<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-8477112084544236406</id><updated>2011-04-21T16:33:01.890-07:00</updated><title type='text'>ಹೊರಗಣವನು</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://horaganavanu.blogspot.com/feeds/posts/default'/><link rel='self' type='application/atom+xml' href='http://www.blogger.com/feeds/8477112084544236406/posts/default?max-results=100'/><link rel='alternate' type='text/html' href='http://horaganavanu.blogspot.com/'/><link rel='hub' href='http://pubsubhubbub.appspot.com/'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><generator version='7.00' uri='http://www.blogger.com'>Blogger</generator><openSearch:totalResults>22</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-8477112084544236406.post-2342068838870749336</id><published>2009-05-03T08:26:00.000-07:00</published><updated>2009-05-03T08:27:44.250-07:00</updated><title type='text'>ದುಡ್ಡೇ ದೊಡ್ಡಪ್ಪ :ಜನ ಸತ್ರಪ್ಪ</title><content type='html'>`ಎಲ್ಲರೂ ಸಮಾನರು, ಕೆಲವು ಹೆಚ್ಚು ಸಮಾನರು' ಎಂಬುದು ಚುನಾವಣೆ ವೇಳೆ ಎಲ್ಲರಿಗೂ ಅರ್ಥವಾಗುತ್ತಿದೆ. ಲೋಕಸಭೆಗೆ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಘೋಷಿಸುತ್ತಿರುವ ತಮ್ಮ ಆಸ್ತಿ ಮೌಲ್ಯದ ಪ್ರಮಾಣ ಗಮನಿಸಿದರೆ ಸಾಮಾನ್ಯರು ಬೆರಗಾಗುವಷ್ಟಿದೆ. ಚುನಾವಣೆಯಿಂದ ಚುನಾವಣೆಗೆ ಆಸ್ತಿ ಪ್ರಮಾಣ ಹಿಮಾಲಯದಂತೆ ನಿತ್ಯವೂ ಏರುತ್ತಿದೆ.&lt;br /&gt;ಘೋಷಿತ ಆಸ್ತಿಯೆಲ್ಲವೂ ಕೇವಲ ಶೋಕೇಸ್‌. ರಾಜಕಾರಣಿಗಳ ಹೆಸರಿನಲ್ಲಿಲ್ಲದ ಆಸ್ತಿಗೆ ಲೆಕ್ಕವೇ ಇಲ್ಲ. ಸಂಸ್ಥೆ, ಮಕ್ಕಳು, ಮೊಮ್ಮಕ್ಕಳು, ಅಳಿಯ, ದೂರದ ಬಂಧು, ನಂಬಿಗಸ್ತ ಭಂಟರ ಹೆಸರಿನಲ್ಲಿ ಮಾಡಿರುವ ಆಸ್ತಿ ಲೆಕ್ಕಕ್ಕೆ ನಿಲುಕುವುದಿಲ್ಲ. ಅಷ್ಟರಮಟ್ಟಿಗೆ ಆಸ್ತಿ ಕ್ರೋಢೀಕರಣ ರಾಜಕಾರಣಿಗಳಿಂದ ನಡೆಯುತ್ತಿದೆ. ತಮ್ಮ ಮುಂದಿನ 10 ತಲೆಮಾರು ಕೂತು ತಿಂದರೂ ಕರಗದಷ್ಟು ಆಸ್ತಿಯನ್ನು ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಧ್ಯವಿದೆ.&lt;br /&gt;ಸರ್ಕಾರಿ ಗುತ್ತಿಗೆ ಮಾಡಲು ಬೇರೆಯವರಿಂದ ಸಾಲ ಪಡೆದವರು, ಗುಮಾಸ್ತರಾಗಿ ಕೆಲಸಕ್ಕೆ ಸೇರಿಕೊಂಡವರು, ರಾಜಕೀಯ ಪಕ್ಷಗಳಲ್ಲಿ ಬಾವುಟ ಕಟ್ಟಲು ಸೇರಿಕೊಂಡವರು ಇಂದು ಏನೇನೋ ಆಗಿ ಹೋಗಿದ್ದಾರೆ. ಪ್ರಧಾನಿ, ಮುಖ್ಯಮಂತ್ರಿ, ಸಚಿವ, ಶಾಸಕ, ಸಂಸದ ಹೀಗೆ ಯಾವುದಾದರೊಂದು ಪ್ರಾತಿನಿಧ್ಯವನ್ನು ಒಂದು ಅವಧಿ ಅನುಭವಿಸಿದವರು ಕರೋಡಪತಿ ಆಗಿದ್ದಾರೆ. ಇದು ಹೇಗೆ ಸಾಧ್ಯವಾಯಿತು?&lt;br /&gt;ಅವರಿಗೆ ಬರುವ ಸಂಬಳದಲ್ಲಿ ಪೈಸೆ ಪೈಸೆ ಉಳಿಸಿದರೂ ಐದು ವರ್ಷದ ಅವಧಿ ಮುಗಿಯುವಷ್ಟರಲ್ಲಿ ಅಮ್ಮಮ್ಮಾ ಅಂದರೂ 10 ಲಕ್ಷ ಉಳಿತಾಯ ಮಾಡಬಹುದು. ಆದರೆ ಶಾಸಕ/ ಸಂಸದರಾದವರ ಆಸ್ತಿ ಅವರೇ ಘೋಷಿಸಿದಂತೆ ಕೋಟಿಗೆ ಮೀರಿರುತ್ತದೆ. ತೋಟ, ಐಷಾರಾಮಿ ಕಾರು, ಭರ್ಜರಿ ಬಂಗಲೆ ಎಲ್ಲವೂ ಅವರ ಬಳಿ ಸಂಗ್ರಹಿತಗೊಂಡಿರುತ್ತದೆ. ಆದರೆ ಲೆಕ್ಕಕ್ಕೆ ಸಿಗದ ಆಸ್ತಿ ಮೌಲ್ಯ ಅದೆಷ್ಟು ಕೋಟಿಗಳೋ ಬಲ್ಲವರಾರು?&lt;br /&gt;&lt;strong&gt;ಅತೀ ಶ್ರೀಮಂತರು:&lt;br /&gt;&lt;/strong&gt;ಚುನಾವಣೆಗೆ ಸಲ್ಲಿಸಲಾದ ನಾಮಪತ್ರ ಜತೆ ಸಲ್ಲಿಸಿ ಆಸ್ತಿ ವಿವರ ನೋಡಿದರೆ ರಾಜಕಾರಣಿಗಳ ಶ್ರೀಮಂತಿಕೆ ಗೊತ್ತಾಗುತ್ತದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ರಾಜಗೋಪಾಲ್‌ ಆಸ್ತಿ ಮೌಲ್ಯ 299 ಕೋಟಿ ರೂ. ಎರಡನೇ ಸ್ಥಾನದಲ್ಲಿ ದೆಹಲಿ ದಕ್ಷಿಣದಿಂದ ಸ್ಪರ್ಧಿಸಿರುವ ಬಿ ಎಸ್ಪಿ ಅಭ್ಯರ್ಥಿ ಕರಣಸಿಂಗ್‌ ಇದ್ದು ಇವರ ಆಸ್ತಿ 150 ಕೋಟಿ ರೂ. ವಾಯುವ್ಯ ಮುಂಬೈನ ಎಸ್‌ಪಿ ಅಭ್ಯರ್ಥಿ 124 ಕೋಟಿ ಒಡೆಯರಾಗಿದ್ದರೆ, ತಿರುಪತಿಯಲ್ಲಿ ಕಣಕ್ಕೆ ಇಳಿದಿರುವ ಚಿರಂಜೀವಿ 88 ಕೋಟಿ ಆಸ್ತಿ ಮಾಲೀಕರಾಗಿದ್ದಾರೆ.&lt;br /&gt;ಆಂಧ್ರದ ಹಾಲಿ ಸಿ ಎಂ ರಾಜಶೇಖರ ರೆಡ್ಡಿ 77 ಕೋಟಿ ಆಸ್ತಿ ಹೊಂದಿದ್ದರೆ, ಮಾಜಿ ಸಿ ಎಂ ಚಂದ್ರಬಾಬು ನಾಯ್ಡು 69 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಇದು ಇಡೀ ದೇಶದ ಶ್ರೀಮಂತ ಅಭ್ಯರ್ಥಿಗಳ ಯಾದಿ.&lt;br /&gt;ಕರ್ನಾಟಕ ಮಟ್ಟದಲ್ಲಿ ಅತಿ ಹೆಚ್ಚು ಆಸ್ತಿ ಘೋಷಿಸಿಕೊಂಡಿರುವುದು ಬೆಂಗಳೂರು ಉತ್ತರ ಕ್ಷೇತ್ರದ ಜೆಡಿ ಎಸ್‌ ಅಭ್ಯರ್ಥಿ ಸುರೇಂದ್ರಬಾಬು. ಇವರದ್ದು ಪಿತ್ರಾರ್ಜಿತ ಆಸ್ತಿಯಾಗಿದ್ದು 239 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಬೆಂಗಳೂರು ದಕ್ಷಿಣದ ಪಕ್ಷೇತರ ಅಭ್ಯರ್ಥಿ ಕ್ಯಾಪ್ಟನ್‌ ಗೋಪಿನಾಥ್‌ 69 ಕೋಟಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 44 ಕೋಟಿ, ಮಾಜಿ ಸಚಿವ ದಾವಣಗೆರೆ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ 34 ಕೋಟಿ ಆಸ್ತಿ ಮೌಲ್ಯ ಘೋಷಿಸಿಕೊಂಡಿದ್ದಾರೆ. ಸುರೇಂದ್ರಬಾಬು, ಕ್ಯಾಪ್ಟನ್‌ ಗೋಪಿನಾಥ್‌ ರಾಜಕಾರಣಕ್ಕೆ ಹೊಸಬರು. ಒಬ್ಬರು ರಿಯಲ್‌ ಎಸ್ಟೇಟ್‌ ಮತ್ತೊಬ್ಬರು ವಿಮಾನಯಾನದಿಂದ ಸಂಪಾದಿಸಿದ ಹಣವನ್ನು ತೋರಿಸಿದ್ದಾರೆ.&lt;br /&gt;ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ರಾಘವೇಂದ್ರ 6 ಕೋಟಿ ಆಸ್ತಿ ಹೊಂದಿರುವುದಾಗಿ ಹೇಳಿದ್ದಾರೆ.&lt;br /&gt;&lt;strong&gt;ಕೈಸೋತ ಜನ:&lt;br /&gt;&lt;/strong&gt;3-4 ಲಕ್ಷ ಜನಸಂಖ್ಯೆಯ ಪ್ರತಿನಿಧಿಯಾಗಿ ಶಾಸನಸಭೆಗೆ ಆಯ್ಕೆಯಾಗುವ ಶಾಸಕ, 10-19 ಲಕ್ಷ ಮತದಾರರ ಪ್ರತಿನಿಧಿಯಾಗಿ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಆಸ್ತಿ ಗಳಿಕೆ ಕೋಟಿ ಕೋಟಿಗಳಿದ್ದರೆ `ಮತದಾರ ಪ್ರಭು' ನಿಜಕ್ಕೂ ಕುಚೇಲನಾಗಿದ್ದಾನೆ. ಆತನ ಬಳಿ ಅವಲಕ್ಕಿಯಾಗಲಿ, ಗಂಟಲೊಣಗಿಸಿ, ಹಸಿವು ಇಂಗಿಸುವ ಗಂಜಿಯಾಗಲಿ ಇಲ್ಲ. ಅಷ್ಟು ಬರ್ಬಾದ್‌ ಎದ್ದು ಹೋಗಿದ್ದಾನೆ ಮತದಾರ.&lt;br /&gt;ದೇಶದ ಶೇ.62 ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಭವಿಷ್ಯದ ಯಾವ ಕನಸುಗಳೂ ಇಲ್ಲ. ಕೃಷಿಯಲ್ಲಿ ತೊಡಗಿರುವ ಶೇ.40 ರಷ್ಟು ರೈತರು ಕೃಷಿಯಿಂದ ದೂರ ಹೋಗಲು ಹವಣಿಸುತ್ತಿದ್ದಾರೆ. ಶೇ.49 ರಷ್ಟು ಗ್ರಾಮೀಣ ಕುಶಲಕರ್ಮಿಗಳು ತಮ್ಮ ಉದ್ಯೋಗ ಬಿಟ್ಟು ಹೊಟ್ಟೆ ಪಾಡಿಗೆ ಪೇಟೆಯತ್ತ ಮುಖಮಾಡಿದ್ದಾರೆ.&lt;br /&gt;ಇನ್ನೂ ಕೂಡ ದೇಶದ ಶೇ.56 ರಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಕಳೆದ ಏಳೆಂಟು ವರ್ಷಗಳಲ್ಲಿ ಈ ಪ್ರಮಾಣ ಶೇ.8 ರಷ್ಟು ಹೆಚ್ಚಳವಾಗಿದೆ. ಶೇ.63 ಗರ್ಭಿಣಿಯರು ರಕ್ತಿಹೀನತೆಗೆ ತುತ್ತಾಗಿದ್ದು ಭವಿಷ್ಯದ ಪ್ರಜೆಗಳ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿದೆ. ಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಶೇ.82.7 ರಷ್ಟಿದ್ದು ದಂಗು ಬಡಿಸುವ ರೀತಿಯಲ್ಲಿದೆ. 1998ರಲ್ಲಿ 70 ರಷ್ಟಿದ್ದ ಈ ಪ್ರಮಾಣ 2006 ರಲ್ಲಿ 82 ಕ್ಕೇರಿದೆ.&lt;br /&gt;15-49ವರ್ಷ ವಯೋಮಿತಿಯ ಶೇ.60 ರಷ್ಟು ಮಹಿಳೆಯರು ಆರನೇ ತರಗತಿಯವರೆಗೆ ಹಾಗೂ ಹೀಗೂ ಓದಿದ್ದಾರೆ. ಇವರ ಪೈಕಿ ಶೇ.28 ರಷ್ಟು ಮಹಿಳೆಯರು ಮಾತ್ರ 10 ತರಗತಿಯವರೆಗೆ ಓದಿದ್ದಾರೆ. ಶೇ.34 ರಷ್ಟು ಮಹಿಳೆಯರು ಶಾಲೆ ಮೆಟ್ಟಿಲು ಹತ್ತಿಲ್ಲ. ಇವೆಲ್ಲವೂ ಸ್ವಾತಂತ್ರ್ಯ 60 ವರ್ಷಗಳಲ್ಲಾಗಿರುವ ಸಾಧನೆ.&lt;br /&gt;1995 ರಿಂದ 2007ರ ಅವಧಿಯಲ್ಲಿ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1,66,304. 1991ರಲ್ಲಿ ಶೇ.26 ರಷ್ಟು ರೈತರು ಸಾಲಗಾರರಾಗಿದ್ದರೆ, 2003ರಲ್ಲಿ ಈ ಪ್ರಮಾಣ ಶೇ.48.6 ರಷ್ಟಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮಿಕ್ಷೆ ವಿವರಿಸಿದೆ. 2006-07ರಲ್ಲಿ ದೇಶದ 200 ಜಿಲ್ಲೆಗಳಲ್ಲಿ 2.11 ಕೋಟಿ ಕುಟುಂಬದವರು ತಮಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಒದಗಿಸಿದೆ ಎಂದು ಕೋರಿದ್ದಾರೆ.&lt;br /&gt;ಇಡೀ ದೇಶದ ಶೇ.47 ರಷ್ಟು ಜನರು ದಿನಕ್ಕೆ ಕನಿಷ್ಠ 20 ರೂ. ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜೀವನನಿರ್ವಹಣಾ ವೆಚ್ಚ ದುಪ್ಪಟ್ಟಾಗಿದ್ದರೂ ಆದಾಯ ಮಧ್ಯಮ ವರ್ಗದವರ ಆದಾಯದ ಮಟ್ಟ ಏರಿಕೆಯಾಗಿಲ್ಲ.&lt;br /&gt;ಯುಪಿ ಎ ಸರ್ಕಾರದ ಅವಧಿಯಲ್ಲಿ 400 ವಿಶೇಷ ಆರ್ಥಿಕ ವಲಯ ಮಂಜೂರು ಮಾಡಲಾಗಿದೆ. ತಮ್ಮ ಗಂಜಿಗೆ ಅಕ್ಕಿ, ಮುದ್ದೆಗೆ ರಾಗಿ, ರೊಟ್ಟಿಗೆ ಗೋಧಿ,ಜೋಳ ಬೆಳೆಯುತ್ತಿದ್ದ ಭೂಮಿಯನ್ನು ಕಳೆದುಕೊಂಡ ರೈತರು ನಗರದತ್ತ ಗುಳೆ ಹೊರಟಿದ್ದಾರೆ. ಸ್ವಾಭಿಮಾನಿ ಬದುಕು ನಡೆಸುತ್ತಿದ್ದ ರೈತರು, ಕುಶಲಕರ್ಮಿಗಳು ಹಳ್ಳಿ ತೊರೆದು ನಗರ ಪ್ರದೇಶಗಳಲ್ಲಿ ಕಟ್ಟಡನಿರ್ಮಾಣ, ಸೆಕ್ಯುರಿಟಿ ಗಾರ್ಡ್‌ನಂತಹ ಕೆಲಸಗಳಲ್ಲಿ ಅನಿವಾಯವಾಗಿ ತೊಡಗಿಕೊಂಡಿದ್ದಾರೆ. ಹಳ್ಳಿಗಳು ವೃದ್ಧಾಶ್ರಮಗಳಾಗಿ ಪರಿವರ್ತನೆಯಾಗಿವೆ.&lt;br /&gt;&lt;strong&gt;ಯಾರ ಅಭಿವೃದ್ಧಿ:&lt;br /&gt;&lt;/strong&gt;ದೇಶದ ಕೃಷಿ ಬೆಳವಣಿಗೆ ದರ ಶೇ.4 ರಷ್ಟು ಆಗಬೇಕೆಂಬ ಗುರಿಯಿದ್ದರೂ ಆಗಿರುವು ಶೇ.1.85 ಮಾತ್ರ. ಆರ್ಥಿಕ ಬೆಳವಣಿಗೆ ದರ 9 ಆಗಬೇಕೆಂದಿದ್ದರೂ ಶೇ.7 ರ ಗಟಿ ದಾಟಿಲ್ಲ. ಮುಂದಿನ ದಿನಗಳಲ್ಲಿ ಅದು 5.6 ಕ್ಕೆ ಇಳಿಯಲಿದೆ.&lt;br /&gt;ಸ್ವಾತಂತ್ರ್ಯ ಇಷ್ಟು ವರ್ಷಗಳಲ್ಲಿ ಯಾರ ಅಭಿವೃದ್ಧಿಯಾಗಿದೆ. ಶೇ.15 ರಷ್ಟು ಮಂದಿ ಮಾತ್ರ ಅಭಿವೃದ್ಧಿಯ ಫಲವುಂಡಿದ್ದು ಉಳಿದೆಲ್ಲಾ ಮಂದಿ ದೈನೇಸಿ ಸ್ಥಿತಿಯಲ್ಲಿದ್ದಾರೆ. ಪಿತ್ರಾರ್ಜಿತ ಆಸ್ತಿ ಹೊಂದಿದವರು ರಿಯಲ್‌ ಎಸ್ಟೇಟ್‌ನಿಂದಾಗಿ ದಿಢೀರ್‌ ಶ್ರೀಮಂತರಾಗಿದ್ದಾರೆ. ಬಂಡವಾಳಶಾಹಿಗಳು ಹಣ ಹೂಡಿ ಲಾಭ ಗಳಿಸಿದ್ದಾರೆ. ಆದರೆ ನಮ್ಮಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಹಣ ಹೂಡಿ, ಗೆದ್ದ ಮೇಲೆ ಭ್ರಷ್ಟಾಚಾರದಿಂದ ಹಣ ಗಳಿಸುವ ಹೊಸ ಬಂಡವಾಳ ಪದ್ಧತಿಯನ್ನು ಕಂಡು ಹಿಡಿದಿದ್ದಾರೆ. ಪ್ರತಿ ಚುನಾವಣೆಯಲ್ಲೂ ಮತದಾರ ಶಪಿಸುತ್ತಾ ಮತ ಹಾಕುತ್ತಿದ್ದಾನೆ. ಮತ ಪಡೆದು ಆಯ್ಕೆಯಾದವರು ನಿತ್ಯವೂ ತಮ್ಮ ಬೊಕ್ಕಸ ತುಂಬಿಸಿ ಕೊಳ್ಳುತ್ತಾ, ಆಸ್ತಿಯ ಅಗಲವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.&lt;br /&gt;ಶಾಸಕರು, ಸಂಸದರೇ ಜನರ ನಿಜವಾದ ಪ್ರತಿನಿಧಿಗಳು. ಅವರು ಶ್ರೀಮಂತರಾದರೆ ಜನರೂ ಶ್ರೀಮಂತರಾದಾರು ಎಂದು ಭಾವಿಸಿದರೆ ತಪ್ಪಾಗಲಿಕ್ಕಿಲ್ಲವಲ್ಲವೇ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-2342068838870749336?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/2342068838870749336/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=2342068838870749336' title='1 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/2342068838870749336'/><link rel='self' type='application/atom+xml' href='http://www.blogger.com/feeds/8477112084544236406/posts/default/2342068838870749336'/><link rel='alternate' type='text/html' href='http://horaganavanu.blogspot.com/2009/05/blog-post_5211.html' title='ದುಡ್ಡೇ ದೊಡ್ಡಪ್ಪ :ಜನ ಸತ್ರಪ್ಪ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>1</thr:total></entry><entry><id>tag:blogger.com,1999:blog-8477112084544236406.post-3139713257304001483</id><published>2009-05-03T08:24:00.000-07:00</published><updated>2009-05-03T08:25:39.506-07:00</updated><title type='text'>ಮತಸಮರ-ಪ್ರಗತಿಗೆ ಜ್ವರ</title><content type='html'>`ಹಸ್ತಕ್ಕೆ ಮತ ದೇಶಕ್ಕೆ ಹಿತ, ಬಿಜೆಪಿಯೊಂದೇ ಪರಿಹಾರ, ರೈತರ ಸರ್ಕಾರ ಜನತಾದಳ ಸಾಕಾರ'&lt;br /&gt;ಐದು ವರ್ಷಕ್ಕೊಮ್ಮೆ ಕಿವಿಗಮರುತ್ತಿದ್ದ ಇಂತಹ ಸವಕಲು ಘೋಷಣೆಗಳು ಈಗ ಮೂರು-ಆರು ತಿಂಗಳಿಗೊಮ್ಮೆ ಕೇಳುತ್ತಿವೆ. ಘೋಷಣೆಗಳು-ಭರವಸೆಗಳು ಆಕರ್ಷಣೆ ಕಳೆದುಕೊಳ್ಳುತ್ತಿವೆ. ದಿನಾ ಸಾಯೋರಿಗೆ ಅಳೋರ್ಯಾರು ಎಂಬುದು ಚುನಾವಣೆ ಬಗ್ಗೆ ಜನರಾಡುತ್ತಿರುವ ಕ್ಲೀಶೆಯಾಗಿರುವ ಟೀಕೆ. ಹೋದೆಯಾ ಪಿಶಾಚಿ ಅಂದ್ರೆ ಬಂದೇ ಗವಾಕ್ಷಿಲಿ ಎಂಬಂತೆ ಮತ್ತೆ ಮತ್ತೆ ಬರುತ್ತಲೇ ಇದೆ.&lt;br /&gt;ಚುನಾವಣೆ: ಇದು ಮುಗಿಯುವುದಲ್ಲ, ನಡೆಯುತ್ತಿರುವುದು, ನಡೆಯುತ್ತಲೇ ಇರುವುದು ಎಂಬುದು ಇತ್ತೀಚಿನ ವಿದ್ಯಮಾನ. 2008ರ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದ ನಂತರ ಈಗ ಎರಡನೇ ಬಾರಿ ಇಡೀ ರಾಜ್ಯದಲ್ಲಿ ಮತ ಸಮರ ನಡೆಯುತ್ತಿದೆ. ಈಗಿನ ಫಲಿತಾಂಶ ಆಧರಿಸಿ ಇನ್ನಾರು ತಿಂಗಳೊಳಗೆ ಮತ್ತೆ ಚುನಾವಣೆ ಬರಲಿದೆ. ಅದಕ್ಕೆ ಅಂಟಿಕೊಂಡೇ ಎರಡು ವರ್ಷದಿಂದ ಬಾಕಿಯುಳಿದಿರುವ ಬೆಂಗಳೂರು ಮಹಾನಗರ ಪಾಲಿಕೆಗೂ ಚುನಾವಣೆ ನಡೆಯಬೇಕಿದೆ.&lt;br /&gt;ಹೀಗೆ ವರ್ಷದುದ್ದಕ್ಕೂ ಮತಕ್ಕಾಗಿ ರಾಜಕಾರಣಿಗಳು ಮುಗಿಬೀಳುವುದರಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಬೀಳುವುದಿಲ್ಲವೇ ಎಂಬುದು ನಾಗರಿಕರು ರಾಜಕಾರಣಿಗಳಿಗೆ ಕೇಳಬೇಕಾದ ಪ್ರಶ್ನೆ.&lt;br /&gt;2004ರಲ್ಲಿ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಆಗ ಯಾವ ಪಕ್ಷವೂ ಸ್ಪಷ್ಟ ಬಹುಮತ ಗಳಿಸಲಿಲ್ಲ. ಕಾಂಗ್ರೆಸ್‌-ಜೆಡಿ ಎಸ್‌, ಜೆಡಿ ಎಸ್‌-ಬಿಜೆಪಿ ಪಕ್ಷಗಳ `ಕೂಡಿಕೆ' ಸರ್ಕಾರಗಳನ್ನು ಜನ ನೋಡಿದರು. ಏನೆಲ್ಲಾ ಸರ್ಕಸ್‌ ಮಧ್ಯೆಯೂ ಐದು ವರ್ಷವನ್ನು ಪೂರ್ಣಗೊಳಿಸಲು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗಲೇ ಇಲ್ಲ. ವಿಧಾನಸಭೆ ವಿಸರ್ಜನೆಯಾಗಿ ಮತ್ತೆ ಚುನಾವಣೆ ಎದುರಾಯಿತು.&lt;br /&gt;ಮಾಯಗಾರರು ಜನರ ಮುಂದೆ ಮೋಡಿ ಮಾಡಿದರೂ ಮತದಾರ ಸ್ಪಷ್ಟ ಬಹುಮತ ಕೊಡಲಿಲ್ಲ. ಆದರೆ ಜನರ ನಿಜವಾದ ಆಯ್ಕೆ ಬಿಜೆಪಿಯಾಗಿತ್ತು. 110 ಸ್ಥಾನಗಳಿಸಿದ್ದ ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಮೂರು ಸ್ಥಾನ ಕಡಿಮೆಯಿತ್ತು. `ಸುಭದ್ರ' ಸರ್ಕಾರ ಸ್ಥಾಪನೆಯ ದೃಷ್ಟಿಯಿಂದ ಆಪರೇಶನ್‌ ಕಮಲ ಶುರುವಾಯಿತು. ದುಪುದುಪು ಅಂತ ಒಬ್ಬೊಬ್ಬ ಶಾಸಕರೇ ರಾಜೀನಾಮೆ ಕೊಟ್ಟು ಚುನಾವಣೆಗೆ ಅನುವು ಮಾಡಿಕೊಟ್ಟರು. ಕೆಲವರು ಮಂತ್ರಿ ಮಹೋದಯರಾದರು, ಮತ್ತೆ ಕೆಲವರು ನಿಗಮ ಮಂಡಳಿಗೆ ಬಂದು ಕೂತರು. ರಾಜೀನಾಮೆ ಕೊಟ್ಟು `ಜನರಾಯ್ಕೆ'ಯನ್ನು ತಾವೇ ತಿರಸ್ಕರಿಸಿದರೂ ಸರ್ಕಾರಿ ಸವಲತ್ತುಗಳು ಅನುಭವಿಸಿದರು.&lt;br /&gt;ಯಡಿಯೂರಪ್ಪನವರ ಕುರ್ಚಿ ಭದ್ರವಾಗಿಲು ಬೇಕಿದ್ದ ಮೂರು ಶಾಸಕರ ಬದಲಿಗೆ ಏಳು ಮಂದಿ ರಾಜೀನಾಮೆ ಕೊಟ್ಟರು. ಅಭಿವೃದ್ಧಿಗೆ ಬೆಂಬಲಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದರು.&lt;br /&gt;ಮಧುಗಿರಿಯಲ್ಲಿ ಗೌರಿಶಂಕರ್‌, ತುರುವೇಕೆರೆಯಲ್ಲಿ ಜಗ್ಗೇಶ್‌, ದೊಡ್ಡಬಳ್ಳಾಪುರದಲ್ಲಿ ಜೆ.ನರಸಿಂಹಸ್ವಾಮಿ, ಹುಕ್ಕೇರಿಯಲ್ಲಿ ಉಮೇಶ ಕತ್ತಿ, ಅರಭಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ, ಕಾರವಾರದಲ್ಲಿ ಆನಂದ ಆಸ್ನೋಟಿಕರ್‌, ದೇವದುರ್ಗದಲ್ಲಿ ಶಿವನಗೌಡ ನಾಯಕ್‌ ರಾಜೀನಾಮೆಯಿತ್ತು ಬಿಜೆಪಿಯಿಂದ ಮರು ಆಯ್ಕೆ ಬಯಸಿದ್ದರು. ಮದ್ದೂರಿನಲ್ಲಿ ಶಾಸಕ ಸಿದ್ದರಾಜು ಆಕಸ್ಮಿಕ ಮರಣದಿಂದ ಅಲ್ಲೂ ಚುನಾವಣೆ ನಡೆಯಿತು. ಈ ಎಂಟು ಸ್ಥಾನಗಳ ಪೈಕಿ ಬಿಜೆಪಿಯ ಐವರು ಹಾಗೂ ಜೆಡಿ ಎಸ್‌ನ ಮೂವರು ಗೆದ್ದರು. ಅಲ್ಲಿಗೆ ಸರ್ಕಾರ ಭದ್ರ, ಸುಭದ್ರವಾಯಿತು.&lt;br /&gt;ಅಷ್ಟರಲ್ಲೇ ಮತ್ತೆ ಲೋಕಸಭೆ ಚುನಾವಣೆ ಎದುರಾಯಿತು. ರಾಜ್ಯದ 28 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು ಮೇ 16 ರವರೆಗೂ ರಾಜಕಾರಣಿಗಳು, ಸರ್ಕಾರಿ ಯಂತ್ರಾಂಗ, ಸರ್ಕಾರಿ ನೌಕರರು ಇದರಲ್ಲಿ ತಲ್ಲೀನರಾಗಿದ್ದಾರೆ.&lt;br /&gt;ಹಾಲಿ ನಡೆಯುತ್ತಿರುವ ಲೋಕಸಭೆ ಚುನಾವಣೆ ಬೆನ್ನಲ್ಲೇ ವಿಧಾನಸಭೆಗೆ ಮತ್ತೆ ಉಪ ಚುನಾವಣೆ ಬರಲಿದೆ. ಔರಾದ್‌ ಕಾಂಗ್ರೆಸ್‌ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ರಾಜೀನಾಮೆ ನೀಡ ಬೀದರ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಚುನಾವಣೆ ದಿನಾಂಕಕ್ಕೆ 45 ದಿನಗಳ ಮೊದಲೇ ಇವರು ರಾಜೀನಾಮೆ ಸಲ್ಲಿಸಿದ್ದರಿಂದಾಗಿ ಲೋಕಸಭೆ ಚುನಾವಣೆ ಜತೆಗೆ ಅವರು ರಾಜೀನಾಮೆ ನೀಡಿದ ವಿಧಾನಸಭಾ ಕ್ಷೇತ್ರಕ್ಕೂ ಚುನಾವಣೆ ನಡೆಯುತ್ತಿದೆ. ಹಾಗಾಗಿ ಅದರಿಂದ ಹೆಚ್ಚಿನ ಹೊರೆಯಿಲ್ಲ.&lt;br /&gt;ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಲು ಚನ್ನಪಟ್ಟಣದ ಕಾಂಗ್ರೆಸ್‌ ಶಾಸಕ ಸಿ.ಪಿ. ಯೋಗೀಶ್ವರ್‌ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಬೆಂಬಲಿಸಲು ಗೋವಿಂದರಾಜನಗರದ ಕಾಂಗ್ರೆಸ್‌ ಶಾಸಕ ವಿ.ಸೋಮಣ್ಣ ರಾಜೀನಾಮೆ ನೀಡಿದ್ದಾರೆ. ಇವರೆಡೂ ಕ್ಷೇತ್ರಕ್ಕೆ ಮತ್ತೆ ಉಪಚುನಾವಣೆ ನಡೆಯಲೇಬೇಕಿದೆ.&lt;br /&gt;ಇದರ ಜತೆಗೆ ಬೆಂಗಳೂರು ಗ್ರಾಮಾಂತರದಲ್ಲಿ ರಾಮನಗರ ಶಾಸಕ ಎಚ್‌.ಡಿ. ಕುಮಾರಸ್ವಾಮಿ, ಬೆಂಗಳೂರು ಕೇಂದ್ರದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್‌ಅಹಮದ್‌ಖಾನ್‌, ಬೆಂಗಳೂರು ದಕ್ಷಿಣದಲ್ಲಿ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ, ಗುಲ್ಬರ್ಗಾದಲ್ಲಿ ಶಾಸಕ ಮಲ್ಲಿಕಾರ್ಜುನ ಖರ್ಗೆ, ಸಚಿವ ರೇವುನಾಯಕ್‌ ಬೆಳಮಗಿ, ಚಾಮರಾಜನಗರದಲ್ಲಿ ಕೊಳ್ಳೇಗಾಲ ಶಾಸಕ ಆರ್‌.ಧ್ರುವನಾರಾಯಣ್‌ ಸ್ಫರ್ಧೆಯಲ್ಲಿದ್ದಾರೆ.&lt;br /&gt;ಇವರ ಪೈಕಿ ಯಾರೇ ಲೋಕಸಭೆಗೆ ಆರಿಸಿ ಹೋದರೂ ಆ ಕ್ಷೇತ್ರದಲ್ಲಿ ಮತ್ತೆ ಶಾಸಕರ ಆಯ್ಕೆಗಾಗಿ ಉಪ ಚುನಾವಣೆಯ ಭೂತ ಕಾಡಲಿದೆ. ಮತ್ತೆ ಹಳೇ ಸವಕಲು ಘೋಷಣೆಗಳು, ಹಣ-ಹೆಂಡದ ಹೊಳೆ, ಈಡೇರದ ಭರವಸೆಗಳ ಠೇಂಕಾರ ಕೇಳಿಸಲಿದೆ.&lt;br /&gt;ಪರಸ್ಪರ ಆರೋಪ, ಪ್ರತ್ಯಾರೋಪ, ದೂಷಣೆ, ಕೈ ಕಡೀತಿನಿ, ಕಾಲು ಕಡಿತೀನಿ, ತಲೆ ಕತ್ತರಿಸುವಿಕೆಯ ಬೂಟಾಟಿಕೆಗಳ ಅಬ್ಬರವನ್ನು ಮುಗ್ಧ ಮತದಾರ ತಣ್ಣಗೆ ಕೇಳಿಸಿಕೊಳ್ಳಬೇಕಿದೆ. ಮತ್ತೆ ಅದೇ ಹಣವಂತರು, ರಿಯಲ್‌ ಎಸ್ಟೇಟ್‌ ಕುಳಗಳು ವಿಧಾನಸಭೆಗೆ ಆರಿಸಲಿದ್ದಾರೆ. ರಾಜಕೀಯ ಚದುರಂಗದಾಟದಲ್ಲಿ ಸಾಮಾನ್ಯ ಮತದಾರನಿಗೆ ಪೊಳ್ಳು ಘೋಷಣೆಗಳ ಹೊರತು ಮತ್ತೇನು ಸಿಗದು.&lt;br /&gt;&lt;strong&gt;ಪ್ರಗತಿಗೆ ಜ್ವರ:&lt;/strong&gt;&lt;br /&gt;ಹೀಗೆ ಮೇಲಿಂದ ಮೇಲೆ ಚುನಾವಣೆಗಳು ಬರುತ್ತಿದ್ದರೆ ಅದರ ಪರಿಣಾಮ ರಾಜ್ಯದ ಅಭಿವೃದ್ಧಿಯ ಮೇಲೆ ಆಗುತ್ತದೆ. ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ಸಚಿವ ಸಂಪುಟ ಸದಸ್ಯರು, ಹಿರಿ-ಕಿರಿ ಅಧಿಕಾರಿಗಳು ಚುನಾವಣೆಯಲ್ಲಿ ನಿರತರಾಗುವುದರಿಂದ ಯಾವ ಸರ್ಕಾರಿ ಕಡತಗಳು ಧೂಳಿಂದ ಮೇಲೇಳುವುದಿಲ್ಲ.&lt;br /&gt;ಲೋಕಸಭೆ ಚುನಾವಣೆ ಘೋಷಣೆಯಾದ ಮಾರ್ಚ್‌ 2 ರಿಂದ ನೀತಿ ಸಂಹಿತೆ ಜಾರಿಯಿದ್ದು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಹೊಸದಾಗಿ ಅನುಷ್ಠಾನ ಮಾಡುವಂತಿಲ್ಲ. ಘೋಷಣೆ ದಿನಾಂಕಕ್ಕಿಂತ ಮೊದಲು ಮಂಜೂರಾದ ಕಾಮಗಾರಿಗಳನ್ನು ಮಾತ್ರ ಮಾಡಬಹುದಾಗಿದೆ ವಿನಃ ಹೊಸ ಕಾಮಗಾರಿಗಳಿಗೆ ಚಾಲೂ ನೀಡುವಂತಿಲ್ಲ.&lt;br /&gt;ಜಾನಪದ ಜಾತ್ರೆ, ಸರ್ಕಾರದಿಂದ ನೀಡುವ ವಿವಿಧ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡುವ ಅನುದಾನ, ಕಲಾವಿದರಿಗೆ ಬೇಕಾದ ಅನುಕೂಲ ಇವ್ಯಾವನ್ನು ಮಾಡುವಂತಿಲ್ಲ. ಎಲ್ಲದಕ್ಕೂ ನೀತಿ ಸಂಹಿತೆ ಅಡ್ಡಿ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಲಭ್ಯವಾಗುವ ಅನುದಾನವನ್ನು ಬಿಡುಗಡೆ ಮಾಡುವಂತಿಲ್ಲ.&lt;br /&gt;ರಸ್ತೆ, ಬೀದಿದೀಪ, ಕುಡಿಯುವ ನೀರಿನಂತ ಮೂಲಭೂತ ಸೌಲಭ್ಯಗಳನ್ನು ಮರೆತು ಬಿಡೋಣ. ಆದರೆ ಹೃದ್ರೋಗ, ಕಿಡ್ನಿ ಕಾಯಿಲೆಯಂತ ಗಂಭೀರ ಸ್ವರೂಪದಲ್ಲಿ ತುರ್ತು ಚಿಕಿತ್ಸೆ ಬಯಸುವ ಬಡರೋಗಿಗಳು ಮುಖ್ಯಮಂತ್ರಿಯಿಂದ ಹಣ ಯಾಚಿಸುವಂತಿಲ್ಲ. ಎಲ್ಲವೂ ನೀತಿ ಸಂಹಿತೆಯ ವ್ಯಾಪ್ತಿಗೆ ಒಳಪಡುವುದರಿಂದ ಯಾವುದೇ ಸಹಾಯವೂ ಲಭ್ಯವಿಲ್ಲ.&lt;br /&gt;ಅನಿವಾರ್ಯ ಸಂದರ್ಭದಲ್ಲಿ ವರ್ಗಾವಣೆ ಮಾಡಿಸಿಕೊಳ್ಳಲೇಬೇಕಾದ ತುರ್ತಿರುವ ಸರ್ಕಾರಿ ನೌಕರರು ಪದೇ ಪದೇ ಬರುವ ಚುನಾವಣೆಯಿಂದ ಸಂತ್ರಸ್ತರಾಗಿದ್ದಾರೆ. ಸರ್ಕಾರದ ಮಟ್ಟದಲ್ಲಿ ಲಾಬಿ ಮಾಡುವ ಛಾತಿಯುಳ್ಳ ನೌಕರರದ್ದು ಒಂದು ಪಾಡು. ಹಣ, ರಾಜಕೀಯ ಪ್ರಭಾವ ಇಲ್ಲದ ನೌಕರರದ್ದು ಮತ್ತೊಂದು ಪಾಡು. ಪ್ರತಿವರ್ಷ ಏಪ್ರಿಲ್‌-ಮೇ ನಲ್ಲಿ ಸಾಮಾನ್ಯ ವರ್ಗಾವಣೆ ನಡೆಯುತ್ತದೆ. ಆದರೆ ಈ ಬಾರಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಯಾವುದೇ ವರ್ಗಾವಣೆ ಮಾಡುವಂತಿಲ್ಲ. ಮೇ 16 ಕ್ಕೆ ಚುನಾವಣೆ ಮುಗಿಯುತ್ತದಾದರೂ ಶೈಕ್ಷಣಿಕ ವರ್ಷ ಆರಂಭವಾಗುವುದರಿಂದ ಆಗಲೂ ವರ್ಗಾವಣೆ ಕನಸನ್ನು ನೌಕರರು ಮಡಿಚಿಡಬೇಕು. ವೃದ್ಧ ತಂದೆತಾಯಿ ಹೊಂದಿರುವವರು, ಸತಿ-ಪತಿ ಪ್ರಕರಣ, ಅನಾರೋಗ್ಯ ಮಕ್ಕಳನ್ನು ಹೊಂದಿರುವವರು, ವ್ಕ್ರೆಯಕ್ತಿಕವಾಗಿ ಕಾಯಿಲೆಯಿಂದ ಬಸವಳಿದ ಸರ್ಕಾರಿ ನೌಕರರು ವರ್ಗಾವಣೆಗೆ ಪರದಾಡಬೇಕಾಗಿದೆ.&lt;br /&gt;ಲೋಕಸಭೆ ಚುನಾವಣೆಯಿರುವುದರಿಂದ ಇಡೀ ರಾಜ್ಯಕ್ಕೆ ನೀತಿ ಸಂಹಿತೆ ಅನ್ವಯವಾಗಿದೆ. ಆದರೆ ಉಪಚುನಾವಣೆ ಕೆಲವೇ ಕ್ಷೇತ್ರಗಳಿಗೆ ಸೀಮಿತವಾಗುವುದರಿಂದ ಆಗಲೂ ಆಯಾ ಪ್ರದೇಶಕ್ಕೆ ನೀತಿ ಸಂಹಿತೆ ಜಾರಿಯಾಗುತ್ತದೆ. ಇದು ಆಯಾ ಕ್ಷೇತ್ರದ ಅಭಿವೃದ್ಧಿಗೆ ಹೊಡೆತ ನೀಡುತ್ತದೆ.&lt;br /&gt;ಚುನಾವಣೆಗೆ ಸರ್ಕಾರ ವೆಚ್ಚ ಮಾಡುವ ಹಣ ಕೂಡ ಸಾರ್ವಜನಿಕರು ತಮ್ಮ ಬೆವರು ಬಸಿದು ಕಟ್ಟುವ ತೆರಿಗೆ ಮೂಲದ್ದು. ಅದು ಯಾರದ್ದೋ ದುಡ್ಡಲ್ಲ. ಸಾರ್ವಜನಿಕರ ಪ್ರತಿಯೊಂದು ಪೈಸೆಯನ್ನು ಎಚ್ಚರದಿಂದ ಖರ್ಚು ಮಾಡಬೇಕಾದ ಹೊಣೆಗಾರಿಕೆ ಹೊಂದಿರುವ ಸರ್ಕಾರ ಈ ರೀತಿ ದುಂದು ಮಾಡುವುದುದು ಎಷ್ಟು ಸರಿ?&lt;br /&gt;ಚುನಾವಣೆ ಬಂದರೆ ಆಗಲಾದರೂ ರಸ್ತೆ, ನೀರು, ಚರಂಡಿ, ವಿದ್ಯುದ್ದೀಪ, ಅಗತ್ಯ ಕಾಮಗಾರಿಗಳನ್ನು ಸ್ಥಳೀಯ ರಾಜಕಾರಣಿಗಳು ಮಾಡಿಸುತ್ತಾರೆಂಬ ಎಂಬ ಮತ್ತೊಂದು ವಾದವೂ ಇದೆ. ಮತ ಯಾಚಿಸಲು ಹೋದಾಗ ಮತದಾರ ಪ್ರಭುವಿನ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸುವುದಕ್ಕಿಂತ ಮೊದಲೇ ಅಭಿವೃದ್ಧಿ ಕಾಮಗಾರಿ ಮಾಡಿಸಿ, ನಂತರ ಮತ ಕೇಳಲು ಹೋಗುವ ಹುನ್ನಾರದಿಂದಲೂ ಚುನಾವಣೆ ಬಂದರೆ ಒಳ್ಳೆಯದೆಂಬ ಮಾತೂ ಇದೆ.&lt;br /&gt;ಆದರೆ ಒಟ್ಟಾರೆ ಚುನಾವಣೆ ಯಾರ ಸ್ವಾರ್ಥಕ್ಕೆ, ಯಾರ ಅನುಕೂಲಕ್ಕೆ ಎಂಬ ಪ್ರಶ್ನೆ ಮತದಾರನದು. ಅಲ್ಲಿಂದ ಇಲ್ಲಿಗೆ ಮರಕೋತಿಯಾಟವಾಡುವ, ಅಭಿವೃದ್ಧಿ ಮುಖವಾಡದಡಿ ತಮ್ಮ ಹಿತಾಸಕ್ತಿಯನ್ನು ಪೂರೈಸಿಕೊಳ್ಳುವ ರಾಜಕಾರಣಿಗಳು ಆಡುವ ಆಟಕ್ಕೆ ಚುನಾವಣಾ ಆಯೋಗವಾದರೂ ಕಡಿವಾಣ ಹಾಕಬೇಕಾಗಿದೆ. ಒಂದು ಚಿಹ್ನೆ, ಪಕ್ಷದಡಿ ಗೆದ್ದ ಅಭ್ಯರ್ಥಿ ಒಂದು- ಎರಡು-ಆರು ತಿಂಗಳಲ್ಲಿ ರಾಜೀನಾಮೆ ನೀಡಿ, ಮತ್ತೊಂದು ಪಕ್ಷದಿಂದ ಸ್ಪರ್ಧಿಸುವುದು, ಚುನಾವಣೆ ವೆಚ್ಚವನ್ನು ಜನರ ಮೇಲೆ ಹೇರುವುದು ಪ್ರಜಾತಂತ್ರ ವಿರೋಧಿಯಲ್ಲವೇ ಎಂಬ ಚರ್ಚೆಯನ್ನು ಆರಂಭಿಸಲಂತೂ ಇದು ಸಕಾಲ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-3139713257304001483?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/3139713257304001483/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=3139713257304001483' title='0 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/3139713257304001483'/><link rel='self' type='application/atom+xml' href='http://www.blogger.com/feeds/8477112084544236406/posts/default/3139713257304001483'/><link rel='alternate' type='text/html' href='http://horaganavanu.blogspot.com/2009/05/blog-post_03.html' title='ಮತಸಮರ-ಪ್ರಗತಿಗೆ ಜ್ವರ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>0</thr:total></entry><entry><id>tag:blogger.com,1999:blog-8477112084544236406.post-5966789098675028694</id><published>2009-05-03T08:03:00.000-07:00</published><updated>2009-05-03T08:04:12.783-07:00</updated><title type='text'>ಕುರುಡು ಕಾಂಚಾಣ</title><content type='html'>`ಕುರುಡು ಕಾಂಚಾಣ ಕುಣಿಯುತಲಿತ್ತು&lt;br /&gt;ಕಾಲಿಗೆ ಬಿದ್ದವರ ತುಳಿಯುತಲಿತ್ತು'&lt;br /&gt;ಚುನಾವಣೆಯಲ್ಲಿ ಒಂದು ಮತಕ್ಕಾಗಿ ಕಾಲಿಗೆ ಬೀಳುವವರು ಗೆದ್ದ ನಂತರ ತಲೆಮಾರಿಗಾಗುವಷ್ಟು ಸಂಪತ್ತು ಸಂಗ್ರಹಿಸಿ, ಕಾಂಚಾಣದ ಸುಪ್ಪತ್ತಿಗೆಯಲ್ಲೇ ಮರೆತು ಬಿಡುತ್ತಾರೆ.&lt;br /&gt;ವಿಧಾಯಕ ರಾಜಕಾರಣದಲ್ಲಿ ಅಮೂಲ್ಯ `ಮತ' ಗಳಿಸಲು ಕುರುಡು ಕಾಂಚಾಣ ದೆವ್ವಂಗುಣಿತ ಮಾಡಿದೆ. ಚುನಾವಣೆ ಮುಖೇನ `ವಿಧೇಯಕ'ರಾಗುವವರು ಹಣದ ಆಮಿಷಕ್ಕೆ ಮತವನ್ನು ಖರೀದಿಸುವುದರಿಂದ ಅವರು ರೂಪಿಸುವ ನಿಯಮ, ಶಾಸನಗಳೆಲ್ಲ ಹಣಾವಲಂಬಿಯೇ ಆಗುತ್ತದೆ.&lt;br /&gt;`ಜ್ಯೋತಿಯ ಮಣಿ ದೀಪಗಳಲ್ಲಿ&lt;br /&gt;ಕತ್ತಲು ಕಗ್ಗತ್ತಲು ಇಲ್ಲಿ&lt;br /&gt;ಕೂಳನು ಹೆಮ್ಮೆಗೆ ಬಿಸುಡುವರಲ್ಲಿ&lt;br /&gt;ಹೊಟ್ಟೆಗೆ ಇಲ್ಲದೆ ಕೊರಗುವರಿಲ್ಲಿ'&lt;br /&gt;ಎಂಬ ಪರಿಸ್ಥಿತಿ ಅರವತ್ತು ವರ್ಷಗಳಲ್ಲಿ ಬದಲಾಗಲೇ ಇಲ್ಲ. ಹಣದ ಥೈಲಿ ಅಷ್ಟು ಭರ್ಜರಿಯಾಗಿ ನರ್ತನ ಮಾಡುತ್ತಿದ್ದರೆ, ಬಡವರು ಮತ್ತಷ್ಟು ಸೊರಗುತ್ತಿದ್ದಾರೆ.&lt;br /&gt;ಮೊದಲ ಹಂತದಲ್ಲಿ ನಡೆದ 17 ಲೋಕಸಭಾ ಕ್ಷೇತ್ರಗಳ ಚುನಾವಣೆ ಹೊತ್ತಿಗೆ ಸುಮಾರು 23 ಕೋಟಿ ರೂ. ಮೌಲ್ಯದ ನಗದು, ಆಭರಣಗಳು ವಶವಾಗಿವೆ.&lt;br /&gt;ಮತದಾರನಿಗೆ ಹಂಚಲು ತಂದಿದ್ದ ಒಂದು ಕೋಟಿ ಮೌಲ್ಯದ ಚಿನ್ನಾಭರಣ, 80 ಲಕ್ಷ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಈವರೆಗೆ ವಶಪಡಿಸಿಕೊಳ್ಳಲಾಗಿದೆ. ಅಧಿಕೃತ ಲೆಕ್ಕವಿದಾದರೂ ಪೊಲೀಸರ ಕರಾಮತ್ತನ್ನು ಬಲ್ಲವರು ಹೇಳುವಂತೆ ಇದು ಸರಿಸುಮಾರು ದುಪ್ಪಟ್ಟಾಗಿರುತ್ತದೆ.&lt;br /&gt;ಐನೂರು, ಸಾವಿರದ ಮುಖಬೆಲೆ ಹೊಂದಿದ ಸುಮಾರು 17.31 ಕೋಟಿ ರೂ. ನಗದು, 2.10 ಕೋಟಿ ರೂ. ಮೌಲ್ಯದ ವಿವಿಧ ವಸ್ತುಗಳು ಪೊಲೀಸರ ವಶವಾಗಿವೆ. ವಶಕ್ಕೆ ಪಡೆಯಲಾದ ಮದ್ಯದ ಪ್ರಮಾಣ 1.63 ಕೋಟಿ ರೂ. ಬೆಲೆಯುಳ್ಳದ್ದು.&lt;br /&gt;ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಒಂದೇ ಪ್ರಕರಣದಲ್ಲಿ 5 ಕೋಟಿ ಪೊಲೀಸರ ವಶವಾಗಿದ್ದರೆ, ಬೆಂಗಳೂರಿನಲ್ಲಿ 7.5 ಕೆ.ಜಿ. ಚಿನ್ನ ವಶವಾಗಿದೆ. ಬೀದರ್‌, ಕೋಲಾರ, ಬಾಗಲಕೋಟೆ ಹೀಗೆ ಮೊದಲ ಹಂತದ ಚುನಾವಣೆ ನಡೆದ ಎಲ್ಲಾ ಕ್ಷೇತ್ರಗಳು `ಲಕ್ಷ್ಮಿ' ಕಾಲು ಮುರಿದುಕೊಂಡು ಬಿದ್ದಿದ್ದಾಳೆ. ಎಲ್ಲೆಲ್ಲೂ ಹಣದ ಹೊಳೆಯೇ ಹರಿದಾಡಿದೆ. ಇದು ಯಾವ ಪಕ್ಷದ ಅಭ್ಯರ್ಥಿಗಳಿಗೆ ಸೇರಿದ್ದೆಂದು ಬಹಿರಂಗವಾಗದಿದ್ದರೂ ಸೇರಿಗೆ ಸವ್ವಾಸೇರು ಎಂಬಂತೆ ಎಲ್ಲರೂ ಹಣದ ಬೆನ್ನು ಬಿದ್ದಿದ್ದಾರೆ.&lt;br /&gt;ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅಭ್ಯರ್ಥಿಯೊಬ್ಬರು `ನೋ ವೋಟ್‌ ನೋ ಕ್ಯಾಶ್‌' ಎಂಬ ಮಾದರಿ ಅನುಸರಿಸಿದ್ದು ವರದಿಯಾಗಿದೆ. ಮೇ 16ರ ದಿನಾಂಕ ನಮೂದಿಸಿ ಕೊಟ್ಟ ಚೆಕ್‌, ಅಭ್ಯರ್ಥಿ ಗೆದ್ದರೆ ಮಾತ್ರ ಕ್ಯಾಶ್‌ ಆಗುತ್ತದೆ. ಸೋತರೆ ಬ್ಯಾಂಕ್‌ ಖಾತೆಯಲ್ಲಿ ಹಣವಿಲ್ಲದೇ ಚೆಕ್‌ ವಾಪಸ್ಸಾಗುತ್ತದೆ. 50 ಸಾವಿರ ರೂ. ಗಳಿಂದ ಒಂದು ಲಕ್ಷ ರೂ. ವರೆಗಿನ ಚೆಕ್‌ಗಳು ಪಾವತಿಯಾಗಿದೆ. ಹೇಗಿದೆ ರಾಜಕಾರಣಿಯ ಬುದ್ದಿವಂತಿಕೆ.&lt;br /&gt;ಹಣದ ಆಮಿಷಕ್ಕೆ `ಮಾರಿಕೊಂಡವರು' ಈ ಚುನಾವಣೆಯಲ್ಲಿ ಬಾರೀ ಸಂಖ್ಯೆಯಲ್ಲಿದ್ದಾರೆ. ವಿಧಾನಸಭೆಯ ಉಪ ಚುನಾವಣೆಯಲ್ಲಿಯೇ ಇಂತಹದೊಂದು ಪ್ರಯೋಗವನ್ನು ರಾಜಕಾರಣಿಗಳು ಮಾಡಿದ್ದರು. ಉಪಚುನಾವಣೆಯಲ್ಲಿ ಕನಕಾಂಬರ, ವೀಳ್ಯದೆಲೆಯ ಸಾಂಕೇತಿಕವಾಗಿ ಬಳಕೆಯಾಗಿತ್ತು. ಕನಕಾಂಬರವೆಂದರೆ ಸಾವಿರದ ನೋಟು, ವೀಳ್ಯದೆಲೆಯೆಂದರೆ ಐನೂರರ ನೋಟೆಂಬುದು ಮತದಾರರಿಗೆ ಅರ್ಥವಾಗಿತ್ತು. ವೀಳ್ಯದೆಲೆಯೂ ಇಲ್ಲ, ಕನಕಾಂಬರವೂ ಇಲ್ಲ, ಯಾಕೆ ಓಟು ಹಾಕೋಣ ಎಂಬ ಪ್ರಶ್ನೆಯನ್ನು `ಮುಗ್ಧ' ಮತದಾರರು ಕೇಳುತ್ತಿದ್ದರು.&lt;br /&gt;ಲೋಕಸಭೆಗೆ ಸ್ಪರ್ಧಿಸಲು ಪೂರ್ವ ಸಿದ್ದತೆ ಮಾಡಿಕೊಂಡಿದ್ದ ಅಭ್ಯರ್ಥಿಯೊಬ್ಬರು ತಮ್ಮ ತಂದೆಯನ್ನು ಆಯ್ಕೆ ಮಾಡಿದ ವಿಧಾನಸಭಾ ಕ್ಷೇತ್ರದಲ್ಲಿ ಸಂಕ್ರಾಂತಿ ಸಡಗರಕ್ಕೆ ಸೀರೆ ಹಂಚಿ ತಮಗೆ ಬರಬೇಕಾದ ಮತಕ್ಕೆ ಪೂರ್ವಭಾವಿ `ವ್ಯವಸ್ಥೆ' ಮಾಡಿಕೊಂಡಿದ್ದರು.&lt;br /&gt;&lt;strong&gt;ಮಾರಿಕೊಂಡವರು&lt;br /&gt;&lt;/strong&gt;ಮತಕ್ಕಾಗಿ ಮಾರಿಕೊಂಡವರು ಐದು ವರ್ಷಗಳ ಕಾಲ ಮತ್ತೆಂದು ರಾಜಕಾರಣಿಗಳನ್ನು ಪ್ರಶ್ನಿಸುವಂತಿಲ್ಲ. ಯಾಕೆಂದರೆ ತಮ್ಮ ಹಕ್ಕನ್ನೂ ಅತ್ಯಲ್ಪ ಹಣಕ್ಕಾಗಿ `ಜಿಪಿಎ' ಬರೆದುಕೊಟ್ಟು ಬಿಟ್ಟಿರುತ್ತಾರೆ. ಪ್ರಶ್ನಿಸಿದರೆ ಹಣಕೊಟ್ಟಿಲ್ವಾ ಮತ್ತೇನು ಕೇಳೋದು ಎಂಬ ಜಬರ್ದಸ್ತು ಮಾಡಲು ರಾಜಕಾರಣಿಗಳು ಅಂಜುವುದಿಲ್ಲ, ಅಳುಕುವುದಿಲ್ಲ.