ್ಟು ತಿರುಪೆ ಎದ್ದು ಹೋಗಿದೆ ಎಂಬು­ದಕ್ಕೆ ಇಲ್ಲಿದೆ ಉದಾ­ಹ­ರಣೆ. ನ.28 ರಂದು ಮಾಸ್ಕೋ­ದಿಂದ ದೆಹ­ಲಿಗೆ ಕರ್ನಾ­ಟಕ ಮೂಲದ ವ್ಯಕ್ತಿ­ಯೊ­ಬ್ಬರು ಬಂದಿ­ಳಿ­ದರು. ಆದರೆ ಮಾಸ್ಕೋ­ದಲ್ಲಿ ವಿಮಾನ ಬದ­ಲಾ­ಯಿ­ಸು­ವಾಗ ಅವರ ಲಗ್ಗೇಜ್‌ ತಪ್ಪಿ ಕರಾ­ಚಿಗೆ ಹೋಗಿತ್ತು. ಅದ­ಕ್ಕಾಗಿ ನ.28 ರ ಬೆಳಿಗ್ಗೆ ದೆಹ­ಲಿಯ ವಿಮಾನ ನಿಲ್ದಾ­ಣಕ್ಕೆ ಬರಲು ಸಿಬ್ಬಂದಿ ಸೂಚಿ­ಸಿ­ದ್ದರು. ಅದ­ರಂತೆ ಸದರಿ ವ್ಯಕ್ತಿ ವಿಮಾನ ನಿಲ್ದಾ­ಣಕ್ಕೆ ಹೋದರೆ ಒಳ ಪ್ರವೇ­ಶಿ­ಸಲು ಸಿಬ್ಬಂದಿ ಅಡ್ಡಿ ಪಡಿ­ಸಿ­ದರು. ತಲೆ ಮೇಲೆ­ಕೆ­ಳಗೆ ಮಾಡಿ­ದರೂ ಅವ­ರನ್ನು ಒಳಗೆ ಬಿಡಲೇ ಇಲ್ಲ. ಜತೆ­ಗಿ­ದ್ದ­ವ­ರೊ­ಬ್ಬರು ಭದ್ರತಾ ಸಿಬ್ಬಂದಿ ಕೈಗೆ 500 ರೂ.ಗಳ ಎರಡು ನೋಟು ಇಟ್ಟರು. ಕೂಡಲೇ ಅವರ ಕೆಲ­ಸ­ವಾ­ಯಿತು. ಲಂಚಕ್ಕೆ ಕೈಯೊ­ಡ್ಡಿದ ಸಿಬ್ಬಂದಿ ಕರ್ನಾ­ಟ­ಕದ ವ್ಯಕ್ತಿ­ಯನ್ನು ತಾವು ಹೋಗ­ಬೇ­ಕಾದ ಜಾಗಕ್ಕೆ ಬಿಟ್ಟು ಬಂದ. ಇಷ್ಟರ ಮಟ್ಟಿಗೆ ನಮ್ಮ ದೇಶದ ವ್ಯವಸ್ಥೆ `ಭದ್ರ'ವಾಗಿದೆ.
ಮುಂಬೈ­ನಲ್ಲೂ ಹೀಗೆ ಆಗಿ­ರ­ಲಿಕ್ಕೆ ಸಾಕು. ಆದರೆ ಸ್ವಾತಂ­ತ್ರ್ಯದ ಇಷ್ಟು ವರ್ಷ­ದಲ್ಲಿ ಈ ರೀತಿಯ ಘಟನೆ ನಡೆ­ದಿ­ರ­ಲಿಲ್ಲ. ಹೊರ­ಗಿ­ನಿಂದ ಬಂದ ಶತ್ರು­ಗಳು ನಮ್ಮ ದೇಶದ ಯಾವುದೇ ಒಂದು ಪ್ರದೇ­ಶ­ವನ್ನು ತಮ್ಮ ಹಿಡಿ­ತ­ದ­ಲ್ಲಿ­ಟ್ಟು­ಕೊಂಡ ನಿದ­ರ್ಶ­ನ­ವಿ­ರ­ಲಿಲ್ಲ. ದೇಶದ ಆಡ­ಳಿತ ಸಂಪೂರ್ಣ ವೈಫ­ಲ್ಯ­ವಾ­ಗಿ­ರುವ ದ್ಯೋತ­ಕ­ವಿದು.
ರಾಜ­ಕಾ­ರ­ಣಿ­ಗಳು ಭ್ರಷ್ಟ­ರಾಗಿ ನಾಲ್ಕೈದು ತಲೆ­ಮಾ­ರಿಗೆ ಆಗು­ವಷ್ಟು ಆಸ್ತಿ ಮಾಡಿ­ಕೊಂ­ಡಿ­ರು­ವಾಗ, ಸಹಜ ಮನು­ಷ್ಯರೇ ಆಗಿ­ರುವ ರಕ್ಷಣಾ ಸಿಬ್ಬಂದಿ ಭ್ರಷ್ಟ­ರಾ­ಗು­ವುದು ಅಸ­ಹ­ಜ­ವೇ­ನಲ್ಲ. ಇದನ್ನು ತಪ್ಪಿ­ಸುವ ಹೊಣೆ ಯಾರದು?