&lt;br /&gt;ಆಯ್ಕೆಯಾಗುವ ಅಭ್ಯರ್ಥಿಗಳು ಜಾಗತೀಕರಣ ಪರವಾದ ನಿಲುವು ತೆಗೆದುಕೊಳ್ಳಲಿ, ವಿಶೇಷ ಆರ್ಥಿಕ ವಲಯಗಳನ್ನು ಜಾರಿ ಮಾಡಲಿ, ಸಾರ್ವಜನಿಕ ವಲಯದ ಲಾಭಕರ ಉದ್ಯಮಗಳನ್ನು ಮಾರಿಕೊಳ್ಳಲಿ, ಬಡವರ ವಿರೋಧಿ ನಿಲುವು ಅನುಷ್ಠಾನಗೊಳಿಸಲಿ, ಅಭಿವೃದ್ಧಿ ಮಾಡದೇ ಇರಲಿ. ಅವರು ಪ್ರಶ್ನಾತೀತ. ಯಾಕೆಂದರೆ ಹಣಕೊಟ್ಟು ಮತ ಖರೀದಿಸಿದ್ದಾರೆ. ಖರೀದಿಗಾಗಿ ಖರ್ಚು ಮಾಡಿದ ಹಣವನ್ನು ಮತ್ತೆ ಸಂಪಾದಿಸುವ ದರ್ದು ಅವರಿಗೆ ಇರುತ್ತದೆ. ಮಾರಿಕೊಂಡವರು ಸುಮ್ಮನೇ ಮತ್ತೊಂದು ಚುನಾವಣೆಗೆ ಕಾಯುವುದಷ್ಟೇ ಕರ್ಮ.&lt;br /&gt;&lt;strong&gt;ಸಿರಿಗರ&lt;br /&gt;&lt;/strong&gt;ಹಾವು ತಿಂದವರ ನುಡಿಸಬಹುದು, ಗರ ಬಡಿದವರ ನುಡಿಸಬಹುದು, ಸಿರಿಗರ ಬಡಿದವರ ನುಡಿಸಲು ಬಾರದು ನೋಡಯ್ಯಾ ಎಂಬ ಬಸವಣ್ಣನವರ ವಚನ ಹಣದ ದರ್ಪ-ಅಹಂಕಾರ ಕುರಿತು ಅರ್ಥಪೂರ್ಣ ಮಾತು. ಹಣದ ಹೊಳೆ ಹರಿಸಿ, ಮತವನ್ನು ಖರೀದಿಸುವವರು ಬಂಡವಾಳ ಹೂಡಿ ಬಂಡವಾಳ ತೆಗೆಯುವ ಉದ್ಯಮಿಯಂತೆ. ಸಿರಿಗರ ಬಡಿದವರನ್ನು ನುಡಿಸಲು ಬಾರದು. ವಿಧೇಯಕರನ್ನು ಆರಿಸುವ ಚುನಾವಣೆ ಬಂಡವಾಳಶಾಹಿಯ ಎಲ್ಲ ಲಕ್ಷಣವನ್ನು ಮೈಗೂಡಿಸಿಕೊಂಡಿದೆ. ಹೂಡುವವನು ಮುಂದಿನ ಐದು ವರ್ಷದ ಲೆಕ್ಕಾಚಾರ ಹಾಕಿಯೇ ಹೂಡುತ್ತಾನೆ. ಅದಕ್ಕಾಗಿ ಬೇಕಾದ ಹೂಡಿಕೆಯನ್ನು ಅಳೆದು ತೂಗಿ ಮಾಡುತ್ತಾನೆ.&lt;br /&gt;ಹೀಗೆ ಬಂಡವಾಳ ಪದ್ಧತಿ ಚುನಾವಣೆಯಲ್ಲಿ ಅಳವಟ್ಟಿರುವುದರಿಂದಲೇ ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಚುನಾವಣೆ ಅವಧಿಯಲ್ಲಿ 23 ಕೋಟಿ ರೂ.ಗಳಷ್ಟು ಅಕ್ರಮ ಹಣ, ಬಂಗಾರ ಪೊಲೀಸರ ವಶವಾಗಿದೆ. ಶೋಕೇಸ್‌ನಲ್ಲಿಯೇ ಇಷ್ಟು ಕಂಡಿರಬೇಕಾದರೆ ಇನ್ನು ರಹಸ್ಯವಾಗಿ ಗೋಡನ್‌ನಲ್ಲಿ ಕೂಡಿಟ್ಟಿದ್ದು ಎಷ್ಟಿದ್ದೀತು? ಒಂದು ಲೋಕಸಭಾ ಕ್ಷೇತ್ರಕ್ಕೆ ಸರಾಸರಿ ಲೆಕ್ಕ ಹಾಕಿದರೆ ಒಂದು ಕಾಲು ಕೋಟಿ ಯಷ್ಟಾಗುತ್ತದೆ. ಚುನಾವಣೆ ಆಯೋಗ ಒಬ್ಬ ಅಭ್ಯರ್ಥಿಗೆ ನಿಗದಿ ಮಾಡಿರುವ ಖರ್ಚಿ ಬಾಬ್ತು ಕೇವಲ 25 ಲಕ್ಷ ರೂ. ಆದರೆ ಅಕ್ರಮವಾಗಿ ಸಂಗ್ರಹವಾಗಿರುವುದೇ ಒಂದೂಕಾಲು ಕೋಟಿ ದಾಟಿದೆ. ಅಬ್ಬಾ ಹಣವೇ ಏನು ನಿನ್ನ ಮಹಿಮೆಗಳ ಲೀಲೆ?&lt;br /&gt;&lt;strong&gt;ಒಂದೇ ವೋಟು&lt;/strong&gt;&lt;br /&gt;ಚುನಾವಣೆ ಬಗ್ಗೆ ಸವಕಲಾದ ಮಾತೊಂದಿದೆ; ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೋಟ್ಯಾಧೀಶನಿಗೂ ಒಂದೇ ವೋಟು, ನಿರ್ಗತಿಕನಿಗೂ ಒಂದೇ ವೋಟು. ಪ್ರತಿ ಚುನಾವಣೆಯಲ್ಲಿ ಇಬ್ಬರೂ ಮತ ಚಲಾಯಿಸುತ್ತಾರೆ. ಪ್ರತಿ ಬಾರಿ ಫಲಿತಾಂಶ ಬಂದಾಗಲೂ ಕೋಟ್ಯಧೀಶ ಗೆಲ್ಲುತ್ತಾನೆ. ನಿರ್ಗತಿಕ ಸೋಲುತ್ತಾನೆ.&lt;br /&gt;ಕುರುಡು ಕಾಂಚಾಣ ಮೊದಲ ಹಂತದಲ್ಲಿ ತನ್ನ ನರ್ತನ ಮುಗಿಸಿದೆ. ಥೈ ಥೈ ಕುಣಿದು ಮತವನ್ನು ವಶೀಕರಣ ಮಾಡಿದೆ. ಫಲಿತಾಂಶವೊಂದು ಬಾಕಿಯಿದೆ.&lt;br /&gt;`ಹೆಂಗಾರ ಕುಣಿಕುಣಿದು&lt;br /&gt;ಮಂಗಾಟ ನಡೆದಾಗ&lt;br /&gt;ಅಂಗಾತ ಬಿತ್ತು&lt;br /&gt;ಹೆಗಲಾಲಿ ಎತ್ತೋ'&lt;br /&gt;ಹೌದು; ಕುರುಡು ಕಾಂಚಾಣದ ಮೈಮರೆಸುವ ಕುಣಿತದಲ್ಲಿ ಇಲ್ಲಿವರೆಗೆ ಅಭ್ಯರ್ಥಿ ಗೆದ್ದಿದ್ದಾನೆ. ಪ್ರಜಾಪ್ರಭುತ್ವ ಅಂಗಾತ ಬಿದ್ದಿದೆ. ಮತದಾರರ ಅದನ್ನು ಹೆಗಲಲ್ಲಿ ಹೊತ್ತುಕೊಂಡು ಐದು ವರ್ಷ ಓಡಾಡುತ್ತಿದ್ದಾನೆ. ಹದಿನೈದನೇ ಚುನಾವಣೆಯಲ್ಲಾದರೂ ಕುರುಡು ಕಾಂಚಾಣ ಅಂಗಾತ ಬಿದ್ದು, ಹೆಗಲಾಲಿ ಎತ್ತುವಂತಹ ಸ್ಥಿತಿಗೆ ತಲುಪಲಿ. ಪ್ರಜಾಪ್ರಭುತ್ವ ಎದ್ದು ನಿಂತು ಜನಾಧಿಕಾರ ಸ್ಥಾಪಿತವಾಗಲಿ. . .&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-5966789098675028694?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/5966789098675028694/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=5966789098675028694' title='0 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/5966789098675028694'/><link rel='self' type='application/atom+xml' href='http://www.blogger.com/feeds/8477112084544236406/posts/default/5966789098675028694'/><link rel='alternate' type='text/html' href='http://horaganavanu.blogspot.com/2009/05/blog-post.html' title='ಕುರುಡು ಕಾಂಚಾಣ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>0</thr:total></entry><entry><id>tag:blogger.com,1999:blog-8477112084544236406.post-381097541969952518</id><published>2009-04-19T05:17:00.000-07:00</published><updated>2009-04-19T05:20:04.702-07:00</updated><title type='text'>ತಲ್ಲಣ ತಳಮಳ</title><content type='html'>ಆರ್ಥಿಕ ಬಿಕ್ಕಟ್ಟು ತಂದಿತ್ತ ಅಂಕಿ ಅಂಶಗಳ ಲೆಕ್ಕಾಚಾರವೇ ಬೇರೆ. ಅದು ಪರೋಕ್ಷವಾಗಿ ಉಂಟು ಮಾಡುತ್ತಿರುವ ಮಾನಸಿಕ, ಸಾಮಾಜಿಕ ಸಂಕ್ಷೋಭೆಯೇ ಬೇರೆ.&lt;br /&gt;ಕೈತುಂಬಿ ಚೆಲ್ಲುವಷ್ಟು ಸಂಬಳ ಗಿಟ್ಟಿಸಿ, ಊಹೆಗೂ ನಿಲುಕದಂತಹ ಐಷಾರಾಮಿ ಜೀವನ ಮಾಡುತ್ತಿದ್ದವರ ಪಾಡು ಒಂದು ರೀತಿಯದು. ಹೊಟ್ಟೆ ತುಂಬುವ ಹಿಟ್ಟಿಗೂ ಪರದಾಡುತ್ತಾ ನಿತ್ಯದ ಅವಶ್ಯಕತೆಗೂ ಎಟುಕದ ಸಂಬಳ ಪಡೆಯುತ್ತಿದ್ದವರದ್ದು ಮತ್ತೊಂದು ಬಗೆಯ ಯಾತನೆ. ಆದರೆ ಎರಡರ ಪರಿಣಾಮವೊಂದೇ. ಸಾಮಾಜಿಕ, ಮಾನಸಿಕ ಆಘಾತ; ಹೆಚ್ಚುತ್ತಿರುವ ವಿಚ್ಛೇದನ; ಆತ್ಮಹತ್ಯೆಯ ಹೆಚ್ಚಳ; ಮನೋರೋಗಿಗಳ ಸಂಖ್ಯೆ ಅಧಿಕ; ಅಪರಾಧ ಪ್ರಕರಣಗಳ ಪುನರಾವೃತ್ತಿ; ಎಲ್ಲೆಲ್ಲೂ ಕಾಡುತ್ತಿರುವ ಅಭದ್ರತೆ.&lt;br /&gt;ಆಘಾತ 1:&lt;br /&gt;ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶವೊಂದರಲ್ಲಿ ಹೆಸರಾಂತ ಹೋಟೆಲ್‌ನಲ್ಲಿ ಮಧ್ಯಾಹ್ನ ಹಾಗೂ ಸಂಜೆಯ ಹೊತ್ತು ಕಾಲಿಕ್ಕಲು ಜಾಗವಿರುತ್ತಿರಲಿಲ್ಲ. ಊಟ ಮಾಡಲು ಹೋದರೆ ಬಟ್ಟೆಗೆಲ್ಲಾ ಅನ್ನಸಾಂಬಾರು ಮೆತ್ತಿಕೊಳ್ಳುತ್ತಿತ್ತು. ಕೊರಳಿಗೆ ಐಡಿ ಕಾರ್ಡ್‌ನ ಟ್ಯಾಗ್‌ ನೇತು ಹಾಕಿಕೊಂಡ ಯುವಕ-ಯುವತಿಯ ಮೇಜುಬಾನಿ ಅಲ್ಲಿರುತ್ತಿತ್ತು. ಅವರೆಲ್ಲರೂ ಕಂಪನಿ ಕೊಡುವ ಕೂಪನ್‌ ಖಾಲಿ ಮಾಡಲು ಅತ್ತ ಚಿತ್ತೈಸುತ್ತಿದ್ದರು. ಆದರೆ ಈಗ್ಗೆ 2 ತಿಂಗಳಿಂದ ಹೋಟೆಲು ಬಣಬಣ. ಕೊರಳಿಗೆ ಟ್ಯಾಗ್‌ ಹಾಕಿಕೊಂಡು, ಕೂಪನ್‌ ಹಿಡಿದು ಬರುತ್ತಿದ್ದವರು ಪತ್ತೆಯಿಲ್ಲ. ಏಕೆಂದರೆ ಆ ಸುತ್ತಮುತ್ತಲಿದ್ದ ಬಹುತೇಕ ಬಿಪಿಓಗಳು ಅರ್ಧ ಬಾಗಿಲು ಹಾಕಿವೆ. ಇನ್ನೂ ಕೆಲವು ಉದ್ಯೋಗಸ್ಥರ ಕಡಿತ ಮಾಡಿವೆ. ಕೂಪನ್‌ ಕೂಡ ಕೊಡುತ್ತಿಲ್ಲ.&lt;br /&gt;&lt;strong&gt;ಆಘಾತ2:&lt;br /&gt;&lt;/strong&gt;ತಿಂಗಳಿಗೆ ಒಂದು ಲಕ್ಷಕ್ಕೂ ಜಾಸ್ತಿ ಸಂಬಳ ಪಡೆಯುತ್ತಿದ್ದ ಅನೇಕ ಐಟಿ ನೌಕರರು ಕೆಲಸ ಕಳೆದುಕೊಂಡಿದ್ದಾರೆ. ಸಂಬಳ ಬರುತ್ತಿದ್ದಾಗ 25-30 ಸಾವಿರ ಬಾಡಿಗೆ, ಸ್ಟಾರ್‌ ಹೋಟೆಲುಗಳಲ್ಲಿ ಊಟ, ಕಾಫಿ ಡೇನಲ್ಲಿ ಕಾಫಿ ಹೀಗೆ ಜೀವನ ಸಾಗುತ್ತಿತ್ತು. ಆದರೆ ಈಗ ಕೆಲಸವೂ ಇಲ್ಲ, ಸಂಬಳವೂ ಇಲ್ಲ. ಮಾನಸಿಕ ಹಾಗೂ ಕೌಟುಂಬಿಕ ಸಂಘರ್ಷ ಹೆಚ್ಚಾಗಿ ದಾಂಪತ್ಯ ವಿಚ್ಛೇದನೆಯ ಹೊಸ್ತಿಲಲ್ಲಿ ಬಂದು ನಿಂತಿದೆ. ಇದು ಅಸಂಖ್ಯಾತ ಯುವ ಜೋಡಿಗಳ ಸಮಸ್ಯೆ.&lt;br /&gt;&lt;strong&gt;ಆಘಾತ 3:&lt;/strong&gt;&lt;br /&gt;ಉದ್ಯೋಗ ಕಳೆದುಕೊಂಡ ಅಥವಾ ಕಳೆದುಕೊಳ್ಳುವ ಭೀತಿಯಲ್ಲಿ ಮಾನಸಿಕ ಸಮಸ್ಯೆ ಉಲ್ಬಣ. ಒಂದು ಅಧ್ಯಯನದ ಪ್ರಕಾರ ಇಡೀ ವಿಶ್ವದಲ್ಲಿ ಮಾನಸಿಕ ತೊಂದರೆ ಅನುಭವಿಸುತ್ತಿರುವವರ ಸಂಖ್ಯೆ ಶೇ.20 ರಷ್ಟು ಜಾಸ್ತಿಯಾಗಿದ್ದರೆ, ಬೆಂಗಳೂರಿನಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ. ಮನಃಶ್ಯಾಸ್ತ್ರಜ್ಞರು, ಮಾನಸಿಕ ಚಿಕಿತ್ಸಕರಿಗೆ ಭಾರೀ ಬೇಡಿಕೆ. ಮನೋಕ್ಲೇಶ ನೀಗಿಸುವ ಔಷಧ ವಸ್ತುಗಳಿಗೆ ಗಮನಾರ್ಹ ಬೇಡಿಕೆ ಉಂಟಾಗಿದೆಯಂತೆ.&lt;br /&gt;&lt;strong&gt;ಆಘಾತ 4:&lt;/strong&gt;&lt;br /&gt;ಒಂದು ಬಿಪಿಓ ಕಂಪನಿ. ಇಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಯೊಬ್ಬಳಿಗೆ ಸದಾ ಮೊಬೈಲ್‌ ನೋಡುವ ಕೆಲಸ. ಏಕೆಂದರೆ `ನಾಳೆಯಿಂದ ನೀವು ಕೆಲಸಕ್ಕೆ ಬರುವುದು ಬೇಡ'ವೆಂಬ ಸಂದೇಶ ಆಕೆಯ ಹಲವು ಸಹೋದ್ಯೋಗಿಗಳಿಗೆ ಬಂದಿದೆ. ತನಗೂ ಬರಬಹುದೆಂಬ ಆತಂಕ ಆಕೆಯದು. ಇನ್ನೂ ಕೆಲವರು ಕಚೇರಿಗೆ ಹೋದಾಗ ಪಂಚ್‌ ಕಾರ್ಡ್‌ ತೋರಿಸಿದರೆ ಕಚೇರಿಯ ಬಾಗಿಲೇ ತೆರೆದುಕೊಳ್ಳಲಿಲ್ಲವಂತೆ. ಸೆಕ್ಯುರಿಟಿ ಗಾರ್ಡ್‌ ಕೇಳಿದರೆ ನಿಮ್ಮನ್ನು ಕೆಲಸಕ್ಕೆ ತೆಗೆದು ನಿಮ್ಮ ಪಂಚ್‌ ಕಾರ್ಡ್‌ ರದ್ದಾಗಿದೆ ಎಂಬ ಉತ್ತರ. ಅಂತಹವರ ಮನಃಸ್ಥಿತಿ ಹೇಗಿರಬೇಡ.&lt;br /&gt;ಆಘಾ&lt;strong&gt;ತ 5: &lt;/strong&gt;&lt;br /&gt;ಇದ್ದಕ್ಕಿದ್ದಂತೆ ಸಂಬಳ ಕಡಿತ, ಸೌಲಭ್ಯ ಕಡಿತ. ದುಡಿಮೆಯ ಸಮಯ ಹೆಚ್ಚಳ. ಇಲ್ಲದಿದ್ದರೆ ಅವರು ಕೆಲಸ ಮಾಡುತ್ತಿದ್ದ ವಿಭಾಗವೇ ರದ್ದು. ಯಾರನ್ನೂ ಕೇಳುವಂತೆಯೂ ಇಲ್ಲ, ಪರಿಸ್ಥಿತಿಯನ್ನು ಇನ್ನೊಬ್ಬರಿಗೆ ಹೇಳಿಕೊಳ್ಳುವಂತೆಯೂ ಇಲ್ಲ.&lt;br /&gt;ಆಘಾತ 6: ಜವಳಿ ಮತ್ತು ಗಾರ್ಮೆಂಟ್ಸ್‌ ಉದ್ಯಮ ತತ್ತರಿಸುತ್ತಿದ್ದು 2-3 ಸಾವಿರ ರೂ. ಗೆ ದಿನವಿಡೀ ಕಿರುಕುಳ ಸಹಿಸಿ ಕೆಲಸ ಮಾಡುತ್ತಿದ್ದವರಿಗೆ ಆ ಕೆಲಸವೂ ಇಲ್ಲ. ಕೈಯಲ್ಲಿ ಕಾಸೂ ಇಲ್ಲ. ಒಂದು ಅಂದಾಜಿನಂತೆ 2009ರ ಮಾರ್ಚ್‌ ವೇಳೆಗೆ ಇಡೀ ಭಾರತದ ಜವಳಿ ಉದ್ಯಮದಲ್ಲಿ 6 ಲಕ್ಷ ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಗಾರ್ಮೆಂಟ್ಸ್‌ ಉದ್ಯಮ ಬಲಿಷ್ಠವಾಗಿರುವ ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ ಲಕ್ಷ ದಾಟುತ್ತದೆ. ಮುಳುಗುವವನಿಗೆ ಸಿಕ್ಕಿದ್ದ ಹುಲ್ಲುಕಡ್ಡಿಯೂ ಕೈತಪ್ಪಿ ಹೋದ ಅನುಭವ.&lt;br /&gt;* * * * *&lt;br /&gt;ಆರ್ಥಿಕ ಬಿಕ್ಕಟ್ಟಿನ ಪರೋಕ್ಷ ಪರಿಣಾಮವಿದು. ಎಲ್ಲಿ ನೋಡಿದರಲ್ಲಿ ಉದ್ಯೋಗ ಕಡಿತದ ಭೀತಿ. ವಿಶ್ವಸಂಸ್ಥೆಯ ಇಂಟರ್‌ನ್ಯಾಷನಲ್‌ ಲೇಬರ್‌ ಆರ್ಗನೈಸೇಷನ್‌(ಐ ಎಲ್‌ಓ) ಬಿಡುಗಡೆ ಮಾಡಿದ ವರದಿ ಇದು. 2008ರಲ್ಲಿ ಶೇ.6.3 ರಷ್ಟಿದ್ದ ನಿರುದ್ಯೋಗ ಏರಿಕೆ ಪ್ರಮಾಣ 2009ರಲ್ಲಿ ಶೇ.7.1ರಷ್ಟಾಗಲಿದೆ. 2007ರಲ್ಲಿ ಈ ಪ್ರಮಾಣ ಶೇ.5.7ರಷ್ಟಿತ್ತು. ನಿರುದ್ಯೋಗಿಗಳ ಸಂಖ್ಯೆಗೆ 1.8 ಕೋಟಿ ಸೇರ್ಪಡೆಯಾಗಲಿದ್ದಾರೆಂಬ ಲೆಕ್ಕಾಚಾರ ಇದೀಗ 3 ಕೋಟಿ ಆಗಬಹುದೆಂದು ಈ ವರದಿ ಉಲ್ಲೇಖಿಸಿದೆ. ಉದ್ಯೋಗ ಕ್ಷೀಣತೆ ಪ್ರಮಾಣ 5 ಕೋಟಿಗೆ ತಲುಪಲಿದೆ ಎಂದು ವರದಿ ಆತಂಕಿಸಿದೆ.&lt;br /&gt;ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ, ಬಿಪಿಓ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು, ಹಣಕಾಸು ಸಂಸ್ಥೆಗಳನ್ನು ಮಾತ್ರ ಈ ಲೆಕ್ಕಾಚಾರ ಒಳಗೊಂಡಿದೆ. ಕೃಷಿ ಸಂಸ್ಕರಣೆ, ಗಾರ್ಮೆಂಟ್ಸ್‌ ಮತ್ತಿತರ ಕ್ಷೇತ್ರಗಳನ್ನು ಇದು ಲೆಕ್ಕಕ್ಕಿಟ್ಟಿಲ್ಲ.&lt;br /&gt;2008ರಲ್ಲಿ ಅಮೆರಿಕದಲ್ಲಿ 28 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದರೆ, ಕೇವಲ ಜನವರಿ ತಿಂಗಳಿನಲ್ಲಿ ಈ ಸಂಖ್ಯೆ 20 ಲಕ್ಷ ದಾಟಿದೆ. 1945ರ ನಂತರ ಮೊದಲ ಬಾರಿಗೆ ಈ ಪ್ರಮಾಣದ ನಿರುದ್ಯೋಗ ಅಮೆರಿಕದಲ್ಲಿ ಕಾಣಿಸಿಕೊಂಡಿದೆ. ಕಡಿಮೆ ಜನಸಂಖ್ಯೆಯಿರುವ ಅಮೆರಿಕೆಯ ಪರಿಸ್ಥಿತಿಯೇ ಹೀಗಾದರೆ ಕೇವಲ ಮಾನವಸಂಪನ್ಮೂಲವೇ ದೇಶದ ಶಕ್ತಿಯಾಗಿರುವ ಭಾರತ ಪ್ರಮಾಣ ಎಷ್ಟು ಭೀಕರವಾಗಿರಬೇಡ.&lt;br /&gt;ಉದ್ಯೋಗ ಸೃಷ್ಟಿಯ ಸಾಧ್ಯತೆಯೇ ಇಲ್ಲವಾಗಿದೆ. ಸರ್ಕಾರಿ ಉದ್ಯೋಗಿಗಳ ನಿವೃತ್ತಿಯ ವಯಸ್ಸನ್ನು 58ರಿಂದ 60ಕ್ಕೆ ಏರಿಸಿದ್ದರಿಂದ ನಿವೃತ್ತಿಯಾಗುವವರ ಸೇವೆ 2 ವರ್ಷ ಮುಂದಕ್ಕೆ ಹೋಗಲಿದೆ. ಅಲ್ಲೂ ಉದ್ಯೋಗ ಸೃಷ್ಟಿಯಾಗುತ್ತಿಲ್ಲ.&lt;br /&gt;ಬರಲಿರುವ ಭರ್ಜರಿ ಸಂಬಳ ನೆಚ್ಚಿಕೊಂಡು ಮನೆ, ನಿವೇಶನ, ಅಪಾರ್ಟ್‌ಮೆಂಟ್‌, ಕಾರು, ಬಂಗಲೆಗಳನ್ನು ಸಾಲ ಖರೀದಿ ಮಾಡಿದವರ ಆರ್ಥಿಕ ಪರಿಸ್ಥಿತಿ ಹೇಗಾಗಿರಬೇಡ. ಜತೆಗೆ ಪಡೆದ ಸಾಲವನ್ನು ತೀರಿಸುವುದು ಹೇಗೆ? ಸಾಲವನು ಕೊಂಬಾಗ ಹಾಲೋಗರುಂಬಂತೆ, ಸಾಲಿಗರು ಬಂದು ಒದೆವಾಗ ಇಬ್ಬದಿಯ ಕೀಲು ಮುರಿದಂತೆ ಸರ್ವಜ್ಞನೆಂಬ ಸ್ಥಿತಿ ಉಂಟಾಗಿದೆ. ಹಾಗಾಗಿಯೇ ಆತ್ಮಹತ್ಯೆಗಳು ಹೆಚ್ಚುತ್ತಿವೆ.&lt;br /&gt;ಅಮೆರಿಕೆಯಲ್ಲಿ ಹೊರಗುತ್ತಿಗೆ ರದ್ದು ಮಾಡುವುದಾಗಿ ಅಲ್ಲಿನ ಅಧ್ಯಕ್ಷ ಒಬಾಮ ಹೇಳಿದ್ದಾರೆ. ಅದಾದರೆ ಬೆಂಗಳೂರು, ಹೈದರಾಬಾದ್‌ನಂತಹ ಪ್ರಮುಖ ನಗರಗಳ ಯುವ ಸಮುದಾಯ ತತ್ತರಿಸಲಿದೆ. ಅಮೆರಿಕೆಯ ಕೆಲಸವನ್ನೇ ನೆಚ್ಚಿಕೊಂಡು ಶುರುಮಾಡಿದ ಬಿಪಿ ಓಗಳು ಬಾಗಿಲು ಹಾಕಿದರೆ ಇನ್ನಷ್ಟು ಸಾಮಾಜಿಕ, ಆರ್ಥಿಕ ಬಿಕ್ಕಟ್ಟು ನಿರ್ಮಾಣಗೊಳ್ಳಲಿದೆ.&lt;br /&gt;ಬದಲಾದ ಎಚ್‌ ಆರ್‌:&lt;br /&gt;ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಎಲ್ಲಾ ಐಟಿ, ಬಿಪಿಓ, ಉದ್ದಿಮೆಗಳಿಗೆ ಉದ್ಯೋಗಸ್ಥರ ನೇಮಕ ಮಾಡಲು ನೆರವಾಗುತ್ತಿದ್ದ ಮಾನವ ಸಂಪನ್ಮೂಲ ವಿಭಾಗದ ಕಾರ್ಯವೈಖರಿಯೇ ಬದಲಾಗಿದೆ. ಪ್ಲೇಸ್‌ಮೆಂಟ್‌ಗೆ ಸಹಕರಿಸುತ್ತಿದ್ದವರು ಇದೀಗ ಔಟ್‌ಪ್ಲೇಸ್‌ಮೆಂಟ್‌ ಎಂಬ ಹೊಸ ಪದ್ಧತಿ ಶುರು ಹಚ್ಚಿಕೊಂಡಿದ್ದಾರೆ.&lt;br /&gt;ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳು ಸಂಸ್ಥೆಯ ಬಗ್ಗೆ ಕಹಿ ಅಥವಾ ದ್ವೇಷ ಭಾವನೆ ತಾಳದೇ ಇರುವಂತೆ ನೋಡಿಕೊಳ್ಳುವುದು. ಕೆಲಸದಿಂದ ನೂರಾರು ಮಂದಿಯನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೊಗೆದರೂ ಅದರ ಬ್ರಾಂಡ್‌ ನೇಮ್‌ ಹಾಳಾಗದಂತೆ ನೋಡಿಕೊಳ್ಳುವುದು ಎಚ್‌ಆರ್‌ಗಳ ನೂತನ ಕಾಯಕ.&lt;br /&gt;ಕೆಲಸದಿಂದ ತೆಗೆಯುವ ಕಾರಣಗಳನ್ನು ಉದ್ಯೋಗಿಗಳಿಗೆ ಮನವರಿಕೆ ಮಾಡಿಕೊಡುವ ಕೌನ್ಸಿಲಿಂಗ್‌, ಮುಂದಿನ ಹಾದಿಯ ಬಗ್ಗೆ ಕೋಚಿಂಗ್‌, ಉದ್ಯೋಗ ಬದಲಿಸಲು ಬೇಕಾದ ಮಾರ್ಗದರ್ಶನ, ಮೆಡಿಟೇಶನ್‌ ಮಾಡುವುದರಿಂದ ಹತಾಶೆಯಿಂದ ಹೊರಬರುವುದು, ಹೆಚ್ಚಿನ ಓದಿಗೆ ಪುಕ್ಕಟೆ ಸಲಹೆ ನೀಡುವುದು, ಸ್ನೇಹಿತರ ನೆಟ್‌ವರ್ಕ್‌ ಗಳಿಸಿಕೊಳ್ಳಿ ಎಂದು ಬೋಧನೆ ಮಾಡುವುದು ಇಂತಹವು ಸೇರಿವೆಯಂತೆ. ಇಂತಹ ಕೆಲಸದಲ್ಲಿ ಕೆಲವು ಕಂಪನಿಗಳು ಥರೋ ಆಗಿದ್ದು, ಅವಕ್ಕೆ ಮಾತ್ರ ಈ ಜವಾಬ್ದಾರಿ ವಹಿಸಲಾಗುತ್ತದೆ. ಹೇಗಿದೆ ನೋಡಿ; ಉದ್ಯೋಗಕ್ಕೆ ತೆಗೆದುಕೊಳ್ಳುವುದಕ್ಕೂ ಉದ್ಯೋಗ ಕಳೆಯುವುದಕ್ಕೂ ಎರಡೂ ಎಚ್‌ಆರ್‌ ಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-381097541969952518?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/381097541969952518/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=381097541969952518' title='0 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/381097541969952518'/><link rel='self' type='application/atom+xml' href='http://www.blogger.com/feeds/8477112084544236406/posts/default/381097541969952518'/><link rel='alternate' type='text/html' href='http://horaganavanu.blogspot.com/2009/04/blog-post.html' title='ತಲ್ಲಣ ತಳಮಳ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>0</thr:total></entry><entry><id>tag:blogger.com,1999:blog-8477112084544236406.post-5235503815090541055</id><published>2009-03-21T08:41:00.000-07:00</published><updated>2009-03-21T08:46:04.801-07:00</updated><title type='text'>ಬಿಜೆಪಿ ಶಸ್ತ್ರ­ಸ­ನ್ಯಾಸ</title><content type='html'>ಯುದ್ಧ&amp;shy;ಕಾ&amp;shy;ಲ&amp;shy;ದಲ್ಲಿ ಶಸ್ತ್ರ ಕೆಳ&amp;shy;ಗಿಟ್ಟ ಸ್ಥಿತಿ ಈಗ ಬಿಜೆ&amp;shy;ಪಿ&amp;shy;ಯದು. ಆರು ದಶ&amp;shy;ಕ&amp;shy;ಗ&amp;shy;ಳಿಂದ ಕುಟುಂಬ ರಾಜ&amp;shy;ಕಾ&amp;shy;ರಣ ಹಾಗೂ ಭ್ರಷ್ಟಾ&amp;shy;ಚಾ&amp;shy;ರಕ್ಕೆ ವಿರೋ&amp;shy;ಧ&amp;shy;ವೆಂಬ ಎರಡು ದಿವ್ಯಾ&amp;shy;ಸ್ತ್ರ&amp;shy;ಗ&amp;shy;ಳನ್ನು ಬಳ&amp;shy;ಸಿ&amp;shy;ಕೊಂಡು ಸಂಸ&amp;shy;ದೀಯ ರಾಜ&amp;shy;ಕಾ&amp;shy;ರ&amp;shy;ಣದ ಮೆಟ್ಟಿ&amp;shy;ಲೇ&amp;shy;ರುತ್ತಾ ದೆಹ&amp;shy;ಲಿಯ ಕೆಂಪು&amp;shy;ಕೋಟೆ ಹಾಗೂ ವಿಧಾ&amp;shy;ನ&amp;shy;ಸೌ&amp;shy;ಧದ ಮೂರನೇ ಮಹ&amp;shy;ಡಿ&amp;shy;ಯಲ್ಲಿ ಅವ&amp;shy;ಕಾಶ ಗಿಟ್ಟಿ&amp;shy;ಸಿದ ಬಿಜೆಪಿ ಇದೀಗ ಅಸ್ತ್ರ&amp;shy;ಗ&amp;shy;ಳನ್ನೇ ಕಳೆ&amp;shy;ದು&amp;shy;ಕೊಂಡ ಯೋಧ&amp;shy;ನಂತೆ ಪರಿ&amp;shy;ತ&amp;shy;ಪಿ&amp;shy;ಸ&amp;shy;ಬೇ&amp;shy;ಕಾ&amp;shy;ಗಿದೆ.&lt;br /&gt;ಚುನಾ&amp;shy;ವ&amp;shy;ಣೆ&amp;shy;ಯಲ್ಲಿ ಗೆಲ್ಲಲು ಹಣ-ಹೆಂಡ&amp;shy;ದಂ&amp;shy;ತಹ ಆಮಿ&amp;shy;ಷ&amp;shy;ವನ್ನೇ ನೆಚ್ಚಿ&amp;shy;ಕೊ&amp;shy;ಳ್ಳ&amp;shy;ಬೇ&amp;shy;ಕಾದ ದುರ್ಗತಿ ಬಿಜೆ&amp;shy;ಪಿಗೆ ಬಂದೊ&amp;shy;ದ&amp;shy;ಗಿದೆ. ಯಾವ ದೇಶ&amp;shy;ಭಕ್ತಿ, ರಾಷ್ಟ್ರ&amp;shy;ಪ್ರೇಮ, ಸೈದ್ಧಾಂ&amp;shy;ತಿಕ ರಾಜ&amp;shy;ಕಾ&amp;shy;ರಣ ಎಂದೆಲ್ಲಾ ಮಾತ&amp;shy;ನಾ&amp;shy;ಡು&amp;shy;ತ್ತಿದ್ದ ಬಿಜೆಪಿ ಈಗ ಅವೆ&amp;shy;ಲ್ಲ&amp;shy;ವನ್ನು ಬಂಗಾ&amp;shy;ಳ&amp;shy;ಕೊ&amp;shy;ಲ್ಲಿಗೆ ಎಸೆದು ಕುಟಿಲ ರಾಜ&amp;shy;ಕಾ&amp;shy;ರ&amp;shy;ಣದ ಬೆನ್ನು&amp;shy;ಬಿ&amp;shy;ದ್ದಿದೆ. ಬಿಜೆ&amp;shy;ಪಿಯ ಹಿಂದಿದ್ದ `ದೇಶ&amp;shy;ಭಕ್ತ'ರೂ ಕೂಡ ಮುಜು&amp;shy;ಗರ ಪಟ್ಟು&amp;shy;ಕೊ&amp;shy;ಳ್ಳ&amp;shy;ಬೇ&amp;shy;ಕಾದ ವಾತಾ&amp;shy;ವ&amp;shy;ರಣ ನಿರ್ಮಾ&amp;shy;ಣ&amp;shy;ವಾ&amp;shy;ಗಿದೆ.&lt;br /&gt;ಕಳೆದ ವಿಧಾ&amp;shy;ನ&amp;shy;ಸಭೆ ಚುನಾ&amp;shy;ವಣೆ ಸಮಯ ನೆನ&amp;shy;ಪಿ&amp;shy;ಸಿ&amp;shy;ಕೊಳ್ಳಿ. ಅದಕ್ಕೂ ಮೊದಲು ಕುಮಾ&amp;shy;ರ&amp;shy;ಸ್ವಾ&amp;shy;ಮಿ&amp;shy;ಯ&amp;shy;ವರು ಮಾತಿಗೆ ತಪ್ಪಿ, ಯಡಿ&amp;shy;ಯೂ&amp;shy;ರ&amp;shy;ಪ್ಪ&amp;shy;ನ&amp;shy;ವ&amp;shy;ರಿಗೆ ಅಧಿ&amp;shy;ಕಾರ ಬಿಟ್ಟು&amp;shy;ಕೊ&amp;shy;ಡದೇ ಇದ್ದಾಗ ಯಡಿ&amp;shy;ಯೂ&amp;shy;ರ&amp;shy;ಪ್ಪ&amp;shy;ರಾ&amp;shy;ದಿ&amp;shy;ಯಾಗಿ ಬಿಜೆಪಿ ಪ್ರಮು&amp;shy;ಖರು ಆಡಿದ ಮಾತು&amp;shy;ಗ&amp;shy;ಳನ್ನು ಮೆಲುಕು ಹಾಕಿ.&lt;br /&gt;ಜನ&amp;shy;ತಾ&amp;shy;ದಳ, ಕಾಂಗ್ರೆ&amp;shy;ಸ್‌&amp;shy;ಗಳು `ಅಪ್ಪ-ಮಕ್ಕಳ, ಅವ್ವ-ಮಕ್ಕಳ' ಪಕ್ಷ&amp;shy;ಗ&amp;shy;ಳಾ&amp;shy;ಗಿವೆ. ದೇಶದ ಹಿತ&amp;shy;ದೃ&amp;shy;ಷ್ಟಿ&amp;shy;ಗಿಂತ ಕುಟುಂ&amp;shy;ಬದ ಆಸ್ತಿ&amp;shy;ಯನ್ನು ಕ್ರೋಢೀ&amp;shy;ಕ&amp;shy;ರಿ&amp;shy;ಸು&amp;shy;ವುದು, ತಮ್ಮ ಮಕ್ಕ&amp;shy;ಳನ್ನು ರಾಜ&amp;shy;ಕೀ&amp;shy;ಯ&amp;shy;ದಲ್ಲಿ ಮೇಲೆ ತರು&amp;shy;ವುದು ಮಾತ್ರ ಇವೆ&amp;shy;ರೆಡು ಪಕ್ಷ&amp;shy;ಗಳು ಮಾಡಿ&amp;shy;ಕೊಂಡು ಬಂದಿವೆ. ಅಪ್ಪ-ಮಕ್ಕಳ ಪಕ್ಷದ ಸರ್ವ&amp;shy;ನಾ&amp;shy;ಶವೇ ತಮ್ಮ ಗುರಿ. ಕುಟುಂಬ ರಾಜ&amp;shy;ಕಾ&amp;shy;ರಣ ಇಲ್ಲಿಗೆ ಕೊನೆ&amp;shy;ಯಾ&amp;shy;ಗ&amp;shy;ಬೇಕು. ಇನ್ನೆಂದೂ ರಾಜ್ಯ&amp;shy;ದಲ್ಲಿ ಕುಟುಂಬ ರಾಜ&amp;shy;ಕಾ&amp;shy;ರಣ ದೈನೇಸಿ ಸ್ಥಿತಿಗೆ ರಾಜ್ಯ ಬರ&amp;shy;ಬಾ&amp;shy;ರದು. ಅಂತಹ ಉತ್ತಮ ಆಡ&amp;shy;ಳಿತ ನೀಡು&amp;shy;ತ್ತೇವೆ ಎಂದು ಯಡಿ&amp;shy;ಯೂ&amp;shy;ರಪ್ಪ ಘರ್ಜಿ&amp;shy;ಸಿ&amp;shy;ದ್ದರು.&lt;br /&gt;ಕೇವಲ 8 ದಿನ&amp;shy;ಗಳ ಕಾಲ ಮುಖ್ಯ&amp;shy;ಮಂ&amp;shy;ತ್ರಿ&amp;shy;ಯಾಗಿ ಯಡಿ&amp;shy;ಯೂ&amp;shy;ರ&amp;shy;ಪ್ಪ&amp;shy;ನ&amp;shy;ವರು ಬಹು&amp;shy;ಮತ ಸಾಬೀತು ಪಡಿ&amp;shy;ಸಲು ಸಾಧ್ಯ&amp;shy;ವಾ&amp;shy;ಗದೇ ಇದ್ದಾಗ ಬೆಂಗ&amp;shy;ಳೂ&amp;shy;ರಿನ ಮಹಾ&amp;shy;ತ್ಮ&amp;shy;ಗಾಂಧಿ ಪ್ರತಿಮೆ ಬಳಿ ಯಡಿ&amp;shy;ಯೂ&amp;shy;ರಪ್ಪ, ಅನಂ&amp;shy;ತ&amp;shy;ಕು&amp;shy;ಮಾರ್‌ ಘರ್ಜಿ&amp;shy;ಸಿದ ಪರಿ ಇದೇ ಮಾದ&amp;shy;ರಿ&amp;shy;ಯ&amp;shy;ಲ್ಲಿತ್ತು. ಮಾರನೇ ದಿನದ ಎಲ್ಲಾ ಪತ್ರಿ&amp;shy;ಕೆ&amp;shy;ಗಳು, ಟಿ.ವಿ. ಮಾಧ್ಯ&amp;shy;ಮ&amp;shy;ಗಳು ಅದನ್ನೇ ಬಿತ್ತ&amp;shy;ರಿ&amp;shy;ಸಿ&amp;shy;ದ್ದವು. ಅವೆ&amp;shy;ಲ್ಲ&amp;shy;ವನ್ನೂ ಯಡಿ&amp;shy;ಯೂ&amp;shy;ರಪ್ಪ ಇದೀಗ ಮರೆತು ಬಿಟ್ಟಿ&amp;shy;ದ್ದಾರೆ.&lt;br /&gt;`ತಾವೆಂದು ಕುಟುಂಬ ರಾಜ&amp;shy;ಕಾ&amp;shy;ರ&amp;shy;ಣ&amp;shy;ವನ್ನು ವಿರೋ&amp;shy;ಧಿ&amp;shy;ಸಿ&amp;shy;ರ&amp;shy;ಲಿಲ್ಲ, ಆ ಬಗ್ಗೆ ನಾನ್ಯಾ&amp;shy;ವತ್ತು ಟೀಕೆ ಮಾಡಿಲ್ಲ' ಎಂದು ಯಡಿ&amp;shy;ಯೂ&amp;shy;ರಪ್ಪ ಹೇಳಿ&amp;shy;ದ್ದಾರೆ. ಸಚಿವೆ ಶೋಭಾ ಕರಂ&amp;shy;ದ್ಲಾಜೆ ಕೂಡ, ಬಿಜೆಪಿ ಅದರ ವಿರುದ್ಧ ಎಂದೂ ಹೋರಾಟ ಮಾಡಿಲ್ಲ. ಅಪ್ಪ-ಮಗ ರಾಜ&amp;shy;ಕೀ&amp;shy;ಯ&amp;shy;ದಲ್ಲಿ ಇರ&amp;shy;ಬಾ&amp;shy;ರ&amp;shy;ದೆಂ&amp;shy;ದೇನೋ ಕಾನೂ&amp;shy;ನಿಲ್ಲ ಎಂದು ಘೋಷಿ&amp;shy;ಸಿ&amp;shy;ದ್ದಾರೆ.&lt;br /&gt;ನೆಹರೂ ಕುಟುಂಬ ರಾಜ&amp;shy;ಕಾ&amp;shy;ರ&amp;shy;ಣ&amp;shy;ವನ್ನು ಆದಿ&amp;shy;ಯಿಂ&amp;shy;ದಲೂ ಬಿಜೆಪಿ ವಿರೋ&amp;shy;ಧಿ&amp;shy;ಸಿ&amp;shy;ಕೊಂಡು ಬಂದಿದ್ದು ಸುಳ್ಳೇ? ಜನ&amp;shy;ಸಂ&amp;shy;ಘದ ಸಂಸ್ಥಾ&amp;shy;ಪಕ ಶ್ಯಾಮ&amp;shy;ಪ್ರ&amp;shy;ಸಾದ್‌ ಮುಖರ್ಜಿ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜ&amp;shy;ಪೇಯಿ, ಬಿಜೆಪಿ ಮುಖಂಡ ಎಲ್‌.ಕೆ. ಆಡ್ವಾಣಿ ಪ್ರತಿ&amp;shy;ಪಾ&amp;shy;ದಿ&amp;shy;ಸಿದ್ದು, ಹೋರಾಡಿ ಕೊಂಡು ಬಂದಿದ್ದು ಎಲ್ಲವೂ ಸುಳ್ಳೇ? ತುರ್ತು ಪರಿ&amp;shy;ಸ್ಥಿ&amp;shy;ತಿಯ ನಂತರ ಅಸ್ತಿ&amp;shy;ತ್ವಕ್ಕೆ ಬಂದ ಕಾಂಗ್ರೆ&amp;shy;ಸ್ಸೇ&amp;shy;ತರ ಮೊದಲ ಸರ್ಕಾ&amp;shy;ರ&amp;shy;ದಲ್ಲಿ ಮೊರಾರ್ಜಿ ದೇಸಾಯಿ ಪ್ರಧಾ&amp;shy;ನಿ&amp;shy;ಯಾ&amp;shy;ಗು&amp;shy;ವಾಗ ಇದೇ ಜನ&amp;shy;ಸಂಘ ಯಾವ ಧ್ಯೇಯದ ಮೇಲೆ ಅವ&amp;shy;ರಿಗೆ ಬೆಂಬಲ ನೀಡಿತ್ತು. ನೆಹರೂ ಕುಟುಂ&amp;shy;ಬದ ಸರ್ವಾ&amp;shy;ಧಿ&amp;shy;ಕಾ&amp;shy;ರ&amp;shy;ವನ್ನು ಕೊನೆ&amp;shy;ಗಾ&amp;shy;ಣಿ&amp;shy;ಸ&amp;shy;ಬೇ&amp;shy;ಕೆಂಬ ಆಶೆ&amp;shy;ಯ&amp;shy;ಲ್ಲಿಯೇ ತಾನೆ? ಚರಿ&amp;shy;ತ್ರೆಯ ಅರಿ&amp;shy;ವಿ&amp;shy;ಲ್ಲ&amp;shy;ದ&amp;shy;ವರು, ಸ್ವಾರ್ಥ&amp;shy;ಕ್ಕಾಗಿ ರಾಜ&amp;shy;ಕೀ&amp;shy;ಯ&amp;shy;ವನ್ನು ಹಾಯಿ&amp;shy;ದೋಣಿ ಮಾಡಿ&amp;shy;ಕೊಂ&amp;shy;ಡ&amp;shy;ವರು ಮಾತ್ರ ಹೀಗೆಲ್ಲಾ ಮಾತ&amp;shy;ನಾ&amp;shy;ಡಲು ಸಾಧ್ಯ.&lt;br /&gt;ರಾಮ&amp;shy;ಮ&amp;shy;ನೋ&amp;shy;ಹರ್‌ ಲೋಹಿಯಾ, ಮಧು ಲಿಮೆಯೆ, ಜಾರ್ಜ್‌ ಫರ್ನಾಂ&amp;shy;ಡೀಸ್‌, ವಿ.ಪಿ.ಸಿಂಗ್‌&amp;shy;ರಂ&amp;shy;ತಹ ಸಮಾ&amp;shy;ಜ&amp;shy;ವಾದಿ ಮುಖಂ&amp;shy;ಡರು ಇದನ್ನೇ ಪ್ರತಿ&amp;shy;ಪಾ&amp;shy;ದಿ&amp;shy;ಸುತ್ತಾ ಕಾಂಗ್ರೆ&amp;shy;ಸ್‌ನ್ನು ಹೀನಾ&amp;shy;ಮಾನ ಬಯ್ಯುತ್ತಾ ಹೋರಾಟ ನಡೆ&amp;shy;ಸಿ&amp;shy;ಕೊಂಡು ಬಂದರು. ಅದೆಲ್ಲಾ ಒತ್ತ&amp;shy;ಟ್ಟಿ&amp;shy;ಗಿ&amp;shy;ರಲಿ. ಬಿಜೆಪಿ ಕೂಡ ಕಳೆದ 50-60 ವರ್ಷ&amp;shy;ಗ&amp;shy;ಳಲ್ಲಿ ಕುಟುಂಬ ರಾಜ&amp;shy;ಕಾ&amp;shy;ರಣ ವಿರೋ&amp;shy;ಧಿ&amp;shy;ಸು&amp;shy;ವು&amp;shy;ದನ್ನೇ ಪ್ರಧಾನ ಅಸ್ತ್ರ&amp;shy;ವಾ&amp;shy;ಗಿ&amp;shy;ಸಿ&amp;shy;ಕೊಂಡು ಚುನಾ&amp;shy;ವ&amp;shy;ಣೆ&amp;shy;ಯಲ್ಲಿ ಹೆಚ್ಚೆಚ್ಚು ಸೀಟು ಗಳಿ&amp;shy;ಸುತ್ತಾ ಹೋಯಿತು.&lt;br /&gt;ನೆಹರು, ಇಂದಿರಾ, ರಾಜೀವ, ಸೋನಿಯಾ, ರಾಹುಲ್‌ ಹೀಗೆ ಕಾಂಗ್ರೆಸ್‌ ಒಂದು ಕುಟುಂ&amp;shy;ಬದ ಸ್ವತ್ತಾ&amp;shy;ಗಿದೆ ಎಂಬ ಕಾರ&amp;shy;ಣಕ್ಕೆ ಜನ ಅದರ ವಿರುದ್ಧ ನಿಂತರು. ಪ್ರಜಾ&amp;shy;ಪ್ರ&amp;shy;ಭುತ್ವ ರಾಷ್ಟ್ರ&amp;shy;ವಾಗಿ ಭಾರತ ಪರಿ&amp;shy;ವ&amp;shy;ರ್ತಿ&amp;shy;ತ&amp;shy;ವಾದ ಮೇಲೂ ಒಂದೇ ಕುಟುಂ&amp;shy;ಬದ(ರಾಜ&amp;shy;ಮ&amp;shy;ನೆ&amp;shy;ತ&amp;shy;ನ&amp;shy;ದಂತೆ) ರಾಜ&amp;shy;ಕಾ&amp;shy;ರ&amp;shy;ಣ&amp;shy;ವನ್ನು ತೊಲ&amp;shy;ಗಿ&amp;shy;ಸಲು ನೂರಾರು ನಾಯ&amp;shy;ಕರು ಹಗಲು ರಾತ್ರಿ&amp;shy;ಯೆ&amp;shy;ನ್ನದೇ ದುಡಿ&amp;shy;ದಿ&amp;shy;ದ್ದಾರೆ. ಅದೆ&amp;shy;ಲ್ಲ&amp;shy;ದರ ಫಲಿ&amp;shy;ತ&amp;shy;ವಾ&amp;shy;ಗಿಯೇ ಬಿಜೆಪಿ ಇಂದು ಅಧಿ&amp;shy;ಕಾ&amp;shy;ರದ ಗದ್ದುಗೆ ಹಿಡಿ&amp;shy;ಯಲು ಸಾಧ್ಯ&amp;shy;ವಾ&amp;shy;ಗಿದೆ. ಈಗ ಅದೆ&amp;shy;ನ್ನೆಲ್ಲಾ ನಾವು ಮಾಡಿಯೇ ಇಲ್ಲ&amp;shy;ವೆಂದು ಯಡಿ&amp;shy;ಯೂ&amp;shy;ರ&amp;shy;ಪ್ಪ&amp;shy;ನ&amp;shy;ವರು ಹೇಳು&amp;shy;ತ್ತಾ&amp;shy;ರೆಂದು ಜನ ಏನೆಂದು ಕೊಳ್ಳ&amp;shy;ಬೇಕು.&lt;br /&gt;ಹಾಗೆಯೇ ಯಡಿ&amp;shy;ಯೂ&amp;shy;ರ&amp;shy;ಪ್ಪ&amp;shy;ನ&amp;shy;ವರು ದೇವ&amp;shy;ರಾ&amp;shy;ಣೆಗೂ ತನ್ನ ಮಗ ಚುನಾ&amp;shy;ವ&amp;shy;ಣೆಗೆ ನಿಲ್ಲು&amp;shy;ವು&amp;shy;ದಿ&amp;shy;ಲ್ಲ&amp;shy;ವೆಂದು ಘಂಟಾ&amp;shy;ಘೋ&amp;shy;ಷ&amp;shy;ವಾಗಿ ಹೇಳಿ&amp;shy;ದ್ದರು. ಕಡೆಗೆ ಶಿವ&amp;shy;ಮೊ&amp;shy;ಗ್ಗದ ಹಿರಿಯ ಬಿಜೆಪಿ ಮುಖಂ&amp;shy;ಡ&amp;shy;ರನ್ನು ಕಡೆ&amp;shy;ಗ&amp;shy;ಣಿಸಿ ತಮ್ಮ ಮಗ ಬಿ.ವೈ. ರಾಘ&amp;shy;ವೇಂ&amp;shy;ದ್ರ&amp;shy;ನಿಗೆ ಲೋಕ&amp;shy;ಸ&amp;shy;ಭೆಗೆ ಸ್ಪರ್ಧಿ&amp;shy;ಸಲು ಅನುವು ಮಾಡಿ&amp;shy;ಕೊ&amp;shy;ಟ್ಟಿ&amp;shy;ದ್ದಾರೆ.&lt;br /&gt;ಹಾಗಂತ ಅವರ ಮಗ ರಾಜ&amp;shy;ಕೀ&amp;shy;ಯಕ್ಕೆ ಬರ&amp;shy;ಬಾ&amp;shy;ರದು ಎಂಬುದು ಇಲ್ಲಿನ ವಾದ&amp;shy;ವಲ್ಲ. ರಾಜ&amp;shy;ಕಾ&amp;shy;ರಣ ಪ್ರತಿ&amp;shy;ಯೊ&amp;shy;ಬ್ಬರ ಹಕ್ಕು. ಭಾರ&amp;shy;ತೀಯ ಪ್ರಜೆ&amp;shy;ಯಾಗಿ ರಾಘ&amp;shy;ವೇಂದ್ರ ಚುನಾ&amp;shy;ವ&amp;shy;ಣೆಗೆ ಸ್ಪರ್ಧಿ&amp;shy;ಸು&amp;shy;ವು&amp;shy;ದನ್ನು ತಡೆ&amp;shy;ಯು&amp;shy;ವುದು ಸ್ವತಃ ಯಡಿ&amp;shy;ಯೂ&amp;shy;ರ&amp;shy;ಪ್ಪ&amp;shy;ನ&amp;shy;ವ&amp;shy;ರಿಗೆ ಸಾಧ್ಯ&amp;shy;ವಿಲ್ಲ. ಆದರೆ ತಮ್ಮ ಮಗ ಚುನಾ&amp;shy;ವ&amp;shy;ಣೆಗೆ ಸ್ಪರ್ಧಿ&amp;shy;ಸು&amp;shy;ವು&amp;shy;ದಿ&amp;shy;ಲ್ಲ&amp;shy;ವೆಂದು ದೇವರ ಮೇಲೆ ಆಣೆ ಮಾಡ&amp;shy;ಬೇ&amp;shy;ಕಾ&amp;shy;ಗಿ&amp;shy;ರ&amp;shy;ಲಿಲ್ಲ. ಅದು ಅವನ ಹಕ್ಕು, ಸ್ಪರ್ಧಿ&amp;shy;ಸು&amp;shy;ತ್ತಾ&amp;shy;ನೆಂದು ಅವರು ನೇರ&amp;shy;ವಾಗಿ ಹೇಳ&amp;shy;ಬಿ&amp;shy;ಡ&amp;shy;ಬ&amp;shy;ಹು&amp;shy;ದಿತ್ತು. ನಾಟ&amp;shy;ಕ&amp;shy;ವಾ&amp;shy;ಡಲು ಹೋಗಿ, ನಾಟ&amp;shy;ಕ&amp;shy;ಕ್ಕಾಗಿ ಹೆಣೆದ ಬಲೆಗೆ ತಾವೇ ಸಿಕ್ಕಿ&amp;shy;ಬಿ&amp;shy;ದ್ದಿ&amp;shy;ರುವ ಸ್ಥಿತಿ ಯಡಿ&amp;shy;ಯೂ&amp;shy;ರ&amp;shy;ಪ್ಪ&amp;shy;ನ&amp;shy;ವ&amp;shy;ರದು.&lt;br /&gt;&lt;strong&gt;ಸೂಕ್ತ&amp;shy;ವಲ್ಲ:&lt;br /&gt;&lt;/strong&gt;ಯಾವುದೇ ಪಕ್ಷವೂ ಕುಟುಂಬ ರಾಜ&amp;shy;ಕಾ&amp;shy;ರ&amp;shy;ಣ&amp;shy;ವನ್ನು ಬೆಂಬ&amp;shy;ಲಿ&amp;shy;ಸು&amp;shy;ವುದು ಸೂಕ್ತ&amp;shy;ವಲ್ಲ. ದೇವೇ&amp;shy;ಗೌ&amp;shy;ಡರು, ಸೋನಿ&amp;shy;ಯಾ&amp;shy;ಗಾಂಧಿ ಮಾಡು&amp;shy;ತ್ತಾ&amp;shy;ರೆಂದು ಬಿಜೆ&amp;shy;ಪಿ&amp;shy;ಯ&amp;shy;ವರು ಮಾಡು&amp;shy;ವುದು ದಳ-ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ಏನು ವ್ಯತ್ಯಾ&amp;shy;ಸ&amp;shy;ವು&amp;shy;ಳಿ&amp;shy;ದಂ&amp;shy;ತಾ&amp;shy;ಯಿತು?&lt;br /&gt;ರಾಜ&amp;shy;ಕಾ&amp;shy;ರ&amp;shy;ಣಿಯ ಮಗನೇ ಇರಲಿ, ಯಾವಾ&amp;shy;ತನೇ ಇರಲಿ. ಚುನಾ&amp;shy;ವ&amp;shy;ಣೆಗೆ ಸ್ಪರ್ಧಿ&amp;shy;ಸಲು ರಾಜ&amp;shy;ಕೀಯ ಅನು&amp;shy;ಭವ, ಜನರ ಒಡ&amp;shy;ನಾಟ ಮುಖ್ಯ. ಶಿವ&amp;shy;ಮೊಗ್ಗ ಲೋಕ&amp;shy;ಸಭಾ ಕ್ಷೇತ್ರ&amp;shy;ದಲ್ಲಿ ಸ್ಪರ್ಧಿ&amp;shy;ಸ&amp;shy;ಲಿ&amp;shy;ರುವ ರಾಘ&amp;shy;ವೇಂ&amp;shy;ದ್ರ&amp;shy;ನಿಗೆ ಯಡಿ&amp;shy;ಯೂ&amp;shy;ರ&amp;shy;ಪ್ಪನ ಮಗ ಎಂಬ ಹೆಗ್ಗ&amp;shy;ಳಿ&amp;shy;ಕೆಯ ಹೊರ&amp;shy;ತಾಗಿ ಯಾವುದೇ ರಾಜ&amp;shy;ಕೀಯ ಅರ್ಹ&amp;shy;ತೆ&amp;shy;ಯಿಲ್ಲ. ಹಾಗಂ&amp;shy;ದರೆ ಮುಖ್ಯ&amp;shy;ಮಂ&amp;shy;ತ್ರಿ&amp;shy;ಯಾ&amp;shy;ಗಲು ಕುಮಾ&amp;shy;ರ&amp;shy;ಸ್ವಾ&amp;shy;ಮಿಗೆ ಏನಿತ್ತು ಎಂಬ ಮಾರು&amp;shy;ಪ್ರಶ್ನೆ ಕೇಳ&amp;shy;ಬ&amp;shy;ಹುದು? ಅದಕ್ಕೆ ಯಡಿ&amp;shy;ಯೂ&amp;shy;ರ&amp;shy;ಪ್ಪ&amp;shy;ನ&amp;shy;ವರೇ ಉತ್ತ&amp;shy;ರಿ&amp;shy;ಸ&amp;shy;ಬೇ&amp;shy;ಕಾ&amp;shy;ಗು&amp;shy;ತ್ತದೆ!&lt;br /&gt;ಯಡಿ&amp;shy;ಯೂ&amp;shy;ರಪ್ಪ ಉಪ&amp;shy;ಮು&amp;shy;ಖ್ಯ&amp;shy;ಮಂ&amp;shy;ತ್ರಿ&amp;shy;ಯಾದ ನಂತರ ಪ್ರವ&amp;shy;ರ್ಧ&amp;shy;ಮಾ&amp;shy;ನಕ್ಕೆ ಬಂದ&amp;shy;ವರು ರಾಘ&amp;shy;ವೇಂದ್ರ. ಅಲ್ಲಿ&amp;shy;ಯ&amp;shy;ವ&amp;shy;ರೆಗೆ ಶಿಕಾ&amp;shy;ರಿ&amp;shy;ಪು&amp;shy;ರದ ಉಸ್ತು&amp;shy;ವಾರಿ ನೋಡಿ&amp;shy;ಕೊ&amp;shy;ಳ್ಳು&amp;shy;ತ್ತಿ&amp;shy;ದ್ದ&amp;shy;ವರು(ಯಡಿ&amp;shy;ಯೂ&amp;shy;ರಪ್ಪ ಶಾಸ&amp;shy;ಕ&amp;shy;ರಾಗಿ, ವಿರೋಧ ಪಕ್ಷದ ನಾಯ&amp;shy;ಕ&amp;shy;ರಾಗಿ 30 ವರ್ಷ ರಾಜ&amp;shy;ಕೀಯ ಜೀವನ ಅನು&amp;shy;ಭ&amp;shy;ವಿ&amp;shy;ಸಿ&amp;shy;ದಾಗ) ಅವರ ಆಪ್ತ ಗುರು&amp;shy;ಮೂರ್ತಿ ಹಾಗೂ ಪದ್ಮ&amp;shy;ನಾ&amp;shy;ಭ&amp;shy;ಭಟ್‌. ರಾಘ&amp;shy;ವೇಂದ್ರ ಬೆಂಗ&amp;shy;ಳೂ&amp;shy;ರಿ&amp;shy;ನ&amp;shy;ಲ್ಲಿ&amp;shy;ದ್ದಿದ್ದು ಬಿಟ್ಟರೆ ಶಿವ&amp;shy;ಮೊಗ್ಗ ರಾಜ&amp;shy;ಕಾ&amp;shy;ರ&amp;shy;ಣದ ಗಂಧ&amp;shy;ಗಾಳಿ ಗೊತ್ತಿ&amp;shy;ರ&amp;shy;ಲಿಲ್ಲ.&lt;br /&gt;ತಮ್ಮ ಮಗ&amp;shy;ನನ್ನು ರಾಜ&amp;shy;ಕಾ&amp;shy;ರ&amp;shy;ಣಕ್ಕೆ ತರ&amp;shy;ಬೇ&amp;shy;ಕೆಂದು ನಿಶ್ಚ&amp;shy;ಯಿ&amp;shy;ಸಿದ ಯಡಿ&amp;shy;ಯೂ&amp;shy;ರಪ್ಪ ಕಳೆದ ಸ್ಥಳೀಯ ಸಂಸ್ಥೆ&amp;shy;ಗಳ ಚುನಾ&amp;shy;ವಣೆ ಸಂದ&amp;shy;ರ್ಭ&amp;shy;ದಲ್ಲಿ ಶಿಕಾ&amp;shy;ರಿ&amp;shy;ಪುರ ಪುರ&amp;shy;ಸಭೆ ಚುನಾ&amp;shy;ವ&amp;shy;ಣೆಗೆ ನಿಲ್ಲಿ&amp;shy;ಸಿ&amp;shy;ದರು. ಅಲ್ಲಿ ಗೆದ್ದ ರಾಘ&amp;shy;ವೇಂದ್ರ ಕೆಲ ದಿನ ಅಧ್ಯ&amp;shy;ಕ್ಷರೂ ಆದರು. ಅದರ ಜತೆಗೆ ವಿವೇ&amp;shy;ಕಾ&amp;shy;ನಂದ ಶಿಕ್ಷಣ ಸಂಸ್ಥೆಯ ಕಾರ್ಯ&amp;shy;ದ&amp;shy;ರ್ಶಿಯೂ ಆಗಿ ಕಾರ್ಯ&amp;shy;ನಿ&amp;shy;ರ್ವ&amp;shy;ಹಿ&amp;shy;ಸ&amp;shy;ತೊ&amp;shy;ಡ&amp;shy;ಗಿ&amp;shy;ದರು. ಯಡಿ&amp;shy;ಯೂ&amp;shy;ರಪ್ಪ ಉಪ&amp;shy;ಮು&amp;shy;ಖ್ಯ&amp;shy;ಮಂ&amp;shy;ತ್ರಿ&amp;shy;ಯಾದ ನಂತರ, ಅಂದರೆ ಅಧಿ&amp;shy;ಕಾರ ಅನು&amp;shy;ಭ&amp;shy;ವಿ&amp;shy;ಸ&amp;shy;ತೊ&amp;shy;ಡ&amp;shy;ಗಿದ ಮೇಲೆ ರಾಘ&amp;shy;ವೇಂದ್ರ ಮೇಲೇ&amp;shy;ರುತ್ತಾ ಬಂದರು. ಶಿವ&amp;shy;ಮೊಗ್ಗ ಜಿಲ್ಲೆಯ ರಾಜ&amp;shy;ಕಾ&amp;shy;ರ&amp;shy;ಣ&amp;shy;ದಲ್ಲಿ ಮೂಗು ತೂರಿ&amp;shy;ಸ&amp;shy;ಲಾ&amp;shy;ರಂ&amp;shy;ಭಿ&amp;shy;ಸಿದ ರಾಘು, ನಂತರ ಅಧಿ&amp;shy;ಕಾ&amp;shy;ರಿ&amp;shy;ಗಳ ವರ್ಗಾ&amp;shy;ವ&amp;shy;ಣೆ&amp;shy;ಯಂ&amp;shy;ತಹ ಕೆಲ&amp;shy;ಸ&amp;shy;ವನ್ನೂ ಮಾಡ&amp;shy;ತೊ&amp;shy;ಡ&amp;shy;ಗಿ&amp;shy;ದರು. ಇದು ರಾಘು ಚರಿತ್ರೆ.&lt;br /&gt;ಆದರೆ ಶಿವ&amp;shy;ಮೊ&amp;shy;ಗ್ಗ&amp;shy;ದಲ್ಲಿ ಬಿಜೆ&amp;shy;ಪಿ&amp;shy;ಯನ್ನು ಕಟ್ಟಿ ಬೆಳೆ&amp;shy;ಸಿ&amp;shy;ದ&amp;shy;ವ&amp;shy;ರಲ್ಲಿ ಯಡಿ&amp;shy;ಯೂ&amp;shy;ರ&amp;shy;ಪ್ಪ&amp;shy;ನ&amp;shy;ವರ ಜತೆಗೆ ಡಿ.ಎಚ್‌. ಶಂಕ&amp;shy;ರ&amp;shy;ಮೂರ್ತಿ, ಕೆ.ಎಸ್‌. ಈಶ್ವ&amp;shy;ರಪ್ಪ, ಆಯ&amp;shy;ನೂರು ಮಂಜು&amp;shy;ನಾಥ್‌, ಆರಗ ಜ್ಞಾನೇಂದ್ರ, ಪಿ.ವಿ. ಕೃಷ್ಣ&amp;shy;ಭಟ್‌, ರಾಮ&amp;shy;ಚಂದ್ರ ಹೀಗೆ ಪಟ್ಟಿ ಬೆಳೆ&amp;shy;ಯುತ್ತಾ ಹೋಗು&amp;shy;ತ್ತದೆ.&lt;br /&gt;ಮಾಜಿ ಮುಖ್ಯ&amp;shy;ಮಂತ್ರಿ ಎಸ್‌. ಬಂಗಾ&amp;shy;ರ&amp;shy;ಪ್ಪ&amp;shy;ನ&amp;shy;ವರ ಬಿಗಿ&amp;shy;ಮು&amp;shy;ಷ್ಟಿ&amp;shy;ಯ&amp;shy;ಲ್ಲಿದ್ದ ಶಿವ&amp;shy;ಮೊಗ್ಗ ಜಿಲ್ಲೆ&amp;shy;ಯನ್ನು ತಮ್ಮ ತೆಕ್ಕೆಗೆ ತೆಗೆ&amp;shy;ದು&amp;shy;ಕೊಂಡ ಯಡಿ&amp;shy;ಯೂ&amp;shy;ರಪ್ಪ, ಕ್ರಮೇ&amp;shy;ಣ&amp;shy;ವಾಗಿ ಬಂಗಾ&amp;shy;ರ&amp;shy;ಪ್ಪ&amp;shy;ನ&amp;shy;ವ&amp;shy;ರನ್ನೇ ಬದಿ&amp;shy;ಗೊ&amp;shy;ತ್ತು&amp;shy;ವಷ್ಟು ಸಾಮರ್ಥ್ಯ ಬೆಳೆ&amp;shy;ಸಿ&amp;shy;ಕೊಂ&amp;shy;ಡರು. ಅದಕ್ಕೆ ಬಂಗಾ&amp;shy;ರಪ್ಪ ಕೂಡ ಕಾರ&amp;shy;ಣ&amp;shy;ರಾ&amp;shy;ದರು. 2004ರಲ್ಲಿ ನಡೆದ ಚುನಾ&amp;shy;ವ&amp;shy;ಣೆ&amp;shy;ಯಲ್ಲಿ ಬಿಜೆಪಿ ಸೇರಿದ್ದ ಬಂಗಾ&amp;shy;ರಪ್ಪ ಜಿಲ್ಲೆ&amp;shy;ಯಲ್ಲಿ ಬಿಜೆಪಿ ಬೆಳೆ&amp;shy;ಯಲು ಕಾರ&amp;shy;ಣ&amp;shy;ರಾ&amp;shy;ದರು. ಸೊರಬ, ಭದ್ರಾ&amp;shy;ವತಿ ಹೊರ&amp;shy;ತಾಗಿ ಉಳಿದ 5 ಕಡೆ ಬಿಜೆಪಿ ಶಾಸ&amp;shy;ಕ&amp;shy;ರನ್ನು ಗೆಲ್ಲಿ&amp;shy;ಸಲು ಬಂಗಾ&amp;shy;ರಪ್ಪ ಕಾರ&amp;shy;ಣ&amp;shy;ರಾ&amp;shy;ದರು. ನಂತರ ಬಂಗಾ&amp;shy;ರಪ್ಪ ಬಿಜೆಪಿ ತೊರೆದು, ಸಮಾ&amp;shy;ಜ&amp;shy;ವಾದಿ ಪಕ್ಷ&amp;shy;ದಿಂದ ಸಂಸ&amp;shy;ದ&amp;shy;ರಾಗಿ, ನಂತರ ಅಲ್ಲೂ ಬಿಟ್ಟು ಈಗ ಕಾಂಗ್ರೆ&amp;shy;ಸಿಗೆ ಬಂದು ಸೇರಿ&amp;shy;ದ್ದಾರೆ.&lt;br /&gt;ಸೋಲಿ&amp;shy;ಲ್ಲದ ಸರ&amp;shy;ದಾ&amp;shy;ರ&amp;shy;ನೆಂಬ ಕೀರ್ತಿಗೆ ಪಾತ್ರ&amp;shy;ರಾ&amp;shy;ಗಿದ್ದ ಬಂಗಾ&amp;shy;ರ&amp;shy;ಪ್ಪ&amp;shy;ರಿಗೆ ಸೋಲಿನ ರುಚಿ ತೋರಿ&amp;shy;ಸಿ&amp;shy;ದ&amp;shy;ವರು ಬಿಜೆಪಿ ಮುಖಂಡ ಆಯ&amp;shy;ನೂರು ಮಂಜು&amp;shy;ನಾಥ. ಒಮ್ಮೆ ಲೋಕ&amp;shy;ಸ&amp;shy;ಭೆಗೆ ಆರಿ&amp;shy;ಸಿ&amp;shy;ಹೋದ ಆಯ&amp;shy;ನೂರು ಪಕ್ಷದ ಆಂತ&amp;shy;ರಿಕ ಜಗ&amp;shy;ಳದ ಕಾರ&amp;shy;ಣ&amp;shy;ದಿಂದ ಬಿಜೆಪಿ ತೊರೆದು ಕಾಂಗ್ರೆ&amp;shy;ಸ್‌ಗೆ ಹೋದರು. ಬಂಗಾ&amp;shy;ರಪ್ಪ ಬಿಜೆ&amp;shy;ಪಿ&amp;shy;ಯಿಂದ ಸ್ಪರ್ಧಿ&amp;shy;ಸಿ&amp;shy;ದಾಗ ಆಯ&amp;shy;ನೂರು ಕಾಂಗ್ರೆ&amp;shy;ಸ್‌&amp;shy;ನಿಂದ ಕಣ&amp;shy;ಕ್ಕಿ&amp;shy;ಳಿ&amp;shy;ದಿ&amp;shy;ದ್ದರು. ಬಂಗಾ&amp;shy;ರಪ್ಪ ಸಮಾ&amp;shy;ಜ&amp;shy;ವಾದಿ ಪಕ್ಷ&amp;shy;ದಿಂದ ಕಣ&amp;shy;ಕ್ಕಿ&amp;shy;ಳಿ&amp;shy;ದಾ&amp;shy;ಗಲೂ ಆಯ&amp;shy;ನೂರು ಕಾಂಗ್ರೆಸ್‌ ಅಭ್ಯರ್ಥಿ. ಬಂಗಾ&amp;shy;ರ&amp;shy;ಪ್ಪ&amp;shy;ರನ್ನು ಸೋಲಿ&amp;shy;ಸಲು ಆಯ&amp;shy;ನೂ&amp;shy;ರ್‌ಗೆ ಆಗ&amp;shy;ಲಿ&amp;shy;ಲ್ಲ&amp;shy;ವಾ&amp;shy;ದರೂ ಸಮ&amp;shy;ಬ&amp;shy;ಲದ ಸ್ಪರ್ಧೆ&amp;shy;ಯೊ&amp;shy;ಡ್ಡಿ&amp;shy;ದ್ದರು. ಬಂಗಾ&amp;shy;ರಪ್ಪ ಸಮಾ&amp;shy;ಜ&amp;shy;ವಾದಿ ಪಕ್ಷ&amp;shy;ದಿಂದ ಸ್ಪರ್ಧಿ&amp;shy;ಸಿ&amp;shy;ದ್ದಾಗ ಬಿಜೆ&amp;shy;ಪಿ&amp;shy;ಯಿಂದ ಭಾನು&amp;shy;ಪ್ರ&amp;shy;ಕಾಶ್‌ ಸ್ಪರ್ಧಿ&amp;shy;ಸಿ&amp;shy;ದ್ದರು. ಅವರು ಕೂಡ ಸಮರ್ಥ ಸ್ಪರ್ಧೆ&amp;shy;ಯೊ&amp;shy;ಡ್ಡಿ&amp;shy;ದ್ದರು.&lt;br /&gt;ಹೀಗೆ ಇಬ್ಬರು ಗರ&amp;shy;ಡಿ&amp;shy;ಯಾ&amp;shy;ಳು&amp;shy;ಗಳು ಬಿಜೆ&amp;shy;ಪಿ&amp;shy;ಯ&amp;shy;ಲ್ಲಿ&amp;shy;ದ್ದರೂ ತಮ್ಮ ಮಗ&amp;shy;ನನ್ನೇ ಕಣಕ್ಕೆ ಇಳಿ&amp;shy;ಸಲು ಯಡಿ&amp;shy;ಯೂ&amp;shy;ರಪ್ಪ ಮುಂದಾ&amp;shy;ಗಿದ್ದು ಜಿಲ್ಲಾ ಬಿಜೆ&amp;shy;ಪಿ&amp;shy;ಯಲ್ಲಿ ಅಸ&amp;shy;ಮಾ&amp;shy;ಧಾ&amp;shy;ನದ ಹೊಗೆ ಎಬ್ಬಿ&amp;shy;ಸಿದೆ. ಆರಂ&amp;shy;ಭ&amp;shy;ದಲ್ಲಿ ತೀವ್ರ ವಿರೋಧ ವ್ಯಕ್ತ&amp;shy;ವಾ&amp;shy;ಗಿ&amp;shy;ತ್ತಾ&amp;shy;ದರೂ ನಂತರ ಯಡಿ&amp;shy;ಯೂ&amp;shy;ರಪ್ಪ ಅದನ್ನು ಶಮನ ಮಾಡಿ&amp;shy;ದ್ದಾರೆ. ಬೇರೆ ಜಿಲ್ಲೆ&amp;shy;ಯಲ್ಲಿ ಗೆಲ್ಲುವ ಅಭ್ಯರ್ಥಿ ಇಲ್ಲದೇ ಇರು&amp;shy;ವು&amp;shy;ದ&amp;shy;ರಿಂದ ಅನ್ಯ ಪಕ್ಷ&amp;shy;ದಿಂದ ಕರೆ&amp;shy;ತಂದು ಮಣೆ ಹಾಕು&amp;shy;ತ್ತಿ&amp;shy;ದ್ದೇವೆ ಎಂದು ಬಿಜೆಪಿ ನೇತಾ&amp;shy;ರರು ಹೇಳು&amp;shy;ತ್ತಿ&amp;shy;ದ್ದಾ&amp;shy;ರಾ&amp;shy;ದರೂ ಶಿವ&amp;shy;ಮೊಗ್ಗ ಜಿಲ್ಲೆ&amp;shy;ಯಲ್ಲಿ ಇದ್ದ&amp;shy;ವ&amp;shy;ರನ್ನು ಬಿಟ್ಟು ತಮ್ಮ ಮಗ&amp;shy;ನಿಗೆ ಮಣೆ ಹಾಕಿದ್ದು ಯಾಕೆ ಎಂಬ ಪ್ರಶ್ನೆಗೆ ಬಿಜೆ&amp;shy;ಪಿ&amp;shy;ಯಲ್ಲಿ ಸದ್ಯ&amp;shy;ವಂತೂ ಉತ್ತ&amp;shy;ರ&amp;shy;ವಿಲ್ಲ.&lt;br /&gt;&lt;strong&gt;ವಿಸ್ತ&amp;shy;ರಣೆ:&lt;br /&gt;&lt;/strong&gt;ಕುಟುಂಬ ರಾಜ&amp;shy;ಕಾ&amp;shy;ರಣ ಯಡಿ&amp;shy;ಯೂ&amp;shy;ರ&amp;shy;ಪ್ಪ&amp;shy;ನ&amp;shy;ವರ ಮನೆ&amp;shy;ಯಲ್ಲಿ ಮಾತ್ರ ಬೇರು ಬಿಟ್ಟಿಲ್ಲ. ಬಿಜೆ&amp;shy;ಪಿಗೆ ವ್ಯಾಧಿ&amp;shy;ಯಂತೆ ಅಂಟಿ&amp;shy;ಕೊಂ&amp;shy;ಡಿದೆ. ಇಡೀ ಬಳ್ಳಾರಿ ಜಿಲ್ಲೆಯೇ ಕುಟುಂಬ ರಾಜ&amp;shy;ಕಾ&amp;shy;ರ&amp;shy;ಣದ ಬಿರು&amp;shy;ಬಿ&amp;shy;ಸಿ&amp;shy;ಲಿ&amp;shy;ನಿಂದ ಕಂಗೆ&amp;shy;ಟ್ಟಿ&amp;shy;ದ್ದರೆ ಇದೀ ಮತ್ತೊ&amp;shy;ಬ್ಬರು ಅದಕ್ಕೆ ಸೇರ್ಪ&amp;shy;ಡೆ&amp;shy;ಯಾ&amp;shy;ಗು&amp;shy;ತ್ತಿ&amp;shy;ದ್ದಾರೆ.&lt;br /&gt;ಜನಾ&amp;shy;ರ್ದ&amp;shy;ನ&amp;shy;ರೆಡ್ಡಿ, ಕರು&amp;shy;ಣಾ&amp;shy;ಕ&amp;shy;ರ&amp;shy;ರೆಡ್ಡಿ, ಸೋಮ&amp;shy;ಶೇ&amp;shy;ಖರ ರೆಡ್ಡಿ ಹೀಗೆ ಒಂದೇ ಕುಟುಂ&amp;shy;ಬದ ಮೂವರು ಶಾಸ&amp;shy;ಕರು, ಮಂತ್ರಿ&amp;shy;ಗಳು ಬಳ್ಳಾ&amp;shy;ರಿ&amp;shy;ಯ&amp;shy;ಲ್ಲಿ&amp;shy;ದ್ದಾರೆ. ಇವರ ಕುಟುಂ&amp;shy;ಬದ ಸೋದ&amp;shy;ರ&amp;shy;ನಂ&amp;shy;ತಿ&amp;shy;ರುವ ಶ್ರೀರಾ&amp;shy;ಮುಲು ಸಚಿ&amp;shy;ವ&amp;shy;ರಾ&amp;shy;ಗಿ&amp;shy;ದ್ದರೆ, ಅವರ ಅಳಿಯ ಸುರೇ&amp;shy;ಶ&amp;shy;ಬಾಬು ಶಾಸ&amp;shy;ಕ&amp;shy;ರಾ&amp;shy;ಗಿ&amp;shy;ದ್ದಾರೆ. ಇದೀಗ ಬಳ್ಳಾರಿ ಲೋಕ&amp;shy;ಸಭಾ ಕ್ಷೇತ್ರ&amp;shy;ದಿಂದ ಶ್ರೀರಾ&amp;shy;ಮುಲು ಸೋದರಿ ಜೆ. ಶಾಂತ ಕಣ&amp;shy;ಕ್ಕಿ&amp;shy;ಳಿ&amp;shy;ದಿ&amp;shy;ದ್ದಾರೆ. ಅಲ್ಲಿಗೆ ಇಡೀ ಒಂದು ಜಿಲ್ಲೆ ರೆಡ್ಡಿ&amp;shy;ಗಳ ಒಕ್ಕ&amp;shy;ಲಿಗೆ ಸೇರಿ&amp;shy;ದಂ&amp;shy;ತಾ&amp;shy;ಗು&amp;shy;ತ್ತದೆ.&lt;br /&gt;ಹಾವೇ&amp;shy;ರಿ&amp;shy;ಯಲ್ಲಿ ಸಚಿವ ಸಿ.ಎಂ. ಉದಾಸಿ ಪುತ್ರ ಶಿವ&amp;shy;ಕು&amp;shy;ಮಾರ ಉದಾಸಿ, ಚಿಕ್ಕೋ&amp;shy;ಡಿ&amp;shy;ಯಲ್ಲಿ ಸಚಿವ ಉಮೇಶ ಕತ್ತಿ ಸೋದರ ರಮೇಶ ಕತ್ತಿ ಸ್ಪರ್ಧಿ&amp;shy;ಸು&amp;shy;ತ್ತಿ&amp;shy;ದ್ದಾರೆ. ಕುಟುಂಬ ರಾಜ&amp;shy;ಕಾ&amp;shy;ರ&amp;shy;ಣ&amp;shy;ವನ್ನು ಪ್ರಬ&amp;shy;ಲ&amp;shy;ವಾಗಿ ವಿರೋ&amp;shy;ಧಿ&amp;shy;ಸುತ್ತಾ ಬಂದಿದ್ದ ಬಿಜೆಪಿ ಲೋಕ&amp;shy;ಸಭೆ ಚುನಾ&amp;shy;ವ&amp;shy;ಣೆ&amp;shy;ಯಲ್ಲಿ ಅದನ್ನೇ ಮಾಡುತ್ತಾ ಬಂದಿದ್ದು, ಒಂದು ಪ್ರಮುಖ ಅಸ್ತ್ರ ಗೊಟಕ್‌ ಎಂದಿದೆ.&lt;br /&gt;&lt;strong&gt;ಸಂಪಂಗಿ ಪ್ರಕ&amp;shy;ರಣ:&lt;/strong&gt;&lt;br /&gt;ಬಿಜೆ&amp;shy;ಪಿಯ ಇನ್ನೊಂದು ಅಸ್ತ್ರ ಭ್ರಷ್ಟಾ&amp;shy;ಚಾರ ವಿರೋಧ. ಚುನಾ&amp;shy;ವಣೆ ವೇಳೆ ಬಿಜೆಪಿ ಸಿದ್ಧ&amp;shy;ಪ&amp;shy;ಡಿ&amp;shy;ಸಿದ್ದ ಪ್ರಣಾ&amp;shy;ಳಿ&amp;shy;ಕೆ&amp;shy;ಯಲ್ಲಿ ಭ್ರಷ್ಟಾ&amp;shy;ಚಾರ ವಿರೋಧ ಹಾಗೂ ನಿರ್ಮೂ&amp;shy;ಲನೆ ತಮ್ಮ ಪ್ರಮುಖ ಧ್ಯೇಯ&amp;shy;ವೆಂದು ಘೋಷಿ&amp;shy;ಸ&amp;shy;ಲಾ&amp;shy;ಗಿತ್ತು.&lt;br /&gt;ಬಿಜೆಪಿ ಅಧಿ&amp;shy;ಕಾ&amp;shy;ರ&amp;shy;ಕ್ಕೇರಿ ಕೇವಲ ಐದು ತಿಂಗಳು ಕಳೆ&amp;shy;ಯು&amp;shy;ವ&amp;shy;ಷ್ಟ&amp;shy;ರಲ್ಲಿ ಬಿಜೆಪಿ ಶಾಸಕ ಸಂಪಂಗಿ, ಶಾಸ&amp;shy;ಕರ ಭವ&amp;shy;ನ&amp;shy;ದಲ್ಲಿ 5 ಲಕ್ಷ ರೂ. ಲಂಚ ಸ್ವೀಕ&amp;shy;ರಿ&amp;shy;ಸು&amp;shy;ವಾಗ ಲೋಕಾ&amp;shy;ಯು&amp;shy;ಕ್ತ&amp;shy;ರಿಗೆ ಸಿಕ್ಕಿ&amp;shy;ಬಿ&amp;shy;ದ್ದರು. ಇದು ದೇಶದ ಇತಿ&amp;shy;ಹಾ&amp;shy;ಸ&amp;shy;ದಲ್ಲೇ ಪ್ರಪ್ರ&amp;shy;ಥಮ ಎನ್ನು&amp;shy;ವಂ&amp;shy;ತಹ ಪ್ರಕ&amp;shy;ರಣ. ಇಲ್ಲಿ&amp;shy;ಯ&amp;shy;ವ&amp;shy;ರೆಗೆ ಯಾವುದೇ ಶಾಸಕ, ಸಂಸದ ತಮ್ಮ ಭವ&amp;shy;ನ&amp;shy;ದಲ್ಲೆ ಲಂಚ ಸ್ವೀಕ&amp;shy;ರಿ&amp;shy;ಸು&amp;shy;ವಾಗ ರೆಡ್‌ ಹ್ಯಾಂಡೆಡ್‌ ಆಗಿ ಸಿಕ್ಕಿ&amp;shy;ಬಿ&amp;shy;ದ್ದಿ&amp;shy;ರ&amp;shy;ಲಿಲ್ಲ. ಲೋಕ&amp;shy;ಸ&amp;shy;ಭೆ&amp;shy;ಯಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕ&amp;shy;ರಿ&amp;shy;ಸಿದ ಪ್ರಕ&amp;shy;ರಣ, ಮತ ಹಾಕಲು ಹಣ ಪಡೆದ ಪ್ರಕ&amp;shy;ರಣ ದೊಡ್ಡ ಸುದ್ದಿ&amp;shy;ಯಾ&amp;shy;ಗಿ&amp;shy;ತ್ತಾ&amp;shy;ದರೂ ಅದಕ್ಕೆ ಸಾಕ್ಷ್ಯ&amp;shy;ವಿ&amp;shy;ರ&amp;shy;ಲಿಲ್ಲ. ಆದರೆ ಸಂವಿ&amp;shy;ಧಾ&amp;shy;ನ&amp;shy;ಬ&amp;shy;ದ್ಧ&amp;shy;ವಾದ, ನ್ಯಾಯ&amp;shy;ಮೂ&amp;shy;ರ್ತಿ&amp;shy;ಗಳ ನೇತೃ&amp;shy;ತ್ವದ ಲೋಕಾ&amp;shy;ಯು&amp;shy;ಕ್ತವೇ ಶಾಸ&amp;shy;ಕ&amp;shy;ರನ್ನು ಬಲೆಗೆ ಕೆಡ&amp;shy;ವಿದೆ. ಅಲ್ಲಿಗೆ ಭ್ರಷ್ಟಾ&amp;shy;ಚಾರ ವಿರೋ&amp;shy;ಧಿ&amp;shy;ಸು&amp;shy;ವು&amp;shy;ದಾಗಿ ಹೇಳುತ್ತಾ ಬಂದಿದ್ದ ಬಿಜೆ&amp;shy;ಪಿಯ ಬಣ್ಣ ನಡು&amp;shy;ಬೀ&amp;shy;ದಿ&amp;shy;ಯಲ್ಲಿ ಹರಾ&amp;shy;ಜಿಗೆ ಬಿತ್ತು.&lt;br /&gt;ಸರ್ಕಾರ ರಚ&amp;shy;ನೆ&amp;shy;ಯಾದ ಕೇವಲ ಒಂಭತ್ತು ತಿಂಗ&amp;shy;ಳಲ್ಲೇ ಸಚಿ&amp;shy;ವರು ಮಾಡು&amp;shy;ತ್ತಿ&amp;shy;ರುವ ದುಡ್ಡು ಸ್ವತಃ ಬಿಜೆಪಿ ಕಾರ್ಯ&amp;shy;ಕ&amp;shy;ರ್ತ&amp;shy;ರನ್ನೇ ದಂಗು ಬಡಿ&amp;shy;ಸಿದೆ. ಸಹ&amp;shy;ಕಾರ ಇಲಾ&amp;shy;ಖೆಯ ಭ್ರಷ್ಟಾ&amp;shy;ಚಾ&amp;shy;ರ&amp;shy;ವನ್ನು ಮಹಾ&amp;shy;ಲೇ&amp;shy;ಖ&amp;shy;ಪಾ&amp;shy;ಲರ ವರದಿ ಬಯ&amp;shy;ಲಿ&amp;shy;ಗೆ&amp;shy;ಳೆ&amp;shy;ದಿದೆ.&lt;br /&gt;ಈ ಹಿಂದಿನ ಚುನಾ&amp;shy;ವ&amp;shy;ಣೆ&amp;shy;ಗ&amp;shy;ಳಲ್ಲಿ ಬಿಜೆಪಿ ಝಳ&amp;shy;ಪಿ&amp;shy;ಸು&amp;shy;ತ್ತಿದ್ದ ಅಸ್ತ್ರ&amp;shy;ಗಳು ಈಗ ಮಕಾಡೆ ಮಲ&amp;shy;ಗಿವೆ. ಕುಟುಂಬ ರಾಜ&amp;shy;ಕಾ&amp;shy;ರಣ ಹಾಗೂ ಭ್ರಷ್ಟಾ&amp;shy;ಚಾ&amp;shy;ರ&amp;shy;ವನ್ನು ವಿರೋ&amp;shy;ಧಿ&amp;shy;ಸಲು ಅದನ್ನು ಕಾಂಗ್ರೆಸ್‌ ಮತ್ತು ಜೆಡಿ ಎಸ್‌ಗೆ ಆಪಾ&amp;shy;ದಿ&amp;shy;ಸಲು ಈಗ ಬಿಜೆ&amp;shy;ಪಿಗೆ ಜಂಘಾ&amp;shy;ಬ&amp;shy;ಲ&amp;shy;ವಿಲ್ಲ. ಈಗೇ&amp;shy;ನಿ&amp;shy;ದ್ದರೂ ಹಣ, ಆಮಿಷ, ಜಾತಿ&amp;shy;ಯಷ್ಟೇ ಉಳಿ&amp;shy;ದಿ&amp;shy;ರು&amp;shy;ವುದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-5235503815090541055?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/5235503815090541055/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=5235503815090541055' title='1 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/5235503815090541055'/><link rel='self' type='application/atom+xml' href='http://www.blogger.com/feeds/8477112084544236406/posts/default/5235503815090541055'/><link rel='alternate' type='text/html' href='http://horaganavanu.blogspot.com/2009/03/blog-post_21.html' title='ಬಿಜೆಪಿ ಶಸ್ತ್ರ­ಸ­ನ್ಯಾಸ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>1</thr:total></entry><entry><id>tag:blogger.com,1999:blog-8477112084544236406.post-6912598278169226522</id><published>2009-03-18T08:40:00.000-07:00</published><updated>2009-03-18T08:41:34.579-07:00</updated><title type='text'>ಕನ್ನಡದ ಮೊದಲ ಕೇಳು ಕಾದಂಬರಿ `ಸಂಧ್ಯಾರಾಗ'</title><content type='html'>* ಅನಕೃ ಪ್ರತಿಷ್ಠಾನದ ಸಾರ್ಥಕ ಪ್ರಯತ್ನ&lt;br /&gt;* ಎಂಪಿ-3 ರೂಪದಲ್ಲಿ ಕಾದಂಬರಿ ಲಭ್ಯ&lt;br /&gt;* ಡಾಬಿ.ವಿ. ರಾಜಾರಾಂ ನಿರ್ದೇಶನ&lt;br /&gt;ಓದು ಕಾದಂಬರಿ, ದೃಶ್ಯಕ್ಕೆ ಅಳವಡಿಸಲ್ಪಟ್ಟ ನೋಡು ಕಾದಂಬರಿ ಕೇಳಿದ್ದೀರಿ. ಆದರೆ ಇದು ಕೇಳುವ ಕಾದಂಬರಿ. ಕನ್ನಡದಲ್ಲಿ ಇಂತಹದೊಂದು ಮೊದಲ ಪ್ರಯೋಗ ಮಾಡಿದ್ದು ಅನಕೃ ಪ್ರತಿಷ್ಠಾನ.&lt;br /&gt;ಕಾದಂಬರಿ ಸಾರ್ವಭೌಮರೆಂದೇ ಖ್ಯಾತರಾದ ಅ.ನ. ಕೃಷ್ಣರಾಯರ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲೊಂದಾದ `ಸಂಧ್ಯಾರಾಗ' ಕೇಳು ಕಾದಂಬರಿಯಾಗಿ ರೂಪಿತವಾಗಿದೆ. ಸಂಗೀತಕಾರನೊಬ್ಬನ ಏಳುಬೀಳು, ಸಂಕಷ್ಟ ಸಲ್ಲಾಪಗಳನ್ನೊಳಗೊಂಡ ಜೀವನ ದರ್ಶನ ಹೊಂದಿರುವ ಈ ಕಾದಂಬರಿ ಸಿನಿಮಾವಾಗಿ ಕೂಡ ಯಶಸ್ವಿಯಾಗಿತ್ತು.&lt;br /&gt;ಅನಕೃ ಶತಮಾನೋತ್ಸವ ಸಂದರ್ಭದಲ್ಲಿ ಪ್ರತಿಷ್ಠಾನವು ಇಂತಹದೊಂದು ಸಾರ್ಥಕ ಪ್ರಯತ್ನಕ್ಕೆ ಕೈಹಾಕಿತು. ಮಾರುಕಟ್ಟೆಯಲ್ಲಿ ಅಲಭ್ಯವಾಗಿದ್ದ ಎಲ್ಲಾ ಕೃತಿಗಳನ್ನು ಮುದ್ರಿಸಿದ ಪ್ರತಿಷ್ಠಾನ, ಜನಪ್ರಿಯ ಕಾದಂಬರಿಯನ್ನು ಸಿ.ಡಿ. ರೂಪಕ್ಕೆ ಅಳವಡಿಸಲು ಮುಂದಾಯಿತು.&lt;br /&gt;ಆಧುನಿಕ ಜಗತ್ತಿನಲ್ಲಿ ಎಲ್ಲರೂ ಕೇಳುವುದಕ್ಕೆ ಆದ್ಯತೆ ನೀಡುವಾಗ, ಕಾದಂಬರಿಯನ್ನು ಕೇಳಿಸುವ ಪ್ರಯತ್ನ ಇದಾಗಿತ್ತು.&lt;br /&gt;ಹೇಗಿದೆ ಇದು?:&lt;br /&gt;ಸುಮಾರು 2 ಗಂಟೆಗಳು ಕುಳಿತು ಆಲಿಸಬಹುದಾದ ಕಾದಂಬರಿ ಇದಾಗಿದೆ. ಕಾದಂಬರಿಯಲ್ಲಿ ಸುಮಾರು 20 ಪಾತ್ರಗಳಿದ್ದು ಅವೆಲ್ಲವೂ ಪಾತ್ರರೂಪದಲ್ಲಿ ಮಾತನಾಡುತ್ತವೆ. ಆಯಾ ಪಾತ್ರಕ್ಕೆ ತಕ್ಕನಾದ ಭಾವಾಭಿವ್ಯಕ್ತಿ ಇಲ್ಲಿದ್ದು, ಕೇಳುಗರಿಗೆ ಆಪ್ತವಾಗುವ ಶೈಲಿಯನ್ನು ಇದು ಹೊಂದಿದೆ.&lt;br /&gt;ಕಾದಂಬರಿಯ ಏಕತಾನ ಓದಿಗೆ ಬದಲಾಗಿ, ಬಹುಪಾತ್ರಗಳು ತಾವಾಗೇ ಮಾತನಾಡುವ ವಿನ್ಯಾಸ ಇಲ್ಲಿ ನಿರೂಪಿತವಾಗಿದೆ. ಆಯಾ ಪಾತ್ರಗಳಿಗೆ ವಿವಿಧ ಕಲಾವಿದರು, ಸಾಹಿತಿಗಳು, ನಿರೂಪಕರು ಕಂಠದಾನ ಮಾಡಿದ್ದಾರೆ. ಕಾದಂಬರಿಯೊಳಗೆ ಮೈಗೂಡಿರುವ ನಾಟಕೀಯತೆ ಇಲ್ಲಿ ವಾಸ್ತವವಾಗಿದ್ದು, ಓದುವ `ಕಷ್ಟ'ವನ್ನು ತಪ್ಪಿಸುತ್ತದೆ.&lt;br /&gt;ಕೇಳು ಕಾದಂಬರಿಯ ಇನ್ನೊಂದು ವಿಶಿಷ್ಟತೆಯೆಂದರೆ ಸಂಧ್ಯಾರಾಗ ಕಾದಂಬರಿಯಲ್ಲಿ ಲಿಖಿತ ರೂಪದಲ್ಲಿ ಹಾಡುಗಳು ಇಲ್ಲಿ ಗೇಯರೂಪ ಪಡೆದಿವೆ. ಹೆಸರಾಂತ ಶಾಸ್ತ್ರೀಯ ಕಲಾವಿದರು ತಮ್ಮ ಸುಮಧುರ ಕಂಠದ ಮೂಲಕ ಇಲ್ಲಿನ ಹಾಡುಗಳಿಗೆ ಗಾಯನ ರೂಪ ನೀಡಿದ್ದಾರೆ. ಹೀಗಾಗಿ ಕೇಳು ಕಾದಂಬರಿಗೆ ಏಕಕಾಲಕ್ಕೆ ನಾಟಕೀಯ ಹಾಗೂ ಸಂಗೀತಾತ್ಮಕ ಗುಣವೂ ಬಂದೊದಗಿದೆ.&lt;br /&gt;ಅನಕೃ ಜೀವನ ಚರಿತ್ರೆಯನ್ನು ಬರೆದ ಸಾಹಿತಿ ಬಿ.ಎಸ್‌. ಕೇಶವರಾವ್‌, ಅಪರ್ಣಾ, ಪ್ರದೀಪ ಕುಮಾರ್‌ ಸೇರಿ ಸುಮಾರು 20 ಮಂದಿ ಕಂಠದಾನ ಮಾಡಿದ್ದಾರೆ. ಸದ್ಯ ನಾಟಕ ಅಕಾಡೆಮಿ ಅಧ್ಯಕ್ಷರಾಗಿರುವ, ರಂಗಕರ್ಮಿ ಡಾಬಿ.ವಿ. ರಾಜಾರಾಂ, ಕಂಠದಾನ ಮಾಡುವ ಜತೆಗೆ ಇದನ್ನು ನಿರ್ದೇಶಿಸಿದ್ದಾರೆ.&lt;br /&gt;ಎಂಪಿ 3 ರೂಪದಲ್ಲಿ ಈ ಕೇಳು ಕಾದಂಬರಿ ಮಾರಾಟಕ್ಕೆ ಲಭ್ಯವಿದೆ. ಜೆ.ಪಿ. ನಗರದ ರಂಗಶಂಕರದಲ್ಲಿರುವ ಪುಸ್ತಕದಂಗಡಿ ಹಾಗೂ ಅನಕೃ ಪ್ರತಿಷ್ಠಾನ, ನಂ.57, ಐಟಿಐ ಲೇ ಔಟ್‌, ವಿದ್ಯಾಪೀಠ, ಬನಶಂಕರಿ 3 ನೇ ಹಂತ, ಬೆಂಗಳೂರು-85 ಇಲ್ಲಿ ಸಂಪರ್ಕಿಸಬಹುದು. ಮಾಹಿತಿಗೆ ದೂ:080-26692694ಗೆ ಕರೆ ಮಾಡಬಹುದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-6912598278169226522?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/6912598278169226522/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=6912598278169226522' title='0 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/6912598278169226522'/><link rel='self' type='application/atom+xml' href='http://www.blogger.com/feeds/8477112084544236406/posts/default/6912598278169226522'/><link rel='alternate' type='text/html' href='http://horaganavanu.blogspot.com/2009/03/blog-post_18.html' title='ಕನ್ನಡದ ಮೊದಲ ಕೇಳು ಕಾದಂಬರಿ `ಸಂಧ್ಯಾರಾಗ&apos;'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>0</thr:total></entry><entry><id>tag:blogger.com,1999:blog-8477112084544236406.post-1124876096945568255</id><published>2009-03-03T06:36:00.000-08:00</published><updated>2009-03-03T06:38:05.855-08:00</updated><title type='text'>ಸಂಸ್ಕೃತಿ ವಿರೂಪ</title><content type='html'>`ಸಂಸ್ಕೃತಿ ವಿರೂಪ-ಇದು ಬಿಜೆಪಿಯ ಸ್ವರೂಪ' ಹೀಗೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ಹಾಗೂ ಸಂಘಪರಿವಾರ ಕೃಪಾಪೋಷಿತ ಸಂಘಟನೆಗಳು ನಡೆಸುತ್ತಿರುವ ದುಂಡಾವರ್ತನೆ, ಅಂದಾದುಂದಿ ಹೇಳಿಕೆ ಗಮನಿಸಿದರೆ ಈ ಮಾತು ಅಕ್ಷರಶಃ ಸತ್ಯ.&lt;br /&gt;ಒಂದು ಜನಾಂಗ, ಸಮುದಾಯ ಅಥವಾ ಒಟ್ಟಾಗಿ ವಾಸಿಸುವ ಒಂದು ಗುಂಪಿನ ಆಚರಣೆ, ಭಾಷೆ, ನಡಾವಳಿ, ಊಟೋಪಚಾರ, ವಿವಿಧ ವರ್ತನೆಗಳ ಬಗ್ಗೆ ಆ ಸಮುದಾಯ ಕಟ್ಟಿಕೊಂಡು ಬಂದ ಭಾವನಾತ್ಮಕ ಅಥವಾ ವೈಚಾರಿಕ ನಂಬಿಕೆ ಹಾಗೂ ರೂಢಿಗತ ಪದ್ಧತಿಗಳು ಹೀಗೆ ಎಲ್ಲವನ್ನೂ ಸೇರಿಸಿ ಸಂಸ್ಕೃತಿ ಎನ್ನಬಹುದು. ಆದರೆ ಬಿಜೆಪಿ ಹಾಗೂ ಅದರ ಬೆನ್ನೆಲುಬಾಗಿರುವ ಸಂಘಪರಿವಾರಿಗಳು ಪ್ರತಿಪಾದಿಸುವ `ಸಂಸ್ಕೃತಿ'ಯ ನಿರ್ವಚನವೇ ಬೇರೆ ರೀತಿಯದ್ದು. ಅವರು ಸಂಸ್ಕೃತಿಗೆ ಫೋಟೋ ಫ್ರೇಮ್‌ ಹಾಕಿಸಿ ಇಟ್ಟಿರುತ್ತಾರೆ. ಒಳಗಿನ ಫೋಟೋ ಗೆದ್ದಲು ಹಿಡಿದು ಕಾಣದಂತಾಗಿದ್ದರೂ, ಹೊರಗಡೆ ಎಲ್ಲರೂ ಆಸ್ವಾದಿಸಬಲ್ಲ ಸೌಂದರ್ಯ ಹೊಂದಿರುವ ಸ್ಫುರದ್ರೂಪವಿದ್ದರೂ ಅವರಿಗದು ಸಂಸ್ಕೃತಿ ಎಂದು ಭಾಸವಾಗುವುದೇ ಇಲ್ಲ. ಗೆದ್ದಲು ಹಿಡಿದ ಫೋಟೋವೇ ಅವರಿಗೆ ಸಂಸ್ಕೃತಿಯ ಸ್ವರೂಪ/ವಿರೂಪವಾಗುತ್ತದೆ.&lt;br /&gt;ಈ ದೇಶದಲ್ಲಿ ಸಸ್ಯಾಹಾರಿಗಳು ಹಾಗೂ ಮಾಂಸಹಾರಿಗಳು ಇಬ್ಬರೂ ಇದ್ದಾರೆ. ಲೆಕ್ಕಾಚಾರ ಪ್ರಕಾರ ಹೇಳಬೇಕೆಂದರೆ `ಘೋಷಿತ' ಸಸ್ಯಾಹಾರಿಗಳ ಸಂಖ್ಯೆ ಅಮ್ಮಮ್ಮಾ ಎಂದರೂ ಈ ದೇಶದ ಜನಸಂಖ್ಯೆಯ ಶೇ.15 ರಷ್ಟು ಇರಬಹುದು. ಅಂದರೆ ನೂರಾಹತ್ತು ಕೋಟಿಯಲ್ಲಿ ಕೇವಲ 15 ಕೋಟಿ ಜನರು ಮಾತ್ರ ಸಸ್ಯಾಹಾರಿಗಳು. ಹಾಗಿದ್ದೂ ಸಸ್ಯಾಹಾರವೇ ಶ್ರೇಷ್ಠ, ಮಾಂಸಹಾರ ಕನಿಷ್ಠವೆಂಬ ತಥಾಕಥಿತ ಆದರೆ ಉದ್ದೇಶಿತ ಮೌಲ್ಯವೊಂದನ್ನು ಬಿತ್ತಿಬೆಳೆಸಲಾಗುತ್ತಿದೆ. ಅದನ್ನೇ ಸಂಸ್ಕೃತಿಯ ಲಕ್ಷಣವೆಂದು ಪರಿಭಾವಿಸಲಾಗುತ್ತಿದೆ. ದೇವರಿಗೆ ಕೋಣ, ಕುರಿ ಬಲಿ ಕೊಡುವುದು ಅಪರಾಧವೆಂದು ಭಾವಿಸಲಾಗುತ್ತಿದೆ. ಹಿಂಸೆ ಸಮರ್ಥನೆ/ವಿರೋಧ ಒತ್ತಟ್ಟಿಗಿರಲಿ. ಆದರೆ ಸಾವಿರಾರು ವರ್ಷಗಳ ಆಹಾರಪದ್ಧತಿಯೊಂದನ್ನೇ ನಿರಾಕರಿಸುವ ವೈದಿಕ ಶಾಹಿ ಹುನ್ನಾರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದು ಸಂಸ್ಕೃತಿಯ ಹೆಸರಿನಲ್ಲೇ ಎಂಬುದನ್ನು ಗಮನಿಸಬೇಕು.&lt;br /&gt;ರಾಮ ಮಾತ್ರ ಇರಬೇಕು ಬಾಬರ್‌ ಸ್ಥಾಪಿಸಿದ ಮಸೀದಿ ಇರಬಾರದೆಂಬ ಅಯೋಧ್ಯೆ ದುರ್ಘಟನೆ, ಗುಜ್ಜಾರ್‌ನಲ್ಲಿ ಸತ್ತ ದನದ ಮಾಂಸತಿಂದರೆಂದಬ 9 ಜನ ದಲಿತರ ಚರ್ಮ ಸುಲಿದು ಸಾಯಿಸಿದ ಬರ್ಬರ ಕೃತ್ಯ, ಒರಿಸ್ಸಾದಲ್ಲಿ ಏನೂ ಅರಿಯದ 2 ಮುಗ್ದ ಕಂದಮ್ಮಗಳ ಜತೆ ಪಾದ್ರಿ ಗ್ರಹಾಂಸ್ಟೈನ್‌ ಜೀವಂತ ದಹನ, ಗುಜರಾತ್‌ನಲ್ಲಿ ಮೋದಿ ನಡೆಸಿದ ಜನಾಂಗೀಯ ಹತ್ಯೆ, ಕಂಬಾಲಪಲ್ಲಿಯಲ್ಲಿ 7 ಜನ ದಲಿತರನ್ನು ಜೀವಸಹಿತ ಸುಟ್ಟಿದ್ದು, ಕರ್ನಾಟಕದಲ್ಲಿ ಕ್ರೈಸ್ತ ಚರ್ಚುಗಳ ಮೇಲೆ ದಾಳಿ, ದೇಶದ ಅನುಪಮ ಸೌಹಾರ್ದ ಕೇಂದ್ರ ಬಾಬಾಬುಡನ್‌ಗಿರಿಯಲ್ಲಿ ವೈದಿಕ ವಿರೋಧಿ ದತ್ತಾತ್ರೇಯನನ್ನು ವಶಪಡಿಸಿಕೊಳ್ಳಲು ನಡೆಸಿರುವ ಹುನ್ನಾರ. . . ಹೀಗೆ ಪಟ್ಟಿ ಮಾಡುತ್ತಾ ಹೋದರೆ `ಅಸಂಸ್ಕೃತಿ'ಯೊಂದನ್ನು ಸಂಸ್ಕೃತಿಯೆಂದು ಪ್ರತಿಪಾದಿಸಿ, ಅದನ್ನೇ ಹೇರುವ ಧಾರ್ಷ್ಟ್ಯವನ್ನು ಪರಿವಾರ ಮಾಡುತ್ತಾ ಬಂದಿದೆ.&lt;br /&gt;ಇಂಡಿಯಾವು ಏಳೆಂಟು ಧರ್ಮಗಳ, ಧರ್ಮಗಳ ಕತ್ತರಿಗೇ ನಿಲುಕದ ಸುಮಾರು 5 ಸಾವಿರದಷ್ಟು ಜಾತಿಗಳ, ಧರ್ಮ/ಜಾತಿಗಳ ಕಟ್ಟುಪಾಡಿಗೆ ಇನ್ನೂ ಒಳಗಾಗದ ನೂರಾರು ಬುಡುಕಟ್ಟುಗಳ ಸಂಸ್ಕೃತಿಯನ್ನು ಒಳಗೊಂಡ ದೇಶ. ತನ್ನದೇ ಆದ ಸಂಸ್ಕೃತಿ, ಭಾಷೆ, ಜೀವನ, ಆಹಾರಪದ್ಧತಿಯನ್ನು ಈ ಎಲ್ಲಾ ಸಮುದಾಯಗಳು ಅನೂಚಾನವಾಗಿ ಆಚರಿಸಿಕೊಂಡು ಬರುತ್ತಿವೆ. ಪರಸ್ಪರರ ಮಧ್ಯೆ ಕೊಡುಕೊಳ್ಳುವಿಕೆ ನಡೆದರೂ ತನ್ನದೇ ಆದ ಅಸ್ಮಿತೆಯನ್ನು ಇನ್ನೂ ಉಳಿಸಿಕೊಂಡಿರುವುದು ಅವುಗಳ ವೈಶಿಷ್ಟ್ಯ. ಕ್ರೈಸ್ತ ಹಾಗೂ ಮುಸ್ಲಿಮ್‌ ಮಹಿಳೆಯರು ತಾಳಿ, ಕಾಲುಂಗುರ, ಹೂವು ಮುಡಿಯುವುದು ಇಂಡಿಯಾದಲ್ಲಲ್ಲದೇ ಬೇರೆಲ್ಲೂ ಸಿಗದು. ಬ್ರಾಹ್ಮಣರ ಮನೆಗಳಲ್ಲಿ ಎಲೆ ಅಡಿಕೆ ತಟ್ಟೆಗೆ `ತಬಕು' ಎನ್ನುತ್ತಾರೆ. ಈ ಪದ ಮೂಲತಃ ಉರ್ದುವಿನದಾಗಿದ್ದು, ಸಂಪ್ರದಾಯಸ್ಥ ಬ್ರಾಹ್ಮಣರ ಮನೆಯಲ್ಲಿ ಹೇಗೆ ಬಳಕೆಗೆ ಬಂದಿತೆಂಬುದು ಇನ್ನೂ ಶೋಧನೆಯಾಗಬೇಕಾದ ಸಂಗತಿ.&lt;br /&gt;&lt;strong&gt;ಕನ್ನಡ ಜಾತಿ:&lt;/strong&gt;&lt;br /&gt;ಮೂಡಿಗೆರೆ ತಾಲೂಕಿನ ಎಸ್ಟೇಟ್‌ ಒಂದರಲ್ಲಿ ಅಧ್ಯಯನ ನಡೆಸಲು ಹೋದಾಗ 1/2 ನೇ ತರಗತಿ ಓದುವ ವಿದ್ಯಾರ್ಥಿನಿಗೆ ನೀನು ಯಾವ ಜಾತಿ ಎಂದು ಕುತೂಹಲಕ್ಕೆ ಕೇಳಿದೆ. ಆಗ ಆಕೆ ಹೇಳಿದ್ದು ನಾನು `ಕನ್ನಡ ಜಾತಿ' ಅಂತ. ಇದ್ಯಾವುದಪ್ಪ ಕನ್ನಡ ಜಾತಿ ಎಂದು ಪ್ರಶ್ನಿಸಿದಾಗ ಆಕೆ ನೀಡಿದ ಉತ್ತರ ವಿಶೇಷವಾಗಿತ್ತು. `ತುಳು, ತೆಲುಗು, ತಮಿಳು, ಕೊಂಕಣಿ, ಸಾಬರು ಹೀಗೆ ಬೇರೆ ಬೇರೆ ಜಾತಿಗಳವರು ಇದ್ದಾರೆ. ನಾವು ಸ್ವಲ್ಪ ಜನ ಮಾತ್ರ ಕನ್ನಡ ಜಾತಿಯವರು ಇದ್ದೇವೆ' ಎಂದು ವಯೋಸಹಜವಾಗಿ ಆಕೆ ಪೆದ್ದುಪೆದ್ದಾಗಿ ಹೇಳಿದಳು.&lt;br /&gt;ಕನ್ನಡ ಜಾತಿ ಎಂಬ ಪದ ಎಷ್ಟು ಚೆನ್ನಾಗಿದೆಯಲ್ಲಾ ಎಂದು ಆಗ ಅನಿಸಿತ್ತು.&lt;br /&gt;ಇಷ್ಟೆಲ್ಲಾ ವೈವಿಧ್ಯತೆ ಇರುವ ಇಂಡಿಯಾದಲ್ಲಿ ಏಕ ಸಂಸ್ಕೃತಿಯನ್ನು ಹೇರುವ ಪಟ್ಟಭದ್ರ ಯತ್ನ ನಿರಂತರವಾಗಿ ನಡೆಯುತ್ತಿದೆ.&lt;br /&gt;ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಮೇಲೆ ನಡೆಯುತ್ತಿರುವ ಅವಘಡಗಳು ಇದನ್ನು ಪುಷ್ಟೀಕರಿಸುತ್ತವೆ. ಚರ್ಚ್‌ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಅದನ್ನು ವಿರೋಧಿಸಿ ಪ್ರತಿಭಟನೆಗಳು ಮೊದಲಾದವು. ಕ್ರೈಸ್ತರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಬಂದ್‌ ಕರೆಗೆ ಸ್ಪಂದಿಸಿ ಶಾಲೆಗೆ ರಜೆ ನೀಡಿದವು. ಆಗಷ್ಟೇ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಲಾ ಮಾನ್ಯತೆಯನ್ನು ರದ್ದು ಪಡಿಸುವುದಾಗಿ ಗುಟುರು ಹಾಕಿದರು. ಶಾಲೆಗಳಿಗೆ ನೋಟೀಸ್‌ ಜಾರಿ ಮಾಡಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಹಕ್ಕು ಸಾಂವಿಧಾನಿಕವಾಗಿ ಬಂದಿದ್ದು, ಅದನ್ನು ಪ್ರಶ್ನಿಸುವ ಮೂಲಕ ತಮ್ಮ ಸಿದ್ಧಾಂತ ಒಪ್ಪದ ಜನರ ಮೇಲೆ ಕಾನೂನುನ್ನು ಹೇರಲು ಕಾಗೇರಿ ಮುಂದಾದರು. ಅದೇ ಸಂಘಪರಿವಾರದ ಸಂಘಟನೆಗಳು ಅಥವಾ ಉನ್ನತ ಶಿಕ್ಷಣ ಇಲಾಖೆ ಭಯೋತ್ಪಾದನೆ ವಿರೋಧದ ಹೆಸರಿನಲ್ಲಿ ಶಾಲೆ ರಜೆ ಕೊಡಿಸಿದಾಗ ಈ ಪ್ರಶ್ನೆ ಎದ್ದೇಳಲೇ ಇಲ್ಲ.&lt;br /&gt;ಕಾಗೇರಿಗೆ ನಿಜವಾಗಿಯೂ ಕಾಳಜಿಯಿದ್ದರೆ ಶಾಲಾ ಬಂದ್‌ಗೆ ಬೆಂಬಲ ಸೂಚಿಸುವ ಎಲ್ಲಾ ಸಂಸ್ಥೆಗಳ ವಿರುದ್ಧವೂ ಈ ನೋಟೀಸ್‌ ಜಾರಿ ಮಾಡಬಹುದಿತ್ತು. ಮಂಗಳೂರು-ಉಡುಪಿಯಲ್ಲಿ ವಾರಕ್ಕೊಮ್ಮೆ ಶಾಲಾ ಬಂದ್‌ ನಡೆಸುವುದು ಸಾಮಾನ್ಯವಾಗಿ ಹೋಗಿದ್ದು, ಆಗೆಲ್ಲಾ ಕಾಗೇರಿ ಮಾತನಾಡುವುದಿಲ್ಲ.&lt;br /&gt;ಇದೇ ಮಾದರಿಯಲ್ಲಿ ಮುಜರಾಯಿ ಇಲಾಖೆ ಕೃಷ್ಣಯ್ಯ ಶೆಟ್ಟಿ ವರ್ತನೆಯೂ ಇದೆ. ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಲಾಡು ಹಂಚುವುದು, ಗಂಗಾಜಲ ಹಂಚುವುದು ಏನನ್ನು ಸೂಚಿಸುತ್ತದೆ. ಹಾಗಾದರೆ ಮಾರಿಹಬ್ಬದಲ್ಲಿ ಕುರಿ ಹಂಚುವುದು, ಹೆಂಡ ಹಂಚುವುದು, ಈದ್‌ ಮಿಲಾದ್‌, ಬಕ್ರೀದ್‌ನಲ್ಲಿ ಬಿರ್ಯಾನಿ ವಿತರಿಸಲು ಅವರು ಮುಂದಾಗುತ್ತಾರೆಯೇ? ಸಂವಿಧಾನ ರೀತ್ಯ ಜಾತ್ಯತೀತ, ಸಮಾನತೆ ಪ್ರತಿಪಾದಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರು ಒಂದು ಜನಾಂಗ ಸಂಪ್ರದಾಯವನ್ನು ಸರ್ಕಾರ/ ಸಾರ್ವಜನಿಕರ ದುಡ್ಡಲ್ಲಿ ಜಾರಿಗೊಳಿಸುವುದು ಸಂಸ್ಕೃತಿಯೊಂದನ್ನು ಹೇರುವ ಪದ್ಧತಿಯಲ್ಲವೇ?