ಈಗ ದೇಶವೇ ಕಿತ್ತು­ಹೋ­ಗಿದೆ ಎಂದು ಬೀಗು­ತ್ತಿ­ರುವ ಬಿಜೆಪಿ ಅಧಿ­ಕಾ­ರಕ್ಕೆ ಬಂದರೆ ಆಗ ಮಾಡು­ವು­ದೇನು? ಸಂಸತ್‌ ಭವ­ನದ ಮೇಲೆ ದಾಳಿ ನಡೆ­ದಾಗ, ಅಕ್ಷ­ರ­ಧಾ­ಮದ ಮೇಲೆ ಉಗ್ರರು ದಾಳಿ ಎಸ­ಗಿ­ದಾಗ ಬಿಜೆಪಿ ಏನು ಮಾಡು­ತ್ತಿತ್ತು. ಯಾವುದೇ ವಿಷ­ಯ­ವನ್ನು ವೋಟಿನ ರಾಜ­ಕಾ­ರ­ಣಕ್ಕೆ ಅಸ್ತ್ರ ಮಾಡಿ­ಕೊ­ಳ್ಳು­ವು­ದ­ಕ್ಕಿಂತ ದೇಶದ ಭದ್ರತೆ, ಸಮ­ಗ್ರತೆ ದೃಷ್ಟಿ­ಯಿಂದ ನೋಡ­ಬೇಕು.
ಘಟನೆ ನಡೆದ ಕೂಡಲೇ ಮಹಾ­ರಾ­ಷ್ಟ್ರಕ್ಕೆ ತೆರಳಿ ಮೃತ ಯೋಧ­ರಿಗೆ 1 ಕೋಟಿ ರೂ. ಪರಿ­ಹಾರ ಘೋಷಿ­ಸಿದ ಗುಜ­ರಾತ್‌ ಮುಖ್ಯ­ಮಂತ್ರಿ ನರೇಂದ್ರ ಮೋದಿ ತಮ್ಮ ಅಧಿ­ಕಾ­ರ­ವ­ಧಿ­ಯಲ್ಲಿ ಮಾಡಿ­ದ್ದೇನು? ಗುಜ­ರಾ­ತೆಂ­ಬುದು ಶಿಲಾ­ಯು­ಗದ ಕಾಲದ ರಾಜ್ಯ­ವಾಗಿ ಪರಿ­ವ­ರ್ತಿ­ತ­ರಾ­ದಾಗ ಇದೇ ಮೋದಿ ಸಂಭ್ರ­ಮಿ­ಸಿ­ರ­ಲಿ­ಲ್ಲವೇ? ಗರ್ಭಿ­ಣಿಯ ಭ್ರೂಣ ಬಗೆದು ಬೆಂಕಿಗೆ ಹಾಕಿ ಸುಡು­ವಾಗ ಮೋದಿ­ಯ­ವರ ದೇಶ­ಪ್ರೇಮ ಎಲ್ಲಿ ಹೋಗಿತ್ತು?
ಎಲ್ಲಾ ಪಕ್ಷ­ಗಳು ರಾಜ­ಕೀಯ ಮಾಡು­ವುದು ಬಿಟ್ಟು ದೇಶದ ಹಿತ­ದೃ­ಷ್ಟಿ­ಯಿಂದ ಚಿಂತಿ­ಸ­ಬೇಕು. ಉಗ್ರರು, ದ್ರೋಹಿ­ಗಳು ಯಾರೇ ಇದ್ದರೂ ಅವ­ರನ್ನು ಮಟ್ಟ­ಹಾ­ಕ­ಬೇಕು. ಉಗ್ರರು ಎಂಬ ಪದ ಬಳ­ಸುವ ಬದಲು ದೇಶ­ದ್ರೋ­ಹಿ­ಗ­ಳೆಂದು ಹಣೆ ಪಟ್ಟಿ ಕಟ್ಟಿ ಗಲ್ಲಿ­ಗೇ­ರಿ­ಸಲು ಮುಂದಾ­ಗ­ಬೇಕು. ಸಿಬ್ಬಂ­ದಿ­ಗಳು ಭ್ರಷ್ಟ­ರಾ­ಗ­ದಂತೆ ನೋಡಿ­ಕೊ­ಳ್ಳ­ಬೇಕು. ಹಾಗಾ­ಗ­ಬೇ­ಕಾ­ದರೆ ತಾವು ಭ್ರಷ್ಟ­ರಾ­ಗದೇ ಸಜ್ಜ­ನಿಕೆ, ಪ್ರಾಮಾ­ಣಿ­ಕತೆ ತೋರ­ಬೇಕು. ಆಗ ಮಾತ್ರ ಬೋಧ­ನೆಗೆ ಅರ್ಥ­ವಿ­ರು­ತ್ತದೆ.