&lt;br /&gt;ಯಡಿಯೂರಪ್ಪನವರು ಮಂಡಿಸಿದ ಬಜೆಟ್‌ನಲ್ಲಿ ಕೇಳಿದ/ ಕೇಳದ ಮಠಗಳಿಗೆಲ್ಲಾ ಅನುದಾನವನ್ನು ಹರಿಯಿಸಿದ್ದಾರೆ. ಮಠಗಳು ಕೋಟಿಗಟ್ಟಲೆ ಆಸ್ತಿ ಹೊಂದಿ, ಭಕ್ತರ ಧಾರಾಳ ನೆರವಿನಿಂದ ನಡೆಯುತ್ತಿರುವ ಸಂಸ್ಥೆಗಳು. ಅವರಿಗೆ ಸರ್ಕಾರ ಹಣ ಕೊಡಬೇಕಿಲ್ಲ. ತಮಗೆ ಬೇಕಾದ ಹಣ ಸಂಪಾದಿಸುವ ಶಕ್ತಿ ಅವಕ್ಕಿದೆ. ಹಾಗೆ ಕೊಡಲು ಸರ್ಕಾರದ ಅನುದಾನ ಯಡಿಯೂರಪ್ಪನವರ ಸ್ವಂತ ಆಸ್ತಿಯೂ ಅಲ್ಲ. ನಮ್ಮೆಲ್ಲರ ತೆರಿಗೆ ಹಣದಿಂದ ಕ್ರೋಢೀಕರಣವಾದ ಹಣವದು. ಜಾತಿವಾರು ಮಠಗಳಿಗೆ ಹಣವನ್ನು ನೀಡುತ್ತಾ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಿರುವುದು ಸಂವಿಧಾನ ವಿರೋಧಿ. ಪ್ರಜಾಪ್ರಭುತ್ವ ವಿರೋಧಿ. ಬಡವರಿಗೆ, ಕೂಲಿಕಾರ್ಮಿಕರಿಗೆ, ಕೃಷಿಕರಿಗೆ, ಮಹಿಳೆಯರಿಗೆ ನೀಡಬೇಕಾದ ಪಾಲಿನಲ್ಲಿ ಮಠವನ್ನು ಸಾಕುತ್ತಿರುವುದು ಸರ್ವಥಾ ಖಂಡನೀಯ.&lt;br /&gt;ಸಚಿವರೆಲ್ಲರ ದುಂಡಾ ಮಾತುಗಾರಿಕೆ ಸರ್ವಾಧಿಕಾರಿ ಧೋರಣೆಯ ಪ್ರತೀಕವಾಗಿದೆ. ಬೆಂಗಳೂರಿನಲ್ಲಿ ನ್ಯಾಷನಲ್‌ ಗ್ಯಾಲರಿ ಫಾರ್‌ ಮಾಡ್ರನ್‌ ಆರ್ಟ್ಸ್‌ ಉದ್ಘಾಟನೆ ಸಂದರ್ಭದಲ್ಲಿ ವೈದ್ಯ ಶಿಕ್ಷಣ ಸಚಿವ ರಾಮಚಂದ್ರಗೌಡರ ವರ್ತನೆಯಂತೂ ಸಂಸ್ಕೃತಿ ವಿರೂಪವೇ ಆಗಿದೆ.&lt;br /&gt;ಆಧುನಿಕ ಕಲೆ ಹೆಸರಿನಲ್ಲಿ ನಮ್ಮ ಸಂಪ್ರದಾಯ, ಪ್ರಾಚೀನ ಪರಂಪರೆಗೆ ಅವಮಾನ ಮಾಡಲಾಗುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಸಂಸ್ಕೃತಿ/ ಕಲೆಯನ್ನು ವಿರೂಪಗೊಳಿಸುತ್ತಿದ್ದಾರೆಂದು ಸಚಿವರು ಹೇಳಿದರು. ಕಲೆಯ ಬಗ್ಗೆ ಏನೂ ಗೊತ್ತಿಲ್ಲ, ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಕಲಾವಿದರು ಆಕ್ಷೇಪಿಸಿದರು. ಗೌರವಾನ್ವಿತ ಸ್ಥಾನದಲ್ಲಿರುವ ಸಚಿವ ರಾಮಚಂದ್ರಗೌಡ ಇದನ್ನು ನಿರ್ಲಕ್ಷಿಸುವ ಬದಲು, ಐ ಆ್ಯಮ್‌ ಗೌರ್ನಮೆಂಟ್‌ ಸ್ಪೀಕಿಂಗ್‌, ಫುಲ್‌ ಹಿಮ್‌ ಔಟ್‌ ಎಂದು ಆದೇಶಿಸಿದರು. ಸಿಕ್ಕಿದ್ದೇ ಅವಕಾಶವೆಂದು ಪೊಲೀಸರು ಕಲಾವಿದರನ್ನು ಹೊರಗೆ ದಬ್ಬಿದರು. ಹಾಗಂತ ಅದೇನು ರಾಜ್ಯ ಸರ್ಕಾರದ ಕಾರ್ಯಕ್ರಮವಲ್ಲ, ಕೇಂದ್ರ ಸರ್ಕಾರದ ಕಾರ್ಯಕ್ರಮ, ಕೇಂದ್ರ ಸಚಿವರು ಉಪಸ್ಥಿತರಿದ್ದರು. ತಾನೇ ಸರ್ಕಾರ ಎನ್ನುವ ಅಧಿಕಾರವನ್ನು ಗೌಡರಿಗೆ ಕೊಟ್ಟಿದ್ದು ಯಾರು? ಹಾಗಂತ ಅವರೇನು ಜನರಿಂದ ಚುನಾಯಿತರಾದ ಶಾಸಕರೂ ಅಲ್ಲ. ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿ. ಅದಕ್ಕೆ ಪಶ್ಚಾತ್ತಾಪ ಪಡುವ ಬದಲಿಗೆ ಸಚಿವರು ಅದನ್ನು ಸಮರ್ಥಿಸಿಕೊಂಡಿದ್ದಾರಲ್ಲದೇ, ತಾನೂ ಮಾಡ್ರನ್‌ ಆರ್ಟಿಸ್ಟ್‌, ಕಲಾತ್ಮಕ ಚಿತ್ರವೊಂದನ್ನು ತೆಗೆದಿದ್ದು, 5 ಪ್ರಶಸ್ತಿಗಳು ಬಂದಿವೆ ಎಂದು ಹೇಳಿಕೊಂಡಿದ್ದಾರೆ. ಗೌಡರ ವರ್ತನೆ ಸಂಘಪರಿವಾರದ ದಬ್ಬಾಳಿಕೆ, ಹೇರುವಿಕೆಯ ದ್ಯೋತಕವಾಗಿದೆ.&lt;br /&gt;ಗೌಡರು ಮಾತನಾಡಿರುವುದಕ್ಕೂ ಮಂಗಳೂರಿನಲ್ಲಿ ಪಬ್‌ ಮೇಲೆ ದಾಳಿ ನಡೆಸಿ, ಯುವತಿಯರ ಮೇಲೆ ದೌರ್ಜನ್ಯ ನಡೆಸಿದ ಶ್ರೀರಾಮಸೇನೆಯ ವರ್ತನೆಗೂ ಯಾವುದೇ ವ್ಯತ್ಯಾಸವಿಲ್ಲ. ಕಲೆ, ಸಂಸ್ಕೃತಿಯನ್ನು ಇವರು ನೋಡುವ ಪರಿಯೇ ಇಂತದ್ದು. ಪಬ್‌ಗೆ ಹೋಗಬಾರದು, ಪ್ರೇಮಿಗಳ ದಿನಾಚರಣೆ ಮಾಡಬಾರದು, ಸ್ಕರ್ಟ್‌, ಚೂಡಿದಾರ್‌ ಹಾಕಬಾರದು ಎಂಬ ಆದೇಶ ಹೊರಡಿಸುವ ಪ್ರಮೋದ ಮುತಾಲಿಕ್‌ನಂತಹ ಮೂರ್ಖನಿಗೂ, ಸಚಿವರ ರಾಮಚಂದ್ರಗೌಡರಿಗೆ ಏನಾದರೂ ವ್ಯತ್ಯಾಸವಿದೆ ಎಂದು ನಾವು ಅಂದುಕೊಂಡರೇ ನಾವೇ ಮೂರ್ಖರು.&lt;br /&gt;ಇದರ ಜತೆಗೆ ಸಾರಿಗೆ ಸಚಿವ ಆರ್‌. ಅಶೋಕ್‌ ಶಿವಮೊಗ್ಗದಲ್ಲಿ ಮಾತನಾಡುತ್ತಾ ಸರ್ಕಾರಿ ಬಸ್‌ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳದ ಚಾಲಕ/ ನಿರ್ವಾಹಕರಿಗೆ ಒದೆಯಿರಿ ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಹಾಗೆ ಹೇಳಿಲ್ಲವೆಂದು ಸ್ಪಷ್ಟನೆ ಕೂಡ ನೀಡಿದ್ದಾರೆ. ಮೊದಲೊಂದು ಹೇಳಿ ಆಮೇಲೆ ಮಾಧ್ಯಮದವರು ತಪ್ಪು ಮಾಡಿದ್ದಾರೆಂದು ಜಾರಿ ಕೊಳ್ಳುವುದು ರೂಢಿಯಾಗಿ ಬಿಟ್ಟಿದೆ. ಸಚಿವರೊಬ್ಬರೇ ಈ ರೀತಿ ಕರೆ ನೀಡಿದರೆ ಇನ್ನು ಸಾರ್ವಜನಿಕರು ಏನು ಮಾಡಿಯಾರು? ದುಡಿಮೆಯಲ್ಲೇ ಹೈರಾಣಾಗಿ ಹೋಗಿರುವ ಚಾಲಕರು/ ನಿರ್ವಾಹಕರನ್ನು ಕಾಪಾಡುವುದು ಯಾರು?&lt;br /&gt;ಇಷ್ಟು ಸಾಲದೆಂಬಂತೆ ವಕ್ಫ್‌ ಸಚಿವ ಮುಮ್ತಾಜ್‌ ಆಲಿಖಾನ್‌, ಸಚಿವ ಶ್ರೀರಾಮುಲು ಅವರನ್ನು ಪ್ರವಾದಿ ಎಂದು ಕರೆದಿದ್ದಾರೆ. ಪ್ರವಾದಿಗೂ, ಗಣಿ ಹಣದ ಅಹಂಕಾರದಿಂದ ಮೆರೆಯುತ್ತಿರುವ ರಾಮುಲುಗೂ ಎಲ್ಲಿಯ ಹೋಲಿಕೆ.&lt;br /&gt;ಯಡಿಯೂರಪ್ಪನವರ ಸಚಿವ ಸಂಪುಟದ ಒಬ್ಬೊಬ್ಬರದೂ ಒಂದೊಂದು ಯಡವಟ್ಟು. ಅಲ್ಪನಿಗೆ ಅಧಿಕಾರ ಸಿಕ್ಕಿದರೆ ಅರ್ಧ ರಾತ್ರಿಲಿ ಕೊಡೆ ಹಿಡಿಸಿಕೊಂಡಿದ್ದನಂತೆ ಎಂಬಂತಾಗಿದೆ. ಆಡಿದ್ದೇ ಮಾತು, ನಡೆದದ್ದೇ ದಾರಿ ಎಂಬಂತಾಗಿದೆ ಸರ್ಕಾರದ ವರ್ತನೆ. ಸಚಿವರು ಹೀಗೆ ಹುಚ್ಚಾಪಟ್ಟೆ ಆಡುತ್ತಾ, ತಮ್ಮದೇ ಆದ ಸಿದ್ಧಾಂತವನ್ನು ಹೇರತೊಡಗಿದರೆ ಜನರೇ ಮೂಗುದಾರವನ್ನು ಜಗ್ಗುವ ದಿನ ದೂರವಿಲ್ಲ. ಯಡಿಯೂರಪ್ಪನವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಕಿವಿಹಿಂಡಿ ಬುದ್ದಿ ಹೇಳದೇ ಇದ್ದರೆ ಜನರೇ ಯಡಿಯೂರಪ್ಪನವರ ಕಿವಿಹಿಂಡುವ ದಿನ ಬರುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-1124876096945568255?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/1124876096945568255/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=1124876096945568255' title='4 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/1124876096945568255'/><link rel='self' type='application/atom+xml' href='http://www.blogger.com/feeds/8477112084544236406/posts/default/1124876096945568255'/><link rel='alternate' type='text/html' href='http://horaganavanu.blogspot.com/2009/03/blog-post.html' title='ಸಂಸ್ಕೃತಿ ವಿರೂಪ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>4</thr:total></entry><entry><id>tag:blogger.com,1999:blog-8477112084544236406.post-3355426869282738850</id><published>2009-02-16T07:29:00.001-08:00</published><updated>2009-02-16T07:29:57.008-08:00</updated><title type='text'>ಆಚಾತುರ್ಯ ಆಚಾರ್ಯ</title><content type='html'>ರಾಜ್ಯದ ಗೃಹಸಚಿವ ಹೆಸರಿಗಷ್ಟೇ ಆಚಾರ್ಯರು. ಮಾಡುವುದು ಪೂರ್ತಿ ಅವಿವೇಕದ ಕೆಲಸ. ಅವರ ಪೂರ್ತಿ ಹೆಸರು ವೇದವ್ಯಾಸ ಶ್ರೀನಿವಾಸ ಆಚಾರ್ಯ. ಗೃಹಸಚಿವ ಪದವಿ ಅಲಂಕರಿಸಿದ ಮೇಲೆ ತಮ್ಮ ಯಡವಟ್ಟು ಮಾತುಗಳು, ತಿಕ್ಕಲುತನದ ವರ್ತನೆಗಳಿಂದ `ಮುತ್ಸದ್ದಿ' ಎಂಬ ಪದಕ್ಕೆ ಕಳಂಕ ತಂದವರು.&lt;br /&gt;ಯಡಿಯೂರಪ್ಪ ಸರ್ಕಾರದಲ್ಲಿ ಎರಡನೇ ಪರಮೋಚ್ಚ ಅಧಿಕಾರ ಅನುಭವಿಸುತ್ತಿರುವವರು ಸನ್ಮಾನ್ಯ ವಿ.ಎಸ್‌. ಆಚಾರ್ಯ. ಆದರೆ ಅಧಿಕಾರ ಚಲಾವಣೆಯಲ್ಲಿ ಅಷ್ಟೇ ಬುರ್ನಾಸು. ಕೇವಲ ವಿವಾದಸ್ಪದ ಮಾತುಗಾರಿಕೆಗಷ್ಟೇ ಅವರ ಅಧಿಕಾರ ಸೀಮಿತ. ನಿಜಾಧಿಕಾರ ನಡೆಸುತ್ತಿರುವವರು ಮುಖ್ಯಮಂತ್ರಿ ಪುತ್ರ ವಿಜಯೇಂದ್ರ. ಹಾಗಾಗಿಯೇ ಆಚಾರ್ಯ ಅಚಾತುರ್ಯದ ವರ್ತನೆ ಹೊರಗೆಡಹುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪದೇಪದೇ ಇಕ್ಕಟ್ಟಿಗೆ ಸಿಲುಕಿಸುತ್ತಾರೆ.&lt;br /&gt;ತಮ್ಮದೇ ಕ್ಷೇತ್ರದ ಶಾಸಕ ರಘುಪತಿಭಟ್‌ರ ಪತ್ನಿ ಆತ್ಮ`ಹತ್ಯೆ' ಪ್ರಕರಣದಲ್ಲಿ ಅವರ ನಡೆದುಕೊಂಡ ರೀತಿ ಜವಾಬ್ದಾರಿಯುತ ಹುದ್ದೆಗೆ ಮಾಡಿದ ಅಪಮಾನ. ಅಧಿಕಾರದ ಹೊಸದರಲ್ಲಿ ಹಾಗೆ ಮಾತನಾಡಿದರು ಎಂದು ಜನತೆ ಕ್ಷಮಿಸಿದರು. ಮತಾಂತರ, ಚರ್ಚ್‌ಗಳ ಮೇಲೆ ದಾಳಿ, ಪಬ್‌ಮೇಲೆ ದಾಳಿ, ರೈತರ ಕಗ್ಗೊಲೆ ಹೀಗೆ ರಾಜ್ಯದಲ್ಲಿ ಸರಣಿ ಕೃತ್ಯಗಳು ಮೇಲಿಂದ ಮೇಲೆ ನಡೆಯತೊಡಗಿದಾಗ ಆಚಾರ್ಯರ ನಿಜಬಣ್ಣ ಬಯಲಾಯಿತು. ಅವರ `ಶಕ್ತಿ'ಯ ಮೇಲೆ ಸಂಶಯ ಮೂಡತೊಡಗಿತು.&lt;br /&gt;ಮೂರುವರೆ ದಶಕಗಳ ಕಾಲ ವಿಧಾನಪರಿಷತ್‌ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ ಸದನದಲ್ಲಿ ನಡೆಸಿದ ವಾದವಿವಾದಗಳು ಅವರ ಗಂಟಲಿಂದ ಬಂದಿದ್ದವೇ ಎಂದು ಅನುಮಾನ ಪಡುವಷ್ಟು ಆಚಾರ್ಯರು ಎಡಬಿಡಂಗಿಯಾಗಿ ಮಾತಾಡತೊಡಗಿದ್ದರು. ಅವೆಲ್ಲವನ್ನೂ ಜನ ಕ್ಷಮಿಸಿದರು. ಅರವತ್ತರ ಅರಳುಮರುಳು ಎಂದು ಸುಮ್ಮನಾದರು. ಗುಬಾಡ್‌ ಗೃಹಸಚಿವ ಎಂದು ಬೈದು ಸಮಾಧಾನಪಟ್ಟುಕೊಂಡರು.&lt;br /&gt;ಆದರೆ. . .&lt;br /&gt;ಮಾಧ್ಯಮಗಳ ನಿಯಂತ್ರಣಕ್ಕೆ `ಓಂಬುಡ್ಸ್‌ಮನ್‌' ಅರ್ಥಾತ್‌ ಮಾಧ್ಯಮಾಧಿಕಾರಿ ನೇಮಕ ಕುರಿತು ಅವರು ಹರಿಯಬಿಟ್ಟ ಮಾತುಗಳು ಆಚಾರ್ಯರ ಎಳಸುತನವನ್ನು ಪ್ರದರ್ಶಿಸಿಬಿಟ್ಟಿತು. ಜತೆಗೆ ಸಂಘಪರಿವಾರದ ಫ್ಯಾಸಿಸಂ ಧೋರಣೆಗೆ ಕನ್ನಡಿಯನ್ನೂ ಹಿಡಿಯಿತು.&lt;br /&gt;ಮೇಲ್ನೋಟಕ್ಕೆ ಎಳಸುತನದ ಮಾತುಗಾರಿಕೆ ಇದು ಎಂದೆನಿಸಿದರೂ ಅದರ ಆಳದಲ್ಲಿರುವುದು ಫ್ಯಾಸಿಸಂನ ಧೋರಣೆಯೇ. ಸರ್ವಾಧಿಕಾರದ ಮೊದಲ ಶತ್ರು ಎಂದರೆ ವಾಕ್‌ಸ್ವಾತಂತ್ರ್ಯ. ಇತಿಹಾಸದಲ್ಲಿ ಹಿಟ್ಲರ್‌, ಮುಸಲೋನಿ, ತಾಲಿಬಾನ್‌, ಪರ್ವೇಜ್‌ ಮುಷ್‌ರಫ್‌, ಇಂದಿರಾಗಾಂಧಿ ಎಲ್ಲರೂ ಮಾಡಿದ್ದು ಇದನ್ನೆ. ಮೊದಲು ಮಾಧ್ಯಮಗಳನ್ನು ಹದ್ದುಬಸ್ತಿನಲ್ಲಿಟ್ಟರೆ ತಮ್ಮ ನೆಲದಲ್ಲಿ ನಡೆಯವುದು ಹೊರಜಗತ್ತಿಗೆ ತಿಳಿಯುವುದಿಲ್ಲವೆಂಬ ಹುಂಬತನದಲ್ಲಿ ಎಲ್ಲಾ ಸರ್ವಾಧಿಕಾರಿಗಳು ವರ್ತಿಸುತ್ತಾರೆ. ಹಾಗೆಂದು ಅವರು ನಂಬಿರುತ್ತಾರೆ. ಹಾಗಂತ ಹಿಟ್ಲರ್‌ನಿಂದ ಇಂದಿರಾಗಾಂಧಿಯವರೆಗೆ ಎಲ್ಲಾ ಸರ್ವಾಧಿಕಾರಿಗಳು ಧೂರ್ತತನವನ್ನು ಮಾಡಿದ್ದಾರೆ. ಮೇಲ್ನೋಟಕ್ಕೆ ದಡ್ಡತನದ ವರ್ತನೆಯಂತೆ ಕಾಣಿಸುತ್ತಲೇ ಎಲ್ಲವನ್ನೂ ನಿಯಂತ್ರಿಸುವ, ನಿರ್ಬಂಧಿಸುವ ಕಠೋರ ಕಾನೂನನ್ನು ಜಾರಿಗೊಳಿಸುವ ಹುನ್ನಾರ ಇದರ ಹಿಂದಿರುತ್ತದೆ.&lt;br /&gt;ಸ್ವಭಾವತಃ ಹಾಗೂ ಸೈದ್ಧಾಂತಿಕವಾಗಿ ಫ್ಯಾಸಿಸಂನ್ನು ಬೆಂಬಲಿಸುವ ಬಿಜೆಪಿ ಮತ್ತದರ ಪರಿವಾರದ ಸಂಘಟನೆಗಳು ತಮ್ಮ ಚರಿತ್ರೆಯುದ್ದಕ್ಕೂ ಸರ್ವಾಧಿಕಾರಿ ವರ್ತನೆಯನ್ನು ಪ್ರೋತ್ಸಾಹಿಸುತ್ತಲೇ ಬಂದಿವೆ. ಸಂಘಪರಿವಾರದ ಸಂವಿಧಾನವೆಂದೇ ಖ್ಯಾತವಾದ ಗೋಳ್ವಾಲ್ಕರ್‌ರ ಬಂಚ್‌ ಆಫ್‌ ಥಾಟ್ಸ್‌(ಚಿಂತನಗಂಗಾ)ನ ಮೂಲ ಆಶಯವೇ ಅದು. ಕಚ್ಚಿ ವಿಷಕಾರುವ ಹಾವನ್ನು ಕಂಡರೆ ಹಾಗೆಯೇ ಬಿಡು. ಆದರೆ ಕಮ್ಯುನಿಸ್ಟರು, ಮುಸ್ಲಿಂರು, ಕ್ರೈಸ್ತರನ್ನು ಕಂಡರೆ ಕೊಲ್ಲು ಎಂಬರ್ಥ ಮಾತುಗಳನ್ನು ಚಿಂತನಗಂಗಾ ಅನೂಚಾನವಾಗಿ ವಿವರಿಸುತ್ತದೆ. ಹಿಂದೂ ಮತಾಂಧರ ಅಧಿಕಾರವನ್ನು ಸ್ಥಾಪಿಸಿ, ಉಳಿದೆಲ್ಲಾ ಸಮುದಾಯಗಳನ್ನು ತುಳಿಯುವ ಸಂಚನ್ನು ಸಂಘಪರಿವಾರ ಹೊಂದಿದೆ. ಕೇಂದ್ರದಲ್ಲಿ ಒಮ್ಮೆ ಪೂರ್ಣ ಪ್ರಮಾಣದ ಅಧಿಕಾರವನ್ನು ಬಿಜೆಪಿ ಹಿಡಿದರೆ ಇವೆಲ್ಲಾ ಸತ್ಯವಾಗಲಿವೆ.&lt;br /&gt;ತಮಗೆ ಸಹ್ಯವೆನಿಸದ್ದನ್ನು ನಾಶಗೊಳಿಸುವ, ತಮ್ಮ ಸಿದ್ಧಾಂತ ಒಪ್ಪದೇ ಇದ್ದವರನ್ನು ಹಲ್ಲೆ ನಡೆಸಿ ನಿರ್ಮೂಲನೆ ಮಾಡುವ, ತಮ್ಮದನ್ನೇ ಇನ್ನೊಬ್ಬರ ಮೇಲೆ ಹೇರುವ ಅಪ್ರಜಾಪ್ರಭುತ್ವವಾದಿ ವರ್ತನೆ ಸಂಘಪರಿವಾರದ್ದು. ಬಾಬರಿ ಮಸೀದಿ ಕೆಡವಿದ ಹಿಂದೆ, ಗುಜರಾತಿನ ನರಮೇಧ, ಜನಾಂಗೀಯ ದ್ವೇಷ, ಒರಿಸ್ಸಾದಲ್ಲಿ ಇಬ್ಬರು ಹಸುಮಕ್ಕಳ ಸಹಿತ ಪಾದ್ರಿ ಗ್ರಹಾಂಸ್ಟೈನ್‌ ಕೊಲೆ, ಹರ್ಯಾಣದ ಜಜ್ಜಾರ್‌ನಲ್ಲಿ ಸತ್ತ ದನದ ಮಾಂಸ ತಿಂದರೆಂಬ ಆರೋಪ ಹೊರಿಸಿ 7 ಜನ ದಲಿತರ ಚರ್ಮ ಸುಲಿತು ಕೊಲೆಗೈದದ್ದು, ಆದಿ ಉಡುಪಿಯಲ್ಲಿ ಗೋ ಸಾಗಿಸಿದರೆಂದು ಇಬ್ಬರು ಮುಸ್ಲಿಮರನ್ನು ಬೆತ್ತಲು ಗೊಳಿಸಿದ್ದು, ಇತ್ತೀಚೆಗೆ ಒರಿಸ್ಸಾದಲ್ಲಿ ಕ್ರೈಸ್ತ ಸಂನ್ಯಾಸಿನಿಯ ಮೇಲೆ ಸಾಮೂಹಿಕ ಅತ್ಯಾಚಾರ, ಜತೆಗೆ ನಡೆದ ಬರ್ಬರ ದಾಳಿ, ಕರ್ನಾಟಕದಲ್ಲಿ ಚರ್ಚ್‌ಗಳ ಮೇಲೆ ನಡೆದ ಸರಣಿ ದಾಳಿ, ಪಬ್‌ನಲ್ಲಿ ಯುವತಿಯರಿಗೆ ಹಿಗ್ಗಾಮುಗ್ಗಾ ಹೊಡೆದಿದ್ದು, ಕೇರಳದ ಶಾಸಕ ಪುತ್ರಿ ಮುಸ್ಲಿಮ್‌ ಸ್ನೇಹಿತನ ಜತೆಗೆ ಹೋಗುತ್ತಿದ್ದಳೆಂದು ಹಿಂಸಿಸಿದ್ದು. . . ಹೀಗೆ ಉದ್ದಕ್ಕೆ ಹೇಳುತ್ತಾ ಹೋಗಬಹುದು.&lt;br /&gt;ಗೃಹಸಚಿವ ವಿ.ಎಸ್‌. ಆಚಾರ್ಯರು ಮಾಧ್ಯಮಾಧಿಕಾರಿ ನೇಮಿಸಬೇಕೆಂಬ ಹೇಳಿಕೆಯನ್ನು ಈ ಎಲ್ಲದನ್ನೂ ಹಿಂದಿಟ್ಟುಕೊಂಡು ನೋಡಬೇಕು. ಸಂಘಪರಿವಾರದ ಎಲ್ಲಾ ದುಷ್ಕೃತ್ಯಗಳು ಇಡೀ ಭಾರತಕ್ಕೆ, ಜಗತ್ತಿಗೆ ಗೊತ್ತಾಗಿದ್ದು ಮಾಧ್ಯಮಗಳ ಮೂಲಕವೇ. ಮಾಧ್ಯಮಗಳ ಧ್ವನಿಯಿಲ್ಲದಿದ್ದರೆ ಇವ್ಯಾವ ಅನಾಹುತಗಳು ವಿಶ್ವಕ್ಕೆ ಗೊತ್ತಾಗುತ್ತಿರಲಿಲ್ಲ. ಬಿಜೆಪಿ ಸರ್ಕಾರ ಸರ್ವಜನಾದರಣೀಯವಾಗಿ, ಜನರಿಗೆ ನೆಮ್ಮದಿ ಕೊಡುತ್ತಾ ಅಧಿಕಾರ ನಡೆಸುತ್ತಿದೆ ಎಂದು ಎಲ್ಲರೂ ನಂಬುತ್ತಿದ್ದರು.&lt;br /&gt;ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೋಕಾಲ್ಡ್‌ ಸಂಘಪರಿವಾರದ ಸಂಘಟನೆಗಳು ನಡೆಸುತ್ತಿರುವ ದುಷ್ಟತನಗಳು ಇಡೀ ಜಗತ್ತಿಗೆ ಗೊತ್ತಾಗಿ, ವ್ಯಾಪಕ ಖಂಡನೆಗಳು ವ್ಯಕ್ತವಾಗುತ್ತಿವೆ. ಮಾಧ್ಯಮಗಳ ಗಂಟಲನ್ನೇ ಕಟ್ಟಿ ಬಿಟ್ಟರೆ ಧ್ವನಿಯೇ ಹೊರಡದಂತಾಗಿ ಎಲ್ಲವೂ ಗಪ್‌ಚುಪ್‌ ಆಗುತ್ತವೆ. ಆಗ ಸರ್ಕಾರ, ಸಂಘಪರಿವಾರ ಆಡಿದ್ದೇ ಆಟವಾಗಿ ಬಿಡುತ್ತದೆ ಎಂಬ ಲೆಕ್ಕಾಚಾರ ಆಚಾರ್ಯರದ್ದು.&lt;br /&gt;ಪಬ್‌ದಾಳಿ ಮಹಿಳೆಯರ ಬಗ್ಗೆ ಸಂಘಪರಿವಾರ ಧೋರಣೆಯನ್ನು ಬಹಿರಂಗಪಡಿಸಿದೆ. ಈ ಘಟನೆ ಕುರಿತು ಮಾಧ್ಯಮಗಳು ಅತಿರಂಜಿತವಾದ ವರದಿಯನ್ನು ಪ್ರಕಟಿಸಿದ್ದೂ ಸುಳ್ಳಲ್ಲ. ಒಟ್ಟಾರೆ ಸುದ್ದಿ ಶ್ರೀರಾಮಸೇನೆಯ ವಿರುದ್ಧವೆನಿಸಿದರೂ ಅದರ ಆಂತ್ಯಿಕ ಪರಿಣಾಮ ಪ್ರಮೋದ ಮುತಾಲಿಕ್‌ಗೆ ವಿಶ್ವಖ್ಯಾತಿಯನ್ನು ತಂದುಕೊಟ್ಟು ಬಿಟ್ಟಿತು. ಒಂದೇ ರಾತ್ರಿಯಲ್ಲಿ ಮುತಾಲಿಕ್‌ ಹೀರೋ ಆಗಿಬಿಟ್ಟ. ನರೇಂದ್ರ ಮೋದಿಗೆ ಸಿಕ್ಕಷ್ಟೇ ಪ್ರಚಾರ ಮುತಾಲಿಕ್‌ಗೂ ಸಿಕ್ಕಿಬಿಟ್ಟಿತು.&lt;br /&gt;ಮಾಧ್ಯಮಗಳು ಅನಗತ್ಯವೆನ್ನುವಷ್ಟು ವೈಭವೀಕರಣವನ್ನು ಮುತಾಲಿಕ್‌ಗೆ ಕೊಟ್ಟುಬಿಟ್ಟವು. ಅದು ತಪ್ಪಬೇಕು. ನೆಗೆಟಿವ್‌ ಸುದ್ದಿ ಮಾಡುತ್ತಲೇ ಪಾಸಿಟಿವ್‌ ಇಮೇಜ್‌ ಕ್ರಿಯೇಟ್‌ ಮಾಡುವುದು ಮಾಧ್ಯಮಗಳ ದೌರ್ಬಲ್ಯ ಕೂಡ. ಆದರೆ ಮಂಗಳೂರಿನಲ್ಲಿ ನಡೆದ ಯುವತಿಯರ ಮೇಲಿನ ಹಿಂಸಾಚಾರ, ಸಂಘಪರಿವಾರದ ನಿಜಬಣ್ಣ ಹಾಗೂ ಇಲ್ಲಿಯವರೆಗೆ ಬಿಜೆಪಿ ಬೆಂಬಲಕ್ಕಿದ್ದ ಸಮಾಜದ ದೊಡ್ಡ ಹಾಗೂ ಪ್ರಭಾವಿ ಸಮೂಹವಾದ ಮಧ್ಯಮವರ್ಗಕ್ಕೂ ಹೇಗೆ ಬಿಜೆಪಿ ವಿರುದ್ಧವಾದುದು ಎಂಬುದು ಇದರಿಂದ ಸ್ವತಃ ಮಧ್ಯಮವರ್ಗದವರಿಗೂ ಗೊತ್ತಾಯ್ತು.&lt;br /&gt;ಮಾಧ್ಯಮದವರಿಗೆ ಸ್ವಯಂ ನಿಯಂತ್ರಣ ಬೇಕೆಂಬುದರ ಬಗ್ಗೆ ಯಾರದ್ದೂ ವಿರೋಧವಿಲ್ಲ. ಸದ್ಯದ ವಿದ್ಯುನ್ಮಾನ ಮಾಧ್ಯಮಗಳ ಸುದ್ದಿಯ ಆತುರಗಾರಿಕೆಯಲ್ಲಿ ಅನೇಕ ಅಪಾಯಗಳು ಸಂಭವಿಸುತ್ತಿವೆ. ಅದರ ನಿಯಂತ್ರಣಕ್ಕೆ ಪ್ರೆಸ್‌ಕೌನ್ಸಿಲ್‌ ಇದೆ. ಪತ್ರಕರ್ತರದ್ದೇ ಆದ ಸಂಘಟನೆಗಳಿವೆ. ಅದನ್ನು ಆಂತರಿಕವಾಗಿ ರೂಪಿಸಿಕೊಳ್ಳಬೇಕಾದ ದರ್ದು ಮಾಧ್ಯಮಗಳಿಗಿದೆ.&lt;br /&gt;ಹಾಗಂತ ವಿ.ಎಸ್‌. ಆಚಾರ್ಯ, ಪ್ರಮೋದಮುತಾಲಿಕ್‌ ಈ ರೀತಿ ಮಾತನಾಡಿದರೆ ಅದನ್ನು ಬೇರೆಯದೇ ಆದ ಆಯಾಮ, ಅನುಮಾನಗಳಿಂದ ನೋಡಬೇಕಾಗುತ್ತದೆ. ಸಂಘಪರಿವಾರದ ಆಶಯಗಳನ್ನು ಕಾರ್ಯರೂಪಕ್ಕೆ ಇಳಿಸುವ ಹಿಡೆನ್‌ ಅಜೆಂಡ್‌ ಇದರ ಹಿಂದಿರುತ್ತದೆ. ಹಾಗಾಗಿಯೇ ಆಚಾರ್ಯರ ಓಂಬುಡ್ಸ್‌ಮನ್‌ ಖಂಡಿತಾ ಬೇಡ. ಇವತ್ತು ಅದಕ್ಕೆ ಒಪ್ಪಿಗೆ ಸೂಚಿಸಿದ ತಕ್ಷಣವೇ ನಾಳೆ ಮಾಧ್ಯಮದವರು ಸರ್ಕಾರಕ್ಕೆ ತೋರಿಸಿಯೇ ಸುದ್ದಿಯನ್ನು ಬಿತ್ತರ ಮಾಡಬೇಕು. ಜನರ ಓಡಾಡುವುದಕ್ಕೂ ಸರ್ಕಾರದ ಪರ್ಮಿಶನ್‌ ತೆಗೆದುಕೊಳ್ಳಬೇಕು. ನ್ಯಾಯಾಲಯ ತೀರ್ಪು ಕೊಡುವುದಕ್ಕೂ ಸರ್ಕಾರದ ಒಪ್ಪಿಗೆ ಪಡೆಯಬೇಕು. ಕೊನೆಗೆ ಮತಗಟ್ಟೆಗೆ ಹೋಗಲು ನಮ್ಮ ಒಪ್ಪಿಗೆ ಬೇಕೆಂಬ ನಿಲುವಿಗೆ ಸರ್ಕಾರ, ಸಂಘಪರಿವಾರ ಬಂದು ನಿಲ್ಲುತ್ತದೆ.&lt;br /&gt;ಏಕೆಂದರೆ ಪಬ್‌ಗೆ ಹೋಗಬಾರದು, ಪ್ರೇಮಿಗಳ ದಿನಾಚರಣೆ ಆಚರಿಸಬಾರದು, ಮುಸ್ಲಿಮ್‌ ಹುಡುಗರ ಜತೆ ಓಡಾಡಬಾರದು, ಕ್ರೈಸ್ತ ಶಿಕ್ಷಣಸಂಸ್ಥೆಗಳು ಪ್ರತಿಭಟನೆ ಮಾಡಬಾರದು ಎಂದು ಫರ್ಮಾನು ಹೊರಡಿಸಿರುವ ಸಂಘಪರಿವಾರ/ಸರ್ಕಾರ ಇವೆಲ್ಲವನ್ನೂ ಮಾಡುವುದಿಲ್ಲವೆಂದು ಹೇಗೆ ನಂಬುವುದು? ಓಂಬುಡ್ಸ್‌ಮನ್‌ನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-3355426869282738850?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/3355426869282738850/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=3355426869282738850' title='1 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/3355426869282738850'/><link rel='self' type='application/atom+xml' href='http://www.blogger.com/feeds/8477112084544236406/posts/default/3355426869282738850'/><link rel='alternate' type='text/html' href='http://horaganavanu.blogspot.com/2009/02/blog-post_452.html' title='ಆಚಾತುರ್ಯ ಆಚಾರ್ಯ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>1</thr:total></entry><entry><id>tag:blogger.com,1999:blog-8477112084544236406.post-7805239801973559198</id><published>2009-02-16T07:27:00.000-08:00</published><updated>2009-02-16T07:28:37.334-08:00</updated><title type='text'>ಕನ್ನಡಪ್ರಭದ ಬಾರುಕೋಲು</title><content type='html'>ಪತ್ರಕರ್ತರು ಇತರರು ಹೇಳಿದ್ದನ್ನು ಯಥಾವತ್ತಾಗಿ ಅಕ್ಷರರೂಪಕ್ಕೆ ಇಳಿಸುವ ಗುಮಾಸ್ತರೇ? ಆತ/ಆಕೆಗೆ ತನ್ನದೇ ಆದ ಧೋರಣೆ ಇರಬಾರದೇ? ಪತ್ರಿಕೆ/ಮಾಧ್ಯಮಗಳ ಮುಖೇನ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕೇ?&lt;br /&gt;ಈ ಪ್ರಶ್ನೆಗಳಿಗೆ ಹಲವು ರೀತಿಯ ಅಭಿಪ್ರಾಯ ಬೇಧಗಳು ಇರಲು ಸಾಧ್ಯ. ಒಬ್ಬೊಬ್ಬರು ಒಂದೊಂದು ರೀತಿಯಾಗಿಯೂ ಹೇಳಬಹುದು. `ಆ್ಯಕ್ಟಿವಿಸಂ' ಎಂಬುದು ಅನೇಕ ಪತ್ರಕರ್ತರಿಗೆ ತಥ್ಯವಾಗದ ಸಂಗತಿ. ಅದರಿಂದ ದೂರವುಳಿದ ಗುಮಾಸ್ತಿಕೆ ಮಾಡುವವರೇ ಜಾಸ್ತಿ. ಕನ್ನಡ, ನೆಲ-ಜಲ, ಸೌಹಾರ್ದ, ಜಾತಿ ಕ್ರೌರ್ಯ ಮತ್ತಿತರ ಸಂಗತಿಗಳು ಉದ್ಭವವಾದಾಗಲಾದರೂ ಪತ್ರಕರ್ತರೊಳಗಿನ `ನಿಜ ಮನುಷ್ಯ' ಎದ್ದು ಪ್ರಖರಗೊಳ್ಳುತ್ತಾನಾ? `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ' ಎಂಬ ರಾಷ್ಟ್ರಕವಿ ಕುವೆಂಪುರವರ ವಾದವನ್ನು ಒಪ್ಪುತ್ತಾರಾ? ಎಂಬಿತ್ಯಾದಿ ಉಸಾಬರಿಯೇ ಬೇಡ ಎನ್ನುವ ಪತ್ರಕರ್ತರೇ ಹೆಚ್ಚು.&lt;br /&gt;ಅಂತಹ ಹೊತ್ತಿನಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ಕಾರ್ಯಶೀಲ ಪತ್ರಕರ್ತನ ನಿಜ ಹೊಣೆಯನ್ನು ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಅಪ್ರತ್ಯಕ್ಷವಾಗಿ ಪ್ರತಿಬಿಂಬಿಸಿರುತ್ತಾರೆ. ಅಂತಹದೊಂದು ಘಟನೆ ಇತ್ತೀಚೆಗೆ ನಡೆಯಿತು.&lt;br /&gt;ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಮಾಧ್ಯಮದಲ್ಲಿ ಓದಿ ಪಿಯುಸಿ/ಎಸ್ಸೆಸ್ಸೆಲ್ಸಿಯಲ್ಲಿ ಅತೀಹೆಚ್ಚು ಅಂಕಪಡೆವರಿಗೆ 15-10 ಸಾವಿರ ರೂ. ನಗದು ಬಹುಮಾನ ನೀಡುವ ಸಮಾರಂಭವದು. ಬೆಂಗಳೂರಿನ ಶಿಕ್ಷಕರ ಸದನಲ್ಲಿ ಇದು ಏರ್ಪಾಟಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಕನ್ನಡಪ್ರಭ ಸಂಪಾದಕ ಎಚ್‌.ಆರ್‌. ರಂಗನಾಥ್‌ ಅಂದು ವೇದಿಕೆಯಲ್ಲಿದ್ದ ಸರ್ಕಾರಿ ವರಿಷ್ಠರಿಗೆ ಬಾರುಕೋಲು ಬೀಸಿದ್ದರು. ಚಾಟಿಯಂತ ಅವರ ಮೊನಚು ನಾಲಿಗೆ ಅಧಿಕಾರವಂತರಿಗೆ ದಿಗಿಲು ಹುಟ್ಟಿಸಿತ್ತು. ಸಚಿವರು, ಅಧಿಕಾರಿಗಳು ತಲೆ ಕೆಳಗೆ ಹಾಕಿ ಕುಳಿತಿದ್ದರು. ರಂಗನಾಥ ಮಾತನಾಡುವ ಧಾಟಿ ರೈತಸಂಘದ ಧುರೀಣ ಪ್ರೊ ಎಂ.ಡಿ. ನಂಜುಂಡಸ್ವಾಮಿಯವರ ಮಾತಿನ ಹರಿತ ನೆನಪಾಗುತ್ತಿತ್ತು. ವೇದಿಕೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ, ವಕ್ಫ್‌ಸಚಿವ ಮುಮ್ತಾಜ್‌ ಅಲಿಖಾನ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್‌ ಇದ್ದರು.&lt;br /&gt;ರಂಗನಾಥ್‌ ಮಾತನಾಡಿದ್ದು ಯಥಾವತ್ತು ಇಲ್ಲಿದೆ.&lt;br /&gt;ಇದು ನಾಚಿಕೆಗೇಡಿನ ಸಮಾರಂಭ. ಖಂಡಿತಾ ಸಂಭ್ರಮ ಪಡುವ ಸಮಾರಂಭವಿದಲ್ಲ. ಕನ್ನಡ ಮಾಧ್ಯಮದಲ್ಲಿ ಅನಿವಾರ್ಯವಾಗಿ ಓದುತ್ತಿರುವವರು ಕರೆತಂದು 10 ಸಾವಿರ ಕೊಟ್ಟು ಸನ್ಮಾನಿಸುತ್ತಿದ್ದೀರಲ್ಲಾ ನಿಮಗೆ ನಾಚಿಕೆಯಾಗಬೇಕು. ಕನ್ನಡ ಅನುಷ್ಠಾನ ಮಾಡದ ಸರ್ಕಾರಗಳು ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಈ ರೀತಿಯ ಸಂಭ್ರಮ ಆಚರಣೆಗೆ ಒಡ್ಡಿಕೊಳ್ಳೊತ್ತದೆ ಎಂಬುದು ತಮ್ಮ ಅನಿಸಿಕೆ.&lt;br /&gt;ಕನ್ನಡವನ್ನೇ ಓದೋಲ್ಲ ಎನ್ನುವವರಿಗೆ ಏನೂ ಮಾಡದ ಪರಿಸ್ಥಿತಿಯಲ್ಲಿರುವ ಸರ್ಕಾರ ಅನಿವಾರ್ಯವಾಗಿ ತಮ್ಮ ಪಾಡಿಗೆ ಕನ್ನಡದಲ್ಲಿ ಓದುತ್ತಿರುವವರಿಗೆ ಸನ್ಮಾನ ಮಾಡುತ್ತಿರುವುದಕ್ಕೆ ನಾಚಿಕೆಪಡಬೇಕು.&lt;br /&gt;ಕನ್ನಡದ ಬಗ್ಗೆ ಮಾತನಾಡಿದರೆ, ಕನ್ನಡದ ಪರವಾಗಿ ಹೋರಾಟ ಮಾಡಿದರೆ, ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದು ಬೀದಿಯಲ್ಲಿ ನಿಂತು ಘೋಷಿಸಿದರೆ `ರೌಡಿ'ಗಳು ಎಂದು ಕರೆಯುತ್ತೀರಿ. ಸರ್ಕಾರದವ್ರು ಗೂಂಡಾಕಾಯ್ದೆ ಬಳಸುತ್ತಾರೆ. ಹಾಗಾದರೆ ಇನ್ನೂ ಕನ್ನಡ ಅನುಷ್ಠಾನವಾಗದೇ ಇರುವ ಬಗ್ಗೆ ಕನ್ನಡಿಗರು ಸುಮ್ಮನೇ ಕೂರಬೇಕೇ?&lt;br /&gt;ಕನ್ನಡದ ಪರವಾಗಿ ಸ್ವಲ್ಪ ಗಟ್ಟಿಧ್ವನಿಯಲ್ಲಿ ಕನ್ನಡಪ್ರಭ ಬರೆದಾಗ ಮಾರನೇ ದಿನ ಫೋನು ಬರುತ್ತದೆ. ರಂಗನಾಥ್‌, ತುಂಬಾ ಉದ್ವೇಗಗೊಂಡಿದ್ದೀರಿ, ಅಷ್ಟು ಉದ್ವೇಗ ಕನ್ನಡಪ್ರಭಕ್ಕೆ ಏಕೆ? ಎಂದು ಪ್ರಶ್ನೆ ಕೇಳುತ್ತಾರೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕನ್ನಡ ಪ್ರಭ ಬರೆಯದೇ ವಾಷಿಂಗ್‌ಟನ್‌ ಪೋಸ್ಟ್‌ ಬರೆಯಲು ಸಾಧ್ಯವೇ? ಕನ್ನಡದ ಪತ್ರಿಕೆಗಳು ಈ ಬದ್ಧತೆ ತೋರಿಸಬೇಕಲ್ಲವೆ?&lt;br /&gt;ಸರ್ಕಾರಗಳು, ರಾಜಕಾರಣಿಗಳು ಕನ್ನಡ ಪರವಾಗಿರುವಂತೆ ಪತ್ರಿಕೆಗಳು ಎಷ್ಟು ಬರೆದರೂ ಪ್ರಯೋಜನವಾಗಿಲ್ಲ. ವಿವಿಧ ರೀತಿಯ ಹೋರಾಟಗಾರರು ತರಹೇವಾರಿ ಹೋರಾಟ ಮಾಡಿದರೂ ಸರ್ಕಾರ ಏನೂ ಮಾಡಿಲ್ಲ. ಸಾಹಿತಿ, ಬುದ್ದಿಜೀವಿಗಳು ಹೇಳಿದ್ದಾಯ್ತು. ಆದರೂ ಇಲ್ಲಿಯವರೆಗಿನ ಯಾವುದೇ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ. ಈ ಸರ್ಕಾರ ಒಂದುಮಟ್ಟಿಗೆ ಮಠಾಧೀಶರು ಹೇಳಿದ್ದನ್ನೂ ಕೇಳುತ್ತಿದೆ. ವೇದಿಕೆಯಲ್ಲಿ ಸುತ್ತೂರು ಮಠಾಧೀಶರು ಈ ಬಗ್ಗೆ ಸರ್ಕಾರಕ್ಕೆ ತಿಳಿಹೇಳಬೇಕು.&lt;br /&gt;ಎಲ್ಲಕ್ಕಿಂತ ಮುಖ್ಯವಾಗಿ ದೂರದೂರದ ಜಿಲ್ಲೆಗಳಿಂದ ಬಂದಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಸರ್ಕಾರಕ್ಕೆ ಸರಿಯಾಗಿ ಪಾಠ ಕಲಿಸಬೇಕು. ಇಡೀ ಜನ ಸರ್ಕಾರಕ್ಕೆ ತಿಳಿಹೇಳಬೇಕು.&lt;br /&gt;ರಾಜಕಾರಣಿಗಳು ವೋಟುಬ್ಯಾಂಕ್‌ ರಾಜಕಾರಣ ಮಾಡುತ್ತಾರೆಂದು ನಾವು ಹೇಳುತ್ತೇವೆ. ಹಾಗಿದ್ದರೆ ಕರ್ನಾಟಕದಲ್ಲಿ ಇಲ್ಲಿಯವರೆಗೆ ಆಳಿದ ಸರ್ಕಾರಗಳು ಕನ್ನಡಿಗರ ವೋಟು ಬ್ಯಾಂಕ್‌ ಆಧಾರದ ಮೇಲೆ ತಾನೇ ಗೆದ್ದಿರುವುದು. ಕೆಲವೇ ಜನ ಕನ್ನಡೇತರರಿಗೆ ಹೆದರಿ ಕನ್ನಡ ಅನುಷ್ಠಾನ ಮಾಡದೇ ಇರುವುದು ಕನ್ನಡಿಗರಿಗೆ ಬಗೆವ ದ್ರೋಹ.&lt;br /&gt;ಬೆಂಗಳೂರಿನಲ್ಲಿ ಕನ್ನಡ ಸತ್ತುಹೋಗಿ ಬಹಳ ದಿನಗಳಾಗಿವೆ. ಹಾಗಿದ್ದೂ ಕನ್ನಡ ಕಲಿಯದ ಅಧಿಕಾರಿಗಳನ್ನು ಇನ್ನೂ ಯಾಕೆ ಇಟ್ಟುಕೊಂಡಿದ್ದೀರಿ. ಕನ್ನಡವನ್ನೇ ಕಲಿಯದ ಅಧಿಕಾರಿಗಳು ಕನ್ನಡ ಉದ್ದಾರವನ್ನೇನು ಮಾಡಿಯಾರು? ಇಲ್ಲಿಯವರೆಗೆ ಆಳಿದ ಯಾವ ಸರ್ಕಾರಗಳು ಕನ್ನಡದ ಸರ್ಕಾರಗಳಲ್ಲ. ಏಕೆಂದರೆ ಅವು ಕನ್ನಡಿಗರಿಗಾಗಿ ಏನೂ ಮಾಡಿಲ್ಲ.&lt;br /&gt;ನಾನು ಇಷ್ಟೆಲ್ಲಾ ಹೇಳಿದ್ದರಿಂದ ಮುಖ್ಯಮಂತ್ರಿ ಚಂದ್ರು ಅಂದುಕೊಳ್ಳುತ್ತಿದ್ದಾರೆ. ಈ ರಂಗನ್ನ ಯಾಕೆ ಕರೆದನಪ್ಪಾಂತ. ಆದರೆ ಕಾರ್ಯಕ್ರಮಕ್ಕೆ ತನ್ನನ್ನು ಆಹ್ವಾನಿಸಿದಾಗಲೇ ಇದೇ ರೀತಿ ಮಾತನಾಡಬೇಕೆಂದುಕೊಂಡು ಬಂದಿದ್ದೆ. ಕನ್ನಡದ ವಿಷಯದಲ್ಲಿ ಈ ರೀತಿ ಮಾತನಾಡದೇ ಇನ್ನು ಹೇಗೆ ಮಾತನಾಡಬೇಕು?&lt;br /&gt;ಒಬ್ಬರು ಮುಖ್ಯಮಂತ್ರಿಗಳು ತಮ್ಮ ಬಳಿಬಂದು ದೆಹಲಿಗೆ ಹೋದರೆ ಅಲ್ಲಿನ ಪತ್ರಕರ್ತರು `ಕೆನ್‌ ಯು ಸ್ಪೀಕ್‌ ಇನ್‌ ಇಂಗ್ಲಿಷ್‌' ಎಂದು ಕೇಳುತ್ತಾರೆ ಎಂದಿದ್ದರು. ಹಾಗನ್ನಿಸಿಕೊಂಡು ಸುಮ್ಮನೆ ಬಂದಿದ್ದೀರಲ್ಲಾ, ನಿಮ್ಮ ಮೂರ್ಖತನಕ್ಕಿಷ್ಟು ಎಂದು ಬೈದಿದ್ದಲ್ಲದೇ, `ರಷ್ಯದ, ಚೀನಾದ ಪ್ರಧಾನಿ ಬಂದರೆ ಇದೇ ಪ್ರಶ್ನೆ ಕೇಳುತ್ತೀರಾ'ಎಂದು ಮರುಪ್ರಶ್ನೆ ಹಾಕಬೇಕಿತ್ತು ಎಂದು ಸಲಹೆ ನೀಡಿದ್ದೆ. ಮತ್ತೊಂದು ಬಾರಿ ದೆಹಲಿಗೆ ಹೋದಾಗ ಅವರು ಹಾಗೆಯೇ ಕೇಳಿದ್ದರಂತೆ. ಕನ್ನಡ ಮಾತನಾಡುವುದನ್ನು ನಾವೇ ಕಲಿಯದಿದ್ದರೆ ಹೇಗೆ?&lt;br /&gt;ಮುಂದೆ ಮಾತನಾಡುವವರು ಕನ್ನಡದ ಬಗ್ಗೆ ಹೀಗೆ ಮಾತನಾಡಲಿ ಎಂದು ಖಾರವಾಗಿಯೇ ಮಾತನಾಡಿದ್ದೇನೆ. ವೇದಿಕೆಯ ಮೇಲಿದ್ದವರಿಗೆ ನನ್ನ ಮಾತುಗಳಿಂದ ಮುಜುಗರವಾಗಿರಬಹುದು. ಆದರೂ ಪರವಾಗಿಲ್ಲ. ನನ್ನ ಮಾತಿನ ಧಾಟಿಯೇ ಇದು.&lt;br /&gt;ರಂಗನಾಥ್‌ ಮಾತುಕೇಳಿ ಮುಖ್ಯಮಂತ್ರಿ ಚಂದ್ರು ಒಳಗೊಳಗೆ ಖುಷಿಗೊಂಡರೆ ಸಚಿವೆ ಶೋಭಾ ತುಂಬಾ ಮುಜುಗರಕ್ಕೀಡಾಗಿದ್ದರು. ಆನಂತರದ ಮಾತುಗಳಲ್ಲಿ ರಂಗನಾಥರವರ ಮಾತುಗಳನ್ನು ಅವರು ಸಮರ್ಥಿಸಿಕೊಂಡರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-7805239801973559198?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/7805239801973559198/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=7805239801973559198' title='1 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/7805239801973559198'/><link rel='self' type='application/atom+xml' href='http://www.blogger.com/feeds/8477112084544236406/posts/default/7805239801973559198'/><link rel='alternate' type='text/html' href='http://horaganavanu.blogspot.com/2009/02/blog-post_7528.html' title='ಕನ್ನಡಪ್ರಭದ ಬಾರುಕೋಲು'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>1</thr:total></entry><entry><id>tag:blogger.com,1999:blog-8477112084544236406.post-2918840343854026866</id><published>2009-02-16T07:22:00.001-08:00</published><updated>2009-02-16T07:22:50.521-08:00</updated><title type='text'>ಅಕ್ಷರ ವಂಚಿತರಿಂದ `ಅಕ್ಷರಸ್ಥ'ರಿಗೆ ಕಾವ್ಯಸ್ಪರ್ಧೆ</title><content type='html'>&lt;p&gt;&lt;strong&gt;*ಬೆಂಗಳೂರಿನ ಸ್ಲಮ್‌ನಿವಾಸಿಗಳ ಸಾಹಸ&lt;br /&gt;*ಸ್ಪರ್ಧೆಗೆ ಬಂದ ಕವನಗಳ ಸಂಖ್ಯೆ ಇನ್ನೂರು&lt;br /&gt;&lt;/strong&gt;&lt;/p&gt;&lt;p&gt;ಅನಿವಾರ್ಯ ಕಾರಣದಿಂದಲೋ, ಹುಡುಗಾಟಿಕೆಯ ಉಮೇದಿನಿಂದಲೋ ಶಾಲೆ ಬಿಟ್ಟು, ಅಕ್ಷರವಂಚಿತರಾದ ಯುವಕ/ಯುವತಿಯ ಕೂಟವೊಂದು ಕಾಲೇಜು ಅಧ್ಯಾಪಕರಿಗೆ, ಪ್ರೌಢಶಾಲೆ ಶಿಕ್ಷಕರಿಗೆ ಕಾವ್ಯಸ್ಪರ್ಧೆ ಏರ್ಪಡಿಸಿ ದಾಖಲೆ ನಿರ್ಮಿಸಿದೆ.&lt;br /&gt;ಕೊಳಗೇರಿಯಲ್ಲಿ ಜೀವನ ಸಾಗಿಸುತ್ತಾ ಹೊಟ್ಟೆ ಪಾಡಿಗೆ ಗಾರೆ ಕೆಲಸ, ಮೂಟೆ ಹೋರುವುದು, ಕಾರು ತೊಳೆಯುವುದು, ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವವರೇ ಸೇರಿಕೊಂಡು ಇಂತಹವೊಂದು ಸಾಹಸವನ್ನು ಮೆರೆದಿದ್ದಾರೆ. ಅಕ್ಷರವಂಚಿತರು ಸೇರಿಕೊಂಡು ರೂಪಿಸಿದ ಕಾವ್ಯಸ್ಪರ್ಧೆಗೆ ಬಂದ ಪ್ರವೇಶಗಳ ಸಂಖ್ಯೆ ಬರೋಬ್ಬರಿ ಇನ್ನೂರು.&lt;br /&gt;ರಾಜ್ಯದ ಮೂಲೆಮೂಲೆಯ ವಿವಿಧ ಕಾಲೇಜುಗಳಲ್ಲಿ, ಪ್ರೌಢಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರು, ಡಾಕ್ಟರೇಟ್‌ ಪಡೆದವರು, ಸಂಶೋಧನೆಯಲ್ಲಿ ತೊಡಗಿರುವವರು, ಕಾವ್ಯಕಸುಬು ಮಾಡುತ್ತಿರುವವರು ಸ್ಪರ್ಧೆಗೆ ತಮ್ಮ ರಚನೆಗಳನ್ನು ಕಳಿಸಿದ್ದಾರೆ. ಅಕ್ಷರವನ್ನೇ ಪ್ರೀತಿಸಲು ಮರೆತು, ಕಾಯಕವನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದ ಯುವಕ/ಯುವತಿಯರು `ಸ್ತ್ರೀಯರ ಕುರಿತು ಕವನ ಕಳಿಸಿ' ಎಂಬ ತಮ್ಮ ಕರೆ ಮನ್ನಿಸಿ ಹರಿದು ಬಂದ ಕವನಗಳ ಮಹಾಪೂರ ಕಂಡು ಬೆರಗಾಗಿದ್ದಾರೆ.&lt;br /&gt;ಎಲ್ಲಾ ಕವನಗಳನ್ನು ಪೇರಿಸಿ ಕವಿಗಳಾದ ಎಲ್‌.ಎನ್‌. ಮುಕುಂದರಾಜ್‌ ಹಾಗೂ ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ಮೇಷ್ಟ್ರಾಗಿರುವ ಡೊಮಿನಿಕ್‌ ಅವರ ಮುಂದೆ ಹರಡಿ ಆಯ್ಕೆ ಮಾಡಿ ಕೊಡಿ ಎಂದು ಕೋರಿದ್ದಾರೆ. ಅವರಿಬ್ಬರು ಬಹುಮಾನಿತ ಕವಿಗಳನ್ನು ಆಯ್ಕೆ ಮಾಡಿದ್ದಾರೆ. ಅರಸೀಕೆರೆಯ ಮಮತಾ ಹಾಗೂ ಬಿಜಾಪುರದ ಗೀತಾ ಸನದಿ ಕ್ರಮವಾಗಿ ಮೊದಲೆರಡು ಬಹುಮಾನಕ್ಕೆ ಪಾತ್ರರಾಗಿದ್ದಾರೆ.&lt;br /&gt;ಬೆಟ್ಟದ ನೆಲ್ಲಿಕಾಯಿ, ಸಮುದ್ರದ ಉಪ್ಪು:&lt;br /&gt;ಇದೊಂಥರ ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎತ್ತಿಣಿಂದೆತ್ತ ಸಂಬಂಧವಯ್ಯಾ ಎಂಬ ಮಾದರಿಯದು. ಅಕ್ಷರದ ಅರಿವೇ ಇಲ್ಲದ ಸಮುದಾಯ ಒಂದು ಕಡೆ. ಅಕ್ಷರವನ್ನೇ ಹೊಟ್ಟೆ ಪಾಡಿಗೆ ನೆಚ್ಚಿಕೊಂಡ ಸಮುದಾಯ ಮತ್ತೊಂದು ಕಡೆ. ಇಬ್ಬರನ್ನೂ ಸೇರಿಸಿದ್ದು ಕಾವ್ಯ ಸ್ಪರ್ಧೆ.&lt;br /&gt;ಅದನ್ನು ಆಗು ಮಾಡಿದ್ದು ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್‌ನ ಸಣ್ಣ ಸ್ಲಮ್ಮೊಂದರ ಕ್ರಿಯಾಶೀಲರು. ಇಸ್ಕಾನ್‌ ಎದುರಿಗೆ ಇರುವ ಈ ಸ್ಲಮ್‌ನಲ್ಲಿ ಹುಟ್ಟಿಕೊಂಡ ಚೇತನಧಾರೆ ಟ್ರಸ್ಟ್‌ ಹಾಗೂ ಜನಾಸ್ತ್ರ ಸಂಘಟನೆ ಕಾವ್ಯ ಸ್ಪರ್ಧೆಯ ಕನಸಿಗೆ ಬೀಜಾಂಕುರ ಮಾಡಿದ್ದು.&lt;br /&gt;ಕಾವ್ಯಸ್ಪರ್ಧೆಯ ರೂವಾರಿಗಳಲ್ಲಿ ಆದಿತ್ಯ ಮಾತ್ರ ಪಿಯುಸಿವರೆಗೆ ಓದಿದ್ದು, ಕಪ್ಪು ಹಕ್ಕಿಯ ಹಾಡು ಎಂಬ ಕವನ ಸಂಕಲನ ತರುವ ಉತ್ಸಾಹದಲ್ಲಿದ್ದಾರೆ. ಉಳಿದವರೆಲ್ಲಾ ಐದನೇ ತರಗತಿ ಓದಿದವರಲ್ಲ.&lt;br /&gt;ಕೆಲವರು ಟಯೋಟ ಫ್ಯಾಕ್ಟರಿಗೆ ಕಾರು ತೊಳಿಯಲು ಹೋಗುತ್ತಾರೆ. ಇನ್ನು ಕೆಲವರು ಮೂಟೆ ಹೊರಲು ಎಪಿ ಎಂಸಿ ಯಾರ್ಡ್‌ಗೆ ತೆರಳುತ್ತಾರೆ. ಮತ್ತೊಂದಿಷ್ಟು ಜನ ಗಾರೆ ಕೆಲಸ, ಸೆಂಟ್ರಿಂಗ್‌,ಮರಗೆಲಸ, ವೈಟ್‌ವಾಷಿಂಗ್‌ ಮಾಡುತ್ತಾರೆ. ಯುವತಿಯರು ಬೆಳಗಾನೆದ್ದು ಬ್ಯೂಟಿ ಪಾರ್ಲರ್‌ಗಳಲ್ಲಿ ಸಹಾಯಕಿಯರಾಗಿ ದುಡಿಯುತ್ತಾರೆ. ರಜೆಯೂ ಇಲ್ಲದೇ ಹೊಟ್ಟೆ ಪಾಡಿಗೆ ದುಡಿಯುವ ಇವರೆಲ್ಲಾ ಸೇರುವುದು ದುಡಿಮೆ ಹೊತ್ತು ಮುಗಿದ ಮೇಲೆಯೇ.&lt;br /&gt;ಇದರ ಜತೆಗೆ ಕಾರ್ಡಿನಲ್ಲಿ ರಂಗೋಲಿ ಸ್ಪರ್ಧೆಯನ್ನೂ ನಡೆಸಿದ್ದು, ಇದಕ್ಕೆ ಬಂದ ಪ್ರವೇಶಗಳ ಸಂಖ್ಯೆ 150.&lt;br /&gt;ಸ್ಲಮ್‌ ನಿವಾಸಿಗಳು ಯಾತಕ್ಕೂ ಬರುವುದಿಲ್ಲ, ಅವರಿಗೆ ತಿಳಿವಳಿಕೆ, ಸಂವೇದನೆಗಳೇ ಇರುವುದಿಲ್ಲ, ಪುಂಡರು ಎಂಬ ಭಾವನೆ ಹೊರಜಗತ್ತಿನವರಲ್ಲಿ ಸಾಮಾನ್ಯ. ಅದನ್ನು ಹೋಗಲಾಡಿಸಬೇಕೆಂಬ ತವಕದಿಂದ ಕಾವ್ಯಸ್ಪರ್ಧೆ ಮಾಡಿದೆವು. ಅದರಲ್ಲಿ ಯಶಸ್ವಿಯಾದೆವು ಎಂಬ ವಿಶ್ವಾಸ ಆದಿತ್ಯ ಅವರದ್ದು.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-2918840343854026866?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/2918840343854026866/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=2918840343854026866' title='0 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/2918840343854026866'/><link rel='self' type='application/atom+xml' href='http://www.blogger.com/feeds/8477112084544236406/posts/default/2918840343854026866'/><link rel='alternate' type='text/html' href='http://horaganavanu.blogspot.com/2009/02/blog-post_2144.html' title='ಅಕ್ಷರ ವಂಚಿತರಿಂದ `ಅಕ್ಷರಸ್ಥ&apos;ರಿಗೆ ಕಾವ್ಯಸ್ಪರ್ಧೆ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>0</thr:total></entry><entry><id>tag:blogger.com,1999:blog-8477112084544236406.post-7368407457689121270</id><published>2009-02-16T07:19:00.000-08:00</published><updated>2009-02-16T07:20:38.142-08:00</updated><title type='text'>ಶಾಸ್ತ್ರೀಯ ಸ್ಥಾನ ಅನಿಶ್ಚಿತ: ಸರ್ಕಾರದ ಮೀನಾಮೇಷ</title><content type='html'>&lt;p&gt;&lt;strong&gt;ಇನ್ನೂ ಸಲ್ಲಿಕೆಯಾಗದ ಇಂಪ್ಲೀಡಿಂಗ್‌&lt;br /&gt;ಸಂಭ್ರಮದ ಮಧ್ಯೆ ವಾಸ್ತವ ಮರೆತ ಸರ್ಕಾರ&lt;br /&gt;ಅಭಿವೃದ್ಧಿ ಪ್ರಾಧಿಕಾರದಿಂದ ಸಿದ್ಧತೆ&lt;br /&gt;&lt;/strong&gt;&lt;/p&gt;&lt;p&gt;ಕನ್ನಡಕ್ಕೆ ಅಭಿಜಾತ ಸ್ಥಾನ(ಶಾಸ್ತ್ರೀಯ) ನೀಡಿದ್ದನ್ನು ಪ್ರಶ್ನಿಸಿ ತಮಿಳುನಾಡಿನ ಆರ್‌ ಗಾಂಧಿ ರಿಟ್‌ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದಿದ್ದರೂ, ರಾಜ್ಯ ಸರ್ಕಾರ ಇದರ ಬಗ್ಗೆ ಉದಾಸೀನ ಧೋರಣೆ ತಾಳಿರುವುದರಿಂದ ಕನ್ನಡ ಶಾಸ್ತ್ರೀಯ ಭಾಷೆಯಾಗಿ ಉಳಿಯುವುದು ಅನಿಶ್ಚಿತವಾಗಿದೆ.&lt;br /&gt;ಈ ಬಗ್ಗೆ ಸರ್ಕಾರದ ಪ್ರಮುಖ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರದ ಕಡೆಯಿಂದ ನಿರೀಕ್ಷಿತ ಮಟ್ಟದ ಪ್ರಕ್ರಿಯೆ ನಡೆದಿಲ್ಲದಿರುವುದನ್ನು ಸೂಚಿಸುತ್ತದೆ.&lt;br /&gt;ಶಾಸ್ತ್ರೀಯ ಭಾಷೆ ಸ್ಥಾನ ಕೊಡಿಸುವಲ್ಲಿ ಪ್ರಮುಖ ರೂವಾರಿಯಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಡಾಅಗ್ರಹಾರ ಕೃಷ್ಣಮೂರ್ತಿ ಹೇಳಿದ್ದು ಹೀಗೆ: `ಕೇಂದ್ರ ಸರ್ಕಾರಕ್ಕಾಗಲಿ, ಶಿಫಾರಸ್ಸು ಸಮಿತಿಗಾಗಲಿ ಇದರಲ್ಲಿ ಆಸಕ್ತಿಯಿಲ್ಲ. ಅಷ್ಟಕ್ಕೂ ಅವರು ಯಾಕೆ ರಿಟ್‌ ಅರ್ಜಿ ಸಂಬಂಧ ತಲೆ ಕೆಡಿಸಿಕೊಳ್ಳುತ್ತಾರೆ. ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರ ಮಾತ್ರ ಇದರ ಬಗ್ಗೆ ಮುತುವರ್ಜಿ ವಹಿಸಬೇಕು. ಶಾಸ್ತ್ರೀಯ ಸ್ಥಾನ ಸಿಕ್ಕೇ ಹೋಯಿತೆಂಬ ಸಂಭ್ರಮದಲ್ಲಿರುವ ಸರ್ಕಾರಕ್ಕೆ ವಾಸ್ತವ ಸ್ಥಿತಿ ಗೊತ್ತಾಗುತ್ತಿಲ್ಲ'.&lt;br /&gt;ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್‌ ಹೇಳಿದ್ದು ಹೀಗೆ: ರಿಟ್‌ ಅರ್ಜಿಗೆ ಪ್ರತಿವಾದಿಯಾಗಿಸಲು ಕೋರಿ ಮದ್ರಾಸ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದರಿಂದ ಆಗುವ ಅನುಕೂಲ-ಅನಾನುಕೂಲಗಳ ಬಗ್ಗೆ, ರಾಜ್ಯ ಸರ್ಕಾರವೇ ಪ್ರತಿವಾದಿಯಾಗಿ ಪಾಲ್ಗೊಂಡರೆ ಆಗಬಹುದಾದ ಸಮಸ್ಯೆಗಳ ಬಗ್ಗೆ ಆಲೋಚಿಸಲಾಗುತ್ತಿದೆ. ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರಿಗೆ ಈ ಬಗ್ಗೆ ಜವಾಬ್ದಾರಿ ವಹಿಸಲಾಗಿದೆ. ಕಾನೂನು ತಜ್ಞರ ಜತೆ ಅವರು ಚರ್ಚಿಸಿ, ಮುಖ್ಯಮಂತ್ರಿಗಳ ಬಳಿ ಮಾತಾಡುವುದಾಗಿ ತಿಳಿಸಿದ್ದಾರೆ. ಇಂಪ್ಲೀಡಿಂಗ್‌ ಅವರಿಗೆ ಬಿಟ್ಟ ಸಂಗತಿ.&lt;br /&gt;ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದು ಹೀಗೆ: ಅಭಿವೃದ್ಧಿ ಪ್ರಾಧಿಕಾರದ ಕಡೆಯಿಂದ ಮದ್ರಾಸ್‌ ಉಚ್ಚನ್ಯಾಯಾಲಯಕ್ಕೆ ಪ್ರತಿವಾದಿಯಾಗಿಸಲು ಹಾಗೂ ಗಾಂಧಿಯವರ ರಿಟ್‌ ಅರ್ಜಿ ವಜಾ ಮಾಡಲು ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ. ಈ ಸಂಬಂಧ ಅಗತ್ಯವಿರುವ ಅಫಿಡವಿಟ್‌ಗೆ ತಾನು ಸಹಿ ಹಾಕಿದ್ದೇನೆ. ಅಡ್ವೋಕೇಟ್‌ ಜನರಲ್‌ ಉದಯಹೊಳ್ಳ ಅವರು ಕಾನೂನು ತಜ್ಞರ ಜತೆ ಚರ್ಚಿಸಿ, ನ್ಯಾಯವಾದಿಗಳನ್ನು ನೇಮಿಸಲಿದ್ದಾರೆ. ರಿಟ್‌ ಅರ್ಜಿ ವಜಾ ಮಾಡಿಸಲು ಬೇಕಾದ ಎಲ್ಲಾ ಪುರಾವೆಗಳನ್ನು ಪ್ರಾಧಿಕಾರ ಒದಗಿಸಲಿದೆ.&lt;br /&gt;ಈ ಎಲ್ಲಾ ಹೇಳಿಕೆ, ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಶಾಸ್ತ್ರೀಯ ಸ್ಥಾನದ ಅಸ್ತಿತ್ವವನ್ನು ವಿವೇಚಿಸಬೇಕಿದೆ. ಕನ್ನಡಿಗರ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರವು 31-10-08ರಂದು ಗೆಜೆಟ್‌ ಪ್ರಕಟಣೆ ಹೊರಡಿಸಿ ಕನ್ನಡ ಮತ್ತು ತೆಲುಗು ಶಾಸ್ತ್ರೀಯ ಭಾಷೆ ಎಂದು ಘೋಷಿಸಿತು. ಆದರೆ ಸದರಿ ಪ್ರಕಟಣೆಯಲ್ಲಿನ ಕೊನೆಯ ಒಕ್ಕಣಿಕೆ `ಮದ್ರಾಸ್‌ ಉಚ್ಚ ನ್ಯಾಯಾಲಯದಲ್ಲಿರುವ ರಿಟ್‌ ಅರ್ಜಿ(ಆಗಸ್ಟ್‌ನಲ್ಲಿ ಗಾಂಧಿ ಸಲ್ಲಿಸಿದ ರಿಟ್‌) ಪ್ರಕರಣದ ತೀರ್ಮಾನಕ್ಕೆ ಒಳಪಟ್ಟೇ ಗೆಜೆಟ್‌ ಪ್ರಕಟಣೆ ಹೊರಡಿಸಲಾಗಿದೆ' ಎಂದಿದ್ದು, ರಿಟ್‌ ಅರ್ಜಿ ವಜಾಗೊಳ್ಳದೇ ಶಾಸ್ತ್ರೀಯ ಸ್ಥಾನ ಮಾನ ದಕ್ಕುವುದೇ ಇಲ್ಲ.&lt;br /&gt;ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಕೇಂದ್ರ ಸರ್ಕಾರವು ಗೆಜೆಟ್‌ ಪ್ರಕಟಣೆ ಹೊರಡಿಸಿರುವುದರ ಸಿಂಧುತ್ವ ಪ್ರಶ್ನಿಸಿ 27-11-08ರಂದು ಗಾಂಧಿ ಅವರು 40 ಅಡಕಗಳುಳ್ಳ ಮತ್ತೊಂದು ರಿಟ್‌ ಅರ್ಜಿ ಸಲ್ಲಿಸಿದ್ದರು. ಕೇಂದ್ರದ ಇಬ್ಬರು ಸಚಿವರು, ಶಿಫಾರಸ್ಸು ಸಮಿತಿಯ 9 ಮಂದಿ ಸದಸ್ಯರನ್ನು ಪ್ರತಿವಾದಿಯಾಗಿ ಉಲ್ಲೇಖಿಸಲಾಗಿತ್ತು. ಈ ರಿಟ್‌ ಸಲ್ಲಿಕೆಯಾಗಿ 2 ತಿಂಗಳು ಕಳೆದಿದ್ದರೂ `ಶಾಸ್ತ್ರೀಯ ಸ್ಥಾನ ಸಿಕ್ಕಿದ ಸಂಭ್ರಮ'ದಲ್ಲಿರುವ ರಾಜ್ಯ ಸರ್ಕಾರ ಈ ಬಗ್ಗೆ ಪ್ರತಿವಾದಿಯಾಗಿ ಪಾಲ್ಗೊಳ್ಳಲು ಮದ್ರಾಸ್‌ ನ್ಯಾಯಾಲಯಕ್ಕೆ ಯಾವುದೇ ಅರ್ಜಿ ಸಲ್ಲಿಸಿಲ್ಲ.&lt;br /&gt;ಇಂಪ್ಲೀಡಿಂಗ್‌(ಪ್ರತಿವಾದಿಯಾಗಿಸಲು ಕೋರಿ) ಮಾಡಿಕೊಳ್ಳಲು ಕೋರಿ ಅರ್ಜಿ ಸಲ್ಲಿಸಬೇಕಾದ ಸರ್ಕಾರ ಮೀನಮೇಷ ಎಣಿಸುತ್ತಿರುವುದರಿಂದ ಶಾಸ್ತ್ರೀಯ ಸ್ಥಾನ ಉಳಿಯುವುದು ಅನುಮಾನವಾಗಿದೆ. ಈ ರಿಟ್‌ ಅರ್ಜಿ ಕೇಂದ್ರ ಸರ್ಕಾರಕ್ಕೆ ಯಾವುದೇ ಆಸ್ಥೆ ಇಲ್ಲ. ಪ್ರತಿವಾದಿಗಳಾಗಿರುವ ಕೇಂದ್ರ ಮಾನವ ಸಂಪನ್ಮೂಲ ಮತ್ತು ಗೃಹಸಚಿವರಿಗೆ ಇದು ಬೇಕಾಗಿಲ್ಲ. ಯಾರೂ ಕನ್ನಡದವರಿಲ್ಲದೇ ಇರುವುದರಿಂದ ಶಿಫಾರಸ್ಸು ಸಮಿತಿ ಸದಸ್ಯರಿಗೆ ಇದರ ಉಸಾಬರಿ ಬೇಕಿಲ್ಲ.&lt;br /&gt;ಗಾಂಧಿ ಸಲ್ಲಿಸಿದ ರಿಟ್‌ ಅರ್ಜಿಯಲ್ಲಿ ಶಿಫಾರಸ್ಸು ಸಮಿತಿಯ ಸಿಂಧುತ್ವವನ್ನೆ ಪ್ರಶ್ನಿಸಲಾಗಿದೆಯಲ್ಲದೇ, ಒತ್ತಡ, ಬೆದರಿಕೆಗೆ ಮಣಿದು ಶಿಫಾರಸ್ಸು ಮಾಡಲಾಗಿದೆ ಎಂದು ನ್ಯಾಯಾಲಯ ಬಯಸುವ ಪುರಾವೆಗಳನ್ನು ಮಂಡಿಸಲಾಗಿದೆ. ಕರ್ನಾಟಕ ಪ್ರತಿವಾದಿಯಾಗಿ ಸೇರಿಕೊಂಡು ಸಮರ್ಥವಾಗಿ ವಾದ ಮಂಡಿಸುವುದರಿಂದಲೇ ಮಾತ್ರ ಇದನ್ನು ಉಳಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ತಜ್ಞರು.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-7368407457689121270?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/7368407457689121270/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=7368407457689121270' title='0 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/7368407457689121270'/><link rel='self' type='application/atom+xml' href='http://www.blogger.com/feeds/8477112084544236406/posts/default/7368407457689121270'/><link rel='alternate' type='text/html' href='http://horaganavanu.blogspot.com/2009/02/blog-post_16.html' title='ಶಾಸ್ತ್ರೀಯ ಸ್ಥಾನ ಅನಿಶ್ಚಿತ: ಸರ್ಕಾರದ ಮೀನಾಮೇಷ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>0</thr:total></entry><entry><id>tag:blogger.com,1999:blog-8477112084544236406.post-6792377203174585897</id><published>2009-02-16T07:15:00.000-08:00</published><updated>2009-02-16T07:18:11.053-08:00</updated><title type='text'>ಶರಣರ ದರ್ಶನಗಳಿಗೆ ಶರಧಿ ದಾಟುವ ಭಾಗ್ಯ</title><content type='html'>*25 ಭಾಷೆಗಳಿಗೆ ವಚನಾನುವಾದ&lt;br /&gt;*900 ಪುಟಗಳಲ್ಲಿ 2500 ವಚನ&lt;br /&gt;*ಫ್ರೆಂಚ್‌, ಸ್ಪ್ಯಾನಿಷ್‌, ಚೈನೀಸ್‌ಗೆ&lt;br /&gt;*ಮೂರು ವರ್ಷದಲ್ಲಿ ಶರಣದರ್ಶನ&lt;br /&gt;ಅಚ್ಚ ಕನ್ನಡದ ಸೊಗಡು, ಗ್ರಾಮ್ಯ ಜೀವನಶೈಲಿಯನ್ನು ಹೊಸ ಶೈಲಿಯಲ್ಲಿ ಬರೆದು ಕನ್ನಡವನ್ನು ಶ್ರೀಮಂತಗೊಳಿಸಿದ ಶರಣರ ವಚನಗಳು ಇದೀಗ ನಾಡಿನ ಎಲ್ಲೆಯನ್ನೂ ದಾಟಿ, ದೇಶ-ವಿಶ್ವಭಾಷೆಗಳನ್ನು ಸಮೃದ್ಧಗೊಳಿಸಲಿವೆ.&lt;br /&gt;ಬೆಂಗಳೂರಿನ ಬಸವಸಮಿತಿಯು ರಾಜ್ಯ ಸರ್ಕಾರದ ಸಹಾಯದಡಿ ಕೈಗೊಂಡ ಮಹತ್ವ ಪೂರ್ಣ ಯೋಜನೆ ಮುಕ್ತಾಯಗೊಂಡರೆ 25 ಭಾಷೆಗಳಲ್ಲಿ ವಚನದ ಸಾರಸತ್ವ ಪರಿಚಿತಗೊಳ್ಳಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಒಂದು ಕೋಟಿ ರೂ. ನೀಡಿದ್ದು, ಅನುವಾದ ಕಾರ್ಯ ಭರದಿಂದ ಸಾಗುತ್ತಿದೆ.&lt;br /&gt;12 ಶತಮಾನದ ಕಾಯಕ ಜೀವಿಗಳ ಚಳವಳಿ ಕನ್ನಡ ಸಾಹಿತ್ಯಕ್ಕೆ, ಸಂಸ್ಕೃತಿಗೆ ಹೊಸತನ ತಂದುಕೊಟ್ಟಿತು. ಸಾಮಾಜಿಕ ಉತ್ಕ್ರಾಂತಿಗೂ ಕಾರಣವಾಯಿತು. ಅಂತಹ ವಚನಗಳು ಕನ್ನಡಿಗರ ಆಡುಮಾತಿನ ಲಯದಲ್ಲಿ ಸೇರಿಕೊಂಡು ಬಿಟ್ಟವು. ಆದರೆ ಸೋದರ ಭಾಷೆಗಳಿಗೆ, ವಿದೇಶಿ ಭಾಷೆಗಳಿಗೆ ಅವನ್ನು ಅನುವಾದ ಮಾಡುವ ಗೊಡವೆಗೆ ಯಾರೂ ಹೋಗಲಿಲ್ಲ. ಇಂಗ್ಲಿಷಿಗೆ ಕೆಲವು ವಚನಗಳು ಅನುವಾದಗೊಂಡರೂ ಅದರಲ್ಲಿ ಸಮಗ್ರ ವಚನಗಳಿರಲಿಲ್ಲ. ಆ ಕೊರತೆಯನ್ನು ತುಂಬುವ ಕೆಲಸವನ್ನು ಬಸವ ಸಮಿತಿ ಮಾಡಲಿದೆ.&lt;br /&gt;ಈಗ ಸಂಗ್ರಹಿತಗೊಂಡಿರುವ 23 ಸಾವಿರ ವಚನಗಳ ಪೈಕಿ 2500 ವಚನಗಳನ್ನು ಆಯ್ದು ಎಲ್ಲಾ ಭಾಷೆಯಲ್ಲೂ ಪ್ರಕಟಿಸುವ ಮಹತ್ವಾಕಾಂಕ್ಷಿ ಯೋಜನೆಯಿದು. ಸಂವಿಧಾನ ಅಂಗೀಕರಿಸಿದ ದೇಶದ 22 ಭಾಷೆಗಳಿಗೆ(ಕನ್ನಡ ಸೇರಿ) ಹಾಗೂ ವಿದೇಶ 4 ಭಾಷೆಗಳಿಗೆ ಇವಿಷ್ಟು ವಚನಗಳನ್ನು ಹಂತಹಂತವಾಗಿ ಅನುವಾದಿಸಲಾಗುತ್ತದೆ.&lt;br /&gt;900 ಪುಟಗಳಷ್ಟು ೃಹತ್‌ಗ್ರಂಥವಾಗಿ ಇದು ಹೊರಹೊಮ್ಮಲಿದ್ದು, ವಚನ ಸಾಹಿತ್ಯದ ಹಿನ್ನೆಲೆಯನ್ನು ಪರಿಚಯಿಸುವ 110 ಪುಟಗಳ ಪೂರ್ವ ಪೀಠಿಕೆ ಇರಲಿದೆ. ವಚನಕಾರರ ಕಾಲದೇಶ, ಹಿನ್ನೆಲೆ ಸಹಿತ ಮುದ್ರಣಗೊಳ್ಳಲಿದೆ.&lt;br /&gt;ಇಂಗ್ಲಿಷ್‌, ಫ್ರೆಂಚ್‌, ಸ್ಪ್ಯಾನಿಷ್‌, ಚೈನೀಸ್‌ ಭಾಷೆಗಳಿಗೂ ವಚನಗಳು ಅನುವಾದಗೊಳ್ಳಲಿವೆ. ಧಾರ್ಮಿಕ ವಚನಗಳಿಗಿಂತ ಸಾಮಾಜಿಕ ವಚನಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ಕನ್ನಡ ವಿ.ವಿ. ವಿಶ್ರಾಂತ ಕುಲಪತಿ, ಪ್ರಾಧಿಕಾರದ ಸಮಗ್ರ ವಚನ ಸಂಪುಟಗಳ ಪ್ರಧಾನ ಸಂಪಾದಕರಾಗಿದ್ದ ಡಾ ಎಂ. ಎಂ. ಕಲಬುರ್ಗಿ ಈ ಅನುವಾದ ಕೈಂಕರ್ಯಕ್ಕೂ ಪ್ರಧಾನ ಸಂಪಾದಕರಾಗಿದ್ದಾರೆ. ಡಾವೀರಣ್ಣ ರಾಜೂರ, ಡಾಜಯಶ್ರೀ ದಂಡೆ ಇವರ ಜತೆಗಿದ್ದಾರೆ. ಕಲಬುರ್ಗಿ, ದೇಜಗೌ, ಪ್ರಧಾನಗುರುದತ್ತ, ಲಿಂಗದೇವರು ಹಳೆಮನೆ, ಉದಯನಾರಾಯಣಸಿಂಗ್‌, ಅರವಿಂದ ಜತ್ತಿ ಅವರನ್ನೊಳಗೊಂಡ ಮಾರ್ಗದರ್ಶಕ ಸಮಿತಿ ಜತೆಗೆ ನಿಂತಿದೆ.&lt;br /&gt;&lt;strong&gt;ಸದ್ಯ 8 ಭಾಷೆಗೆ:&lt;/strong&gt;&lt;br /&gt;ಮೂರು ವರ್ಷದ ಅವಧಿಯಲ್ಲಿ 25 ಭಾಷೆಗಳಿಗೆ ಅನುವಾದಗೊಳ್ಳಲಿದ್ದರೂ ಆರಂಭದಲ್ಲಿ 8 ಭಾಷೆಗಳಿಗೆ ಅನುವಾದಿಸುವ ಕಾರ್ಯ ಭರದಿಂದ ಸಾಗಿದೆ. ಇಂಗ್ಲಿಷ್‌, ಹಿಂದಿ, ಸಂಸ್ಕೃತ, ತಮಿಳು, ತೆಲುಗು, ಪಂಜಾಬಿ, ಬಂಗಾಲಿ, ಮರಾಠಿ ಭಾಷೆಗಳಿಗೆ ಅನುವಾದಿಸಲು ಉಭಯ ಭಾಷಾ ತಜ್ಞರ ಪ್ರಧಾನ ಸಂಪಾದಕತ್ವದಲ್ಲಿ ಸಮಿತಿ ರಚಿಸಲಾಗಿದೆ. ಅನುವಾದಕರಿಗಾಗಿ ಕಮ್ಮಟಗಳು ನಡೆದಿವೆ. ಇವರು ಡಿಸೆಂಬರ್‌ ಅಂತ್ಯದೊಳಗೆ ಅನುವಾದಿಸಿ ಕೊಡಲಿದ್ದು, ಆನಂತರ ಆಯಾ ಭಾಷೆಯ ತಜ್ಞರು ಅನುವಾದಗಳ ಗುಣಮಟ್ಟವನ್ನು ಪರೀಕ್ಷಿಸಲಿದ್ದಾರೆ. ಆನಂತರವೇ ಮುದ್ರಣಕ್ಕೆ ಹೋಗಲಿದೆ.&lt;br /&gt;&lt;strong&gt;136 ಶರಣರು:&lt;br /&gt;&lt;/strong&gt;12 ನೇ ಶತಮಾನದಿಂದೀಚಿಗೆ ವಿವಿಧ ಸಂಪಾದನಾಕಾರರು ಸುಮಾರು 136 ವಚನಕಾರರು ರಚಿಸಿದ 23 ಸಾವಿರ ವಚನಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ಇಲ್ಲಿಯವರೆಗೆ ದಾಖಲೆಗೊಂಡಿರುವ ಎಲ್ಲಾ ವಚನಕಾರರನ್ನು ಒಳಗೊಳ್ಳುವ ಸಮಗ್ರ ಸಂಪುಟ ಇದಾಗಲಿದೆ. 900 ವರ್ಷಗಳ ಹಿಂದೆಯೇ ಆಗಬೇಕಾಗಿದ್ದ ಕೆಲಸವನ್ನು ಈಗ ಕೈಗೆತ್ತಿಕೊಂಡಿರುವುದ ತಮಗೆ ಸಮಾಧಾನ ತಂದಿದೆ. ಇಂಗ್ಲಿಷ್‌ ಹಾಗೂ ಹಿಂದಿಗೆ ಅನುವಾದಗೊಂಡರೆ ಉಳಿದ ಭಾಷೆಗೆ ಅನುವಾದ ಸುಲಭವೆಂಬ ಕಾರಣಕ್ಕೆ ಆ ಎರಡು ಭಾಷೆಗಳ ಅನುವಾದಕ್ಕೆ ಆದ್ಯತೆ ನೀಡಲಾಗಿದೆ ಎನ್ನುತ್ತಾರೆ ಅರವಿಂದ ಜತ್ತಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-6792377203174585897?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/6792377203174585897/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=6792377203174585897' title='1 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/6792377203174585897'/><link rel='self' type='application/atom+xml' href='http://www.blogger.com/feeds/8477112084544236406/posts/default/6792377203174585897'/><link rel='alternate' type='text/html' href='http://horaganavanu.blogspot.com/2009/02/blog-post.html' title='ಶರಣರ ದರ್ಶನಗಳಿಗೆ ಶರಧಿ ದಾಟುವ ಭಾಗ್ಯ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>1</thr:total></entry><entry><id>tag:blogger.com,1999:blog-8477112084544236406.post-8101525747638785020</id><published>2008-12-29T07:31:00.000-08:00</published><updated>2008-12-29T07:33:17.215-08:00</updated><title type='text'>ನಿರುದ್ಯೋಗ ಪರ್ವ</title><content type='html'>`ಬರಲಿ ಹೊಸ ವರುಷ, ತರಲಿ ಹೊಸ ಹರುಷ' ಎಂದು ಶುಭಾಶಯ ವಿನಿಮಯ ಮಾಡಿಕೊಳ್ಳುವ ಸಡಗರ 2009ನ್ನು ಎದುರುಗೊಳ್ಳುವ ಮುನ್ನಾದಿನಗಳಲ್ಲಿ ಇಲ್ಲ.&lt;br /&gt;ವಿಶ್ವದರ್ಜೆಯ ಬಹುತೇಕ ಆರ್ಥಿಕ ತಜ್ಞರು 2009ನ್ನು `ನಿರುದ್ಯೋಗ ಪರ್ವ'ದ ಆರಂಭಿಕ ಕಾಲ ಎಂದೇ ವಿಶ್ಲೇಷಿಸಿದ್ದಾರೆ. ಸುಮಾರು 3 ವರ್ಷಗಳ ಹಿಂದೆ ಶುರುವಿಟ್ಟುಕೊಂಡ ಆರ್ಥಿಕ ಕುಸಿತದ ನಡಿಗೆ ಇದೀಗ ಕವಲುದಾರಿಯಲ್ಲಿ ಬಂದು ನಿಂತಿದೆ. 20 ವರ್ಷಗಳ ಹಿಂದಿನ ನಿರುದ್ಯೋಗಿಗಳ ಸಂಖ್ಯೆಯ ದಾಖಲೆಯನ್ನು 2009 ವರ್ಷ ಮುರಿಯಲಿದೆ ಎಂದೇ ಅಂದಾಜಿಸಲಾಗಿದೆ.&lt;br /&gt;ಐಟಿ-ಬಿಟಿ ಯುಗ ಶುರುವಾದ ಮೇಲೆ ಕೌಶಲ್ಯ ಹೊಂದಿದವರಿಗೆ ಭಾರೀ ಬೇಡಿಕೆ ಬಂದೊದಗಿತ್ತು. ಯಾರು ತಿಂಗಳ ಲೆಕ್ಕದಲ್ಲಿ ಸಂಬಳವನ್ನು ಮಾತನಾಡುತ್ತಲೇ ಇರಲಿಲ್ಲ. ವರ್ಷಕ್ಕೆ 5 ಲಕ್ಷದಿಂದ ಹಿಡಿದು 12 ಲಕ್ಷವರೆಗೂ ಸಂಬಳ ಎಣಿಸುವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿತ್ತು. ಅದೇ ಹೊತ್ತಿನಲ್ಲಿ ವರ್ಷಕ್ಕೆ 24 ಸಾವಿರದಿಂದ 60 ಸಾವಿರದವರೆಗೆ ಸಂಬಳ ತೆಗೆದುಕೊಳ್ಳುವವರ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿತ್ತು.&lt;br /&gt;ಟೆಕಿಗಳ ಒಂದು ದಿನದ ಸಂಬಳದ ಮೊತ್ತವನ್ನು ತಿಂಗಳ ಸಂಬಳವಾಗಿ ಪಡೆಯುವವರು ಇದ್ದು, ಸಮಾಜದಲ್ಲಿ ಭೀಕರವಾಗಿ ಆರ್ಥಿಕ ಅಂತರವೂ ಸೃಷ್ಟಿಯಾಗಿತ್ತು. ಅದರಲ್ಲೂ ಬೆಂಗಳೂರು, ಹೈದರಾಬಾದ್‌, ಮುಂಬೈ, ಕೊಲ್ಕತ್ತಾ, ದೆಹಲಿಯಂತಹ ನಗರಗಳಲ್ಲಿ ಈ ರೀತಿಯ ಸಂಬಳಾಂತರ ಸೃಷ್ಟಿಸಿದ ಸಾಂಸ್ಕೃತಿಕ ವಿಕೃತಿಗಳು ಬೇರೆಯವೇ ಆಗಿದ್ದವು. ಕಾಫಿಡೇ, ಮಾಲ್‌, ವೀಕೆಂಡ್‌ ಸಂಸ್ಕೃತಿಗಳು ಅಕರಾಳ ವಿಕರಾಳವಾಗಿ ಬೆಳೆದಿದ್ದವು. ದಿನದ ಒಂದು ಹೊತ್ತಿನ ಊಟಕ್ಕೆ 10 ರೂ. ಖರ್ಚು ಮಾಡುವ ಶಕ್ತಿಯಿಲ್ಲದವರು ದೊಡ್ಡ ಪ್ರಮಾಣದಲ್ಲಿ ಕೇಂದ್ರೀಕೃತವಾಗುತ್ತಿದ್ದರೆ, ಟಿಪ್ಸ್‌ ರೂಪದಲ್ಲಿ ನೂರು ರೂ. ಕೊಡುವ `ಉದಾರಿ'ಗಳು ಇದ್ದರು. 10 ರೂ. ವಸ್ತುವಿಗೆ 50 ರೂ. ನಿಗದಿ ಮಾಡುವ ಮಾಲ್‌ಗಳಲ್ಲಂತೂ ಭರ್ಜರಿ ಜನಜಂಗುಳಿಯೇ ಅಣಿ ನೆರೆಯುತ್ತಿತ್ತು.&lt;br /&gt;ಆದರೆ ಆರ್ಥಿಕ ಬಿಕ್ಕಟ್ಟು ತಂದಿತ್ತ ಸಮಸ್ಯೆ ಇದೀಗ ಎಲ್ಲಾ ಕ್ಷೇತ್ರವನ್ನೂ ಆತಂಕಕ್ಕೆ ದೂಡಿದೆ. ಅಲ್ಪ ಸಂಬಳದಾರರು, ಭರ್ಜರಿ ಸಂಬಳದಾರರು ಉದ್ಯೋಗ ಕಳೆದುಕೊಳ್ಳುವ ಸರದಿಯಲ್ಲಿ `ಸೂಳ್ಪಡೆಯಲ್ಪುದು ಕಾಣಾ ಮಹಾಧಿರಂಗದೋಳ್‌( ಯುದ್ಧ ಭೂಮಿಯಲ್ಲಿ ಮುಂಚೂಣಿ ವಹಿಸುವವರ ಸರದಿ ಎಲ್ಲರಿಗೂ ಬರುತ್ತದೆ) ಎಂಬಂತೆ ನಿರುದ್ಯೋಗ ಪರ್ವದಲ್ಲಿ ಎಲ್ಲರೂ ಸಾಲುಗಟ್ಟಿ ನಿಂತಿದ್ದಾರೆ.&lt;br /&gt;ಯಾರ ಸರದಿ ಯಾವಾಗ ಬರುತ್ತದೆ ಎಂಬುದು ಕರಾರುವಾಕ್ಕಾಗಿ ಗೊತ್ತಾಗದೇ ಇದ್ದರೂ ಎಲ್ಲರೂ ಆತಂಕದ ಸರದಿಯಲ್ಲಿ ಕಾಯುತ್ತಿರುವವರೇ. ಇಂದು ನಾಳೆಯೋ ಮುಂದೆ ಯಾವತ್ತೋ ಕೆಲಸ ಕಳೆದುಕೊಳ್ಳುವುದು ಅಥವಾ ಸಂಬಳ-ಸೌಲಭ್ಯದ ಕಡಿತವನ್ನು ಅನುಭವಿಸುವುದು ಅನಿವಾರ್ಯವೆಂಬುದು ದಿಟ. ಅಥವಾ ಸಂಬಳ ಕಡಿತದ ಜತೆಯಲ್ಲಿ ಹೆಚ್ಚು ಅವಧಿ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗಿದೆ.&lt;br /&gt;&lt;strong&gt;ಎಲ್ಲಾ ಮಾಯ:&lt;br /&gt;&lt;/strong&gt;ಎಲ್ಲಾ ಮಾಯ ಇಲ್ಲಿ ನಾವು ಮಾಯ. ಬಂಡವಾಳ ಶಾಹಿ ಜಗತ್ತಿನ ಆಳದಲ್ಲಿರುವ ಸುನಾಮಿ ಸುಳಿ ಮೇಲೆದ್ದಿದ್ದು, ಮಾಯಕ ಲೋಕದ ವಿಭ್ರಮೆ ನಿಧಾನವಾಗಿ ಕರಗುತ್ತಿದೆ. ಅಂಟಾರ್ಟಿಕ ಖಂಡದಲ್ಲಿ ಹಿಮ ಕರಗಿ ನೀರಾಗುವಂತೆ ಉದ್ಯೋಗ ಅವಕಾಶಗಳು ದಿನೇ ದಿನೇ ಕರಗುತ್ತಿದ್ದು, ಸುನಾಮಿ ಅಲೆಗಳು ಸಮಾಜವನ್ನು ಅಪ್ಪಳಿಸುತ್ತಿವೆ. ಹೇಗೋ ಕೈತುಂಬಾ ಸಂಬಳ ಪಡೆಯುವ ಉದ್ಯೋಗ ಲಭಿಸಿತು ಎಂದು ಮದುವೆ, ಮನೆ, ವಾಹನ ಮಾಡಿಕೊಳ್ಳುವಷ್ಟರಲ್ಲಿ ಎಲ್ಲವೂ ಸಿನೆಮಾದಂತೆ ಭಾಸವಾಗುತ್ತಿದೆ.&lt;br /&gt;ಐಷಾರಾಮಿ ಜೀವನ ನಡೆಸುತ್ತಿದ್ದವರು ರಸ್ತೆ ಬದಿಯ ಆಹಾರಕ್ಕೆ ತಮ್ಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕಾದ ಅನಿವಾರ್ಯತೆಗೆ ತುತ್ತಾಗಿದ್ದಾರೆ. ಇದೆಂತಾ ಸ್ಥಿತಿ ಎಂದು ಹಲುಬುವ ಪರಿಪಾಟಲು ಹರೆಯ ಉದ್ಯೋಗಿಗಳದಾಗಿದೆ.&lt;br /&gt;ಉದ್ಯೋಗ ಕಡಿತ ಇಂದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಐಟಿ, ಬಿಪಿಓ, ಜವಳಿ, ಕೈಗಾರಿಕೆ, ರೇಷ್ಮೆ, ಪತ್ರಿಕೋದ್ಯಮ, ಬ್ಯಾಂಕ್‌ ಹೀಗೆ ಎಲ್ಲಾ ಕ್ಷೇತ್ರವನ್ನು ಆರ್ಥಿಕ ಸಂಕಷ್ಟದ ಮಾಯೆ ಆವರಿಸಿದೆ. ಎಲ್ಲೆಡೆ ಉದ್ಯೋಗ ಕಡಿತ ಅಥವಾ ಸಂಬಳ ಕಡಿತವೆಂಬುದು ಸಾಮಾನ್ಯವಾಗಿದೆ.&lt;br /&gt;ನ್ಯೂಯಾರ್ಕ್‌ನಲ್ಲಿ ಮುಂದಿನ ಆರುತಿಂಗಳಲ್ಲಿ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಒಂದೂ ವರೆ ಲಕ್ಷವೆಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಪ್ರತಿಷ್ಠಿತ ಹಾಗೂ ಪ್ರಭಾವಿ ಪತ್ರಿಕೆ ನ್ಯೂಯಾರ್ಕ್‌ ಟೈಮ್ಸ್‌ ಮುಚ್ಚುವ ಭೀತಿ ಎದುರಿಸುತ್ತಿದ್ದರೆ, ಮತ್ತೊಂದು ಪತ್ರಿಕೆ ಡೈಲಿ ಟ್ರಿಬ್ಯುನ್‌ ಕೂಡ ಸಂಕಷ್ಟದಲ್ಲಿದೆ.&lt;br /&gt;ಭಾರತದ ಮಟ್ಟಿಗೆ ಆರ್ಥಿಕ ಕುಸಿತ ದೊಡ್ಡ ಚಪ್ಪಡಿಯನ್ನೆ ಹೇರಲಿದೆ. ಭಾರತದ ಜವಳಿ ಉದ್ಯಮ ತೀವ್ರ ಕಂಗೆಟ್ಟಿದೆ. ವಾರ್ಷಿಕ 3500 ಕೋಟಿ ರಫ್ತು ಮಾಡುತ್ತಿದ್ದ ರೇಷ್ಮೆ ಕ್ಷೇತ್ರ ಶೇ.50 ರಷ್ಟು ಕುಸಿತ ಕಂಡಿದೆ. ಈ ವರ್ಷದ ರಫ್ತು 1700 ಕೋಟಿ ರೂ. ದಾಟುವುದಿಲ್ಲವೆಂದು ಅಂದಾಜಿಸಲಾಗಿದೆ. ಇದರಿಂದಾಗಿ ಜವಳಿ ಉದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿದ್ದು, ಮುಂದಿನ ಆರುತಿಂಗಳ ಅವಧಿಯಲ್ಲಿ 5-6 ಲಕ್ಷ ಮಂದಿ ಈ ಕ್ಷೇತ್ರದಲ್ಲಿ ನೇರ ಅಥವಾ ಪರೋಕ್ಷವಾಗಿ ಉದ್ಯೋಗ ವಂಚಿತರಾಗಲಿದ್ದಾರೆ.&lt;br /&gt;ಅಮೆರಿಕದಲ್ಲಿ ಔಟ್‌ಸೋರ್ಸಿಂಗ್‌ ನಿಲ್ಲಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಒಬಾಮ ಗೆಲ್ಲುವಾಗ ಕೆಲಸದ ಹೊರಗುತ್ತಿಗೆಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದ. ಇದರಿಂದಾಗಿ ಭಾರತದ ಬಿಪಿ ಓ ಕ್ಷೇತ್ರ ತಲ್ಲಣಿಸಿದೆ. ಮುಖ್ಯವಾಗಿ ಅಮೆರಿಕದ ಉದ್ಯಮ ಸಂಸ್ಥೆಗಳ ಹೊರಗುತ್ತಿಗೆಯನ್ನು ನಿರ್ವಹಿಸಲು ಬೆಂಗಳೂರು ಹಾಗೂ ಹೈದರಾಬಾದ್‌ನ ಬಿಪಿ ಓ ಮತ್ತು ಐಟಿ ಕಂಪನಿಗಳಲ್ಲಿ ವ್ಯಾಪಕ ಉದ್ಯೋಗ ಸೃಷ್ಟಿಯಾಗಿತ್ತು. ಸಾಲುಸಾಲಾಗಿ ಹೊರಗುತ್ತಿಗೆಗೆ ಕಡಿವಾಳ ಬೀಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಆರುತಿಂಗಳಲ್ಲಿ 50 ಸಾವಿರ ಟೆಕಿಗಳು ಉದ್ಯೋಗ ವಂಚಿತರಾಗಲಿದ್ದಾರೆ. ಇದರಿಂದ ಆರ್ಥಿಕತೆ ಮೇಲೆ ತೀವ್ರತರದ ಅಡ್ಡ ಪರಿಣಾಮ ಬೀರಲಿದೆ.&lt;br /&gt;ಆರ್ಥಿಕ ಸಂಕಷ್ಟದ ಕಾರಣದಿಂದ ಆಭರಣ ಉದ್ಯಮ ತತ್ತರಿಸಿದೆ. ಆಭರಣ ರಫ್ತಿನಲ್ಲಿ ಭಾರತದ ಪ್ರಮುಖ ಪಾಲಿದ್ದು, ವಿದೇಶಿ ರಾಷ್ಟ್ರಗಳು ಆಮದನ್ನು ನಿರ್ಬಂಧಿಸಿವೆ. ಇದರಿಂದಾಗಿ ಆಭರಣ ಉದ್ಯಮ ಸಂಸ್ಥೆಗಳು ಮುಚ್ಚುವ ಹಂತ ತಲುಪಿದ್ದು ಈ ಕ್ಷೇತ್ರದಲ್ಲಿ 1 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.&lt;br /&gt;ಎಲ್ಲಾ ಪತ್ರಿಕೆಗಳಲ್ಲೂ ಉದ್ಯೋಗ ಕಡಿತದ ಚರ್ಚೆ ನಡೆಯುತ್ತಿದೆ. ಇಂಗ್ಲಿಷ್‌ ಹಾಗೂ ಸ್ಥಳೀಯ ದೈನಿಕಗಳಿಗೆ ಇದರ ಬಾಧೆ ತಟ್ಟಲಿದೆ. 10-12 ಪರ್ಸೆಂಟ್‌ ಉದ್ಯೋಗಿಗಳು ಬೇರೆ ಉದ್ಯೋಗ ಅರಸಿಕೊಳ್ಳಬೇಕಾಗಿದೆ.&lt;br /&gt;ಇದರ ಜತೆಯಲ್ಲಿ ಸಂಬಳ ಸಹಿತ ರಜೆ ನೀಡುವ ಪರಿಪಾಠವನ್ನು ಏರ್‌ಲೈನ್ಸ್‌ ಹಾಗೂ ಬಿಪಿ ಓ ಕಂಪನಿಗಳು ಆರಂಭಿಸಿವೆ. ಕೆಲಸವಿಲ್ಲದೇ ಸಂಬಳ ನೀಡುವುದೆಂದರೆ ಪೂರ್ತಿ ಸಂಬಳವನ್ನು ಯಾವ ಕಂಪನಿಗಳೂ ನೀಡಲಾರವು. ಅರ್ಧದಷ್ಟು ಸಂಬಳ ನೀಡಬಹುದು. ಜತೆಗೆ ಕೆಲಸವಿಲ್ಲದೇ ಯಾವ ಉದ್ಯೋಗಿಯೂ ಇರಲಾರ. ಅನಿವಾರ್ಯವಾಗಿ ಇದ್ದ ಕೆಲಸಕ್ಕೆ ರಾಜಿನಾಮೆ ಬೀಸಾಕಿ ಬೇರೆ ಕೆಲಸ ನೋಡಿಕೊಳ್ಳಬೇಕಾಗುತ್ತದೆ. ಒಂದರ್ಥದಲ್ಲಿ ಕೈತುಂಬ ಸಂಬಳ ಪಡೆಯುತ್ತಿದ್ದ ಕೆಲಸವನ್ನು ಬಿಟ್ಟು ಅರೆ ಬರೆ ಸಂಬಳಕ್ಕೆ ಕೆಲಸ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ.&lt;br /&gt;ಇದರಿಂದಾಗಿ ಸರ್ಕಾರಿ ನೌಕರಿಗೆ ಭದ್ರವೆಂಬ ವಾತಾವರಣ ನಿರ್ಮಾಣ ಸೃಷ್ಟಿಯಾಗಲಿದೆ. ನಿರುದ್ಯೋಗ ತರಲಿರುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬಿಕ್ಕಟ್ಟು ಬೇರೆ ರೀತಿಯದಾಗಿದ್ದು, ಇದರ ಬಗ್ಗೆ ಮತ್ತೊಂದು ಸುದೀರ್ಘ ಚರ್ಚೆಯೇ ನಡೆಯಬೇಕಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-8101525747638785020?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/8101525747638785020/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=8101525747638785020' title='2 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/8101525747638785020'/><link rel='self' type='application/atom+xml' href='http://www.blogger.com/feeds/8477112084544236406/posts/default/8101525747638785020'/><link rel='alternate' type='text/html' href='http://horaganavanu.blogspot.com/2008/12/blog-post_29.html' title='ನಿರುದ್ಯೋಗ ಪರ್ವ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>2</thr:total></entry><entry><id>tag:blogger.com,1999:blog-8477112084544236406.post-6662558067554161084</id><published>2008-12-20T07:10:00.000-08:00</published><updated>2008-12-20T07:12:10.474-08:00</updated><title type='text'>ಬಸವರಾಜಮಾರ್ಗಕ್ಕೆ ಸಂದ ಗೌರವ</title><content type='html'>ಸೃಜನಶೀಲ ಸಾಹಿತಿಗಳನ್ನೇ ಅರಸಿಕೊಂಡು ಹೋಗುತ್ತಿದ್ದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸುಮಾರು 18 ವರ್ಷಗಳ ತರುವಾಯ ಕನ್ನಡ ಬೇರುಗಳನ್ನು ಭದ್ರ ಹಾಗೂ ಸಮೃದ್ಧಗೊಳಿಸಿದ ಹಿರಿಯ ವಿದ್ವಾಂಸರೊಬ್ಬರಿಗೆ ಒಲಿದಿದೆ.&lt;br /&gt;ಗ್ರಂಥಸಂಪಾದನೆ ಹಾಗೂ ಸೃಜನಶೀಲ ಬರವಣಿಗೆ ಎರಡೂ ಕ್ಷೇತ್ರದಲ್ಲಿ ಇಳಿವಯಸ್ಸಿನಲ್ಲೂ ಅಹರ್ನಿಶಿ ದುಡಿಯುತ್ತಿರುವ, ಕನ್ನಡದ ಕೆಲಸಕ್ಕಾಗಿ ತಮ್ಮ ಜೀವನವನ್ನು ಮುಡುಪಿಟ್ಟಿರುವ ವಿದ್ವಾಂಸರೆಂದರೆ ಡಾ ಎಲ್‌. ಬಸವರಾಜು. ಅವರ ಆಯ್ಕೆಯು ಸಂಶೋಧನೆ, ಸಂಪಾದನೆ, ಪ್ರಾಚೀನ ಕೃತಿಗಳ ತಲಸ್ಪರ್ಶಿ ಶೋಧ, ಇವತ್ತಿನ ತಲೆಮಾರಿಗೆ ಕನ್ನಡ ಪರಂಪರೆಯನ್ನು ಪರಿಚಯಿಸುವ ಮಹತ್ಕಾರ್ಯಕ್ಕೆ ಸಂದ ಗೌರವವಾಗಿದೆ.&lt;br /&gt;1992 ರಲ್ಲಿ ಸಿಂಪಿ ಲಿಂಗಣ್ಣ, 1995ರಲ್ಲಿ ಡಾಎಚ್‌.ಎಲ್‌. ನಾಗೇಗೌಡ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರಿಬ್ಬರೂ ಜಾನಪದ ಸಂಗ್ರಹ, ಸಂಶೋಧನೆಗಳಲ್ಲಿ ಅವಿರತವಾಗಿ ದುಡಿದವರು. ಇವರಿಬ್ಬರು ಜಾನಪದದ ಕಣಜವನ್ನು ತಮ್ಮ ಅಂತಃಶಕ್ತಿ ಹಾಗೂ ಕ್ಷೇತ್ರಕಾರ್ಯದಿಂದ ತುಂಬಿಸಿಕೊಟ್ಟವರು. ಡಾ.ಎಲ್‌. ಬಸವರಾಜು ಮಾದರಿಯಲ್ಲಿಯೇ ವಚನ ಸಾಹಿತ್ಯ ಸಂಗ್ರಹ ಹಾಗೂ ಸಂಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಆರ್‌.ಸಿ. ಹಿರೇಮಠ ಅವರು 1990ರಲ್ಲಿ ನಡೆದ 59 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.&lt;br /&gt;ಆರ್‌.ಸಿ. ಹಿರೇಮಠರ ತರುವಾಯ ಭಾಷೆ ಹಾಗೂ ಪ್ರಾಚೀನ ಸಾಹಿತ್ಯ ಕ್ಷೇತ್ರದಲ್ಲಿ ಅವಿರತ ಶ್ರಮಿಸಿದ ಹಿರಿಯ ಜೀವಿಗಳು ಅಧ್ಯಕ್ಷರಾದ ನಿದರ್ಶನವಿರಲಿಲ್ಲ. ಕಳೆದ ಬಾರಿ ಉಡುಪಿಯಲ್ಲಿ ನಡೆದ ಸಮ್ಮೇಳನ ಕನ್ನಡ ವಿಮರ್ಶಾ ಕ್ಷೇತ್ರಕ್ಕೆ ಗೌರವ ಸಲ್ಲಿಸಿದ್ದರೆ, ಈ ಬಾರಿಯ ಸಮ್ಮೇಳನ ಸಂಶೋಧನೆ ಹಾಗೂ ಸಂಪಾದನೆ ಕ್ಷೇತ್ರಕ್ಕೆ ಪ್ರಾಧಾನ್ಯ ನೀಡಿದೆ.&lt;br /&gt;ಹಿರೇಮಠರು ಅಧ್ಯಕ್ಷರಾದ ನಂತರ ನಡೆದ 18 ಸಮ್ಮೇಳನಗಳ ಅಧ್ಯಕ್ಷರಾಗಿ ಆಯ್ಕೆಯಾದವರಲ್ಲಿ ಸಿಂಪಿ ಲಿಂಗಣ್ಣ, ನಾಗೇಗೌಡರನ್ನು ಹೊರತು ಪಡಿಸಿದರೆ (ಜಾನಪದ ಕ್ಷೇತ್ರ) ಕವಿ ಅಥವಾ ಕಾದಂಬರಿಕಾರರೇ ಹೆಚ್ಚಾಗಿದ್ದಾರೆ. ಕೆ.ಎಸ್‌.ನರಸಿಂಹಸ್ವಾಮಿ, ಜಿ.ಎಸ್‌. ಶಿವರುದ್ರಪ್ಪ, ಚದುರಂಗ, ಚೆನ್ನವೀರ ಕಣವಿ, ಕಯ್ಯಾರ ಕಿಞ್ಞಣ್ಣರೈ, ಭೈರಪ್ಪ, ಅನಂತಮೂರ್ತಿ, ಪಾಟೀಲ ಪುಟ್ಟಪ್ಪ, ಕಮಲಾ ಹಂಪನಾ, ಶಾಂತರಸ, ನಿಸಾರ್‌ ಅಹಮದ್‌ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.&lt;br /&gt;&lt;strong&gt;ಬಸವರಾಜು ಹೆಗ್ಗಳಿಕೆ:&lt;/strong&gt; ಯಾವ ಪಂಥಕ್ಕೂ ಸೇರದ, ಆದರೆ ಸಾಮಾಜಿಕ ಸಂಗತಿಗಳ ಬಗ್ಗೆ ಜೀವಪರವಾದ ಕಾಳಜಿ ಹೊಂದಿದ, ಒಂದು ವಿಶ್ವವಿದ್ಯಾನಿಲಯ ಮಾಡಬಹುದಾದ ಕೆಲಸವನ್ನು ಏಕಾಂಗಿಯಾಗಿ ತತ್ಪರತೆಯಿಂದ ಮಾಡಿದ ಡಾ. ಬಸವರಾಜು ಅವರು ಅಧ್ಯಾಪಕರಿಗೆ ಆದರ್ಶವಾಗುವ ವ್ಯಕ್ತಿತ್ವ ಸಂಪಾದಿಸಿದವರು.&lt;br /&gt;1919ರಲ್ಲಿ ಕೋಲಾರ ಜಿಲ್ಲೆ ಇಡಗೂರಿನಲ್ಲಿ ಜನಿಸಿದ ಬಸವರಾಜು ಅವರು, ಮೈಸೂರು ಮಹಾರಾಜ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದರು. ಮೂರು ದಶಕಗಳಿಗೂ ಹೆಚ್ಚುಕಾಲ ಮೈಸೂರು ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಕ್ಷರದಾಸೋಹ ಮಾಡಿದರು.&lt;br /&gt;ಬರುವ ಸಂಬಳಕ್ಕೆ ಪಾಠ ಮಾಡುವುದಷ್ಟೇ ತಮ್ಮ ಕೆಲಸವೆಂದು ಸೀಮಿತರಾಗದ ಬಸವರಾಜು ಅವರು, ಅಧ್ಯಾಪಕರ ವ್ಯಕ್ತಿತ್ವಕ್ಕೆ ಹೊಸಭಾಷ್ಯ ಬರೆದವರು. ತಮ್ಮ ತೊಂಬತ್ತರ ಇಳಿವಯಸ್ಸಿನಲ್ಲೂ ನಿರಂತ ಅಧ್ಯಯನ, ಸಂಶೋಧನೆ, ತಾಳೆಗರಿಗಳ ಅವಲೋಕನ, ಪರಾಮರ್ಶೆಯನ್ನು ನಿಸ್ಪೃಹವಾಗಿ ಮಾಡಿಕೊಂಡು ಬಂದವರು. ಪ್ರಾಚೀನ ಕೃತಿಗಳ ಸಂಪಾದನೆಗೆ ಹೊಸ ಪರಿಭಾಷೆಯನ್ನು ಕಟ್ಟಿಕೊಟ್ಟ ಅವರು, ತಮ್ಮ ಪಾಂಡಿತ್ಯ, ಆಳವಾದ ಅಧ್ಯಯನ ಶೀಲತೆಯಿಂದ ಇತರರಿಗೆ ಮಾದರಿಯಾದವರು.