ಪೋಟಾ, ಟಾಡಾ­ದಂ­ತಹ ಜನ­ವಿ­ರೋಧಿ ಕಾಯ್ದೆ ತರು­ವು­ದ­ರಿಂದ ಉಗ್ರರ ಉಪ­ಟ­ಳ­ವನ್ನು ಮಟ್ಟ­ಹಾ­ಕಲು ಸಾಧ್ಯ­ವಿಲ್ಲ. ಉಗ್ರ­ತೆಗೆ ಕಾರ­ಣ­ವಾ­ಗುವ ಮನಃ­ಸ್ಥಿ­ತಿ­ಯನ್ನು ಬದ­ಲಾ­ಯಿ­ಸ­ಬೇಕು. ಎಲ್ಲಾ ರೀತಿಯ ಅಸ­ಮಾ­ನತೆ, ಧಾರ್ಮಿಕ ಹಿಂಸೆ, ಶೋಷಣೆ ತೊಲ­ಗಿ­ದಾಗ ಮಾತ್ರ ಶಾಂತಿ, ಸೌಹಾರ್ದ ನೆಲೆ­ಸಲು ಸಾಧ್ಯ. ಸಂಸ­ದೀಯ ಪ್ರಜಾ­ಪ್ರ­ಭು­ತ್ವ­ವೆಂ­ಬುದು `ಡೆಮ್ಮೋ- ಕ್ರಸಿ' ಯಾಗಿ­ರು­ವಾಗ ಇದನ್ನು ಹೇಗೆ ನಿರೀ­ಕ್ಷಿ­ಸಲು ಸಾಧ್ಯ? ಕೆಂಪು­ಕೋ­ಟೆಯ ಮೇಲೆ ಮನ­ಮೋ­ಹ­ನ­ಸಿಂಗ್‌ ಬದಲು ಅಡ್ವಾಣಿ ಬಾವುಟ ಹಾರಿ­ಸುವ ಬದ­ಲಾ­ವ­ಣೆ­ಯಿಂದ ಏನನ್ನೂ ನಿರೀ­ಕ್ಷಿ­ಸಲು ಸಾಧ್ಯ­ವಿಲ್ಲ. ರಾಜ­ಕೀಯ ಸ್ಥಿತ್ಯಂ­ತ­ರ­ವಾಗಿ ದ್ವೇಷ­ರ­ಹಿ­ತ­ವಾದ, ಸಮಾ­ನ­ವಾದ ವ್ಯವಸ್ಥೆ ಜಾರಿ­ಯಾ­ಗ­ಬೇಕು. ಮತ­ದಾ­ರ­ನನ್ನೇ ಕಡು­ನೀ­ಚ­ನ­ನ್ನಾ­ಗು­ವಷ್ಟು ಭ್ರಷ್ಟ­ನ­ನ್ನಾ­ಗಿ­ಸಿ­ರುವ ಈ ವ್ಯವಸ್ಥೆ ಎಂತಹ ಪರಿ­ವ­ರ್ತನೆ ತಂದೀತು? ಇದು ಯೋಚಿ­ಸುವ ಕಾಲ­ವಷ್ಟೇ!

4 comments:

abhivykthi said...

bhayatapadane annu himmatisalu daya da utpadande agbeku. nivu helidante ugraru endu kareyuvudannu bittu desha drohi endu kareya bahudu. ellara jeevanu mukhya allave. yene irali mumbai meri jaan endu mumbai nivasigalu samadhanada usiru biduvantagabeku.

ಚಿತ್ರಾ ಸಂತೋಷ್ said...

ಆಡಳಿತ ವ್ಯವಸ್ಥೆಗೆ ಎಷ್ಟು ಉಗಿದರೂ ಅಷ್ಟೇ...ಏನ್ ಮಾಡೋದು? ಇಡೀ ರಾಜಕೀಯವೇ ಕೆಟ್ಟುಹೋಗಿರುವಾಗ ಮತದಾರ ಎಷ್ಟು ಯೋಚಿಸಿದರೂ ಅಷ್ಟೇ.
-ಚಿತ್ರಾ

ಬಾನಾಡಿ said...

ಮುಂ ಭಯ ವಾಗ್ತದೆ ಸ್ವಾಮಿ!!
ಒಲವಿನಿಂದ
ಬಾನಾಡಿ

ಹೊರಗಣವನು said...

pratikriyisida ellarigu dhanyvadagalu