&lt;br /&gt;ವಚನ ಸಾಹಿತ್ಯ ಅಧ್ಯಯನದಲ್ಲಿ ಹೊಸ ಹಾದಿ ತೆರೆದು ಅದಕ್ಕೊಂದು ಮೌಲಿಕತೆಯನ್ನು ಕಲ್ಪಿಸಿಕೊಟ್ಟ ಬಸವರಾಜು ಅವರು ಕನ್ನಡದ ಶಾಸ್ತ್ರೀಯ ಕೃತಿಗಳನ್ನು ವೈಶಿಷ್ಟ್ಯಪೂರ್ಣವಾಗಿ ಸಂಪಾದಿಸಿಕೊಟ್ಟವರು.&lt;br /&gt;ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯಗಳ ಸಂಪಾದನೆ ಜತೆಗೆ ಸರಳ ಪಂಪಭಾರತವನ್ನು ರಚಿಸಿ ಪ್ರಾಚೀನ ಗದ್ಯಕ್ಕೆ ಅರ್ವಾಚೀನ ವಿನ್ಯಾಸವನ್ನು ನೀಡಿದವರು. ಹಾಗೆಯೇ ದೇವನೂರು ಮಹಾದೇವರ ಮಹತ್ವದ ಕೃತಿ ಕುಸುಮಬಾಲೆ ಕಾದಂಬರಿಯನ್ನು ಲಯಾನುಸಾರ ಮರುವಿನ್ಯಾಸಗೊಳಿಸಿ ಕಾವ್ಯಕುಸುಮಬಾಲೆಯಾಗಿ ರೂಪಿಸಿದ್ದು ಇವರ ಅಧ್ಯಯನಶೀಲತೆ, ಪಾಂಡಿತ್ಯದ ಮೇರುತನಕ್ಕೆ ಸಾಕ್ಷಿಯಾಗುತ್ತದೆ.&lt;br /&gt;ಕಬ್ಬಿಣದ ಕಡಲೆಯಂತಿರುವ ಕೇಶಿರಾಜನ ಶಬ್ದಮಣಿ ದರ್ಪಣವನ್ನು ಮೂವತ್ತಕ್ಕೂ ಹೆಚ್ಚು ಹಸ್ತಪ್ರತಿಗಳ ನೆರವಿನಿಂದ ಸಂಪಾದಿಸಿ, ವಿಸ್ತೃತ ವ್ಯಾಖ್ಯಾನದೊಂದಿಗೆ ಪ್ರಕಟಿಸಿದ್ದಾರೆ.&lt;br /&gt;ಐವತ್ತು ಕೃತಿಗಳು ಇವರ ಅಮೂಲ್ಯ ಕೊಡುಗೆಯಾಗಿವೆ. ಠಾಣಾಂತರ, ಜಾಲಾರಿ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಾಚೀನ ಕನ್ನಡದ ವಿಸ್ತಾರ, ವೈಶಿಷ್ಟ್ಯದ ಆಳ ಹರಿವನ್ನು ತಮ್ಮ ಅಂಗೈಯಲ್ಲಿ ಹಿಡಿದಿರುವ ಶಕ್ತಿ ಹೊಂದಿದ ಬಸವರಾಜು ಅವರು ಸಮ್ಮೇಳನದ ಅಧ್ಯಕ್ಷರಾಗುವ ಮೂಲಕ ಕನ್ನಡದ ವಿದ್ವತ್‌ಪರಂಪರೆ ಮತ್ತೊಮ್ಮೆ ಗೌರವ ಪಡೆದಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-6662558067554161084?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/6662558067554161084/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=6662558067554161084' title='1 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/6662558067554161084'/><link rel='self' type='application/atom+xml' href='http://www.blogger.com/feeds/8477112084544236406/posts/default/6662558067554161084'/><link rel='alternate' type='text/html' href='http://horaganavanu.blogspot.com/2008/12/blog-post_20.html' title='ಬಸವರಾಜಮಾರ್ಗಕ್ಕೆ ಸಂದ ಗೌರವ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>1</thr:total></entry><entry><id>tag:blogger.com,1999:blog-8477112084544236406.post-4448592730912667380</id><published>2008-12-02T07:51:00.000-08:00</published><updated>2008-12-02T07:53:12.932-08:00</updated><title type='text'>ಉಗ್ರ ಉಪ­ಟಳ</title><content type='html'>ಮುಂಬೈ&amp;shy;ನಲ್ಲಿ `ಉಗ್ರ'ರು ನಡೆ&amp;shy;ಸಿದ ಪೈಶಾ&amp;shy;ಚಿಕ ಕೃತ್ಯ&amp;shy;ದಿಂದ ಇಡೀ ದೇಶ ದಂಗು ಬಡಿದು ಹೋಗಿದೆ. ಅಲ್ಲಲ್ಲಿ ಆಗಾಗ್ಗೆ ನಡೆ&amp;shy;ಯು&amp;shy;ತ್ತಿದ್ದ ಭಯೋ&amp;shy;ತ್ಪಾ&amp;shy;ದಕ ವಿಧ್ವಂ&amp;shy;ಸ&amp;shy;ಗಳ ಮಾದ&amp;shy;ರಿ&amp;shy;ಗಿಂತ ಭಿನ್ನ&amp;shy;ವಾಗಿ ವ್ಯವ&amp;shy;ಸ್ಥಿತ, ಯೋಜ&amp;shy;ನಾ&amp;shy;ಬ&amp;shy;ದ್ಧ&amp;shy;ವಾಗಿ ಉಗ್ರರು ನಡೆ&amp;shy;ಸಿದ ದಾಳಿ ದೇಶದ ಭದ್ರತಾ ವ್ಯವಸ್ಥೆ ಸಂಪೂರ್ಣ ಬಿಡಾ&amp;shy;ಸೆದ್ದು ಹೋಗಿ&amp;shy;ರುವ ಸ್ಪಷ್ಟ ಸೂಚ&amp;shy;ನೆ&amp;shy;ಯಾ&amp;shy;ಗಿದೆ.&lt;br /&gt;ಕೇಂದ್ರ ಗುಪ್ತ&amp;shy;ಚರ, ಕರಾ&amp;shy;ವಳಿ ರಕ್ಷಣಾ ಪಡೆ, ಆಂತ&amp;shy;ರಿಕ ಭದ್ರತೆ ಹಾಗೂ ಶುದ್ಧಾಂ&amp;shy;ಗ&amp;shy;ವಾಗಿ ಕೇಂದ್ರ ಸರ್ಕಾ&amp;shy;ರದ ಆಡ&amp;shy;ಳಿತ ವೈಫ&amp;shy;ಲ್ಯ&amp;shy;ವನ್ನು ಇದು ಎತ್ತಿ ತೋರಿ&amp;shy;ಸು&amp;shy;ತ್ತದೆ. ಕೇಂದ್ರ ಹಾಗೂ ಮಹಾ&amp;shy;ರಾಷ್ಟ್ರ ರಾಜ್ಯ ಸರ್ಕಾ&amp;shy;ರದ ವಕ್ತಾ&amp;shy;ರರು ಈಗ ಹೇಳು&amp;shy;ತ್ತಿ&amp;shy;ರು&amp;shy;ವುದು `ದೇಶ&amp;shy;ದೊ&amp;shy;ಳಕ್ಕೆ ನುಸು&amp;shy;ಳಿದ 20 ಮಂದಿ ವಿದೇಶಿ ಉಗ್ರರು ಈ ಕೃತ್ಯ&amp;shy;ವೆ&amp;shy;ಸ&amp;shy;ಗಿ&amp;shy;ದ್ದಾರೆ' ಎಂದು. ಕೇವಲ ಅಷ್ಟೇ ಮಂದಿ ಇಡೀ ದೇಶ&amp;shy;ವನ್ನು ಮೂರು ದಿನ&amp;shy;ಗಳ ಕಾಲ ಉಸಿ&amp;shy;ರು&amp;shy;ಗ&amp;shy;ಟ್ಟಿಸಿ ನಿಲ್ಲಿ&amp;shy;ಸುವ ಶಕ್ತಿ ಹೊಂದಿ&amp;shy;ದ್ದರೆ, ದೇಶ&amp;shy;ದು&amp;shy;ದ್ದಕ್ಕೂ ತಲೆ ಮರೆ&amp;shy;ಸಿ&amp;shy;ಕೊಂ&amp;shy;ಡಿ&amp;shy;ರುವ ಪಾಕಿ&amp;shy;ಸ್ತಾನಿ, ಬಾಂಗ್ಲಾ&amp;shy;ದೇ&amp;shy;ಶಿ&amp;shy;ಯರು ಅಷ್ಟೂ ಮಂದಿ ಸೇರಿ&amp;shy;ದರೆ ವಾರ&amp;shy;ದೊ&amp;shy;ಳಗೆ ದೇಶದ ಸಾರ್ವ&amp;shy;ಭೌ&amp;shy;ಮ&amp;shy;ತ್ವನ್ನು ಕೆಡವಿ, ತಮ್ಮದೇ ಸರ್ಕಾರ ಸ್ಥಾಪಿ&amp;shy;ಸು&amp;shy;ವಷ್ಟು ಬಲ&amp;shy;ಶಾ&amp;shy;ಲಿ&amp;shy;ಯಾ&amp;shy;ಗಿ&amp;shy;ಲ್ಲ&amp;shy;ವೆಂದು ನಂಬು&amp;shy;ವು&amp;shy;ದಾ&amp;shy;ದರೂ ಹೇಗೆ?&lt;br /&gt;ಸದಾ ತಮ್ಮ ಡ್ರೆಸ್‌ ಬಗ್ಗೆ ಕಾಳ&amp;shy;ಜಿ&amp;shy;ಯಿ&amp;shy;ಟ್ಟು&amp;shy;ಕೊಂ&amp;shy;ಡಿ&amp;shy;ರುವ ಘನ&amp;shy;ತೆ&amp;shy;ವೆತ್ತ ದೇಶದ ಗೃಹ ಸಚಿವ ಶಿವ&amp;shy;ರಾ&amp;shy;ಜ್‌&amp;shy;ಪಾ&amp;shy;ಟೀ&amp;shy;ಲ್‌&amp;shy;ರಿಗೆ ಕನಿಷ್ಠ ನೈತಿ&amp;shy;ಕತೆ ಇದ್ದಿ&amp;shy;ದ್ದರೆ ದೇಶದ ಜನರ ಡ್ರೆಸ್‌ ಅಲ್ಲಾ, ಅಮೂಲ್ಯ ಜೀವವೇ ಬಂದೂ&amp;shy;ಕಿನ ಮೊನೆ&amp;shy;ಯಲ್ಲಿ ನಿಂತಿ&amp;shy;ರುವ ಬಗ್ಗೆ ಕಾಳಜಿ ತೋರಿ&amp;shy;ಸ&amp;shy;ಬೇ&amp;shy;ಕಿತ್ತು. ಕನಿಷ್ಠ ತನ್ನ ಬಳಿ ಗೃಹ&amp;shy;ಖಾತೆ ನಿಭಾ&amp;shy;ಯಿ&amp;shy;ಸಲು ಆಗು&amp;shy;ವು&amp;shy;ದಿ&amp;shy;ಲ್ಲ&amp;shy;ವೆಂದು ರಾಜೀ&amp;shy;ನಾ&amp;shy;ಮೆ&amp;shy;ಯ&amp;shy;ನ್ನಾ&amp;shy;ದರೂ ಬಿಸಾಕಿ ವೃದ್ಧಾ&amp;shy;ಪ್ಯ&amp;shy;ದಲ್ಲಿ ದೇವರ ಮುಂದೆ ಭಜನೆ ಮಾಡುತ್ತಾ ಕೂರ&amp;shy;ಬ&amp;shy;ಹು&amp;shy;ದಿತ್ತು.&lt;br /&gt;ಕ್ರಿಯಾ&amp;shy;ಶಕ್ತಿ, ಚಿಂತ&amp;shy;ನಾ&amp;shy;ಶ&amp;shy;ಕ್ತಿ&amp;shy;ಯಿ&amp;shy;ಲ್ಲದ, ಅವ&amp;shy;ಲಂ&amp;shy;ಬ&amp;shy;ನೆ&amp;shy;ಯಿ&amp;shy;ಲ್ಲದೇ ಸ್ವತಃ ನಡೆ&amp;shy;ಯಲೂ ಆಗದ, ಅಧಿ&amp;shy;ಕಾ&amp;shy;ರಕ್ಕೆ ಅಂಟಿ&amp;shy;ಕೂ&amp;shy;ರುವ ಜಾಢ್ಯ ಹಿಡಿದ ಮುದಿ ರಾಜ&amp;shy;ಕಾ&amp;shy;ರ&amp;shy;ಣಿ&amp;shy;ಗ&amp;shy;ಳಿಂ&amp;shy;ದಾಗಿ ದೇಶಕ್ಕೆ ಇಂತಹ ದುರ್ಗತಿ ಬಂದಿ&amp;shy;ರು&amp;shy;ವುದು. ಉಗ್ರರ ವಿರುದ್ಧ ಜೀವದ ಹಂಗು ತೊರೆದು ಹೋರಾ&amp;shy;ಡುವ, ದೇಶೀಯ ವಿದ್ರೋ&amp;shy;ಹಿ&amp;shy;ಗ&amp;shy;ಳನ್ನು ಮುಲಾ&amp;shy;ಜಿ&amp;shy;ಲ್ಲದೇ ಬಗ್ಗು ಬಡಿ&amp;shy;ಯುವ ಸೈನ್ಯ-ಪೊಲೀ&amp;shy;ಸರ ಆತ್ಮ&amp;shy;ಬಲ ಹೆಚ್ಚಿ&amp;shy;ಸುವ ಶಕ್ತಿ ಒಬ್ಬನೇ ಒಬ್ಬ ರಾಜ&amp;shy;ಕಾ&amp;shy;ರ&amp;shy;ಣಿಗೆ ಇಲ್ಲ. ಉರಿವ ಮನೆ&amp;shy;ಯಲ್ಲಿ ಗಳ ಎಣಿ&amp;shy;ಸುವ ಕುಯು&amp;shy;ಕ್ತಿ&amp;shy;ಯನ್ನು ಎಲ್ಲಾ ರಾಜ&amp;shy;ಕಾ&amp;shy;ರ&amp;shy;ಣಿ&amp;shy;ಗಳೂ ಮಾಡು&amp;shy;ತ್ತಿ&amp;shy;ದ್ದಾರೆ. ಭಯೋ&amp;shy;ತ್ಪಾ&amp;shy;ದ&amp;shy;ಕ&amp;shy;ರನ್ನು ದೇಶ&amp;shy;ದ್ರೋ&amp;shy;ಹಿ&amp;shy;ಗಳ ಪಟ್ಟಿಗೆ ಸೇರಿಸಿ, ಯಾವ ರಾಜ&amp;shy;ಕೀಯ, ಸೈದ್ಧಾಂ&amp;shy;ತಿಕ ಹಂಗಿ&amp;shy;ಲ್ಲದೇ ಗಲ್ಲಿ&amp;shy;ಗೇ&amp;shy;ರಿ&amp;shy;ಸುವ ಕಠಿಣ ನಿರ್ಧಾರ ತೆಗೆ&amp;shy;ದು&amp;shy;ಕೊ&amp;shy;ಳ್ಳು&amp;shy;ವ&amp;shy;ವ&amp;shy;ರೆಗೆ ಈ ದೇಶದ ಶಾಂತಿಗೆ ಉಳಿ&amp;shy;ಗಾ&amp;shy;ಲ&amp;shy;ವಿ&amp;shy;ಲ್ಲ&amp;shy;ವೆಂ&amp;shy;ಬುದು ಎಲ್ಲ&amp;shy;ರಿಗೂ ಸ್ಪಷ್ಟ&amp;shy;ವಾ&amp;shy;ಗ&amp;shy;ಬೇಕು. ನಮ್ಮ ಹಣ&amp;shy;ವನ್ನು ತೆರಿಗೆ ರೂಪ&amp;shy;ದಲ್ಲಿ ವಸೂಲು ಮಾಡಿ ತಾವು ಮಜಾ ಉಡಾ&amp;shy;ಯಿ&amp;shy;ಸುವ ರಾಜ&amp;shy;ಕಾ&amp;shy;ರ&amp;shy;ಣಿ&amp;shy;ಗಳು ಇನ್ನಾ&amp;shy;ದರೂ ಸ್ಪಷ್ಟ ನಿಲುವು ತೆಗೆ&amp;shy;ದು&amp;shy;ಕೊ&amp;shy;ಳ್ಳ&amp;shy;ದಿ&amp;shy;ದ್ದರೆ ಜನ ಬೀದಿ&amp;shy;ಬೀ&amp;shy;ದಿ&amp;shy;ಯಲ್ಲಿ ಛೀ ಥೂ ಎಂದು ಉಗಿ&amp;shy;ಯುವ ದಿನ ದೂರ&amp;shy;ವಿಲ್ಲ.&lt;br /&gt;&lt;strong&gt;ಏನಾ&amp;shy;ಗಿದೆ ದೇಶಕ್ಕೆ?&lt;br /&gt;&lt;/strong&gt;ಕಾಶ್ಮೀರ, ಮಣಿ&amp;shy;ಪುರ, ತ್ರಿಪುರ, ಅಸ್ಸಾಂ, ನಾಗಾ&amp;shy;ಲ್ಯಾಂಡ್‌, ಪಂಜಾಬ್‌ ಹೀಗೆ ದೇಶ&amp;shy;ದು&amp;shy;ದ್ದಕ್ಕೂ ಎರಡು ದಶ&amp;shy;ಕ&amp;shy;ಗಳ ಹಿಂದೆ ನಡೆ&amp;shy;ಯು&amp;shy;ತ್ತಿದ್ದ ಸ್ವಾತಂತ್ರ್ಯ ಹೋರಾಟ ರೂಪದ ಹಿಂಸಾ&amp;shy;ತ್ಮಕ ಚಳ&amp;shy;ವಳಿ ಈಗ ಹದ್ದು&amp;shy;ಬ&amp;shy;ಸ್ತಿಗೆ ಬಂದಿದೆ. 1992 ರ ಈಚೆಗೆ ಬಾಬ್ರಿ ಮಸೀ&amp;shy;ದಿ&amp;shy;ಯನ್ನು ಕೆಡ&amp;shy;ವಿದ ಮೇಲೆ ಭಯೋ&amp;shy;ತ್ಪಾ&amp;shy;ದ&amp;shy;ನೆಯ ಮತ್ತೊಂದು ಮಜಲು ಶುರು&amp;shy;ವಾ&amp;shy;ಯಿತು. ಬಾಬ್ರಿ ಮಸೀ&amp;shy;ದಿ&amp;shy;ಯನ್ನು ಕೆಡವಿ ಹಿಂದೂ ಕೋಮು&amp;shy;ವಾ&amp;shy;ದಿ&amp;shy;ಗಳು ವಿೃಂ&amp;shy;ಭಿ&amp;shy;ಸಿದ ಡಿಸೆಂ&amp;shy;ಬರ್‌ 6 ರ ಕರಾ&amp;shy;ಳ&amp;shy;ದಿ&amp;shy;ನದ ಬೆಳ&amp;shy;ಕಿ&amp;shy;ನಲ್ಲಿ ಈ ಭಯೋ&amp;shy;ತ್ಪಾ&amp;shy;ದನೆ ವಿಧ್ವಂ&amp;shy;ಸ&amp;shy;ವನ್ನು ನೋಡದೇ ಹೋದರೆ ಕತ್ತ&amp;shy;ಲೆ&amp;shy;ಯಲ್ಲಿ ಬೀಗದ ಕೈಯನ್ನು ಕಳೆ&amp;shy;ದು&amp;shy;ಕೊಂಡು ಬೆಳ&amp;shy;ಕಿ&amp;shy;ನಲ್ಲಿ ಬೀಗದ ಕೈಯನ್ನು ಹುಡು&amp;shy;ಕಿ&amp;shy;ದಂ&amp;shy;ತಹ ವ್ಯರ್ಥ ಪ್ರಯ&amp;shy;ತ್ನ&amp;shy;ವಾ&amp;shy;ಗು&amp;shy;ತ್ತದೆ. ಇದನ್ನು ಆಳು&amp;shy;ವ&amp;shy;ವರು, ಸಮಾಜ ಚಿಂತ&amp;shy;ಕರು, ರಕ್ಷಣಾ ವಿಶ್ಲೇ&amp;shy;ಷ&amp;shy;ಕರು ಅರ್ಥ ಮಾಡಿ&amp;shy;ಕೊ&amp;shy;ಳ್ಳ&amp;shy;ಬೇಕು.&lt;br /&gt;ಇತ್ತೀ&amp;shy;ಚೆಗೆ `ವಿಜಯ ಕರ್ನಾ&amp;shy;ಟಕ' ಪತ್ರಿ&amp;shy;ಕೆ&amp;shy;ಯಲ್ಲಿ ನಿವೃತ್ತ ಮುಖ್ಯ ನ್ಯಾಯ&amp;shy;ಮೂರ್ತಿ, ಹಾಲಿ ರಾಜ್ಯ&amp;shy;ಸಭಾ ಸದಸ್ಯ ಶ್ರೀಮಾನ್‌ ಎಂ. ರಾಮಾ&amp;shy;ಜೋ&amp;shy;ಯಿ&amp;shy;ಸ್‌&amp;shy;ರ&amp;shy;ವರು ಬರೆದ ಲೇಖ&amp;shy;ನ&amp;shy;ದಲ್ಲಿ `ದೇಶ&amp;shy;ದು&amp;shy;ದ್ದಕ್ಕೂ ನಡೆದ ಮುಸ್ಲಿಂ ಭಯೋ&amp;shy;ತ್ಪಾ&amp;shy;ದನಾ ಕೃತ್ಯ&amp;shy;ಗ&amp;shy;ಳಿಗೆ ಪ್ರತೀ&amp;shy;ಕಾ&amp;shy;ರ&amp;shy;ವಾಗಿ ಸಾಧ್ವಿ ಪ್ರಗ್ಯಾ ಸಿಂಗ್‌ ಠಾಕೂರ್‌ ಮತ್ತ&amp;shy;ವರ ಸಂಗಾ&amp;shy;ತಿ&amp;shy;ಗಳು ಭಯೋ&amp;shy;ತ್ಪಾ&amp;shy;ದನೆ ಕೃತ್ಯಕ್ಕೆ ಇಳಿ&amp;shy;ದರು. ಇದು ಪ್ರತಿ&amp;shy;ಸ್ಪಂ&amp;shy;ದ&amp;shy;ನಾ&amp;shy;ತ್ಮ&amp;shy;ಕ&amp;shy;ವಾಗಿ ಬೆಳೆ&amp;shy;ದು&amp;shy;ಬಂದ ಉದ್ಧೇ&amp;shy;ಶಿತ ಕೃತ್ಯವೇ ವಿನಃ ಹಿಂದೂ ಭಯೋ&amp;shy;ತ್ಪಾ&amp;shy;ದನೆ ಎಂದು ಕರೆ&amp;shy;ಯ&amp;shy;ಬಾ&amp;shy;ರದು. ಅವ&amp;shy;ರೆಲ್ಲಾ ಭಗ&amp;shy;ತ್‌&amp;shy;ಸಿಂಗ್‌, ಸುಖ&amp;shy;ದೇವ್‌, ರಾಜ&amp;shy;ಗು&amp;shy;ರು&amp;shy;ರಂ&amp;shy;ತ&amp;shy;ಹ&amp;shy;ವರ ಹೋರಾ&amp;shy;ಟದ ಪರಂ&amp;shy;ಪ&amp;shy;ರೆಗೆ ಸೇರಿ&amp;shy;ದ&amp;shy;ವರು' ಎಂದು ಬಣ್ಣಿ&amp;shy;ಸಿ&amp;shy;ದ್ದರು.&lt;br /&gt;ಕ್ರಿಯೆ ಇಲ್ಲದೇ ಪ್ರತಿ&amp;shy;ಕ್ರಿಯೆ ಇರು&amp;shy;ವು&amp;shy;ದಿ&amp;shy;ಲ್ಲ&amp;shy;ವೆಂ&amp;shy;ಬುದು ವಿಜ್ಞಾ&amp;shy;ನದ ನಿಯಮ. ರಾಮಾ&amp;shy;ಜೋ&amp;shy;ಯಿಸ್‌ ಮಾತು&amp;shy;ಗ&amp;shy;ಳನ್ನೇ ಮುಂದು&amp;shy;ವ&amp;shy;ರೆ&amp;shy;ಸು&amp;shy;ವು&amp;shy;ದಾ&amp;shy;ದರೆ ಈಗ ನಡೆ&amp;shy;ಯು&amp;shy;ತ್ತಿ&amp;shy;ರುವ ಪಾತಕೀ ಕೃತ್ಯ&amp;shy;ಗ&amp;shy;ಳಿಗೂ ಒಂದು ಕ್ರಿಯಾ&amp;shy;ಸ್ವ&amp;shy;ರೂ&amp;shy;ಪದ ಮೂಲ ಇರ&amp;shy;ಲೇ&amp;shy;ಬೇ&amp;shy;ಕ&amp;shy;ಲ್ಲವೇ. ಅದನ್ನೇ ಬಾಬ್ರಿ ಮಸೀದಿ ಕೆಡ&amp;shy;ವಿದ ಕೃತ್ಯ ಎಂದು ಹೇಳ&amp;shy;ಬ&amp;shy;ಹುದು.&lt;br /&gt;ಹಾಗಂತ ರಾಮ&amp;shy;ಜೋ&amp;shy;ಯಿ&amp;shy;ಸ್‌&amp;shy;ರ&amp;shy;ವರು ಸಮ&amp;shy;ರ್ಥಿ&amp;shy;ಸಿ&amp;shy;ಕೊಂ&amp;shy;ಡಂತೆ ದೇಶ&amp;shy;ದ&amp;shy;ಲ್ಲಿನ ಭಯೋ&amp;shy;ತ್ಪಾ&amp;shy;ದನೆ ಕೃತ್ಯ&amp;shy;ಗ&amp;shy;ಳನ್ನು ಸಮ&amp;shy;ರ್ಥಿ&amp;shy;ಸು&amp;shy;ವುದು ಹಿಂಸಾ&amp;shy;ವಿ&amp;shy;ನೋ&amp;shy;ದ&amp;shy;ವಾ&amp;shy;ಗು&amp;shy;ತ್ತದೆ. ಹಿಂಸೆ&amp;shy;ಯನ್ನು ಸಂಭ್ರ&amp;shy;ಮಿ&amp;shy;ಸು&amp;shy;ವುದು, ಅದನ್ನು ಪ್ರತ್ಯಕ್ಷ ಯಾ ಪರೋ&amp;shy;ಕ್ಷ&amp;shy;ವಾಗಿ ಸಮ&amp;shy;ರ್ಥಿ&amp;shy;ಸು&amp;shy;ವುದು ಎರಡೂ ಕೂಡ ಶಾಂತಿ ಪ್ರಿಯ&amp;shy;ರಿಗೆ ತಕ್ಕು&amp;shy;ದಲ್ಲ. ಭಯೋ&amp;shy;ತ್ಪಾ&amp;shy;ದನೆ ಯಾವುದೇ ಮೂಲ&amp;shy;ದಿಂದ ಬರಲಿ ಅದು ಖಂಡ&amp;shy;ನಾರ್ಹ, ಶಿಕ್ಷಾರ್ಹ. ಹಿಂದು&amp;shy;ಗಳು ಮಾಡಿ&amp;shy;ದಾ&amp;shy;ಕ್ಷಣ ಅದು ಒಪ್ಪಿತ, ಮುಸ್ಲಿ&amp;shy;ಮರು ಮಾಡಿ&amp;shy;ದಾ&amp;shy;ಕ್ಷಣ ಅದು ಖಂಡ&amp;shy;ನೀ&amp;shy;ಯ&amp;shy;ವೆಂ&amp;shy;ಬುದು ಶಾಂತಿ&amp;shy;ಪ್ರಿ&amp;shy;ಯ&amp;shy;ರಿಗೆ ಶೋಭೆ ತರುವ ಸಂಗ&amp;shy;ತಿ&amp;shy;ಯಲ್ಲ. ಹಾಗೆ ಹೇಳುತ್ತಾ ಹೋದರೆ 80 ರ ದಶ&amp;shy;ಕ&amp;shy;ದಲ್ಲಿ ಪಂಜಾ&amp;shy;ಬಿ&amp;shy;ನಲ್ಲಿ ಪ್ರತ್ಯೇಕ ಖಾಲಿ&amp;shy;ಸ್ತಾ&amp;shy;ನ್‌&amp;shy;ಗಾಗಿ ಬಿಂದ್ರ&amp;shy;ನ್‌&amp;shy;ವಾಲೆ, ಅಸ್ಸಾಂನ ಉಲ್ಫಾ ಉಗ್ರರು, ತ್ರಿಪುರ ವಿಮೋ&amp;shy;ಚನಾ ಹೋರಾ&amp;shy;ಟ&amp;shy;ಗಾ&amp;shy;ರರು ಹೀಗೆ ಎಲ್ಲ&amp;shy;ವನ್ನೂ ಸಮ&amp;shy;ರ್ಥಿ&amp;shy;ಸ&amp;shy;ಬೇ&amp;shy;ಕಾ&amp;shy;ಗು&amp;shy;ತ್ತದೆ. ಏಕೆಂ&amp;shy;ದರೆ ರಾಮಾ&amp;shy;ಜೋ&amp;shy;ಯಿಸ್‌ ಲೆಕ್ಕ&amp;shy;ದಲ್ಲಿ ಇವ&amp;shy;ರ್ಯಾರು ಸಾಬ&amp;shy;ರಲ್ಲ. ಅವ&amp;shy;ರೆ&amp;shy;ಲ್ಲರೂ `ಸೋಕಾಲ್ಡ್‌ ಹಿಂದು&amp;shy;ಗಳೇ' ಆಗು&amp;shy;ತ್ತಾರೆ.&lt;br /&gt;&lt;strong&gt;ಮುಂ`ಭಯ':&lt;br /&gt;&lt;/strong&gt;ಮುಂಬೈ ಎಂದರೆ ಭಯ ಪಡುವ ಸ್ಥಿತಿ ಈಗಿ&amp;shy;ನ&amp;shy;ದಲ್ಲ. ಬಾಬ್ರಿ ಮಸೀದಿ ಧ್ವಂಸದ ನಂತರ ನಡೆದ ಮುಂಬೈ ಕೋಮು&amp;shy;ಗ&amp;shy;ಲಭೆ ಕುರಿತು ನ್ಯಾಯ&amp;shy;ಮೂರ್ತಿ ಶ್ರೀಕೃಷ್ಣ ಅವರು ಸಲ್ಲಿ&amp;shy;ಸಿದ `ಶ್ರೀಕೃಷ್ಣ ರಿಪೋರ್ಟ್‌' ಓದಿ&amp;shy;ದರೆ ಎದೆ ಝಲ್ಲ&amp;shy;ನೆ&amp;shy;ನಿ&amp;shy;ಸು&amp;shy;ತ್ತದೆ. ಆದರೆ ಇವ&amp;shy;ತ್ತಿಗೂ ಶ್ರೀ ಕೃಷ್ಣ ಕಮಿ&amp;shy;ಶನ್‌ ರಿಪೋ&amp;shy;ರ್ಟ್‌&amp;shy;ನಲ್ಲಿ ಆರೋ&amp;shy;ಪಿ&amp;shy;ತ&amp;shy;ರೆಂದು ಹೆಸರು ಪಡೆದ ಯಾರಿಗೂ ಶಿಕ್ಷೆ&amp;shy;ಯಾ&amp;shy;ಗಿಲ್ಲ. ಅವ&amp;shy;ರೆಲ್ಲಾ ಹಾಗೆ ಸರಾ&amp;shy;ಗ&amp;shy;ವಾಗಿ ಓಡಾ&amp;shy;ಡಿ&amp;shy;ಕೊಂ&amp;shy;ಡಿ&amp;shy;ದ್ದಾರೆ. ಇದಕ್ಕೆ ಯಾರು ಹೊಣೆ?&lt;br /&gt;ಮುಂಬೈ&amp;shy;ನಲ್ಲಿ ನಡೆದ ವಿಧ್ವಂ&amp;shy;ಸಕ ದಾಳಿಯ ಚಿತ್ರ&amp;shy;ವನ್ನು ಟಿ.ವಿ.ಯಲ್ಲಿ ನೋಡು&amp;shy;ತ್ತಿ&amp;shy;ದ್ದರೆ ಮೈ ನಡು&amp;shy;ಗು&amp;shy;ತ್ತದೆ. ತಾಜ್‌, ಟ್ರೆಡೆಂಟ್‌, ಒಬೆ&amp;shy;ರಾಯ್‌ ಹಾಗೂ ನಾರಿ&amp;shy;ಮ&amp;shy;ನ್‌&amp;shy;ಹೌ&amp;shy;ಸ್‌ನ್ನು ಸುಮಾರು 3 ದಿನ&amp;shy;ಗಳ ಕಾಲ ತಮ್ಮ ಹಿಡಿ&amp;shy;ತ&amp;shy;ದ&amp;shy;ಲ್ಲಿ&amp;shy;ಟ್ಟು&amp;shy;ಕೊಂಡ ಉಗ್ರರು ಅಸಾ&amp;shy;ಮಾ&amp;shy;ನ್ಯ&amp;shy;ರೇ&amp;shy;ನಲ್ಲ. ಬೂಟಿನ ತುದಿ&amp;shy;ಯಿಂದ ಹೊಸ&amp;shy;ಕಿ&amp;shy;ಹಾ&amp;shy;ಕು&amp;shy;ವಷ್ಟು ಬೆರ&amp;shy;ಳೆ&amp;shy;ಣಿ&amp;shy;ಕೆಯ ಜನ ಅಲ್ಲಿ&amp;shy;ದ್ದರು. ಆದರೆ ಅವ&amp;shy;ರಿಗೆ ಬೆಂಬ&amp;shy;ಲಿಸಿ ನಿಂತ&amp;shy;ರಲ್ಲ. ಅವರ ಬಗ್ಗೆ ಸರ್ಕಾರ ಎಚ್ಚ&amp;shy;ರ&amp;shy;ವ&amp;shy;ಹಿ&amp;shy;ಸ&amp;shy;ಬೇ&amp;shy;ಕಾ&amp;shy;ಗಿದೆ.&lt;br /&gt;ಈಗ ಬರು&amp;shy;ತ್ತಿ&amp;shy;ರುವ ವರ&amp;shy;ದಿ&amp;shy;ಗಳ ಪ್ರಕಾರ ಈ ಕೆಲವು ಹೋಟೆ&amp;shy;ಲ್‌&amp;shy;ಗ&amp;shy;ಳಲ್ಲಿ ಕೆಲವು ದಿನ&amp;shy;ಗ&amp;shy;ಳಿಗೆ ಮೊದಲೇ ಉಗ್ರರು ನೌಕ&amp;shy;ರಿಗೆ ಸೇರಿ&amp;shy;ದ್ದರು. ಅಲ್ಲಿಂ&amp;shy;ದಲೇ ಹೊಂಚು ಹಾಕಿ&amp;shy;ದ್ದರು. ಮೊದಲೇ ಆಗ&amp;shy;ಮಿಸಿ ಸಿದ್ಧತೆ ಮಾಡಿ&amp;shy;ಕೊಂಡ ಉಗ್ರರ ಅಪ್ಪಣೆ ಮೇರೆಗೆ ಗಡಿ&amp;shy;ಭಾ&amp;shy;ಗ&amp;shy;ದಿಂದ ಕೆಲ&amp;shy;ವರು ಒಳಗೆ ನುಸು&amp;shy;ಳಿ&amp;shy;ದರು. ಇಡೀ ದೇಶ&amp;shy;ವನ್ನೇ ನಡು&amp;shy;ಗಿ&amp;shy;ಸಿ&amp;shy;ದರು.&lt;br /&gt;ಹಾಗಾ&amp;shy;ದರೆ ದೇಶ&amp;shy;ದೊ&amp;shy;ಳ&amp;shy;ಗಿನ ದ್ರೋಹಿ&amp;shy;ಗಳು ಈ ವಿದೇ&amp;shy;ಶಿ&amp;shy;ಯ&amp;shy;ರಿಗೆ ಸಪೋರ್ಟ್‌ ಮಾಡಿದ್ದು ಸುಳ್ಳಲ್ಲ. ಅಲ್ಲದೇ ದೇಶ&amp;shy;ದೊ&amp;shy;ಳಕ್ಕೆ ನುಸು&amp;shy;ಳುವ ವಿದೇ&amp;shy;ಶಿ&amp;shy;ಯ&amp;shy;ರನ್ನು ತಡೆ&amp;shy;ಯುವ ಶಕ್ತಿ ನಮ್ಮ ರಕ್ಷಣಾ ವ್ಯವ&amp;shy;ಸ್ಥೆಗೆ ಇಲ್ಲವೆ?&lt;br /&gt;ದೇಶದ ರಕ್ಷಣಾ ವ್ಯವಸ್ಥೆ ಎಷ್ಟು ತಿರುಪೆ ಎದ್ದು ಹೋಗಿದೆ ಎಂಬು&amp;shy;ದಕ್ಕೆ ಇಲ್ಲಿದೆ ಉದಾ&amp;shy;ಹ&amp;shy;ರಣೆ. ನ.28 ರಂದು ಮಾಸ್ಕೋ&amp;shy;ದಿಂದ ದೆಹ&amp;shy;ಲಿಗೆ ಕರ್ನಾ&amp;shy;ಟಕ ಮೂಲದ ವ್ಯಕ್ತಿ&amp;shy;ಯೊ&amp;shy;ಬ್ಬರು ಬಂದಿ&amp;shy;ಳಿ&amp;shy;ದರು. ಆದರೆ ಮಾಸ್ಕೋ&amp;shy;ದಲ್ಲಿ ವಿಮಾನ ಬದ&amp;shy;ಲಾ&amp;shy;ಯಿ&amp;shy;ಸು&amp;shy;ವಾಗ ಅವರ ಲಗ್ಗೇಜ್‌ ತಪ್ಪಿ ಕರಾ&amp;shy;ಚಿಗೆ ಹೋಗಿತ್ತು. ಅದ&amp;shy;ಕ್ಕಾಗಿ ನ.28 ರ ಬೆಳಿಗ್ಗೆ ದೆಹ&amp;shy;ಲಿಯ ವಿಮಾನ ನಿಲ್ದಾ&amp;shy;ಣಕ್ಕೆ ಬರಲು ಸಿಬ್ಬಂದಿ ಸೂಚಿ&amp;shy;ಸಿ&amp;shy;ದ್ದರು. ಅದ&amp;shy;ರಂತೆ ಸದರಿ ವ್ಯಕ್ತಿ ವಿಮಾನ ನಿಲ್ದಾ&amp;shy;ಣಕ್ಕೆ ಹೋದರೆ ಒಳ ಪ್ರವೇ&amp;shy;ಶಿ&amp;shy;ಸಲು ಸಿಬ್ಬಂದಿ ಅಡ್ಡಿ ಪಡಿ&amp;shy;ಸಿ&amp;shy;ದರು. ತಲೆ ಮೇಲೆ&amp;shy;ಕೆ&amp;shy;ಳಗೆ ಮಾಡಿ&amp;shy;ದರೂ ಅವ&amp;shy;ರನ್ನು ಒಳಗೆ ಬಿಡಲೇ ಇಲ್ಲ. ಜತೆ&amp;shy;ಗಿ&amp;shy;ದ್ದ&amp;shy;ವ&amp;shy;ರೊ&amp;shy;ಬ್ಬರು ಭದ್ರತಾ ಸಿಬ್ಬಂದಿ ಕೈಗೆ 500 ರೂ.ಗಳ ಎರಡು ನೋಟು ಇಟ್ಟರು. ಕೂಡಲೇ ಅವರ ಕೆಲ&amp;shy;ಸ&amp;shy;ವಾ&amp;shy;ಯಿತು. ಲಂಚಕ್ಕೆ ಕೈಯೊ&amp;shy;ಡ್ಡಿದ ಸಿಬ್ಬಂದಿ ಕರ್ನಾ&amp;shy;ಟ&amp;shy;ಕದ ವ್ಯಕ್ತಿ&amp;shy;ಯನ್ನು ತಾವು ಹೋಗ&amp;shy;ಬೇ&amp;shy;ಕಾದ ಜಾಗಕ್ಕೆ ಬಿಟ್ಟು ಬಂದ. ಇಷ್ಟರ ಮಟ್ಟಿಗೆ ನಮ್ಮ ದೇಶದ ವ್ಯವಸ್ಥೆ `ಭದ್ರ'ವಾಗಿದೆ.&lt;br /&gt;ಮುಂಬೈ&amp;shy;ನಲ್ಲೂ ಹೀಗೆ ಆಗಿ&amp;shy;ರ&amp;shy;ಲಿಕ್ಕೆ ಸಾಕು. ಆದರೆ ಸ್ವಾತಂ&amp;shy;ತ್ರ್ಯದ ಇಷ್ಟು ವರ್ಷ&amp;shy;ದಲ್ಲಿ ಈ ರೀತಿಯ ಘಟನೆ ನಡೆ&amp;shy;ದಿ&amp;shy;ರ&amp;shy;ಲಿಲ್ಲ. ಹೊರ&amp;shy;ಗಿ&amp;shy;ನಿಂದ ಬಂದ ಶತ್ರು&amp;shy;ಗಳು ನಮ್ಮ ದೇಶದ ಯಾವುದೇ ಒಂದು ಪ್ರದೇ&amp;shy;ಶ&amp;shy;ವನ್ನು ತಮ್ಮ ಹಿಡಿ&amp;shy;ತ&amp;shy;ದ&amp;shy;ಲ್ಲಿ&amp;shy;ಟ್ಟು&amp;shy;ಕೊಂಡ ನಿದ&amp;shy;ರ್ಶ&amp;shy;ನ&amp;shy;ವಿ&amp;shy;ರ&amp;shy;ಲಿಲ್ಲ. ದೇಶದ ಆಡ&amp;shy;ಳಿತ ಸಂಪೂರ್ಣ ವೈಫ&amp;shy;ಲ್ಯ&amp;shy;ವಾ&amp;shy;ಗಿ&amp;shy;ರುವ ದ್ಯೋತ&amp;shy;ಕ&amp;shy;ವಿದು.&lt;br /&gt;ರಾಜ&amp;shy;ಕಾ&amp;shy;ರ&amp;shy;ಣಿ&amp;shy;ಗಳು ಭ್ರಷ್ಟ&amp;shy;ರಾಗಿ ನಾಲ್ಕೈದು ತಲೆ&amp;shy;ಮಾ&amp;shy;ರಿಗೆ ಆಗು&amp;shy;ವಷ್ಟು ಆಸ್ತಿ ಮಾಡಿ&amp;shy;ಕೊಂ&amp;shy;ಡಿ&amp;shy;ರು&amp;shy;ವಾಗ, ಸಹಜ ಮನು&amp;shy;ಷ್ಯರೇ ಆಗಿ&amp;shy;ರುವ ರಕ್ಷಣಾ ಸಿಬ್ಬಂದಿ ಭ್ರಷ್ಟ&amp;shy;ರಾ&amp;shy;ಗು&amp;shy;ವುದು ಅಸ&amp;shy;ಹ&amp;shy;ಜ&amp;shy;ವೇ&amp;shy;ನಲ್ಲ. ಇದನ್ನು ತಪ್ಪಿ&amp;shy;ಸುವ ಹೊಣೆ ಯಾರದು?&lt;br /&gt;ಈಗ ದೇಶವೇ ಕಿತ್ತು&amp;shy;ಹೋ&amp;shy;ಗಿದೆ ಎಂದು ಬೀಗು&amp;shy;ತ್ತಿ&amp;shy;ರುವ ಬಿಜೆಪಿ ಅಧಿ&amp;shy;ಕಾ&amp;shy;ರಕ್ಕೆ ಬಂದರೆ ಆಗ ಮಾಡು&amp;shy;ವು&amp;shy;ದೇನು? ಸಂಸತ್‌ ಭವ&amp;shy;ನದ ಮೇಲೆ ದಾಳಿ ನಡೆ&amp;shy;ದಾಗ, ಅಕ್ಷ&amp;shy;ರ&amp;shy;ಧಾ&amp;shy;ಮದ ಮೇಲೆ ಉಗ್ರರು ದಾಳಿ ಎಸ&amp;shy;ಗಿ&amp;shy;ದಾಗ ಬಿಜೆಪಿ ಏನು ಮಾಡು&amp;shy;ತ್ತಿತ್ತು. ಯಾವುದೇ ವಿಷ&amp;shy;ಯ&amp;shy;ವನ್ನು ವೋಟಿನ ರಾಜ&amp;shy;ಕಾ&amp;shy;ರ&amp;shy;ಣಕ್ಕೆ ಅಸ್ತ್ರ ಮಾಡಿ&amp;shy;ಕೊ&amp;shy;ಳ್ಳು&amp;shy;ವು&amp;shy;ದ&amp;shy;ಕ್ಕಿಂತ ದೇಶದ ಭದ್ರತೆ, ಸಮ&amp;shy;ಗ್ರತೆ ದೃಷ್ಟಿ&amp;shy;ಯಿಂದ ನೋಡ&amp;shy;ಬೇಕು.&lt;br /&gt;ಘಟನೆ ನಡೆದ ಕೂಡಲೇ ಮಹಾ&amp;shy;ರಾ&amp;shy;ಷ್ಟ್ರಕ್ಕೆ ತೆರಳಿ ಮೃತ ಯೋಧ&amp;shy;ರಿಗೆ 1 ಕೋಟಿ ರೂ. ಪರಿ&amp;shy;ಹಾರ ಘೋಷಿ&amp;shy;ಸಿದ ಗುಜ&amp;shy;ರಾತ್‌ ಮುಖ್ಯ&amp;shy;ಮಂತ್ರಿ ನರೇಂದ್ರ ಮೋದಿ ತಮ್ಮ ಅಧಿ&amp;shy;ಕಾ&amp;shy;ರ&amp;shy;ವ&amp;shy;ಧಿ&amp;shy;ಯಲ್ಲಿ ಮಾಡಿ&amp;shy;ದ್ದೇನು? ಗುಜ&amp;shy;ರಾ&amp;shy;ತೆಂ&amp;shy;ಬುದು ಶಿಲಾ&amp;shy;ಯು&amp;shy;ಗದ ಕಾಲದ ರಾಜ್ಯ&amp;shy;ವಾಗಿ ಪರಿ&amp;shy;ವ&amp;shy;ರ್ತಿ&amp;shy;ತ&amp;shy;ರಾ&amp;shy;ದಾಗ ಇದೇ ಮೋದಿ ಸಂಭ್ರ&amp;shy;ಮಿ&amp;shy;ಸಿ&amp;shy;ರ&amp;shy;ಲಿ&amp;shy;ಲ್ಲವೇ? ಗರ್ಭಿ&amp;shy;ಣಿಯ ಭ್ರೂಣ ಬಗೆದು ಬೆಂಕಿಗೆ ಹಾಕಿ ಸುಡು&amp;shy;ವಾಗ ಮೋದಿ&amp;shy;ಯ&amp;shy;ವರ ದೇಶ&amp;shy;ಪ್ರೇಮ ಎಲ್ಲಿ ಹೋಗಿತ್ತು?&lt;br /&gt;ಎಲ್ಲಾ ಪಕ್ಷ&amp;shy;ಗಳು ರಾಜ&amp;shy;ಕೀಯ ಮಾಡು&amp;shy;ವುದು ಬಿಟ್ಟು ದೇಶದ ಹಿತ&amp;shy;ದೃ&amp;shy;ಷ್ಟಿ&amp;shy;ಯಿಂದ ಚಿಂತಿ&amp;shy;ಸ&amp;shy;ಬೇಕು. ಉಗ್ರರು, ದ್ರೋಹಿ&amp;shy;ಗಳು ಯಾರೇ ಇದ್ದರೂ ಅವ&amp;shy;ರನ್ನು ಮಟ್ಟ&amp;shy;ಹಾ&amp;shy;ಕ&amp;shy;ಬೇಕು. ಉಗ್ರರು ಎಂಬ ಪದ ಬಳ&amp;shy;ಸುವ ಬದಲು ದೇಶ&amp;shy;ದ್ರೋ&amp;shy;ಹಿ&amp;shy;ಗ&amp;shy;ಳೆಂದು ಹಣೆ ಪಟ್ಟಿ ಕಟ್ಟಿ ಗಲ್ಲಿ&amp;shy;ಗೇ&amp;shy;ರಿ&amp;shy;ಸಲು ಮುಂದಾ&amp;shy;ಗ&amp;shy;ಬೇಕು. ಸಿಬ್ಬಂ&amp;shy;ದಿ&amp;shy;ಗಳು ಭ್ರಷ್ಟ&amp;shy;ರಾ&amp;shy;ಗ&amp;shy;ದಂತೆ ನೋಡಿ&amp;shy;ಕೊ&amp;shy;ಳ್ಳ&amp;shy;ಬೇಕು. ಹಾಗಾ&amp;shy;ಗ&amp;shy;ಬೇ&amp;shy;ಕಾ&amp;shy;ದರೆ ತಾವು ಭ್ರಷ್ಟ&amp;shy;ರಾ&amp;shy;ಗದೇ ಸಜ್ಜ&amp;shy;ನಿಕೆ, ಪ್ರಾಮಾ&amp;shy;ಣಿ&amp;shy;ಕತೆ ತೋರ&amp;shy;ಬೇಕು. ಆಗ ಮಾತ್ರ ಬೋಧ&amp;shy;ನೆಗೆ ಅರ್ಥ&amp;shy;ವಿ&amp;shy;ರು&amp;shy;ತ್ತದೆ.&lt;br /&gt;ಪೋಟಾ, ಟಾಡಾ&amp;shy;ದಂ&amp;shy;ತಹ ಜನ&amp;shy;ವಿ&amp;shy;ರೋಧಿ ಕಾಯ್ದೆ ತರು&amp;shy;ವು&amp;shy;ದ&amp;shy;ರಿಂದ ಉಗ್ರರ ಉಪ&amp;shy;ಟ&amp;shy;ಳ&amp;shy;ವನ್ನು ಮಟ್ಟ&amp;shy;ಹಾ&amp;shy;ಕಲು ಸಾಧ್ಯ&amp;shy;ವಿಲ್ಲ. ಉಗ್ರ&amp;shy;ತೆಗೆ ಕಾರ&amp;shy;ಣ&amp;shy;ವಾ&amp;shy;ಗುವ ಮನಃ&amp;shy;ಸ್ಥಿ&amp;shy;ತಿ&amp;shy;ಯನ್ನು ಬದ&amp;shy;ಲಾ&amp;shy;ಯಿ&amp;shy;ಸ&amp;shy;ಬೇಕು. ಎಲ್ಲಾ ರೀತಿಯ ಅಸ&amp;shy;ಮಾ&amp;shy;ನತೆ, ಧಾರ್ಮಿಕ ಹಿಂಸೆ, ಶೋಷಣೆ ತೊಲ&amp;shy;ಗಿ&amp;shy;ದಾಗ ಮಾತ್ರ ಶಾಂತಿ, ಸೌಹಾರ್ದ ನೆಲೆ&amp;shy;ಸಲು ಸಾಧ್ಯ. ಸಂಸ&amp;shy;ದೀಯ ಪ್ರಜಾ&amp;shy;ಪ್ರ&amp;shy;ಭು&amp;shy;ತ್ವ&amp;shy;ವೆಂ&amp;shy;ಬುದು `ಡೆಮ್ಮೋ- ಕ್ರಸಿ' ಯಾಗಿ&amp;shy;ರು&amp;shy;ವಾಗ ಇದನ್ನು ಹೇಗೆ ನಿರೀ&amp;shy;ಕ್ಷಿ&amp;shy;ಸಲು ಸಾಧ್ಯ? ಕೆಂಪು&amp;shy;ಕೋ&amp;shy;ಟೆಯ ಮೇಲೆ ಮನ&amp;shy;ಮೋ&amp;shy;ಹ&amp;shy;ನ&amp;shy;ಸಿಂಗ್‌ ಬದಲು ಅಡ್ವಾಣಿ ಬಾವುಟ ಹಾರಿ&amp;shy;ಸುವ ಬದ&amp;shy;ಲಾ&amp;shy;ವ&amp;shy;ಣೆ&amp;shy;ಯಿಂದ ಏನನ್ನೂ ನಿರೀ&amp;shy;ಕ್ಷಿ&amp;shy;ಸಲು ಸಾಧ್ಯ&amp;shy;ವಿಲ್ಲ. ರಾಜ&amp;shy;ಕೀಯ ಸ್ಥಿತ್ಯಂ&amp;shy;ತ&amp;shy;ರ&amp;shy;ವಾಗಿ ದ್ವೇಷ&amp;shy;ರ&amp;shy;ಹಿ&amp;shy;ತ&amp;shy;ವಾದ, ಸಮಾ&amp;shy;ನ&amp;shy;ವಾದ ವ್ಯವಸ್ಥೆ ಜಾರಿ&amp;shy;ಯಾ&amp;shy;ಗ&amp;shy;ಬೇಕು. ಮತ&amp;shy;ದಾ&amp;shy;ರ&amp;shy;ನನ್ನೇ ಕಡು&amp;shy;ನೀ&amp;shy;ಚ&amp;shy;ನ&amp;shy;ನ್ನಾ&amp;shy;ಗು&amp;shy;ವಷ್ಟು ಭ್ರಷ್ಟ&amp;shy;ನ&amp;shy;ನ್ನಾ&amp;shy;ಗಿ&amp;shy;ಸಿ&amp;shy;ರುವ ಈ ವ್ಯವಸ್ಥೆ ಎಂತಹ ಪರಿ&amp;shy;ವ&amp;shy;ರ್ತನೆ ತಂದೀತು? ಇದು ಯೋಚಿ&amp;shy;ಸುವ ಕಾಲ&amp;shy;ವಷ್ಟೇ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-4448592730912667380?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/4448592730912667380/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=4448592730912667380' title='4 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/4448592730912667380'/><link rel='self' type='application/atom+xml' href='http://www.blogger.com/feeds/8477112084544236406/posts/default/4448592730912667380'/><link rel='alternate' type='text/html' href='http://horaganavanu.blogspot.com/2008/12/blog-post.html' title='ಉಗ್ರ ಉಪ­ಟಳ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>4</thr:total></entry><entry><id>tag:blogger.com,1999:blog-8477112084544236406.post-2397549475447938004</id><published>2008-11-16T08:10:00.001-08:00</published><updated>2008-11-16T08:12:05.816-08:00</updated><title type='text'>ಉಗ್ರತೆ-ವಿಕಾರತೆ</title><content type='html'>ಮುಸ್ಲಿಂ ಉಗ್ರರ ಬಗ್ಗೆ ಭೂಮ್ಯಾಕಾಶ ಬಿರಿಯುವಂತೆ ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಯ ಬಾಯಿ ಬಂದಾಗಿದೆ. ಬಿಜೆಪಿ ಪರಿವಾರದ ಆರೆಸ್ಸೆಸ್‌, ಸಂಘಪರಿವಾರ, ಎಬಿವಿಪಿ ಕಾರ್ಯಕರ್ತರು ಬಾಂಬ್‌ಸ್ಪೋಟದಂತಹ ವಿಧ್ವಂಸಕ ಕೃತ್ಯಗಳಲ್ಲಿ ಮೇಲಿಂದ ಮೇಲೆ ಬಂಧಿತರಾಗುತ್ತಿರುವುದು ಉಗ್ರತೆಯ ಹಲವು ಮುಖಗಳನ್ನು ಬಯಲುಗೊಳಿಸಿದೆ.&lt;br /&gt;ದೇಶದ್ರೋಹಿಗಳಾದ ಮುಸ್ಲಿಮ್‌ ಉಗ್ರರು ಪ್ರಮುಖ ನಗರಗಳಲ್ಲಿ ಬಾಂಬ್‌ಸ್ಪೋಟಿಸುವ ಮೂಲಕ ವಿಧ್ವಂಸಕ ಕೃತ್ಯ ನಡೆಸುತ್ತಿದ್ದಾರೆ. ದೇಶದ ಸೌಹಾರ್ದತೆ, ಶಾಂತಿ, ನೆಮ್ಮದಿಗೆ ಭಂಗ ತರುತ್ತಿದ್ದಾರೆ. ಕೋಮುಗಲಭೆಗೆ ಕಾರಣರಾಗುತ್ತಿದ್ದಾರೆಂದು ಬಿಜೆಪಿ ಬೊಬ್ಬಿರಿಯುತ್ತಿತ್ತು. ಇವರನ್ನು ನಿಯಂತ್ರಿಸದ ಕೇಂದ್ರ ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಬಿಜೆಪಿಯ ರಾಷ್ಟ್ರೀಯ ನಾಯಕರಾದ ಅಡ್ವಾಣಿ, ರಾಜನಾಥಸಿಂಗ್‌, ವೆಂಕಯ್ಯನಾಯ್ಡು ಎಲ್ಲರೂ ಹೇಳುತ್ತಿದ್ದರು. ಕರ್ನಾಟಕದ ವಿಧಾನಸಭೆ ಚುನಾವಣೆ ಹಾಗೂ ಈಗ ಆರು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಇದನ್ನೇ ಅಸ್ತ್ರವಾಗಿಸಲು ಬಿಜೆಪಿ ಹೊಂಚು ಹಾಕಿತ್ತು.&lt;br /&gt;ಆದರೆ ಈಗ ಎಲ್ಲರ ಮುಖವಾಡವೂ ಬಯಲಾಗಿದೆ. ಮುಸ್ಲಿಂ ಉಗ್ರರಷ್ಟೇ ಆರೆಸ್ಸೆಸ್‌ ಪ್ರೇರಿತ ಉಗ್ರರೂ ಸಮಬಲದಲ್ಲಿ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಇತ್ತೀಚಿಗೆ ನಡೆದ ಬಂಧನ, ವಿಚಾರಣೆಗಳು ಬಹಿರಂಗಗೊಳಿಸಿವೆ.&lt;br /&gt;ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ ಮಸೀದಿ ಬಳಿ 2006ರಲ್ಲಿ ನಡೆದ ಸ್ಪೋಟದಲ್ಲಿ 38 ಜನ ಸಾವುಕಂಡಿದ್ದರು. ಅದರ ಜಾಡು ಹಿಡಿದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹದಳದ ಸಿಬ್ಬಂದಿ ಮೊದಲು ಸಾಧ್ವಿ ಪ್ರಗ್ಯಾಳನ್ನು ಬಂಧಿಸಿದರು. ಅದರ ಬೆನ್ನಲ್ಲೆ ಕರ್ನಲ್‌ ಶ್ರೀಕಾಂತ್‌ ಪುರೋಹಿತ್‌ ಹಾಗೂ ಮಠಾಧೀಶ ಸುಧಾಕರ ದ್ವಿವೇದಿಯನ್ನು ಬಂಧಿಸಲಾಗಿದೆ. ಈ ಸಂಬಂಧ 25ಕ್ಕೂ ಹೆಚ್ಚು ಬಂಧನಗಳು ನಡೆದಿವೆ.&lt;br /&gt;ಮಾಲೇಗಾಂವ್‌ನಲ್ಲಿ ಬಾಂಬ್‌ಸ್ಪೋಟಿಸಿ ಕೋಮುಗಲಭೆ ಹುಟ್ಟು ಹಾಕುವುದು ಇವರ ಆಶಯವಾಗಿತ್ತೆಂದು ಪ್ರಾಥಮಿಕ ತನಿಖೆ ಹೇಳಿದೆ. ಅಲ್ಲಿಗೆ ಮುಸ್ಲಿಮ್‌ ಉಗ್ರರು ಮಾಡುತ್ತಿದ್ದ ದೇಶದ್ರೋಹಿ ಕೃತ್ಯದಲ್ಲಿ ತಾನು ಭಾಗಿಯೆಂದು ಸಂಘಪರಿವಾರ ತೋರಿಸಿಕೊಟ್ಟಿದೆ. ಇದರ ಜತೆಗೆ ನಾಂದೇಡ್‌ನಲ್ಲಿ ಬಾಂಬ್‌ ತಯಾರಿಸುವಾಗ ಆರೆಸ್ಸೆಸ್‌ ಕಾರ್ಯಕರ್ತ ಸಾವನ್ನಪ್ಪಿದ್ದು ಬಯಲಾಗಿದೆ. ಹಾಗೆಯೇ ತಮಿಳುನಾಡಿನ ತಲಚೇರಿಯಲ್ಲಿ ಪ್ರದೀಪ, ದಿಲೀಪ ಎಂಬ ಆರೆಸ್ಸೆಸ್‌ ಕಾರ್ಯಕರ್ತರು ಕಳೆದವಾರವಷ್ಟೇ ಬಾಂಬ್‌ ತಯಾರಿಕೆಯಲ್ಲಿ ನಿರತರಾಗಿರುವಾಗ ಸಾವು ಕಂಡಿದ್ದಾರೆ.&lt;br /&gt;ಮುಸ್ಲಿಮ್‌ ಉಗ್ರರು, ನಕ್ಸಲೀಯರು ಬಾಂಬ್‌ ತಯಾರಿಸಿ, ಸ್ಪೋಟಿಸುತ್ತಾರೆಂದು ಆಪಾದನೆಗಳ ಸುರಿಮಳೆಗೈಯುತ್ತಿದ್ದ ಬಿಜೆಪಿ ಈಗ ಯಾವ ರೀತಿ ಇದಕ್ಕೆ ಪ್ರತಿಕ್ರಿಯಿಸುತ್ತದೆ. ಇವರ್ಯಾರು ತಮಗೆ ಸಂಬಂಧಪಟ್ಟವರಲ್ಲ, ತಮ್ಮ ಸಂಘಟನೆಗೂ ಈ ಘಟನೆಗಳಿಗೂ ಸಂಬಂಧವಿಲ್ಲವೆಂದು ರಾಜನಾಥ್‌ಸಿಂಗ್‌ ಹೇಳಿದ್ದಾರೆ. ವಿವಿಧ ಸಂಘಪರಿವಾರದ ನಾಯಕರು ಇದನ್ನೇ ಪ್ರತಿಪಾದಿಸಿದ್ದಾರೆ.&lt;br /&gt;ಆದರೆ ಸಾದ್ವಿ ಪ್ರಗ್ಯಾ ಸಿಂಗ್‌ ಠಾಕೂರ್‌ ಎಬಿವಿಪಿ ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾಕೆ. ಹಿಂದಿನ ಲೋಕಸಭೆ ಚುನಾವಣೆಯಲ್ಲಿ, ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ರಾಜನಾಥ್‌ಸಿಂಗ್‌, ನರೇಂದ್ರಮೋದಿ ಜತೆ ವೇದಿಕೆಯಲ್ಲಿ ಕಾಣಿಸಿಕೊಂಡವಳು. ಮುಸ್ಲಿಮರ ಬಗ್ಗೆ ಭಾಷಣ ಬಿಗಿದು ಭರ್ಜರಿ ಚಪ್ಪಾಳೆ ಗಿಟ್ಟಿಸಿದವಳು. ಇದನ್ನೆಲ್ಲಾ ಸಿ ಎನ್‌ ಎನ್‌ ಐಬಿ ಎನ್‌ ಟಿ.ವಿ. ದಾಖಲೆ ಸಹಿತ ಪ್ರದರ್ಶಿಸಿದೆ.&lt;br /&gt;ದೆಹಲಿಯ ಜಾಮಿಯಾ ಮಿಲಿಯಾ ವಿ.ವಿ.ಯ ವಿದ್ಯಾರ್ಥಿಗಳನ್ನು ಅನವಶ್ಯಕವಾಗಿ ಭಯೋತ್ಪಾದಕರೆಂದು ಬಣ್ಣಿಸಿ, ಅವರಿಗೆ ದೇಶದ್ರೋಹಿಗಳ ಪಟ್ಟ ಕಟ್ಟುವ( ಅವರು ಮುಸ್ಲಿಮರೆಂಬ ಏಕೈಕ ಕಾರಣಕ್ಕೆ) ಬಿಜೆಪಿ ಪ್ರಗ್ಯಾ ಬಗ್ಗೆ ಏನು ಹೇಳುತ್ತದೆ. ತಲಚೇರಿ, ನಾಂದೇಡ್‌ ಪ್ರಕರಣಗಳ ಬಗ್ಗೆ ಯಾಕೆ ಮಾತನಾಡುವುದಿಲ್ಲ.&lt;br /&gt;ಈ ಘಟನೆಯ ಹಿಂದೆ ಸಾವರ್ಕರ್‌ ಸೊಸೆ ಹಿಮಾಂಶು ಸಾವರ್ಕರ್‌ ಸ್ಥಾಪಿತ ಅಭಿನವ ಭಾರತ ಇರುವುದು ಪತ್ತೆಯಾಗಿದೆ. ಸೇನೆಯಲ್ಲಿದ್ದ ಕರ್ನಲ್‌ ಶ್ರೀಕಾಂತ್‌ ಪುರೋಹಿತ್‌, ಅಭಿನವ ಭಾರತದ ಸಭೆಗಳಲ್ಲಿ ಪಾಲ್ಗೊಂಡು ಬಜರಂಗದಳ, ಆರೆಸ್ಸೆಸ್‌ ಕಾರ್ಯಕರ್ತರಿಗೆ ಉಪನ್ಯಾಸ ನೀಡುತ್ತಿದ್ದನೆಂಬುದು ಬಯಲಾಗಿದೆ. ಆತನ ಲ್ಯಾಪ್‌ಟಾಪ್‌ ಕೂಡ ಪೊಲೀಸರ ವಶವಾಗಿದ್ದು, ಮಾಲೇಗಾಂವ್‌ ಸ್ಪೋಟದ ರೂವಾರಿ ಈತ ಎಂಬುದು ಈಗ ಮೇಲ್ನೋಟಕ್ಕೆ ಕಂಡು ಬಂದಿರುವ ಸತ್ಯ. ಗಡ್ಡಧಾರಿ ಮುಸ್ಲಿಮರು ಮಾತ್ರ ಭಯೋತ್ಪಾದಕರಲ್ಲ, ಕಾವಿ ಬಟ್ಟೆ ಧರಿಸಿ, ಸಂನ್ಯಾಸಿ ವೇಷ ಧರಿಸಿದ ಭಯೋತ್ಪಾದಕರು ಇದ್ದಾರೆಂಬುದನ್ನು ಇತ್ತೀಚಿನ ಪ್ರಕರಣಗಳು ಬಯಲು ಮಾಡಿವೆ. ಸಾಧ್ವಿ ಪ್ರಗ್ಯಾ ಹಾಗೂ ಮಠಾಧೀಶ ಸುಧಾಕರ ದ್ವಿವೇದಿಯರ ಬಂಧನ ಇದಕ್ಕೆ ಸಾಕ್ಷಿಯಾಗಿದೆ.&lt;br /&gt;ಹಿಂದೂಧರ್ಮದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಶಾಂತಿಯುತ ಮಾರ್ಗಗಳಿಂದ ತಡೆಯಲಾಗದೆಂಬ ಹತಾಶೆಯಲ್ಲಿ ಇವರು ಭಯೋತ್ಪಾದನೆಗೆ ಇಳಿದಿದ್ದಾರೆಂದು ಕೆಲವರು ಸಮರ್ಥಿಸುತ್ತಿದ್ದಾರೆ. ಆದರೆ ಮುಸ್ಲಿಮ್‌ ಭಯೋತ್ಪಾದನೆಗೂ ಹೀಗೆ ಸಮರ್ಥನೆ ನೀಡಬಹುದು. ಬಾಬರಿ ಮಸೀದಿ, ಮುಂಬೈ ಸ್ಪೋಟ, ಗುಜರಾತ್‌ ಮಾರಣಹೋಮ ಹೀಗೆ ಸಾಲು ಸಾಲು ಹಿಂಸೆಯಿಂದ ನಲುಗಿದ ಮುಸ್ಲಿಮ್‌ ಯುವಕರು ಹತಾಶೆಯಿಂದ ಭಯೋತ್ಪಾದನೆಗೆ ಇಳಿದಿದ್ದಾರೆಂದು ಮತ್ತೊಂದು ವರ್ಗ ಪ್ರತಿಪಾದಿಸುತ್ತದೆ.&lt;br /&gt;&lt;strong&gt;ದೇಶದ್ರೋಹ:&lt;br /&gt;&lt;/strong&gt;ಆದರೆ ಯಾವುದೇ ಭಯೋತ್ಪಾದನೆಯೂ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಅದೊಂದು ದೇಶದ್ರೋಹದ ಕೃತ್ಯ. ವ್ಯವಸ್ಥೆಯ ಹಿಂಸೆಯಿಲ್ಲದೇ ವ್ಯವಸ್ಥಿತವಾಗಿ ಹಿಂಸಾಕೃತ್ಯ ಆಯೋಜಿಸುವುದು, ನಡೆಸುವುದು ಅಪರಾಧ. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ. ಸಂವಿಧಾನದ ಹಾಗೂ ಪ್ರಜಾತಂತ್ರದ ಆಶಯಕ್ಕೆ ಸಂಪೂರ್ಣ ವಿರೋಧ.&lt;br /&gt;ಇದನ್ನು ಯಾರೇ ಮಾಡಿದರೂ ಒಕ್ಕೊರಲ ಖಂಡನೆ ಮೂಡಿ ಬರಬೇಕಾಗಿದೆ. ಮುಸ್ಲಿಮರು ಮಾಡಿದಾಗ ಒಂದು, ಹಿಂದುಗಳು ಮಾಡಿದಾಗ ಮತ್ತೊಂದೆಂಬ ಭಾವನೆಯೇ ಭಯೋತ್ಪಾದನೆ ಹಬ್ಬಲು, ಅದು ರಾಕ್ಷಸೀರೂಪದಲ್ಲಿ ಬೆಳೆಯಲು ಕಾರಣವಾಗುತ್ತದೆ. ಈಗ ದೇಶದಲ್ಲಿ ನಡೆದಿರುವುದು ಇದೆ.&lt;br /&gt;ಅಹಮದಾಬಾದ್‌, ಬೆಂಗಳೂರು, ದೆಹಲಿ ಮತ್ತಿತರ ಕಡೆ ನಡೆಯವ ಭಯೋತ್ಪಾದನೆಯನ್ನು ಖಂಡಿಸುವವರು ಗುಜರಾತ್‌ನಲ್ಲಿ ನಡೆದ ನರಮೇಧ, ಇತ್ತೀಚಿಗೆ ಒರಿಸ್ಸಾದಲ್ಲಿ ನಡೆದ ಬರ್ಬರ ಹಿಂಸೆ, ಕರ್ನಾಟಕದಲ್ಲಿ ಕ್ರೈಸ್ತರ ಮೇಲಿನ ದಾಳಿಗಳಿಗೆ ಕಾರಣ ಹುಡುಕುತ್ತಾರೆ. ಅದು ಯಾಕೆ ಆಗಿದೆ ಎಂದು ವಿವರಣೆ ನೀಡಲು ಮುಂದಾಗುತ್ತಾರೆ. ಅದು ಖಂಡನೀಯವೆಂಬ ಘೋಷಣೆ ಕೇಳುವುದಕ್ಕಿಂತ ಆಂತರ್ಯದಲ್ಲಿ ಅದರ ಸಮರ್ಥನೆಯೇ ಗಟ್ಟಿಯಾಗಿ ಪ್ರತಿಧ್ವನಿಸುತ್ತಿರುತ್ತದೆ.&lt;br /&gt;ರಾಜಕಾರಣಿಗಳು ಹೋಗಲಿ, ಭೈರಪ್ಪ, ಚಿದಾನಂದಮೂರ್ತಿ, ಸುಮತೀಂದ್ರನಾಡಿಗರಂತಹ ಸೂಕ್ಷ್ಮ ಮನಸ್ಸಿನ ಸಾಹಿತಿಗಳು ಹೀಗೆ ಮಾತಾಡುವುದು ನಾಚಿಕೆಗೇಡು. ಮುತ್ಸದ್ದಿ ಎಂದು ಕರೆಸಿಕೊಂಡ, ರಾಜಕಾರಣಿಗಳಿಗೆ ನೀತಿ ಸಂಹಿತೆ ಬೋಧಿಸುವ ರಾಮಾಜೋಯಿಸ್‌ರಂತಹವರು ಇದರ ಬೆನ್ನಿಗೆ ನಿಲ್ಲುವುದು ಅಸಹ್ಯ.&lt;br /&gt;&lt;strong&gt;ಯಾಕೆ ಭಯೋತ್ಪಾದನೆ:&lt;br /&gt;&lt;/strong&gt;ಭಯೋತ್ಪಾದನೆ ಹಿಂದೆ ಎರಡು ಕಾರಣಗಳಿವೆ. ಒಂದು ಇದೊಂದು ಮನೋವಿಕಲ್ಪ. ಉಗ್ರತೆಯಲ್ಲಿ ವಿಕಾರತೆ. ಇನ್ನೊಬ್ಬರು ಹಿಂಸೆಯಿಂದ ಒದ್ದಾಡುತ್ತಾ ಸಾಯಲೂ ಆಗದೇ ಬದುಕಲೂ ಆಗದೇ ಇರುವ ಸ್ಥಿತಿಯನ್ನು ನೋಡಿ ಸಂಭ್ರಮಿಸುವುದು ಇಂತಹವರ ದುಶ್ಚಟ. ಇದಕ್ಕೆ ನಿರ್ದಿಷ್ಟ ಕಾರಣಗಳಿಲ್ಲ. ಹಿಂಸಾಮೋಹಿಗಳು, ಹಿಂಸೆಯನ್ನು ವಿೃಂಭಿಸಿ, ಆನಂದಿಸುವ ವಿಕಾರಿಗಳು ಇವರು. ಈಗ ನಡೆಯುತ್ತಿರುವ ಎಲ್ಲಾ ರೀತಿಯ ಭಯೋತ್ಪಾದನೆಯ ಹಿಂದೆ ಇರುವುದು ಇದೆ.&lt;br /&gt;ಇನ್ನೊಂದು ತಮ್ಮ ಅಧಿಕಾರ ಸ್ಥಾಪಿಸುವ ಭಯೋತ್ಪಾದನೆ. ಹಿಜ್ಬುಲ್‌ ಮುಜಾಹಿದ್ದೀನ್‌, ತಾಲಿಬಾನ್‌, ಆರೆಸ್ಸೆಸ್‌, ಬಜರಂಗದಳ, ಶಿವಸೇನೆಯ ಹಿಂಸಾ ಮಾರ್ಗಗಳು.&lt;br /&gt;ಇಲ್ಲಿ ತಮ್ಮ ಅಧಿಕಾರ ಸ್ಥಾಪಿಸುವುದೇ ಭಯೋತ್ಪಾದನೆಗೆ ಕಾರಣ. ಹಿಂಸೆಯನ್ನು ಹುಟ್ಟಿಸುವ ಮೂಲಕ ಅಧಿಕಾರವನ್ನು ಹಡೆಯಬಹುದೆಂಬುದು ಇವರ ಭ್ರಮೆ. ಗುಜರಾತ್‌ನಲ್ಲಿ ನಡೆದ ಹಿಂಸೆಯ ಮೇಲೆಯೇ ಮೋದಿ ಅಧಿಕಾರ ಸ್ಥಾಪಿಸಿದರು. ಜನಾಂಗೀಯ ದ್ವೇಷದ ಅಮಲನ್ನು ಹುಟ್ಟಿಸಿ, ತಮ್ಮ ಶ್ರೇಷ್ಠತೆಯನ್ನು ಪ್ರಜ್ವಲಿಸಿ ಅಧಿಕಾರ ಸ್ಥಾಪನೆ ಇದರ ಗುರಿ. ಇತಿಹಾಸದಲ್ಲಿ ಹಿಟ್ಲರ್‌, ಮುಸಲೋನಿಯಂತ ಫ್ಯಾಸಿಸ್ಟರು ಮಾಡಿದ್ದು ಇದನ್ನೆ.&lt;br /&gt;ನಕ್ಸಲೀಯರು ಹಿಂಸೆಯನ್ನು ಪ್ರತಿಪಾದಿಸುತ್ತಾರಾದರೂ ಅದು ಜನಾಂಗೀಯ, ಧರ್ಮದ ಹಿಂಸೆಯಲ್ಲ. ಅವರ ಹಿಂಸೆಗೆ ಒಂದು ಮಟ್ಟಿಗಿನ ತಾತ್ವಿಕತೆಯಿದೆ. ಪ್ರಭುತ್ವದ(ಸರ್ಕಾರ- ಭೂಮಾಲೀಕರು) ಕೈಯಲ್ಲಿ ಆಧುನಿಕ ಶಸ್ತ್ರಾಸ್ತ್ರವಿದೆ. ಪ್ರಜಾಸತ್ತಾತ್ಮಕ, ಸರ್ವಸಮಾನತೆಯ, ಕ್ರಾಂತಿಕಾರಿ ಸಮಾಜ ಸ್ಥಾಪಿಸಲು ಮುಂದಾಗುವ ಹೋರಾಟಗಾರರನ್ನು ಸರ್ಕಾರ ಬಗ್ಗು ಬಡಿಯಲು ಮುಂದಾಗುತ್ತದೆ. ಇಂತಹ ಸರ್ಕಾರವನ್ನು ತೊಲಗಿಸಿ, ಜನರ ಸರ್ಕಾರ ಸ್ಥಾಪಿಸಲು ಸುದೀರ್ಘ ಪ್ರಜಾ ಸಮರ ಮಾಡಬೇಕು. ಆತ್ಮರಕ್ಷಣೆ ಹಾಗೂ ಜನಾಧಿಕಾರ ಸ್ಥಾಪನೆಗೆ ಅಗತ್ಯವಾದಷ್ಟು ಹಿಂಸೆ ಅಗತ್ಯ ಎಂದು ಇವರು ಹೇಳುತ್ತಾರೆ. ಬಡವರ, ದಲಿತರ, ಭೂಮಿ- ಅನ್ನವಿಲ್ಲದವರ ಪರವಾದ ಹೋರಾಟದಲ್ಲಿ ಹೊಸ ವ್ಯವಸ್ಥೆಯ ಸ್ಥಾಪನೆಯ ಅನಿವಾರ್ಯ ಹಿಂಸೆ ಎಂದು ಹೇಳುತ್ತಾರೆ. ಇವರ ಹಿಂಸೆಯ ಮಾರ್ಗವೂ ಒಪ್ಪತಕ್ಕದ್ದಾಗಲಿ, ಬೆಂಬಲಿಸ ತಕ್ಕದ್ದಾಗಲಿ ಅಲ್ಲ. ಈ ಹಿಂಸೆಯೂ ಕೂಡ ಅಧಿಕಾರ ಸ್ಥಾಪನೆಯ ಉದ್ದೇಶದಿಂದ ಹುಟ್ಟಿದ್ದೆ ಆಗಿದೆ. ಆದರೆ ಇವೆಲ್ಲವನ್ನೂ ಪ್ರತ್ಯೇಕಿಸಿ ನೋಡುವ ಅಗತ್ಯವಿದೆ. ಹಾಗೆಯೇ ಎಲ್ಲಾ ವಿಧದ ಹಿಂಸೆಯನ್ನು ಖಂಡಿಸಬೇಕಾದ ಪರಿಸ್ಥಿತಿಯೂ ಇದೆ.&lt;br /&gt;ಒಟ್ಟಿನಲ್ಲಿ ಹಿಂಸೆಯೆಂಬ ಮನೋವಿಕಾರವನ್ನು ಬದಲಿಸಿ, ಶಾಂತಿ- ಸಹಬಾಳ್ವೆಯತ್ತ ಸಮಾಜವನ್ನು ಮುನ್ನಡೆಸುವುದು ಎಲ್ಲರ ಕರ್ತವ್ಯ. ಪರಸ್ಪರರ ಮೇಲೆ ಗೂಬೆ ಕೂರಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳನ್ನು ದೂರವಿಟ್ಟು, ಶಾಂತಿ ಸಹನೆ ಸಮಾಜ ಎಲ್ಲರ ಗುರಿಯಾಗಬೇಕಿದೆ. ಎಲ್ಲಾ ಬಗೆಯ ಹಿಂಸೆಯ ಬೆಂಬಲಿಸುವವರ ಮನಃಪರಿವರ್ತನೆಯಿಂದ ಮಾತ್ರ ಇದು ಸಾಧ್ಯ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-2397549475447938004?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/2397549475447938004/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=2397549475447938004' title='1 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/2397549475447938004'/><link rel='self' type='application/atom+xml' href='http://www.blogger.com/feeds/8477112084544236406/posts/default/2397549475447938004'/><link rel='alternate' type='text/html' href='http://horaganavanu.blogspot.com/2008/11/blog-post_16.html' title='ಉಗ್ರತೆ-ವಿಕಾರತೆ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>1</thr:total></entry><entry><id>tag:blogger.com,1999:blog-8477112084544236406.post-2234304036585217648</id><published>2008-11-14T07:32:00.000-08:00</published><updated>2008-11-14T07:34:00.568-08:00</updated><title type='text'>ಬೀದಿಗೆ ಬಿತ್ತು ಕೈ</title><content type='html'>&lt;p&gt;ಕೈ ಕೈ ಜೈ ಜೈ ಎಂದು ಘೋಷಣೆ ಕೂಗಿಕೊಂಡು ತಮ್ಮ ಕೈಯನ್ನು ಮೇಲೆತ್ತಿಕೊಂಡು ಹೋಗುತ್ತಿದ್ದವರು ಒಬ್ಬೊಬ್ಬರಾಗಿ `ಹಸ್ತ'ವನ್ನು ಬೀದಿಗೆ ಬಿಸಾಕಿ ನಡೆಯುತ್ತಿದ್ದಾರೆ. ಕಾಂಗ್ರೆಸ್‌ನ ಒಳಜಗಳ, ನಾಯಕರ ಮಧ್ಯದ ಅಸಮಾಧಾನದಿಂದಾಗಿ ಮುರಿದ ಮನೆಯಾಗಿರುವ ಕಾಂಗ್ರೆಸ್‌ನಲ್ಲಿ ಅಳಿದುಳಿದಿರುವ ನಾಯಕರು ಮಹಾಚುನಾವಣೆ ನಂತರ ಬೀದಿಯಲ್ಲಿ ಜೈಜೈ ಹೇಳುತ್ತಾ ಹರ-ತಾಳ ನಡೆಸುವ ಸನ್ನಿವೇಶ ಸೃಷ್ಟಿಯಾಗಲಿದೆ.&lt;br /&gt;ವಿವಿಧ ರಾಜ್ಯ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ನ ಪ್ರಮುಖರ ತಾರಾತಿಗಡಿ ಹೇಳಿಕೆ, ಮಾತಿನ ವರಸೆ ನೋಡಿ, ಕೆಂಪುಕೋಟೆ ಮೇಲೆ ಧ್ವಜ ಹಾರಿಸುವ ಕನಸಿ ಸಂಭ್ರಮದಲ್ಲಿ ಅಡ್ವಾಣಿ ಉಲ್ಲಸಿತರಾಗುತ್ತಿದ್ದಾರೆ. ಬಡಿದಾಡಿ ಕಿತ್ತುಕೊಳ್ಳಬೇಕಾದ ಪ್ರಧಾನಿ ಪಟ್ಟ ಪ್ರಯಾಸವಿಲ್ಲದೇ ಅಡ್ವಾಣಿ ತಟ್ಟೆಗೆ ಬಂದು ಬೀಳಲಿದೆ. ಅಷ್ಟರಮಟ್ಟಿಗೆ ಕಾಂಗ್ರೆಸ್‌ ಸೋತು ಸುಣ್ಣವಾಗಿದೆ. ಆಂತರಿಕ ಕಚ್ಚಾಟ, ಸಮರ್ಥ ನಾಯಕತ್ವದ ಕೊರತೆ, ದೂರದರ್ಶಿತ್ವವಿಲ್ಲದ ಕಾರ್ಯಕ್ರಮಗಳು, ಅಡಾತಡಿ ನಿರ್ಧಾರಗಳು ಹೀಗೆ ಸಾಲುಸಾಲು ಇಳಿಮೆಟ್ಟಿಲುಗಳ ಮೇಲೆ ನಿಂತ ಕಾಂಗ್ರೆಸ್‌ನ್ನು ಸ್ವಯಂಕೃತ ಪಾಪಕೂಪಕ್ಕೆ ತಳ್ಳಲು ವಿಶ್ವದ ಆರ್ಥಿಕ ಕುಸಿತ ಭೂತದಂತೆ ಬಂದು ನಿಂತಿದೆ. ಚುನಾವಣೆ ಮನೆಯ ಗೇಟಿಗೆ ಬಂದು ನಿಂತಿರುವ ಹೊತ್ತಿನಲ್ಲಿ ಬಿಗಡಾಯಿಸಿರುವ ಆರ್ಥಿಕ ಮಹಾಕುಸಿತ ಕಾಂಗ್ರೆಸ್‌ನ ಅಧಿಕಾರದ ಗೋರಿಗೆ ಕೊನೆ ಹಿಡಿ ಮಣ್ಣು ಹಾಕಲಿದೆ.&lt;br /&gt;&lt;strong&gt;ಮ್ಯಾಗಿಚಳಿ:&lt;br /&gt;&lt;/strong&gt;ಡಿಸೆಂಬರ್‌ನಲ್ಲಿ ಕೊರೆಯುವ ಚಳಿ ಆರಂಭವಾಗುವ ಮೊದಲೇ ಸೋನಿಯಾಗಾಂಧಿಯವರ ಆಪ್ತಬಳಗದಲ್ಲಿ ಅತ್ಯಾಪ್ತರಾದ ಕರ್ನಾಟಕದ ಮಾರ್ಗರೆಟ್‌ ಆಳ್ವ, ಅಪಸ್ವರದಲ್ಲಿ ಬಾಯಿ ತೆರೆವ ಮೂಲಕ ಕಾಂಗ್ರೆಸ್‌ನಲ್ಲಿ ಚಳಿಯ ನಡುಕ ಹುಟ್ಟಿಸಿದ್ದಾರೆ. ಅವರ ಮಾತು ಹೈಕಮಾಂಡ್‌ ವಿರುದ್ಧವಲ್ಲದಿದ್ದರೂ ಕಾಂಗ್ರೆಸ್‌ನ ಪರಂಪರಾನುಗತ ಹೈಕಮಾಂಡ್‌ ಸಂಸ್ಕೃತಿಗೆ ವ್ಯತಿರಿಕ್ತವಾಗಿದೆ. ತಮ್ಮ ಮೊಮ್ಮಗನಿಗೆ ಸೀಟು ಸಿಗಲಿಲ್ಲವೆಂಬ ಅಸಮಾಧಾನದಲ್ಲಿ ವಿಧಾನಸಭೆ ಚುನಾವಣೆ ವೇಳೆ ನಿಷ್ಕ್ರಿಯತೆ ತೋರಿಸಿದ್ದ ಕಾಂಗ್ರೆಸ್‌ ಹಿರಿಯ ನಾಯಕ ಜಾಫರ್‌ಷರೀಫ್‌ `ಮಾರ್ಗರೆಟ್‌ ಆಳ್ವ ತಮ್ಮ ಅಸಮಾಧಾನವನ್ನು ಈ ರೀತಿ ಬಹಿರಂಗವಾಗಿ ವ್ಯಕ್ತಪಡಿಸಬಾರದಿತ್ತು. ಪಕ್ಷದ ವಲಯದಲ್ಲಿ ಅದನ್ನು ಚರ್ಚಿಸಬಹುದಿತ್ತೆಂದು' ಹೇಳಿರುವುದನ್ನ ಈ ಹಿನ್ನೆಲೆಯಲ್ಲಿ ನೋಡಬೇಕು.&lt;br /&gt;ಸೋನಿಯಾರ `ಥಿಂಕ್‌ಟ್ಯಾಂಕ್‌' ಬಳಗದ ಸದಸ್ಯೆ ಮಾರ್ಗರೆಟ್‌ ಆಳ್ವ ಬಹಿರಂಗವಾಗಿ ಕಾಂಗ್ರೆಸ್‌ ವಿರುದ್ಧ ಮಾತಾಡುವ ಮೂಲಕ ಕಾಂಗ್ರೆಸ್‌ನಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ಅದರಿಂದ ಮ್ಯಾಗಿ ಎಷ್ಟು ಕಳೆದುಕೊಂಡಿದ್ದಾರೆಂಬುದಕ್ಕಿಂತ ಕಾಂಗ್ರೆಸ್‌ ಎಷ್ಟು ಕಳೆದುಕೊಳ್ಳಲಿದೆ ಎಂಬುದು ಮುಖ್ಯ.&lt;br /&gt;ಅವರ ಆಪಾದನೆ ಮುಖ್ಯವಾಗಿ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್‌ ಮಾರಿಕೊಳ್ಳಲಾಗಿದೆ ಎಂಬುದಾಗಿತ್ತು. ಅವರು ಬಹಿರಂಗಪಡಿಸಿರುವುದು ರಹಸ್ಯವೇನಲ್ಲ. ರಾಜ್ಯದ ಹಿರಿ-ಕಿರಿಯ ನಾಯಕರು ಚುನಾವಣೆ ಫಲಿತಾಂಶದ ನಂತರ ಅಂತರಂಗ-ಬಹಿರಂಗವಾಗಿ ಈ ರೀತಿ ಅರ್ಥ ಬರುವ ಹೇಳಿಕೆ ನೀಡಿದ್ದರು. ಕಾಂಗ್ರೆಸ್‌ ಸೋತ ಹತಾಶೆಯ ಹಿನ್ನೆಲೆಯಲ್ಲಿ ಈ ರೀತಿಯ ಅಭಿಪ್ರಾಯಗಳಿಗೆ ಆಗ ಮನ್ನಣೆ ಬರಲಿಲ್ಲ.&lt;br /&gt;ಆಗಲೇ ಹೈಕಮಾಂಡ್‌ ಎಚ್ಚೆತ್ತಿದ್ದರೆ ಈಗಿನಷ್ಟು ಪರಿಸ್ಥಿತಿ ಬಿಗಡಾಯಿಸುತ್ತಿರಲಿಲ್ಲ. ಸೋಲಿಗೆ ಕಾರಣರಾದ ಆಗಿನ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕನಂತಹ ಆಯಕಟ್ಟಿನ ಸ್ಥಾನ ನೀಡಿದ್ದು, ಸಿದ್ದರಾಮಯ್ಯ, ಎಸ್‌.ಎಂ. ಕೃಷ್ಣರಂತಹ ವರ್ಚಸ್ವಿ ನಾಯಕರನ್ನು ಕಡೆಗಣಿಸಿದ್ದು ಇವೆಲ್ಲವೂ ಆಕ್ರೋಶದ ಬೆಂಕಿಗೆ ತುಪ್ಪ ಸುರಿದ ಕ್ರಮವಾಗಿದ್ದವು. ಮೈಸೂರು ಹಾಗೂ ರಾಜ್ಯದ ಇತರ ಭಾಗದಲ್ಲಿ ಕನಿಷ್ಠ 15 ಸೀಟು ತರಲು ಕಾರಣರಾಗಿದ್ದ ಸಿದ್ದುಗೆ ಕೈಕೊಟ್ಟಿದ್ದು ಕಾಂಗ್ರೆಸ್‌ ಹೈಕಮಾಂಡ್‌ ಇಟ್ಟ ಮೊದಲ ತಪ್ಪು ಹೆಜ್ಜೆ.&lt;br /&gt;ಇದರ ಜತೆಗೆ ವಿಧಾನಸಭೆ ಚುನಾವಣೆಯಲ್ಲಿ ಹಳಿಯಾಳ ಕ್ಷೇತ್ರದಿಂದ ಸೋಲು ಕಂಡಿದ್ದ ಆರ್‌.ವಿ. ದೇಶಪಾಂಡೆಗೆ ಕೆಪಿಸಿಸಿ ಪಟ್ಟ ಕಟ್ಟಿದ್ದು ಮತ್ತೊಂದು ತಪ್ಪು ನಡೆ. ಹೇಳಿಕೇಳಿ ಯಾವುದೇ ಮತಬ್ಯಾಂಕ್‌ನ ಪ್ರಬಲ ಹಿನ್ನೆಲೆಯಿಲ್ಲದ ದೇಶಪಾಂಡೆಗೆ ಅಧಿಕಾರ ವಹಿಸಿಕೊಡುವ ಮೂಲಕವೇ, ಉತ್ತರ ಕನ್ನಡದಲ್ಲಿ ಕಾಂಗ್ರೆಸ್‌ನ ಅನಭಿಷಕ್ತ ರಾಣಿಯಂತಿದ್ದ ಮಾರ್ಗರೆಟ್‌ ಆಳ್ವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಇರುಸು ಮುರುಸು ಉಂಟು ಮಾಡಿತ್ತು. ಜತೆಗೆ ಬೆಂಗಳೂರಿನ ಸರ್ವಜ್ಞನಗರದಲ್ಲಿ ಆಳ್ವ ಪುತ್ರ ನಿವೇದಿತ್‌ ಆಳ್ವಗೆ ಟಿಕೆಟ್‌ ಕೊಡದೇ, ಕೆ.ಜೆ. ಜಾರ್ಜ್‌ಗೆ ಟಿಕೆಟ್‌ ನೀಡಿದ್ದು, ಮ್ಯಾಗಿ ಸಿಟ್ಟಿಗೆ ಕಾರಣವಾಗಿತ್ತು. ಇವರೆಡರ ಸಿಟ್ಟನ್ನು ಮ್ಯಾಗಿ ಒಮ್ಮಿಂದೊಮ್ಮೆಗೆ ಹೊರ ಹಾಕಿದ್ದೇ ಹೈಕಮಾಂಡ್‌ನ ಅವಕೃಪೆಗೆ ಕಾರಣವಾಗಬೇಕಾಯಿತು.&lt;br /&gt;ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಮಾರಾಟ ಕಾಂಗ್ರೆಸ್‌ನಲ್ಲಿ ಮಾತ್ರ ನಡೆದಿಲ್ಲ. ಬಿಜೆಪಿಯಲ್ಲಿ ಕೂಡ ಅದೇ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಅನಂತಕುಮಾರ್‌, ಆರ್‌. ಅಶೋಕ್‌, ಯಡಿಯೂರಪ್ಪ ಎಲ್ಲರೂ ಸವ್ವಾಸೇರಿಗೆ ಬಿದ್ದವರಂತೆ ವ್ಯಾಪಾರ ಕುದುರಿಸಿದವರೆ. ವ್ಯಾಪಾರದ ಕಾರಣಕ್ಕೆ ದೆಹಲಿಯಲ್ಲಿ ನಡೆದ ಬಿಜೆಪಿ ಉನ್ನತ ಮಟ್ಟದ ಸಭೆಯಲ್ಲಿ ಯಡ್ಡಿ-ಅನಂತ್‌ ಮಧ್ಯೆ ತಾರಾಮಾರಿಯೇ ನಡೆದಿತ್ತು. ನೀನು-ತಾನು ಎಂಬ ಮಾತುಗಳನ್ನು ಆಡಿಕೊಂಡಿದ್ದರು. ಜೆಡಿ ಎಸ್‌ನ `ದ್ರೋಹ'ದ ಅಲೆಯಲ್ಲಿ ಕಮಲ ಅರಳಿತ್ತು. ಈಗ ಟಿಕೆಟ್‌ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಮಾರಾಟವಾದ ಬಗ್ಗೆ ಗಟ್ಟಿಯಾಗಿ ಗಂಟಲು ಹರಿದುಕೊಳ್ಳುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಮಾನ್‌ ಡಿ.ವಿ. ಸದಾನಂದಗೌಡರು, ಬಿಜೆಪಿಯ ಬಿ ಫಾರಂನ್ನು ತಾವೇ ನಿರ್ಧರಿಸಿ ಕೊಟ್ಟಿದ್ದರೆ ಎಂದು ಅವರೇ ನಂಬುವ ದೇವರೆದುರು ಪ್ರಮಾಣ ಮಾಡಿ ಹೇಳಲು ತಯಾರಿದ್ದಾರೆಯೇ ಎಂಬ ಪ್ರಶ್ನೆಗೆ ಅವರೇ ಉತ್ತರಿಸಲಾರರು.&lt;br /&gt;ಕಾಂಗ್ರೆಸ್‌ನವರು ತಮ್ಮ ಪಕ್ಷದವರಿಗೆ ಟಿಕೆಟ್‌ ಮಾರಿಕೊಂಡರು. ಆದರೆ ಬಿಜೆಪಿ ಬೇರೆ ಪಕ್ಷದ ಚಿಹ್ನೆಯಡಿ ಜನರೇ ಆರಿಸಿ ಕಳಿಸಿದ್ದ ಶಾಸಕರನ್ನೇ ಖರೀದಿ ಮಾಡುವ ಮೂಲಕ ಮಾಡಿದ್ದು ಇನ್ನೇನು? ಬಿಜೆಪಿಯವರು ಶಾಸಕರನ್ನು ದುಡ್ಡುಕೊಟ್ಟು, ಮಂತ್ರಿಗಿರಿ ಆಸೆ ತೋರಿಸಿ ಖರೀದಿಸಿರುವಾಗ ಕಾಂಗ್ರೆಸ್‌ನ್ನು ಟೀಕಿಸಲು ನೈತಿಕ ಹಕ್ಕು ಎಲ್ಲಿದೆ ಸದಾನಂದಗೌಡರೆ? ರಾಜಸ್ತಾನದಲ್ಲೂ ಬಿಜೆಪಿ ಟಿಕೆಟ್‌ ಮಾರಾಟವಾಗಿದೆ ಎಂಬ ಆಪಾದನೆ ಬಗ್ಗೆ ಗೌಡರು ಏನು ಹೇಳುತ್ತಾರೆ?&lt;br /&gt;&lt;strong&gt;ಚಳಿ ಪರಿಣಾಮ:&lt;br /&gt;&lt;/strong&gt;ಮ್ಯಾಗಿ ಹುಟ್ಟಿಸಿದ ಚಳಿಗೆ ಕಾಂಗ್ರೆಸ್‌ನಲ್ಲಿ ಉಡುರು ಶುರುವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಇದ್ದ ಸಂಸದ ಆರ್‌.ಎಲ್‌. ಜಾಲಪ್ಪ, ಆಳ್ವ ಹೇಳಿದ್ದು ಸತ್ಯವೆಂದು ಪ್ರಮಾಣೀಕರಿಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಅವರ ಮಗ ಜೆ. ನರಸಿಂಹಸ್ವಾಮಿಗೆ ಟಿಕೆಟ್‌ ನೀಡಿ, ಕಾಂಗ್ರೆಸ್‌ ಪಕ್ಷ ಗೆಲ್ಲಿಸಿತು ತಾನೆ? ಆನಂತರ ನರಸಿಂಹಸ್ವಾಮಿ `ಕೊಳಚೆ ನಿರ್ಮೂಲನಾ ಮಂಡಳಿ' ಆಸೆಗೆ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಸೇರಿದ್ದು ಯಾಕೆ? ಜಾಲಪ್ಪ ಆ ಚುನಾವಣೆಯಲ್ಲಿ ತಮ್ಮ ಮಗನಿಗೆ ಬೆಂಬಲ ನೀಡದೇ ಇದ್ದರೆ ನರಸಿಂಹಸ್ವಾಮಿ ಆಯ್ಕೆಯಾಗುತ್ತಿದ್ದರೆ? ಈ ಪ್ರಶ್ನೆಯನ್ನು ಜಾಲಪ್ಪ ಕೇಳಿಕೊಳ್ಳಬೇಕಿದೆ.&lt;br /&gt;ಆದರೆ ಜಾಲಪ್ಪ ಹೀಗೆ ಮ್ಯಾಗಿಯನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್‌ ಗಾಯಕ್ಕೆ ಖಾರ ಸವರಿದ್ದಾರೆ. ಜತೆಗೆ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಅದು ಕಾಂಗ್ರೆಸ್‌ಗೆ ನಿವೃತ್ತಿಯೋ ಅಥವಾ ಬೇರೆ ಪಕ್ಷದ ಜತೆ ಮಿಲಾಕತ್‌ಗೆ ದಾರಿಯೋ ಎಂಬುದನ್ನು ಕಾಲವೇ ಹೇಳಬೇಕಿದೆ. ಹಿಂದುಳಿದ ವರ್ಗದ ಪ್ರಮುಖ ನಾಯಕರಲ್ಲೊಬ್ಬರಾದ ಜಾಲಪ್ಪ ಕಾಂಗ್ರೆಸ್‌ನಿಂದ ನಿರ್ಗಮಿಸುತ್ತಿರುವುದು ಹೇಗೆ ಲೆಕ್ಕ ಹಾಕಿದರೂ ಪಕ್ಷಕ್ಕೆ ನಷ್ಟವೇ ಎಂಬುದರಲ್ಲಿ ಎರಡು ಮಾತಿಲ್ಲ.&lt;br /&gt;ಇದರ ಜತೆಗೆ ಸಿದ್ಧರಾಮಯ್ಯ ಕೂಡ ತಮ್ಮ ಧ್ವನಿ ಸೇರಿಸಿದ್ದಾರೆ. ಮ್ಯಾಗಿ ಹೇಳಿರುವುದು ಸತ್ಯ. ಹೈಕಮಾಂಡ್‌ ಈ ಬಗ್ಗೆ ಚಿಂತಿಸಬೇಕೆಂದು ಸಲಹೆ ನೀಡಿದ್ದಾರೆ. ಜತೆಗೆ ಉಪಚುನಾವಣೆಯಲ್ಲಿ ಜೆಡಿ ಎಸ್‌ ಜತೆ ಕೈ ಜೋಡಿಸಿದ್ದೇ ಆದರೆ ತಾವು ಕೈಗೆ ಗುಡ್‌ಬೈ ಹೇಳುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲಿಗೆ ಅವರು ಒಂದು ಕಾಲು ಹೊರಗಿಟ್ಟಿರುವುದು ದಿಟ. ಮ್ಯಾಗಿಯ ನಡೆಯಿಂದ ಕಾಂಗ್ರೆಸ್‌ನ ಎರಡು ಕಂಬಗಳು ಅಲ್ಲಾಡುತ್ತಿವೆ.&lt;br /&gt;ರಾಷ್ಟ್ರಮಟ್ಟದಲ್ಲೂ ಮ್ಯಾಗಿ ನಡೆ ಕಾಂಗ್ರೆಸ್‌ನ್ನ ಅದುರಿಸಿದೆ. ಬಿಹಾರ ಪ್ರತಿಪಕ್ಷ ನಾಯಕ ಆಲಂ ಖುರ್ಷಿದ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಿರಿಯ ನಾಯಕ ಪಿ. ಶಿವಶಂಕರ್‌ ಕೂಡ ಮ್ಯಾಗಿಗೆ ಬೆಂಬಲವಾಗಿ ನಿಂತಿದ್ದಾರೆ. ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಮ್ಯಾಗಿ ನೀಡಿರುವ ಆಘಾತ ಕಾಂಗ್ರೆಸ್‌ನ ಮಟ್ಟಿಗೆ ಆತ್ಮಘಾತುಕವಾದುದು. ಹಾಗೆಯೇ ಆಯಾ ರಾಜ್ಯಗಳ ಚುನಾವಣೆಗೆ ಮುನ್ನೆಚ್ಚರಿಕೆಯೂ ಹೌದು. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಚಿಂತಿಸುವುದಕ್ಕೆ ಇದು ಸಕಾಲ.&lt;br /&gt;&lt;strong&gt;ಬಿಜೆಪಿಗೆ ಅಸ್ತ್ರ:&lt;/strong&gt;&lt;/p&gt;&lt;p&gt; ದೇಶದಲ್ಲಿ ನಡೆದ ಭಯೋತ್ಪಾದನಾ ವಿಧ್ವಂಸಕ ಕೃತ್ಯಗಳ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಬಿಜೆಪಿ ಮಾಲೇಗಾಂವ್‌ ಸ್ಪೋಟದ ಅಪಖ್ಯಾತಿಯಲ್ಲಿ ಮಂಕಾಗಿತ್ತು. ಭಯೋತ್ಪಾದನೆಯೆಂಬುದು ಕಾಂಗ್ರೆಸ್‌ ಹಾಗೂ ಎಡಪಕ್ಷಗಳ ಬೆಂಬಲಿತ ಮುಸ್ಲಿಮರ ಕೃತ್ಯವೆಂಬ ಅಸ್ತ್ರವನ್ನು ಬಳಸುತ್ತಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿತ್ತು.&lt;br /&gt;ಈ ಪರಿಸ್ಥಿತಿಯಿಂದ ಬಚಾವಾಗಲು ಸಿಕ್ಕಿದ ಪ್ರಮುಖ ಅಸ್ತ್ರವೆಂದರೆ ಕಾಂಗ್ರೆಸ್‌ನ ಟಿಕೆಟ್‌ ಮಾರಾಟ. ಮಾರ್ಗರೆಟ್‌ ಆಳ್ವರ ಹೇಳಿಕೆಯಿಂದ ಸಂತುಷ್ಟಗೊಂಡವರು ಬಿಜೆಪಿ ಮುಖಂಡರು. ಈ ಸಂಭ್ರಮದಲ್ಲಿದ್ದ ಬಿಜೆಪಿ ಮಂದಿಗೆ ಇದೀಗ ರಾಜಸ್ತಾನದಲ್ಲಿ ಬಿಜೆಪಿ ಟಿಕೆಟ್‌ ಮಾರಾಟವಾಗಿದೆ ಎಂದು ಬಿಜೆಪಿ ಸಂಸದ ವಿಶ್ವೇಂದ್ರಸಿಂಗ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ಹೇಳಿಕೇಳಿ ಅಲ್ಲಿನ ಮುಖ್ಯಮಂತ್ರಿ ವಸುಂಧರರಾಜೆ ಅವರ ಆಪ್ತರು. ಬಿಜೆಪಿಯಲ್ಲಿ ಬಾಂಬ್‌ ಸಿಡಿದಿದ್ದರಿಂದ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ.&lt;br /&gt;ಕರ್ನಾಟಕದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಟಿಕೆಟ್‌ ಮಾರಾಟದ ಸಂಗತಿಯನ್ನೇ ಪ್ರಧಾನ ಅಸ್ತ್ರವಾಗಿ ಬಳಸಿಕೊಳ್ಳಬೇಕೆಂದಿದ್ದ ಬಿಜೆಪಿ ಮುಖಂಡರು ಈಗ ತಲ್ಲಣಿಸಿದ್ದಾರೆ.&lt;br /&gt;&lt;strong&gt;ಮ್ಯಾಗಿ ಮುಂದೆ?&lt;br /&gt;&lt;/strong&gt;ಬಾಯಿ ತೆರೆಯುವ ಮೂಲಕ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಕಳೆದುಕೊಂಡ ಮಾರ್ಗರೆಟ್‌ ಆಳ್ವ ಮುಂದಿನ ಹಾದಿಯೇನು? ಎಂಬುದು ನಿಗೂಢವಾಗಿದೆ. ಬಹುಜನ ಸಮಾಜ ಪಕ್ಷ ಸೇರಲಿದ್ದಾರೆಂದು ಹೇಳಲಾಗುತ್ತಿದೆಯಾದರೂ ಆ ಪಕ್ಷಕ್ಕೆ ಕರ್ನಾಟಕದಲ್ಲಿ ಭವಿಷ್ಯವಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಉನ್ನತ ಸ್ಥಾನ ಅಲಂಕರಿಸಿ, ಪ್ರಭಾವಿ ಹುದ್ದೆ ಹೊಂದಿದ್ದ ಆಳ್ವ, ಬಿ ಎಸ್‌ಪಿಯ ಪ್ರಶ್ನಾತೀತ ನಾಯಕಿ ಮಾಯಾವತಿಯ ಮರ್ಜಿಗೆ ತಕ್ಕಂತೆ ನಡೆಯುವುದು ಕಷ್ಟ. ಹಾಗಾಗಿ ಅವರು ಅಲ್ಲಿಗೆ ಹೋಗಲಾರರು.&lt;br /&gt;ಲೋಕಸಭೆ ಚುನಾವಣೆಯಲ್ಲಿ ಹೇಗಾದರೂ ಗೆಲ್ಲಬೇಕೆಂಬ ಪಣತೊಟ್ಟಿರುವ ಬಿಜೆಪಿ ಯಾವ ರಾಜಕೀಯ ತಂತ್ರಗಾರಿಕೆ ಹೆಣೆಯಲಿದೆ ಎಂದು ನೋಡಬೇಕಿದೆ. ಉತ್ತರ ಕನ್ನಡದ ಸಂಸದ ಅನಂತಕುಮಾರ್‌ ಹೆಗಡೆ ಅಲ್ಲಿ ಎರಡು ಬಾರಿ ಗೆದ್ದವರು. ಬಿಜೆಪಿ ನಿಲುವಿಗೆ ಬೆಂಬಲವಾಗಿ ನಿಲ್ಲುತ್ತಿಲ್ಲವೆಂಬ ಕಾರಣಕ್ಕೆ ಅವರ ಬಗ್ಗೆ ಪಕ್ಷದಲ್ಲಿ ಅಸಮಾಧಾನವಿದೆ. ಹಲವು ಬಿಜೆಪಿ ಸಂಸದರು ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರೂ ಅನಂತಕುಮಾರ್‌ ಹೆಗಡೆ ನಿಷ್ಕ್ರಿಯರು. ಬಿಜೆಪಿ ನಡೆಗಳ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದೂ ಇದೆ. ಇವರ ಬದಲಿಗೆ ಮಾರ್ಗರೆಟ್‌ ಆಳ್ವರನ್ನು ನಿಲ್ಲಿಸಿ, ಲೋಕಸಭೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಹೆಚ್ಚು ಗಳಿಸಲು ಬಿಜೆಪಿ ಲೆಕ್ಕ ಹಾಕಿದರೂ ಸಂಶಯವಿಲ್ಲ. ಕರ್ನಾಟಕದಲ್ಲಿ ಬಿಜೆಪಿಯ ನಡೆಯನ್ನು ನೋಡಿದ ಯಾರೂ ಇದನ್ನು ನಿರಾಕರಿಸಲಾರರು. ಸಾಂಗ್ಲಿಯಾನ, ಸುಭಾಷ್‌ಭರಣಿಯಂತವರೇ ಬಿಜೆಪಿ ಸೇರಿರುವಾಗಿ ಮಾರ್ಗರೆಟ್‌ ಆಳ್ವ ಸೇರುವುದು ಅಸಾಧ್ಯವೆಂದೇನೋ ಭಾವಿಸಬೇಕಾಗಿಲ್ಲ.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-2234304036585217648?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/2234304036585217648/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=2234304036585217648' title='1 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/2234304036585217648'/><link rel='self' type='application/atom+xml' href='http://www.blogger.com/feeds/8477112084544236406/posts/default/2234304036585217648'/><link rel='alternate' type='text/html' href='http://horaganavanu.blogspot.com/2008/11/blog-post_14.html' title='ಬೀದಿಗೆ ಬಿತ್ತು ಕೈ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>1</thr:total></entry><entry><id>tag:blogger.com,1999:blog-8477112084544236406.post-1989476989177109425</id><published>2008-11-10T07:27:00.000-08:00</published><updated>2008-11-10T07:28:45.535-08:00</updated><title type='text'>ಸ್ತ್ರೀಮತವನುತ್ತರಿಸಲಾರದೆ . . .</title><content type='html'>`ಮನೆ ಮನೆಯಲಿ ದೀಪವುರಿಸಿ, ಹೊತ್ತುಹೊತ್ತಿಗೆ ಅನ್ನವುಣಿಸಿ ತಂದೆ ಮಗುವ ತಬ್ಬಿದಾಕೆ, ನಿನಗೆ ಬೇರೆ ಹೆಸರು ಬೇಕೇ ಸ್ತ್ರೀ ಎಂದರೆ ಅಷ್ಟೇ ಸಾಕೆ'- ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ.&lt;br /&gt;ಇಷ್ಟೆಲ್ಲಾ ತಾಂತ್ರಿಕ ಕ್ರಾಂತಿ ನಡೆದು, ಸಮಾಜದ ಎಲ್ಲಾ ಸ್ತರದಲ್ಲೂ ಮಹಿಳೆ ಮುಂದೆ ಬಂದಿದ್ದರೂ ಇನ್ನೂ ಕೂಡ ಸಮಾಜದಲ್ಲಿ ಸ್ತ್ರೀಯರನ್ನು `ಸೆಕೆಂಡ್‌ ಸೆಕ್ಸ್‌' ಆಗಿಯೇ ಪರಿಗಣಿಸುವುದು ತಪ್ಪಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಸಕ್ರಿಯವಾಗಿ ಮಹಿಳೆ ತೊಡಗಿಸಿಕೊಂಡಿದ್ದರೂ `ನೀನು ಅಸಮರ್ಥೆ' ಎಂದು ಉಚ್ಚರಿಸುವುದನ್ನು ಸಮಾಜ ನಿಲ್ಲಿಸಿಲ್ಲ. ಹೆಚ್ಚು ಮಾತಾಡಿದರೆ `ಬಜಾರಿ'(ನಿಜಾರ್ಥ ಬಜಾರಿ-ಮಾರ್ಕೆಟ್‌-ನಲ್ಲಿರುವವವಳು) ಎಂದು ಹೀಗಳೆಯುವುದು, ಸ್ವಲ್ಪ ಅಳುಕಿದರೆ `ಅಳುಮುಂಜಿ' ಎಂಬ ಬಿರುದು ದಯಪಾಲಿಸುವುದು ನಿರಂತರ. ವ್ಯಕ್ತಿತ್ವ ರೂಪಣೆಗೆ ಮುಂದಾಗಿ ಯಾವುದಕ್ಕೂ ಕಂಗೆಡದೆ ಮುನ್ನಡೆದರೆ ವೈಯಕ್ತಿಕ ತೇಜೋವಧೆ, ಅಕ್ರಮ ಸಂಬಂಧದ ಆರೋಪ, ಆ್ಯಸಿಡ್‌ ದಾಳಿ, ಆತ್ಯಂತಿಕವಾಗಿ ಕೊಲೆಯಂತಹ ದುಷ್ಕೃತ್ಯಗಳಿಗೆ ಆಕೆ ಬಲಿಯಾಗಬೇಕಾಗುತ್ತದೆ. ಇದು ಸಮಾಜದ ಸುಡುವಾಸ್ತವ.&lt;br /&gt;ಒಟ್ಟಂದದಲ್ಲಿ ಮಹಿಳೆ ಪುರುಷನಿಗೆ ಸಮಾನಿಯೆಂದು ಒಪ್ಪುವುದು ಹೋಗಲಿ, ಭಾವಿಸಲು ಕೂಡ ಪುರುಷ ಕೇಂದ್ರೀತ ಸಮಾಜ ಸಿದ್ದವಿಲ್ಲ. ಅಪ್ಪನಿಗೆ ಮಗಳಾಗಿ, ಗಂಡನಿಗೆ ಹೆಂಡತಿಯಾಗಿ, ಮಗನಿಗೆ ತಾಯಾಗಿ, ಅಣ್ಣನಿಗೆ ತಂಗಿಯಾಗಿ, ಮೇಲಾಧಿಕಾರಿಯಾಗಿ ಅಡಿಯಾಧಿಕಾರಣಿಯಾಗಿಯೇ ಆಕೆ ಇರಬೇಕೆಂಬುದು ನಿಸರ್ಗ ನಿಯಮ ಅಥವಾ ಸೂರ್ಯನ ಸುತ್ತ ಭೂಮಿ ತಿರುಗುವಷ್ಟೇ ಸಹಜವೆಂದು ಪರಿಭಾವಿಸಲಾಗಿದೆ.&lt;br /&gt;ಪರಂಪರೆಯ ಕೊಡುಗೆ?&lt;br /&gt;ಅಪುತ್ರಸ್ಯ ಗತಿರ್ನಾಸ್ತಿ ಎಂಬಲ್ಲಿಂದ ಹಿಡಿದು, ಪಿತಾರಕ್ಷತಿ ಕೌಮಾರೆ, ಭರ್ತ್ಯಾ ರಕ್ಷತಿ ಯೌವನೇ, ರಕ್ಷಂತಿ ಸ್ಥವಿರೇ ಪುತ್ರಾ ನಃ ಸ್ತ್ರೀ ಸ್ವಾತಂತ್ರಮರ್ಹಸಿ ಎಂಬಲ್ಲಿಯವರೆಗೆ ಪುರಾಣದಲ್ಲಿ ಸ್ತ್ರೀಯರನ್ನು `ರಕ್ಷಿಸಿ'ಕೊಂಡು ಬರಲಾಗಿದೆ. ಗೃಹಿಣಿ ಗೃಹಮುಚ್ಯತೆ(ಗೃಹಂ ಉಚ್ಚತೆ) ಎಂದು ಹೇಳುತ್ತಲೇ ಗೃಹದೊಳಗೆ ಗೃಹಿಣಿಯನ್ನು ಮುಚ್ಚಿಡಲಾಗಿದೆ. ಮೇಲೆ ಇಟ್ಟರೆ ಕಾಗೆ ಕಚ್ಚುತ್ತೆ, ಕೆಳಗೆ ಇಟ್ಟರೆ ಇರುವೆ ಕಚ್ಚುತ್ತೆ ಎಂಬಂತೆ ಆಕೆಯನ್ನು `ಸುರಕ್ಷತೆ'ಯಿಂದ ನೋಡಿಕೊಂಡು ಆಕೆಗೆ ಸೂರ್ಯ ರಶ್ಮಿ ಬೀಳದಂತೆ ಕಾಪಿಡಲಾಗಿದೆ. ಅದರ ಮೂಲಕ ಹೊರಜಗತ್ತನ್ನು ನೋಡದಂತಹ `ಬಂಧನ'ದಲ್ಲಿ ಇಡಲಾಗಿದೆ.&lt;br /&gt;ಆಧುನಿಕ ಮಹಿಳೆ ಉದ್ಯೋಗ, ದುಡಿತದಲ್ಲಿ ತೊಡಗಿದ್ದರೂ ಕೂಡ ಆಕೆಗೆ ಗೃಹಬಂಧನ ತಪ್ಪಿಲ್ಲ. ಹೊರಗೆ ಮೈಮುರಿ ಕೆಲಸ, ಮನೆಯಲ್ಲಿ ಬಂದರೆ ಅಡುಗೆ, ಬಟ್ಟೆಯ ರ್ವಾತ, ಜತೆಗೆ ಮಕ್ಕಳ ಉಪದ್ವ್ಯಾಪ ಹೀಗೆ ಜೀವನವೇ ರೋಸಿಹೋಗುವಷ್ಟು ಆಕೆಯನ್ನು ಹೆಡೆಮುರಿ ಕಟ್ಟಿ ದುಡಿಮೆಗೆ ಹಚ್ಚಲಾಗಿದೆ. ಆಫೀಸು, ಮನೆ, ಮಕ್ಕಳ ಓದು-ಆರೈಕೆ ಬಿಟ್ಟರೆ ಆಕೆಗೆ ಮತ್ತೊಂದು ಪ್ರಪಂಚವೇ ಇಲ್ಲದಂತೆ ಮಾಡಲಾಗಿರುವುದು ಆಧುನಿಕತೆಯ ಕೊಡುಗೆ. ದುಡಿಯುವ, ತಿಂಗಳಾರಂಭದಲ್ಲಿ ಸಂಬಳ ಎಣಿಸುವ, ಗಂಡಸರಂತೆ ಕಚೇರಿ ವ್ಯವಹಾರ ಮಾಡುವ `ಸ್ವಾತಂತ್ರ್ಯ'ವಿದ್ದರೂ ದುಡಿದ ದುಡ್ಡು ಗಂಡನ ನಿಯಂತ್ರಣದಲ್ಲಿರುತ್ತದೆ. ಮನೆಯ ಕೆಲಸದ ಜತೆಗೆ ದುಡಿಮೆಯ ಕೆಲಸದ ಹೊರೆಯೂ ಆಕೆಯನ್ನು ಬಳಲಿ ಬೆಂಡಾಗಿಸುತ್ತಿದೆ. ಒಂದಿದ್ದ ಜವಾಬ್ದಾರಿ ಎರಡಾಗಿರುವುದಷ್ಟೇ ಮಹಿಳೆಯ ಹೆಚ್ಚುಗಾರಿಕೆಯಾಗಿದೆ. ಜತೆಗೆ ಹೋಗುವಾಗ, ಬರುವಾಗ ದಾರಿಯಲ್ಲಿನ ಕಿರುಕುಳ, ಗಂಡನ ಅನುಮಾನ, ಅತ್ತೆ, ನಾದಿನಿಯರ ಕೊಂಕುನುಡಿಯನ್ನೂ ಕೇಳಬೇಕಾಗಿದೆ. ಕೆಲವು ಕಚೇರಿಗಳಲ್ಲಿ ಮೇಲಾಧಿಕಾರಿಗಳು, ಸಹೋದ್ಯೋಗಿಗಳ ಕಿರುಕುಳವೂ ಆಕೆಯನ್ನು ಬಾಧಿಸುತ್ತಿದೆ. ಕೈಗೆ ಒಂದಿಷ್ಟು ಹಣವು ಸಿಕ್ಕಿದರೂ ಕೂಡ ಇವೆಲ್ಲವೂ ಆಕೆಯ ಮೇಲೆ ಆಕ್ರಮಣ ಮಾಡುತ್ತಿದೆ.&lt;br /&gt;ಪುರುಷಾಧಿಪತ್ಯದ ಠೇಂಕಾರದಲ್ಲಿ ಸಿಕ್ಕಿದ ಸ್ವಾತಂತ್ರ್ಯವೂ ನಿಯಂತ್ರಿತವಾಗಿದ್ದು, ದುಡಿಯುವ ಮಹಿಳೆಯರಲ್ಲಿ ಶೇ.50 ರಷ್ಟು ಮಂದಿ, ಮನೆ ನೋಡಿಕೊಳ್ಳುವುದಷ್ಟೇ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅಭಿಪ್ರಾಯಪಡುವ ಸ್ಥಿತಿಗೆ ತಲುಪಿದ್ದಾರೆ. ರಾತ್ರಿ ಪಾಳಿ ಮಾಡುವ ಮಹಿಳೆಯರದ್ದಂತೂ ಸಂಕಷ್ಟಗಳ ಸರಮಾಲೆ.&lt;br /&gt;ಈ ಎಲ್ಲದರ ಮಧ್ಯೆಯೂ ದುಡಿಯುವ ಸ್ವಾತಂತ್ರ್ಯ, ಹೊರಗಡೆ ಸ್ವಚ್ಛಂಧವಾಗಿ ಓಡಾಡಲು ಸಿಕ್ಕ ಅವಕಾಶವನ್ನು ಸಂಭ್ರಮಿಸುವವರು ಇದ್ದಾರೆ. ಪರಿಸ್ಥಿತಿಯನ್ನು ತಮಗೆ ಬೇಕಾದಂತೆ ಬಗ್ಗಿಸಿಕೊಂಡು, ಸುತ್ತಲಿನ ವಾತಾವರಣವನ್ನು ಕಷ್ಟವೋ ಸುಖವೋ ಒಗ್ಗಿಸಿಕೊಂಡು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಇಂತಹ ಅಲ್ಪಸಂಖ್ಯಾತರನ್ನು ಬಹುಸಂಖ್ಯಾತ ಮಹಿಳೆಯರು ಅನುಸರಿಸಬೇಕಿದೆ. ಹಾಗಿದ್ದಾಗ ಮಾತ್ರ ಸ್ತ್ರೀಸ್ವಾತಂತ್ರ್ಯಕ್ಕೆ ಹೆಚ್ಚಿನ ಶಕ್ತಿ, ಬಲ ಬರುತ್ತದೆ. ಪುರುಷರಂತೆ ಮಹಿಳೆಯರೂ ಎಲ್ಲದರೂ ಸಮಾನರು ಎಂಬುದಕ್ಕೆ ಅರ್ಥವೂ ಬರುತ್ತದೆ.&lt;br /&gt;ಪುರುಷ ಭಾಷೆ:&lt;br /&gt;ಸ್ತ್ರೀ ಸ್ವಾತಂತ್ರ್ಯ ಎಂದು ಎಷ್ಟೇ ಗಟ್ಟಿ ಧ್ವನಿಯಲ್ಲಿ ಸಮಾಜ ಮಾತನಾಡಿದರೂ ನಮ್ಮ ಸಮಾಜದ ಪರಿಭಾಷೆಗಳು ಪುರುಷ ಕೇಂದ್ರಿತವಾಗಿವೆ. ಏಕೆಂದರೆ ಇತಿಹಾಸವೆಂದರೆ `ಹಿಸ್‌' ಸ್ಟೋರಿ ವಿನಃ `ಹರ್‌' ಸ್ಟೋರಿ ಆಗಿಯೇ ಇಲ್ಲ. ಆದಿಮ ಸಮಾಜದಲ್ಲಿ ಮಹಿಳೆಯೇ ಸಮಾಜದ ಯಜಮಾನ್ತಿ ಆಗಿದ್ದರೂ ನಮ್ಮ ನಿತ್ಯದ ಆಡುಭಾಷೆಯ ಪದಕೋಶಗಳಲ್ಲಿ ಮಹಿಳೆ ಕಾಣಿಸುವುದೇ ಇಲ್ಲ.&lt;br /&gt;ಬೇಟೆಯಾಡಿ ತಿನ್ನುವ ಸಮಾಜದ ಉತ್ಪಾದನಾ ವ್ಯವಸ್ಥೆ ಕೃಷಿಗೆ ಹೊಂದಿಕೊಂಡು ಸಾವಿರಾರು ವರ್ಷಗಳೇ ಸವೆದು ಹೋಗಿವೆ. ಕೃಷಿ ಸಮಾಜ ಸ್ಥಾಪನೆಯಲ್ಲಿ ಪುರುಷರಷ್ಟೇ ನೇಗಿಲಿನ ನೊಗಕ್ಕೆ ಹೆಗಲುಕೊಟ್ಟವಳು ಮಹಿಳೆ. ಆದರೆ ಈಗಲೂ ಕನ್ನಡದಲ್ಲಿ `ರೈತ' ಎಂದು ಪುರುಷವಾಚಕ ಪದವನ್ನು ಬಳಸುತ್ತೇವೆಯೇ ವಿನಃ ರೈತಿ ಎಂಬ ಪದವೇ ಇಲ್ಲ. ರೈತ ಮಹಿಳೆ ಎನ್ನುತ್ತೇವೆ.&lt;br /&gt;ದುಡಿವ ವರ್ಗದಲ್ಲಿ ಮಹಿಳೆಯರದೇ ಪ್ರಧಾನ ಪಾಲು. ಕಾರ್ಮಿಕ ಎಂಬ ಪದವಿದೆ ವಿನಃ ಕಾರ್ಮಿಕಿ ಎಂಬುದಿಲ್ಲ. ಮಹಿಳಾ ಕಾರ್ಮಿಕರು ಎಂದೇ ಸಂಬೋಧಿಸಲಾಗುತ್ತದೆ.&lt;br /&gt;ನೇಕಾರಿಕೆ ವೃತ್ತಿಯಲ್ಲಂತೂ ಸಮಸ್ತವೂ ಮಹಿಳಾ ಕೇಂದ್ರಿತವೇ. ನೂಲು ಸುತ್ತುವುದು, ಬಣ್ಣ ಹಾಕುವುದು, ನೂಲುವುದು, ಕಸೂತಿ ಮಾಡುವುದು, ಕಟ್‌ ಮಾಡುವುದು, ಪ್ಯಾಕಿಂಗ್‌ ಹೀಗೆ ಎಲ್ಲದನ್ನೂ ಮಹಿಳೆಯರೇ ಮಾಡುತ್ತಾರೆ. ಪುರುಷರು ಮಾರ್ಕೆಟಿಂಗ್‌ ಮಾತ್ರ ಮಾಡುತ್ತಾರೆ. ಆದರೆ ನೇಕಾರ ಎಂಬ ಪದವಿದೆಯೇ ವಿನಃ ನೇಕಾರಿ ಎಂಬ ಪದವೇ ಇಲ್ಲ.&lt;br /&gt;ಇಂಗ್ಲಿಷ್‌ನಲ್ಲಿ ಅಗ್ರಿಕಲ್ಚರಿಸ್ಟ್‌, ಲೇಬರ್‌ ಎಂಬ ಪದವನ್ನು ಬಳಸಲಾಗುತ್ತಿದೆಯೇ ವಿನಃ ಮಹಿಳಾ ವಾಚಕವಾಗಿ ನಿರ್ದಿಷ್ಟ ಪದ ಬಳಕೆಯಲ್ಲಿ ಇಲ್ಲ. ಭಾಷೆ ಕೂಡ ಮಹಿಳೆಯರನ್ನು ಅಷ್ಟು ಮೈಲಿಗೆಯಾಗಿ ನಡೆಸಿಕೊಂಡಿದೆ. ಇನ್ನೂ ಕೂಡ ನಡೆಸುತ್ತಲೇ ಇದೆ. ಪೊಲೀಸ್‌ ಎಂಬ ಪದಕ್ಕೆ ಪೇದೆ ಎಂಬ ಪರ್ಯಾಯ ಪದವಿದೆ. ಆದರೆ ಇದಕ್ಕೆ ಸಂವಾದಿ ಪದ ಮಹಿಳಾ ಪೇದೆ ಎಂದಷ್ಟೇ ಆಗಿದೆ.&lt;br /&gt;ರಾಷ್ಟ್ರದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಎಂಬ ವಿಷಯದಲ್ಲೂ ಇದೇ ಚರ್ಚೆ ನಡೆದಿತ್ತು. ಪ್ರತಿಭಾ ಪಾಟೀಲ್‌ ಅವರು ರಾಷ್ಟ್ರಪತಿಗಳಾಗಿ ಆಯ್ಕೆಯಾದಾಗ ಅವರನ್ನು ಏನೆಂದು ಕರೆಯಬೇಕೆಂದು ಚರ್ಚೆ ನಡೆಯಿತು. ಕೊನೆಗೆ ರಾಷ್ಟ್ರಪತಿ ಎಂಬ ಪುರುಷ ವಾಚಕ ಪದವನ್ನೇ ಉಳಿಸಿಕೊಳ್ಳಲಾಯಿತು.&lt;br /&gt;ಸ್ತ್ರೀವಾದಿಗಳು:&lt;br /&gt;ಹಾದಿ ಬೀದಿಯಲ್ಲಿ, ವೇದಿಕೆ, ಸಮಾರಂಭಗಳಲ್ಲಿ ಉದ್ದುದ್ದ ಭಾಷಣ ಬಿಗಿಯುವ ಸ್ವಘೋಷಿತ ಸ್ತ್ರೀವಾದಿಗಳದು ಮತ್ತೊಂದು ಕತೆ. ಮನೆಯಲ್ಲಿ ಬೆಡ್‌ಕಾಫಿ ಕೊಡಲು, ಎಲ್ಲೋ ಇಟ್ಟ ಸಿಗರೇಟು ಹುಡುಕಿ ಕೊಡಲು, ಸ್ನಾನಕ್ಕೆ ನೀರು ಅಣಿ ಮಾಡಲು, ಕಚೇರಿಗೆ ಹೊರಟಾಗ ಗರಿಗರಿ ಇಸ್ತ್ರಿ ಮಾಡಿದ ಬಟ್ಟೆ ತಂದುಕೊಡಲು ಹೆಂಡತಿಯೇ ಬೇಕು. ಹೆಂಡತಿ ಉದ್ಯೋಗದಲ್ಲಿದ್ದು, ಬೆಳಿಗ್ಗೆಯೇ ಡ್ಯೂಟಿಗೆ ಹೋಗಬೇಕಾಗಿದ್ದರೂ ಕೂಡ ಅವರು ಯಾವ ಕೆಲಸವನ್ನೂ ಮಾಡುವುದಿಲ್ಲ. ಮಾತಿಗೆ ಮಾತ್ರ ಸ್ತ್ರೀವಾದಿಗಳಿವರು.&lt;br /&gt;ಹಾಗೆ ನೋಡಿದರೆ ಗ್ರಾಮೀಣ ಪ್ರದೇಶದಲ್ಲಿ ಗಂಡಸರು ಸಾಕಷ್ಟು ಮನೆ ಕೆಲಸ ಮಾಡಿಕೊಡುತ್ತಾರೆ. ಹಸು ಕಟ್ಟುವುದು, ಹುಲ್ಲು ಹಾಕುವುದು, ಸೆಗಣಿ ಬಾಚುವುದು, ಹಾಲು ಕರೆಯುವುದು ಕನಿಷ್ಠ ಇಂತಹ ಕೆಲಸಗಳಲ್ಲಾದರೂ ಪುರುಷರ ಪಾಲಿರುತ್ತದೆ. ಆದರೆ ಮಾತಿನಲ್ಲಿ ಸ್ತ್ರೀವಾದಿ ಚಿಂತನೆಗಳನ್ನು ಪುಂಖಾನುಪುಂಖವಾಗಿ ಹೇಳುವ, ಪುಟಗಟ್ಟಲೇ ಬರೆಯುವ ಸ್ತ್ರೀವಾದಿ ಪುರುಷರು ರೂಢಿಯಲ್ಲಿ ಮಾತ್ರ ಪುರುಷಾಧಿಪತ್ಯದ ಸಾಕಾರಮೂರ್ತಿಗಳಾಗಿರುತ್ತಾರೆ.&lt;br /&gt;ರಾಜಕೀಯ:&lt;br /&gt;ರಾಜಕೀಯದಲ್ಲಿ ಸ್ತ್ರೀ ಪುರುಷರು ಸಮಾನರು ಎಂದು ಭಾವಿಸಲಾಗುತ್ತದೆ. ಆಚರಣೆಯಲ್ಲಿ ಮಾತ್ರ ಅದು ಶೂನ್ಯವಾಗಿರುತ್ತದೆ. ಶೇ.33 ರಷ್ಟು ಮೀಸಲಾತಿಗಾಗಿ ಮಹಿಳೆಯರು ಹಕ್ಕೊತ್ತಾಯ ಮಂಡಿಸುತ್ತಾ ದಶಕಗಳೇ ಕಳೆದುಹೋಗಿವೆ. ಇನ್ನೂ ಕೂಡ ಪುರುಷರು ಅದನ್ನು ಕೊಡಲು ಬಿಟ್ಟಿಲ್ಲ. ಕೇಂದ್ರದಲ್ಲಿ ಅಸ್ತಿತ್ವದಲ್ಲಿರುವ ಯುಪಿ ಎ ನೇತೃತ್ವದ ಸರ್ಕಾರದ ಸೂತ್ರಧಾರಿ ಸೋನಿಯಾಗಾಂಧಿ ಎಂಬ ಮಹಿಳೆಯೇ ಆಗಿದ್ದರೂ, ಅತ್ಯುನ್ನತ ಸ್ಥಾನದಲ್ಲಿ ಪ್ರತಿಭಾಪಾಟೀಲ್‌ ಉಪಸ್ಥಿತರಿದ್ದರೂ ಈ ಕಾಯ್ದೆ ಜಾರಿಗೆ ಬಂದಿಲ್ಲ.&lt;br /&gt;ದೇಶದ ಒಟ್ಟು ಚುನಾಯಿತ ಪ್ರತಿನಿಧಿಗಳ ಸಂಖ್ಯೆ 30 ಲಕ್ಷದಷ್ಟಿದ್ದು, ಆ ಪೈಕಿ 10 ಲಕ್ಷ ಮಹಿಳೆಯರಿದ್ದಾರೆ. ಆದರೆ ಸ್ತ್ರೀ ಸಬಲೀಕರಣ ಇನ್ನೂ ಸಾಧ್ಯವಾಗಿಲ್ಲ. ಆಕಾಶದ ಅರ್ಧ ನಕ್ಷತ್ರಗಳು ನಾವು, ಈ ಭೂಮಿಯಲಿ ಅರ್ಧ ಕೇಳುವೆವು ಎಂದು ಮಹಿಳೆಯರು ಘೋಷಣೆ ಹಾಕುತ್ತಲೇ ಬಂದಿದ್ದಾರೆ. ಆದರೆ ಪುರುಷರು ಒಂದು ಹಾದಿಯನ್ನೂ ಬಿಟ್ಟುಕೊಡುವುದಿಲ್ಲ ಎಂಬ ಹಠಕ್ಕೆ ಕೂತಿದ್ದಾರೆ.&lt;br /&gt;ಇನ್ನು ಅಧಿಕಾರ ಸಿಕ್ಕಿರುವ ಕಡೆ( ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಗ್ರಾಮ ಪಂಚಾಯತ್‌ ಹಾಗೂ ಶಾಸಕಿ ಸ್ಥಾನದಲ್ಲಿ) ಕೂಡ ಅವರ ಗಂಡಂದಿರೇ ಅಧಿಕಾರ ಚಲಾಯಿಸುವ ಸೂತ್ರಧಾರಿಗಳಾಗಿರುತ್ತಾರೆ. ಹೆಸರಿಗೆ ಮಹಿಳೆ ಅಧ್ಯಕ್ಷರಾಗಿದ್ದರೂ ಆಂಟಿ ಚೇಂಬರ್‌ನಲ್ಲಿ ಅಧಿಕಾರ, ವ್ಯವಹಾರ ನಡೆಸುವವರು ಆಕೆಯ ಗಂಡಂದಿರೇ ಆಗಿರುತ್ತಾರೆ.&lt;br /&gt;ಮಹಿಳೆಯರು ಅಧಿಕಾರ ನಡೆಸುವಷ್ಟು ಸಾಮರ್ಥ್ಯ ಹೊಂದಿದ್ದರೂ ಕೂಡ ಪುರುಷರು ಅದಕ್ಕೆ ಅವಕಾಶ ಕೊಡುವುದಿಲ್ಲ. ಅವರಲ್ಲಿ ಸಂಘಟನೆಯಾಗದೇ, ಅವರೇ ಅಧಿಕಾರ ಕೈಗೆತ್ತಿಕೊಳ್ಳದೇ ಅದು ಸಾಧ್ಯವಾಗದು. ಈ ನಿಟ್ಟಿನಲ್ಲಿ ಸರ್ಕಾರ, ಸ್ವಯಂ ಸೇವಾ ಸಂಘಟನೆಗಳು ಕಾರ್ಯಪ್ರವೃತ್ತವಾಗಬೇಕಾಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-1989476989177109425?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/1989476989177109425/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=1989476989177109425' title='1 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/1989476989177109425'/><link rel='self' type='application/atom+xml' href='http://www.blogger.com/feeds/8477112084544236406/posts/default/1989476989177109425'/><link rel='alternate' type='text/html' href='http://horaganavanu.blogspot.com/2008/11/blog-post_10.html' title='ಸ್ತ್ರೀಮತವನುತ್ತರಿಸಲಾರದೆ . . .'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>1</thr:total></entry><entry><id>tag:blogger.com,1999:blog-8477112084544236406.post-2318347527511952286</id><published>2008-11-09T07:09:00.000-08:00</published><updated>2008-11-09T07:14:32.381-08:00</updated><title type='text'>ಬಾಲ್ಯವೂ ಮುಖ್ಯ : ಆದ್ರೆ ಎಚ್‌ಐವಿ ಸಖ್ಯ</title><content type='html'>&lt;strong&gt;ಬಾಲ್ಯ-1&lt;br /&gt;&lt;/strong&gt;ಈಕೆಯ ಹೆಸರು ಋತು. ವರ್ಷ ಹತ್ತು. ಮೆಜೆಸ್ಟಿಕ್‌ನಲ್ಲಿ ಈಕೆಯ ಅಮ್ಮ ಲೈಂಗಿಕ ಕಾರ್ಯಕರ್ತೆ. ಹೊಟ್ಟೆಪಾಡಿಗಾಗಿ ನೆಚ್ಚಿಕೊಂಡ ವೃತ್ತಿ. ಜತೆಗೆ ಬ್ರೌನ್‌ಶುಗರ್‌ ಚಟ. ತಾಯಿ ತಿನ್ನುತ್ತಿದ್ದ ಬಿಳಿಯ ಸಕ್ಕರೆ ತಿಂದು ರೂಢಿಯಾಗಿ ಮತ್ತಿನಲ್ಲೇ ಮುಳುಗಿದ್ದಾಕೆ. ವೃತ್ತಿ ಜೀವನದಲ್ಲಿ ಮುನ್ನೆಚ್ಚರಿಕೆ ವಹಿಸದೇ ಇದ್ದುದರಿಂದ ಅಂಟಿಕೊಂಡ ಎಚ್‌ಐವಿ, ಏಡ್ಸ್‌ಗೆ ತಿರುಗಿ ತಾಯಿ-ತಂದೆ ಮೃತಪಟ್ಟರು. ಅನಾಥಳಾದ ಋತುಗೆ ಆಶ್ರಯ ನೀಡಿದ್ದು ಱಅಕ್ಸೆಪ್ಟ್‌ನ ಮಕ್ಕಳ ಮನೆ. ಇಲ್ಲಿ ಸೇರಿದಾಗ ಚಿಕ್ಕವಯಸ್ಸಿನಲ್ಲೇ ಮಾದಕ ವ್ಯಸನಿಯಾಗಿದ್ದ ಋತು, ಮಂಕಾಗಿರುತ್ತಿದ್ದಳು. ತಾಯಿಯಿಂದ ಬಳುವಳಿಯಾಗಿ ಬಂದಿದ್ದ ಎಚ್‌ಐವಿ ಜತೆಗಿತ್ತು. ಮಕ್ಕಳ ಮನೆಗೆ ಸೇರಿ ಎರಡು ವರ್ಷವಾಗಿದ್ದು, ಇದೀಗ ಮಾದಕ ವ್ಯಸನ ಮುಕ್ತಳಾಗಿ ಶಾಲೆಗೂ ಹೋಗುತ್ತಿದ್ದಾಳೆ. ಎಚ್‌ಐವಿ ಕೂಡ ನಿಯಂತ್ರಣದಲ್ಲಿದೆ. ಆಕೆಯ ಮುಖದಲ್ಲಿ ನಗು ಅರಳಿದೆ.&lt;br /&gt;&lt;strong&gt;ಬಾಲ್ಯ-2&lt;br /&gt;&lt;/strong&gt;ಹೆಸರು ಶ್ರವ್ಯ. ಏಳು ವರ್ಷ. ತಮಗೆ ಎಚ್‌ಐವಿ ಬಂದಿದೆ ಎಂದು ಗೊತ್ತಾದ ಕೂಡಲೇ ತಂದೆ-ತಾಯಿ ಇಬ್ಬರೂ ಜತೆಗೇ ನೇಣಿಗೆ ಕೊರಳೊಡ್ಡಿದರು. ತನ್ನಂತ ಹಸುಗೂಸನ್ನು ಬಿಟ್ಟು ಯಾಕೆ ಸಾವಿಗೆ ಶರಣಾದರು ಎಂಬ ಪ್ರಜ್ಞೆಯೂ ಇಲ್ಲದ ವಯಸ್ಸು ಶ್ರವ್ಯಳದು. ಹಗ್ಗಕ್ಕೆ ಕುಣಿಕೆ ಹಾಕಿಕೊಂಡ ತಂದೆ-ತಾಯಿಯರ ನೆನಪು ಆಕೆಯನ್ನು ಬಿಡಲೊಲ್ಲದು. ಸಲಹಲು ಯಾರೂ ಇಲ್ಲದ ಶ್ರವ್ಯಳಿಗೂ ಕೂಡ ಎಚ್‌ಐವಿಯನ್ನು ಉಡುಗೊರೆಯಾಗಿ ಕೊಟ್ಟು ಅವರಿಬ್ಬರು ಪರಲೋಕ ಸೇರಿದ್ದರು. ತಂದೆ ತಾಯಿಯ ಗುಂಗಿನಲ್ಲೇ ಎಚ್‌ಐವಿ ಜತೆಗೆ ಅಕ್ಸೆಪ್ಟ್‌ಗೆ ಸೇರ್ಪಡೆಗೊಂಡ ಶ್ರವ್ಯ ಇದೀಗ ಮನೆಯ ವಾತಾವರಣವನ್ನು ಅನುಭವಿಸುತ್ತಿದ್ದಾಳೆ. ತನ್ನಂತೆಯೇ ಎಚ್‌ಐವಿ ಬಾಧಿತ ಮಕ್ಕಳೊಂದಿಗೆ ಪಾಟಿ ಚೀಲ ಹೆಗಲಿಗೆ ಹಾಕಿಕೊಂಡ ಶಾಲೆಗೂ ಹೋಗುತ್ತಿದ್ದಾಳೆ. ಎಚ್‌ಐವಿ ಇರುವುದು ಆಕೆಗೂ ಗೊತ್ತಾಗಿದ್ದು, ಸುತ್ತಲ ವಾತಾವರಣ ಆಕೆಯಲ್ಲಿ ವಿಶ್ವಾಸ ಮೂಡಿಸಿದೆ.&lt;br /&gt;&lt;strong&gt;ಬಾಲ್ಯ-3&lt;br /&gt;&lt;/strong&gt;ಹೆಸರು ಮುಸ್ತಾಫ. 2 ವರ್ಷ. ಆತನಿಗೆ ಯಾರಿಟ್ಟ ಹೆಸರೋ ಅದು ಗೊತ್ತಿಲ್ಲ. ದೂರದ ಮುಂಬೈನಿಂದ ಬೆಂಗಳೂರಿನ ಅಕ್ಸೆಪ್ಟ್‌ ಮಕ್ಕಳ ಮನೆ ಸೇರಿದೆ. ಭಾಷೆಯೇ ಗೊತ್ತಿಲ್ಲದ, ಗುರುತು ಪರಿಚಯಸ್ಥರೇ ಇಲ್ಲದ ನೆಲೆಯಲ್ಲಿ ಆಡಿಕೊಂಡು ಬೆಳೆಯುತ್ತಿದೆ. ಎಚ್‌ಐವಿ ಹೋಗಲಿ, ಜ್ವರವೆಂದರೆ ಏನೆಂಬ ಅರಿವು ಅದಕ್ಕಿಲ್ಲ. ಮಕ್ಕಳ ಮನೆಯಲ್ಲಿರುವ ನಿಸ್ಪೃಹ ಸೇವಾಕರ್ತರು, ವೈದ್ಯರ ಉಪಚಾರದಲ್ಲಿ ಅದು ಬೆಳೆಯುತ್ತಿದೆ.&lt;br /&gt;* * *&lt;br /&gt;ನವೆಂಬರ್‌ 14 ಮಕ್ಕಳ ದಿನಾಚರಣೆ. ಭಾರತದ ಮೊದಲ ಪ್ರಧಾನಿ ಚಾಚಾ ನೆಹರು ತಮ್ಮ ಹುಟ್ಟಿದ ದಿನವನ್ನು ತಮ್ಮ ಪ್ರೀತಿಯ ಮಕ್ಕಳ ದಿನಾಚರಣೆಯಾಗಿ ಘೋಷಿಸಿದ ದಿನ. ತಾನು ಕಟ್ಟಿದ ನಾಡಿನಲ್ಲಿ ಇಂತಹ ನತದೃಷ್ಟ, ಸಮಾಜದಲ್ಲಿ ಯಾರಿಗೂ ಬೇಡವಾಗಿ, ಒಂದರ್ಥದಲ್ಲಿ ಱಕಳಂಕಿತರಾಗಿ ಮಕ್ಕಳು ಬದುಕಬೇಕಾದ ಸ್ಥಿತಿ ಉಂಟಾಗುತ್ತದೆ ಎಂದು ಗೊತ್ತಿದ್ದರೆ ನೆಹರೂ ಹಾಗೆಂದು ಘೋಷಿಸುತ್ತಿರಲಿಲ್ಲವೇನೋ. ಸದಾ ಗುಲಾಬಿಯಂತೆ ಮಕ್ಕಳನ್ನು ಪ್ರೀತಿಸುತ್ತಿದ್ದ ನೆಹರು ಈಗ ಇಂತಹ ಮಕ್ಕಳನ್ನು ನೋಡಿದ್ದರೆ ಏನೆಂದು ಪ್ರತಿಕ್ರಿಯಿಸುತ್ತಿದ್ದರೋ ಗೊತ್ತಿಲ್ಲ.&lt;br /&gt;ಬೆಂಗಳೂರಿನ ಹೊರವಲಯದಲ್ಲಿರುವ ದೊಡ್ಡಗುಬ್ಬಿ ಸಮೀಪ ಱಅಕ್ಸೆಪ್ಟ್‌ ಎಂಬ ಸಂಸ್ಥೆ ಮಕ್ಕಳ ಮನೆ ನಡೆಸುತ್ತಿದೆ. ಕೆಆರ್‌ಸಿ ರಸ್ತೆಯಲ್ಲಿರುವ ಇಲ್ಲಿ ನಿರ್ಗತಿಕರಾದ ಆದರೆ ಎಚ್‌ಐವಿಯಿಂದ ಸಮೃದ್ಧರಾದ 16 ಮಕ್ಕಳು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ತಮಗೆ ಯಾರೂ ಇಲ್ಲವೆಂಬ ನೋವನ್ನು ಮರೆತಿದ್ದಾರೆ. ಹೆತ್ತ ಮಕ್ಕಳನ್ನೇ ಕಡೆಗಣಿಸಿ, ಕೈಯಾರೆ ಕೊಲೆ ಮಾಡುವ ಈ ದಿನಗಳಲ್ಲಿ ಯಾರದೋ ಮಕ್ಕಳನ್ನು ಇಲ್ಲಿ ಪ್ರೀತಿಯಿಂದ ಸಲಹಲಾಗುತ್ತಿದೆ. ಜಾತಿ, ಧರ್ಮ, ಲಿಂಗಬೇಧವೆಂಬುದು ಇಲ್ಲಿ ಕಾಣೆಯಾಗಿದೆ. ಮನುಷ್ಯ ಪ್ರೀತಿಯ ಸಹಜ ಕಕ್ಕುಲಾತಿ ಇಲ್ಲಿ ಸಮುದ್ರದಷ್ಟು ವಿಶಾಲವಾಗಿ ಹರಡಿಕೊಂಡಿದೆ.&lt;br /&gt;ಎಚ್‌ಐವಿ ಬಾಧಿತ ಮಕ್ಕಳು ಹಾಗೂ ವಯಸ್ಕರಿಗೆ ಚಿಕಿತ್ಸೆ ನೀಡಲು 9 ಸಮಾನ ಮನಸ್ಕ ಸಹೃದಯರು ಸೇರಿ ಆರಂಭಿಸಿದ ಅಕ್ಸೆಪ್ಟ್‌ ಸಂಸ್ಥೆ ಅನಾಥ ಮಕ್ಕಳ ಪಾಲಿನ ತಾಯಿ- ತಂದೆ- ಶಿಕ್ಷಕ- ವೈದ್ಯರ ಪಾತ್ರವನ್ನು ನಿರ್ವಹಿಸುತ್ತಿದೆ. ಅಕ್ಸೆಪ್ಟ್‌ನ ಅಧ್ಯಕ್ಷ ರಾಜು ಮ್ಯಾಥ್ಯೂ ಹೇಳುವುದು ಹೀಗೆ: ಇಲ್ಲಿರುವ ಮಕ್ಕಳು ಒಂದೊಂದು ವಯಸ್ಸಿನವರಿದ್ದಾರೆ. 2 ವರ್ಷದಿಂದ 15 ವರ್ಷದವರೆಗಿನ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಅವರನ್ನು ನೋಡಲು ಇಬ್ಬರು ಕೇರ್‌ಟೇಕರ್‌, ಶಿಕ್ಷಣ ಕಲಿಸಲು ಒಬ್ಬರು ಶಿಕ್ಷಕರು, ಇಬ್ಬರು ಆಪ್ತ ಸಮಾಲೋಚಕರು, ಇಬ್ಬರು ವೈದ್ಯರು ಇದ್ದಾರೆ. ಪ್ರತಿಯೊಬ್ಬರಿಗೂ ಉಳಿದುಕೊಳ್ಳಲು ವ್ಯವಸ್ಥೆ, ಊಟ, ಬಟ್ಟೆ ಉಚಿತವಾಗಿ ನೀಡಲಾಗುತ್ತಿದೆ. ಹತ್ತಿರದ ಶಾಲೆಯೊಂದರಲ್ಲಿ ಇವರೆಲ್ಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬೆಳೆಯುವ ಮನಸ್ಸು, ಬರುತ್ತಿರುವ ಹರೆಯ, ಎಚ್‌ಐವಿಯಿಂದಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬಂದೊದಗುವ ಕಾಯಿಲೆ, ಪೋಷಕರಿಲ್ಲದುದರಿಂದ ಮೂಡುವ ಅನಾಥಭಾವ ಈ ಎಲ್ಲದಕ್ಕೆ ಆಪ್ತಸಮಾಲೋಚನೆ ನೀಡಬೇಕಾದ ಹೊಣೆಗಾರಿಕೆ. ಸಾಮಾನ್ಯ ಮಕ್ಕಳಂತಿಲ್ಲದ ಇವರನ್ನು ನೋಡಿಕೊಳ್ಳುವಲ್ಲಿ ತಾಳ್ಮೆ ಅಗತ್ಯ ಎನ್ನುತ್ತಾರೆ.&lt;br /&gt;ದುಡಿಯುವ ದೈಹಿಕ ಸಾಮರ್ಥ್ಯ ಕಡಿಮೆ ಇರುವುದರಿಂದ ಇವರ ಭವಿಷ್ಯದ ಬಗ್ಗೆ ತಮಗೆ ಚಿಂತೆಯಾಗಿದೆ. ಹೇಗೋ ಓದಿಸಬಹುದು. ಮಾನಸಿಕ ಸದೃಢತೆ ಇಲ್ಲದೇ ಇರುವುದರಿಂದ ಓದಿನಲ್ಲಿ ಇವರು ಹೆಚ್ಚಿನದನ್ನು ಸಾಧಿಸಲಾರರು. ಹಾಗಾಗಿ ಇವರಿಗೆ ಸ್ವ ಉದ್ಯೋಗ ತರಬೇತಿ ನೀಡಲು ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳು ಮುಂದೆ ಬರಬೇಕಿದೆ. ತಂದೆತಾಯಂದಿರ ನೆಂಟರು ಇವರಿಗೆ ಸಹಾಯ ಹಸ್ತ ಚಾಚಬೇಕು, ಆದರೆ ಯಾರೂ ಮುಂದೆ ಬರುವುದಿಲ್ಲ ಎಂದು ಹೇಳುವ ರಾಜು ಮ್ಯಾಥ್ಯೂ, ಸಹೃದಯರು ದತ್ತು ತೆಗೆದುಕೊಳ್ಳಲು ಮುಂದೆ ಬರಬೇಕೆಂದು ಆಶಿಸುತ್ತಾರೆ. ಇಲ್ಲವಾದಲ್ಲಿ ಈ ಮಕ್ಕಳಿಗೆ ಬಟ್ಟೆ, ಊಟ, ಸ್ಕೂಲು ಬ್ಯಾಗು, ಪುಸ್ತಕ ಕೊಡಿಸಲಾದರೂ ಸಹಾಯ ಮಾಡಿದರೆ ಉಪಕಾರವಾಗುತ್ತದೆ ಎನ್ನುತ್ತಾರೆ.&lt;br /&gt;ಇಲ್ಲಿ ಮಕ್ಕಳಿಗೆ ಮಾತ್ರವಲ್ಲದೇ ಎಚ್‌ಐವಿ ಬಾಧಿತ ವಯಸ್ಕರಿಗೂ ಚಿಕಿತ್ಸೆ ನೀಡುವ ಸೌಲಭ್ಯವಿದೆ. 35 ಮಂದಿ ವಯಸ್ಕರಿಗೆ ಉಳಿದುಕೊಂಡು ಚಿಕಿತ್ಸೆ ಪಡೆಯಲು ಸಾಧ್ಯವಿದೆ. ಎಚ್‌ಐವಿ ಬಾಧಿತರಿಗೆ ಸಾಮಾನ್ಯವಾಗಿ ತಗಲುವ ಟಿ.ಬಿ. ಕಾಯಿಲೆಯಿಂದ ತೊಂದರೆಗೊಳಗಾದವರಿಗೆ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.&lt;br /&gt;&lt;strong&gt;ಎಚ್‌ಐವಿ ಬಾಧಿತ ಮಕ್ಕಳು:&lt;br /&gt;&lt;/strong&gt;ಕರ್ನಾಟಕದಲ್ಲಿ ದಾಖಲಾದ ಎಚ್‌ಐವಿ ಬಾಧಿತ ಮಕ್ಕಳ ಸಂಖ್ಯೆ 5,700. ಇವರಲ್ಲಿ 1663 ಮಕ್ಕಳು ಆ್ಯಂಟಿ ರೆಟ್ರೋ ವೈರಲ್‌ ಥೆರಪಿಗೆ ಒಳಗಾಗಿದ್ದಾರೆ. ಅಂದರೆ ಇವರಿಗೆ ಏಡ್ಸ್‌ ತಗುಲಿದೆ. ಸರ್ಕಾರಿ ಲೆಕ್ಕ ಇದಾಗಿದ್ದು ಇನ್ನೂ ಪತ್ತೆಯಾಗದವರ ಸಂಖ್ಯೆ ಹೆಚ್ಚಾಗಿಯೇ ಇರಬಹುದೆಂದು ಅಂದಾಜಿಲಾಗಿದೆ.&lt;br /&gt;ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ( ನ್ಯಾಕೋ) ಪ್ರಕಾರ ಭಾರತದಲ್ಲಿ 70 ಸಾವಿರ ಮಕ್ಕಳು ಎಚ್‌ಐವಿ ಬಾಧಿತರಾಗಿದ್ದಾರೆ. ಇವರಲ್ಲಿ 10 ಸಾವಿರ ಮಂದಿ ಎ ಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಎಚ್‌ಐವಿ ಬಾಧಿತರ ಸಂಖ್ಯೆ 5.1 ಮಿಲಿಯನ್‌ ಎಂದು ಲೆಕ್ಕ ಹಾಕಲಾಗಿದೆ. 2005 ರಲ್ಲಿ ಅಂದಾಜು ಮಾಡಿದಂತೆ ಶೇ.33 ರಷ್ಟು ಮಂದಿ ಏಡ್ಸ್‌ ಬಾಧಿತರು 15 ರಿಂದ 29 ವರ್ಷದ ಒಳಗಿನವರು. ದೇಶದ ಮೂರನೇ ಒಂದು ಭಾಗದಷ್ಟು ಅಂದರೆ 10-24 ವರ್ಷ ವಯಸ್ಸಿನವರು ಸುಲಭವಾಗಿ ಎಚ್‌ಐವಿ ಸೋಂಕು ತಗಲುವ ಸಾಧ್ಯತೆಯಿರುವವರಿದ್ದಾರೆಂದು ವಿಶ್ಲೇಷಿಸಲಾಗಿದೆ. ಲೈಂಗಿಕ ಕುತೂಹಲವುಳ್ಳ ಆದರೆ ಸುರಕ್ಷಿತ ಲೈಂಗಿಕತೆ ಬಗ್ಗೆ ಪರಿಜ್ಞಾನವಿಲ್ಲದ ವಯಸ್ಸಿನವರು ಸುಲಭವಾಗಿ ಎಚ್‌ಐವಿಗೆ ತುತ್ತಾಗಬಹುದಾಗಿದ್ದು, ಇವರಲ್ಲಿ ಅರಿವು ಮೂಡಿಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ. ಇದರ ಜತೆಗೆ ಆತಂಕ ಪಡುವ ಸಂಗತಿಯೆಂದರೆ ದೇಶದಲ್ಲಿ 3 ಲಕ್ಷ ಮಕ್ಕಳನ್ನು ವ್ಯಾವಹಾರಿಕವಾಗಿ ಲೈಂಗಿಕ ಕಾರ್ಯಕರ್ತನ್ನಾಗಿಸಲಾಗಿದೆ.&lt;br /&gt;ಚಿಲ್ಡ್ರನ್‌ ಅಫೆಕ್ಟಡ್‌ ಬೈ ಎಚ್‌ಐವಿ ಆರ್‌ ಏಡ್ಸ್‌(ಕಾಹಾ) ಚಾರ್ಟರ್‌ ಎಂದು ಕರೆಯಲಾದ ಕಾರ್ಯಕ್ರಮದಲ್ಲಿ 53 ಮಕ್ಕಳು ಪಾಲ್ಗೊಂಡಿದ್ದರು. ನ್ಯಾಕೋದ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ 14 ಶಿಫಾರಸ್ಸುಗಳನ್ನು ಮಾಡಲಾಗಿದೆ.&lt;br /&gt;ಜಿಲ್ಲಾ ಮಟ್ಟದಲ್ಲಿ ಮಕ್ಕಳ ಬೆಂಬಲಿಗ ಗುಂಪು ರಚನೆ, ಎಚ್‌ಐವಿ ಬಾಧಿತ ಮಕ್ಕಳಲ್ಲಿ ಅರಿವು ಮೂಡಿಸುವುದು, ಮನೋಸಾಮಾಜಿಕ ಬೆಂಬಲವನ್ನು ಕಲ್ಪಿಸುವುದು, ಮಕ್ಕಳ ಆಪ್ತಸಮಾಲೋಚಕರನ್ನು ತರಬೇತುಗೊಳಿಸುವುದು, ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು, ಪೋಷಕರಿಗೆ ಸಮಾಜೋ ಆರ್ಥಿಕ ಬೆಂಬಲ ನೀಡುವುದು, ತಪ್ಪು ಕಲ್ಪನೆ ಹಾಗೂ ತಾರತಮ್ಯ ಭಾವನೆ ತೊಲಗಿಸುವುದು, ಎಚ್‌ಐವಿ ಮಕ್ಕಳ ಬೆಂಬಲಕ್ಕೆ ನಿಲ್ಲುವ ಸಂಸ್ಥೆಗಳನ್ನು ಬಲಗೊಳಿಸುವುದು, ಶಿಕ್ಷಣ ಹಾಗೂ ವಸತಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು ಆಗಬೇಕಿದೆ ಎಂದು ಶಿಫಾರಸ್ಸು ಹೇಳಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-2318347527511952286?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/2318347527511952286/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=2318347527511952286' title='0 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/2318347527511952286'/><link rel='self' type='application/atom+xml' href='http://www.blogger.com/feeds/8477112084544236406/posts/default/2318347527511952286'/><link rel='alternate' type='text/html' href='http://horaganavanu.blogspot.com/2008/11/blog-post_09.html' title='ಬಾಲ್ಯವೂ ಮುಖ್ಯ : ಆದ್ರೆ ಎಚ್‌ಐವಿ ಸಖ್ಯ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>0</thr:total></entry><entry><id>tag:blogger.com,1999:blog-8477112084544236406.post-4275502693625588534</id><published>2008-11-03T07:42:00.000-08:00</published><updated>2008-11-03T07:47:06.972-08:00</updated><title type='text'>`ಶಾಸ್ತ್ರೀ'ಯ ಭಾಷೆ</title><content type='html'>&lt;p&gt;&lt;span style="font-size:130%;"&gt; `ಶಾಸ್ತ್ರೀ'ಯ ಭಾಷೆ&lt;/span&gt;&lt;/p&gt;&lt;p&gt;ಊರ ಗೌಡರ ಮಗಳು ಮೈನೆರೆದರೆ ಊರವರಿಗೆ ಏನು ಲಾಭ? ಹೆಚ್ಚೆಂದರೆ ಒಂದು ಹೋಳಿಗೆ ಊಟ ಸಿಗಬಹುದಷ್ಟೆ.&lt;br /&gt;ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕಿದ್ದರ ಬಗ್ಗೆ ಇಷ್ಟು ನಿಕೃಷ್ಟವಾಗಿ ಹೇಳುವುದು ಅನೇಕರಿಗೆ ತಥ್ಯವಾಗದೇ ಇರಬಹುದು. ಆದರೆ ಶಾಸ್ತ್ರೀಯ ಭಾಷೆ ಘೋಷಣೆಯಾದ ಮೇಲೆ `ಪೋಸ್ಟ್‌ ಮಾರ್ಟಂ'ಗೆ ಹೊರಟರೆ ಇದು ಅಪಥ್ಯವಾಗಲಿಕ್ಕಿಲ್ಲ.&lt;br /&gt;ಶಾಸ್ತ್ರೀಯ ಭಾಷೆಯೆಂದು ಘೋಷಣೆಯಾದ ಮಾತ್ರಕ್ಕೆ ಕನ್ನಡದಲ್ಲೇ ಕಲಿತ ಮಣ್ಣಿನ ಮಕ್ಕಳಿಗೆ ಏನು ಸಿಗುತ್ತದೆ? ಕನ್ನಡ ಬಿಟ್ಟರೆ ಬೇರಾವ ಭಾಷೆ ಬಾರದ ಕೋಟ್ಯಾಂತರ ಬಡ ಬೋರೇಗೌಡರ ಬದುಕಲ್ಲಿ ಏನು ಬದಲಾವಣೆಯಾಗುತ್ತದೆ. ಕನ್ನಡ ಎಂ.ಎ. ಮಾಡಿದವರು ಹೋಗಲಿ, ವಿವಿಧ ಮಾನವಿಕ( ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ್ತಿತ್ಯಾದಿ)ಗಳಲ್ಲಿ ಎಂ.ಎ. ಪಡೆದವರಿಗೆ ಎಲ್ಲಿ ಉದ್ಯೋಗವೇನಾದರೂ ಸಿಗುತ್ತದೆಯೇ? ಆಡಳಿತ ಭಾಷೆಯಾಗಿ ಕನ್ನಡವೊಂದೇ ಉಳಿಯುತ್ತದೆಯೇ? ಕೋರ್ಟ್‌ನಲ್ಲಿ ಕನ್ನಡ ಬಳಕೆಯಾಗುತ್ತದೆಯೇ?&lt;br /&gt;ಯಕಃಶ್ಚಿತ್‌ ಈ ಶ್ರೀಸಾಮಾನ್ಯರ ಬದುಕಲ್ಲಿ ಏನು ಬದಲಾವಣೆಯಾಗುವುದಿಲ್ಲ. ತಮಿಳಿಗೆ ಕೊಟ್ಟಿದ್ದಾರೆ ನಮಗೂ ಕೊಡಬೇಕೆಂಬ ವಾದ ಬಿಟ್ಟರೆ ಮತ್ಯಾವ ಘನ ಉದ್ದೇಶ, ತಾರ್ಕಿಕ ವಾದಗಳನ್ನು ಈ ವಿಷಯದಲ್ಲಿ ಗಟ್ಟಿಧ್ವನಿಯಲ್ಲಿ ಮಾಡಲಾಗುವುದಿಲ್ಲ.&lt;br /&gt;ಜಾಗತೀಕರಣದ ಬಿರುಗಾಳಿಯಲ್ಲಿ ಕನ್ನಡವೊಂದನ್ನೇ ಕಲಿತವನು ಎಲೆಯಂತೆ ಥರಗುಟ್ಟುತ್ತಿದ್ದಾನೆ. ವಿದ್ವಾಂಸರು, ಕನ್ನಡ ಹೋರಾಟಗಾರರು, ಆಷಾಢಭೂತಿ ಆಳುವವರು ಏನೇ ಮಾತನಾಡಲಿ. ಕನ್ನಡವೊಂದನ್ನೇ ಕಲಿತವನು `ತಾನು ಯಾಕಾದರೂ ಇಂಗ್ಲಿಷ್‌ ಕಲಿಯಲಿಲ್ಲ' ಎಂದು ಹಲುಬುವುದು ತಪ್ಪಲಿಲ್ಲ. ಅದು ನಿತ್ಯರೋಧನ.&lt;br /&gt;ಇಂಗ್ಲಿಷು ಬ್ರಾಹ್ಮಣ ಕನ್ನಡ ಶೂದ್ರ:&lt;br /&gt;ಪುರಾತನ ಕಾಲದಲ್ಲಿ ಸಂಸ್ಕೃತವೊಂದನ್ನು ಹೊರತುಪಡಿಸಿ ಉಳಿದೆಲ್ಲಾ ಭಾಷೆಗಳನ್ನು ಅಪಭ್ರಂಶವೆಂದು ದಸ್ಯಗಳ(ಸೇವಕರ) ಭಾಷೆಯೆಂದು ಹೀಗಳೆಯಲಾಗುತ್ತಿತ್ತು. ಪ್ರಾಚೀನ ಸಂಸ್ಕೃತ ನಾಟಕಗಳಲ್ಲಿ ರಾಜ, ಮಂತ್ರಿ, ಕಥಾನಾಯಕ ಸಂಸ್ಕೃತದಲ್ಲಿ ಮಾತನಾಡಿದರೆ ದಸ್ಯುಗಳು ಮಾತ್ರ ಪ್ರಾಕೃತ ಅಥವಾ ಅಪಭ್ರಂಶ ಭಾಷೆಯಲ್ಲಿ ಮಾತನಾಡುವುದು ಲಿಖಿತವಾಗಿ ದಾಖಲಾಗಿದೆ.&lt;br /&gt;ಈ ರೀತಿಯ ಮಡಿವಂತಿಕೆಯುಳ್ಳ ಸಂಸ್ಕೃತದ ಜಾಗದಲ್ಲಿ ಈಗ ಇಂಗ್ಲಿಷು ಬಂದು ಕುಳಿತಿದೆ. ಕನ್ನಡದಲ್ಲಿ ಓದಿದವರಿಗೆ ಕವಡೆ ಕಾಸಿನ ಬೆಲೆಯೂ ಇಲ್ಲವಾಗಿದೆ. ಸರ್ಕಾರಿ ಉಸ್ತುವಾರಿಯಲ್ಲಿ ನಡೆಯುತ್ತಿರುವ ಕನ್ನಡ ಶಾಲೆಗಳಿಗೆ ಸ್ಲಂಬಾಲರು, ಬಡ ಮಕ್ಕಳು, ಬಡ ಮತ್ತು ಮಧ್ಯಮ ವರ್ಗದ ಕೃಷಿಕರ ಮಕ್ಕಳು ಮಾತ್ರ ಹೋಗುತ್ತಿದ್ದಾರೆ. ಸರ್ಕಾರಿ ನೌಕರಿಯಲ್ಲಿರುವವರು, ಶ್ರೀಮಂತ ಕೃಷಿಕರು, ವ್ಯವಹಾರ ನಡೆಸುವವರ ಮಕ್ಕಳು ಇಂಗ್ಲಿಷು ಶಾಲೆಯಲ್ಲಿ ಕಲಿಯುತ್ತಿದ್ದಾರೆ.&lt;br /&gt;ಕನ್ನಡ ಅವಜ್ಞೆಗೆ ತುತ್ತಾದ ಭಾಷೆಯಾಗಿರುವಾಗಲೇ ಅದಕ್ಕೆ `ವಿಶ್ವಮಾನ್ಯತೆ' ತಂದುಕೊಡುವ ಶಾಸ್ತ್ರೀಯ ಭಾಷೆಯ ಹಕ್ಕೊತ್ತಾಯ ಕೇಳಿಬಂದಿತು. ತಮ್ಮ ಮಕ್ಕಳನ್ನೆಲ್ಲಾ ಇಂಗ್ಲಿಷು ಶಾಲೆಯಲ್ಲಿ ಓದಿಸಿ, ಒಳ್ಳೆಯ ಉದ್ಯೋಗ ಕೊಡಿಸಿರುವ ಸಾಹಿತಿ, ಬುದ್ದಿ ಜೀವಿಗಳ ಮಕ್ಕಳು ಕನ್ನಡಕ್ಕಾಗಿ ಇಂದು ತಮ್ಮ ಉಪವಾಸ, ಮಾತಿನ ಖಡ್ಗ ಝಳಪಿಸುತ್ತಿದ್ದಾರೆ. ಕನ್ನಡದಲ್ಲಿ ಓದಿದವರಿಗೆ ಮಾತ್ರ ಉದ್ಯೋಗ, ಕನ್ನಡ ಬಲ್ಲವರಿಗೆ ಮಾತ್ರ ರಾಜ್ಯದಲ್ಲಿ ಪ್ರಮುಖ ಸ್ಥಾನ ಎಂಬ ಹಕ್ಕೊತ್ತಾಯ ಯಾರಿಂದಲೂ ಕೇಳಿ ಬರುತ್ತಿಲ್ಲ. ಪ್ರಾಥಮಿಕ ಶಾಲೆಯಿಂದಲೇ ಇಂಗ್ಲಿಷ್‌ನ್ನು ಒಂದು ಪಠ್ಯವಾಗಿ ಕಲಿಸಲು ಈ ಪ್ರಭೃತಿಗಳು ಬಿಡುತ್ತಿಲ್ಲ. ಎಲ್ಲಾ ಮಕ್ಕಳು ಇಂಗ್ಲಿಷು ಕಲಿತರೆ ನವ ಬ್ರಾಹ್ಮಣರ ಮಕ್ಕಳ ಉದ್ಯೋಗಕ್ಕೆ ಎಲ್ಲಿ ಕುತ್ತು ಬರುತ್ತದೋ ಎಂಬ ಆತಂಕ ಇವರದು.&lt;br /&gt;ಇಂಗ್ಲಿಷು ಬ್ರಾಹ್ಮಣ ಕನ್ನಡ ಶೂದ್ರ ಎಂಬುದು ಕೇವಲ ಕಲ್ಪನೆಯಲ್ಲ. ಸದ್ಯದ ಸುಡು ವಾಸ್ತವ. ಕನ್ನಡವೆಂಬುದು ಮೈಲಿಗೆಯಾಗಿ, ಯು.ಆರ್‌. ಅನಂತಮೂರ್ತಿ ಹೇಳುವಂತೆ ಕೇವಲ ಅಡುಗೆ ಮನೆ ಭಾಷೆಯಾಗಿ ಉಳಿಯಲಿರುವ ಸಂಕಟದಲ್ಲಿ ನಾವಿದ್ದೇವೆ. ಆ ಹೊತ್ತಿನಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ಸಿಕ್ಕಿದೆ.&lt;br /&gt;ಲಾಭವೇನು?&lt;br /&gt;ತಮಿಳಿಗೆ ಸಿಕ್ಕಿತೆಂದು ನಾವೆಲ್ಲಾ ಒಕ್ಕೊರಲಿನಿಂದ ಕನ್ನಡಕ್ಕೂ ಶಾಸ್ತ್ರೀಯ ಭಾಷೆ ಸ್ಥಾನ ಮಾನ ಸಿಗಬೇಕೆಂದು ಹಕ್ಕೊತ್ತಾಯ ಮಂಡಿಸಿದೆವು. ಆಂಧ್ರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ, ಮುಂಬರಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕನ್ನಡಕ್ಕೂ ಒಂದು ಶಾಸ್ತ್ರೀಯ ಸ್ಥಾನ ಮಾನ ಘೋಷಿಸಿದೆ.&lt;br /&gt;ಪ್ರಾಚೀನ ಸಾಹಿತ್ಯ ಹಾಗೂ ಭಾಷಾ ಚರಿತ್ರೆ ಬಗ್ಗೆ ಸಂಶೋಧನೆ ನಡೆಸುವ ವಿದ್ವಾಂಸರಿಗೆ 2 ರಾಷ್ಟ್ರಮಟ್ಟದ ಪ್ರಶಸ್ತಿ, ಅಧ್ಯಯನ ನಡೆಸಲು ಅನುದಾನ, ಕೇಂದ್ರೀಯ ವಿ.ವಿ.ಗಳಲ್ಲಿ ಕನ್ನಡ ಅಧ್ಯಯನ ಪೀಠ, ವಿದೇಶಿ ವಿ.ವಿ.ಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ಅವಕಾಶ, ಒಂದಿಷ್ಟು ಫೆಲೋಶಿಪ್‌ಗೆ ಅವಕಾಶವಾಗಲಿದೆ. ಇದರ ಜತೆಗೆ ಕೇಂದ್ರದಿಂದ ಸರಿಸುಮಾರು 100 ಕೋಟಿ ರೂ. ಹೆಚ್ಚಿನ ಅನುದಾನ ಒದಗಿ ಬರಲಿದೆ. ಮೈಸೂರಿನಲ್ಲಿರುವ ಕೇಂದ್ರೀಯ ಭಾಷಾ ಸಂಸ್ಥಾನದಲ್ಲಿ ಇದಕ್ಕಾಗಿ ಒಂದು ಸಮಿತಿ ರಚನೆಯಾಗಲಿದ್ದು, ಇದೆಲ್ಲದರ ಉಸ್ತುವಾರಿ ನೋಡಿಕೊಳ್ಳಲಿದೆ.&lt;br /&gt;ಇವಿಷ್ಟು ಬಿಟ್ಟರೆ ಕನ್ನಡ ಉದ್ದಾರ ಅಷ್ಟರಲ್ಲೇ ಇದೆ. ಇದರಿಂದ ಸಾಮಾನ್ಯ ಕನ್ನಡಿಗರಿಗೆ ಏನು ಲಾಭ? ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಅಷ್ಟೆ. ನಮ್ಮ ನೆಲ, ಜಲ ವಿಷಯದ ಬಗ್ಗೆ ಯಾವತ್ತೂ ಚಕಾರವೆತ್ತದ ಜನ ಶಾಸ್ತ್ರೀಯ ಭಾಷೆಗಾಗಿ ಕೂಗಾಡಿ ಅರಚಿದರು. ಹೊಸ ರೈಲ್ವೆ ಮಾರ್ಗಗಳು, ಹೊಸ ರೈಲುಗಳು ಬಾರದೇ ಇದ್ದಾಗ ತೆಪ್ಪಗೆ ಕೂತಿದ್ದ ಮಂದಿ ಕೂಗಾಡಲಾರಂಭಿಸಿದರು. ನಮ್ಮ ರಾಷ್ಟ್ರೀಯ ಹೆದ್ದಾರಿಗಳು ಗುಂಡಿಗಳಾಗಿ ಕುಳಿತಿದ್ದರೂ ಯಾರೂ ಮಾತನಾಡಲಿಲ್ಲ. ಹಿಂದುಳಿದ ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಗೆ 371 ವಿಧಿಗೆ ತಿದ್ದುಪಡಿ ತರಬೇಕೆಂಬ ಒತ್ತಾಯಕ್ಕೆ ಯಾರೂ ಧ್ವನಿ ಸೇರಿಸಲಿಲ್ಲ. ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವ ಇದೇ ಯಡಿಯೂರಪ್ಪನವರ ಬಿಜೆಪಿಯ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಬಿಜೆಪಿ ಸಂಸದರಾಗಿದ್ದ ಡಾ ಎಂ.ಆರ್‌. ತಂಗಾ ಹಾಗೂ ಬಸವರಾಜಪಾಟೀಲ್‌ ಸೇಡಂ ಅವರು ಆಗಿನ ಗೃಹ ಸಚಿವ ಎಲ್‌. ಕೆ. ಅಡ್ವಾಣಿಯವರ ಮುಂದೆ 371 ವಿಧಿಗೆ ತಿದ್ದುಪಡಿ ತರಲು ಕೋರಿದ್ದರು. ಆಗ ಅಡ್ವಾಣಿ ನಿರಾಶಾದಾಯಕ ಉತ್ತರ ನೀಡಿದ್ದರು.&lt;br /&gt;ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರವಿರುವಾಗ ಇದೇ ಯಡಿಯೂರಪ್ಪ 371 ವಿಧಿಗಾಗಿ ದೆಹಲಿಗೆ ನಿಯೋಗ ಹೋಗುವುದಾಗಿ ಹೇಳುತ್ತಿದ್ದಾರೆ. ಕೇಂದ್ರದ ಮೇಲೆ ಗೂಬೆ ಕೂರಿಸಿ, ಮುಂದಿನ ಲೋಕಸಭಾ ಚುನಾವಣೆಗೆ ಮತಗಳ ಇಡುಗಂಟನ್ನು ಸಂಪಾದಿಸುವುದಷ್ಟೇ ಅವರ ಆಶಯ. ರಾಜ್ಯದ ಬಗ್ಗೆ ನಿಜವಾದ ಕಳಕಳಿ ಅವರಿಗಿಲ್ಲ.&lt;br /&gt;ಶಾಸ್ತ್ರೀಯ ಭಾಷೆಯ ವಿಷಯದಲ್ಲಿ ಕೂಡ ಅವರ ಅಬ್ಬರ ಇದೇ ರೀತಿಯದು. ಭಾವನಾತ್ಮಕ ವಿಷಯಗಳತ್ತ ಜನರ ಗಮನವನ್ನ ಕೇಂದ್ರೀಕರಿಸಿ, ರಾಜಕೀಯ ಮಾಡಿಕೊಳ್ಳುವ ಹುನ್ನಾರವಿದು. ಶಾಸ್ತ್ರೀಯ ಭಾಷೆಗಾಗಿ ದೆಹಲಿ ಚಲೋ ಮಾಡಲು, ಗಾಂಧಿ ಸಮಾಧಿ ಎದುರು ಧರಣಿ ಕೂರಲು ಸಿದ್ಧರಿರುವ ಯಡಿಯೂರಪ್ಪ, ರೈಲ್ವೆ, ರಸ್ತೆಯಂತಹ ಸಾಮಾನ್ಯ ಬೇಡಿಕೆಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಕೇಂದ್ರದ ಮೇಲೆ ಸೇಡಿನ ಹೋರಾಟಕ್ಕಿಂತ ರಚನಾತ್ಮಕ ಹೋರಾಟವನ್ನು ಮಾಡುವುದು ತುರ್ತಾಗಿ ಆಗಬೇಕಾಗಿರುವ ಕೆಲಸ.&lt;br /&gt;ಇತ್ತೀಚೆಗೆ ಮುಂಬೈನಲ್ಲಿ ಬಿಹಾರಿ ಯುವಕ ಹತ್ಯೆಯಾದಾಗ ಮುಖ್ಯಮಂತ್ರಿ ನಿತೀಶ್‌ಕುಮಾರ್‌, ಲಾಲು ಪ್ರಸಾದ್‌ ಯಾದವ್‌, ರಾಮವಿಲಾಸ್‌ಪಾಸ್ವಾನ್‌ ಹೀಗೆ ಎಲ್ಲಾ ಪಕ್ಷದ ನಾಯಕರು ಒಂದೇ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡರು. ರಾಜ್ಯದ ವಿಷಯ ಬಂದಾಗ ರಾಜಕೀಯ ತಲೆ ಹಾಕಬಾರದು. ರಾಜ್ಯದ ಏಳ್ಗೆ ಮುಖ್ಯವಾಗಬೇಕು. ಇದು ನಮ್ಮ ರಾಜಕಾರಣಿಗಳಿಗೆ ಅರ್ಥವಾಗುವುದು ಯಾವಾಗ?&lt;br /&gt;ರಾಜ್ಯದ ಸ್ಥಿತಿ?&lt;br /&gt;ಶಾಸ್ತ್ರೀಯ ಭಾಷೆಗಾಗಿ ದೆಹಲಿಗೆ ಹೋಗುವುದಾಗಿ ಘರ್ಜಿಸಿದ ಯಡಿಯೂರಪ್ಪನವರ ತವರು ರಾಜ್ಯದಲ್ಲಿ ಕನ್ನಡ ಏನಾಗಿದೆ. ಆಡಳಿತ ಭಾಷೆ ಕನ್ನಡ ಎಂಬ ವಿಷಯ ಕುರಿತು ಈವರೆಗೆ 300 ಸುತ್ತೋಲೆಗಳು ಬಂದಿವೆ. ಆದರೆ ಇನ್ನೂ ಕೂಡ ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡವಾಗಿಲ್ಲ. ಪ್ರಮುಖ ಸರ್ಕಾರಿ ಆದೇಶಗಳು, ರಾಜ್ಯ ಗೆಜೆಟ್‌, ಹಿರಿಯ ಅಧಿಕಾರಿಗಳ ವ್ಯವಹಾರ ಎಲ್ಲವೂ ಇಂಗ್ಲಿಷ್‌ನಲ್ಲಿ ನಡೆಯುತ್ತವೆ. ಇದಕ್ಕೆ ಕಾರಣಗಳನ್ನು ಸಾವಿರ ಹೇಳಬಹುದು. ಆದರೆ ಕನ್ನಡ ಜಾರಿಯಾಗದೇ ಇರುವುದು ಸತ್ಯ.&lt;br /&gt;ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಎಂಬ ಸರೋಜಿನಿ ಮಹಿಷಿ ವರದಿ ಸಂಪೂರ್ಣ ಜಾರಿಯಾಗದೇ ಧೂಳು ಹಿಡಿಯುತ್ತಿದೆ. ಕೇಂದ್ರ ಸರ್ಕಾರ, ಖಾಸಗಿ ಉದ್ಯಮ ಸಂಸ್ಥೆಗಳ ವಿಷಯ ಹೋಗಲಿ. ಕರ್ನಾಟಕ ಲೋಕ ಸೇವಾ ಆಯೋಗದ ನೇಮಕಾತಿಯಲ್ಲೂ ಕೂಡ ಕನ್ನಡಿಗರಿಗೆ ಮಾತ್ರ ಉದ್ಯೋಗವೆಂಬ ಷರತ್ತು ಇಲ್ಲ. ದೇಶದ ಯಾವುದೇ ಅಂಗೀಕೃತ ವಿ.ವಿ.ಯಿಂದ ಪದವಿ ಪಡೆದವರು ಉಪನ್ಯಾಸಕ, ಪ್ರಥಮ ದರ್ಜೆ ಗುಮಾಸ್ತ, ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಬಹುದು. ಅಷ್ಟರಮಟ್ಟಿಗೆ ಕನ್ನಡಿಗರು ಉದಾರ ಹೃದಯಗಳಾಗಿದ್ದಾರೆ.&lt;br /&gt;ಇನ್ನು ಕನ್ನಡ ಕಲಿಸುವ ಸರ್ಕಾರಿ ಶಾಲೆಗಳಲ್ಲಿ ಆಧುನಿಕತೆ ಎಂಬುದು ಹೇಳ ಹೆಸರಿಲ್ಲವಾಗಿದೆ. ನಮ್ಮ ಶಿಕ್ಷಣ ಪದ್ಧತಿ ಕೂಡ ಓಬಿರಾಯನ ಕಾಲದಲ್ಲಿಯೇ ಇದೆ. ಉದ್ಯೋಗ ಕಲ್ಪಿಸುವುದಕ್ಕೆ ಪೂರಕವಾದ ಶಿಕ್ಷಣ ಪದ್ಧತಿ ಜಾರಿಗೆ ತಂದಿಲ್ಲ. ಕನ್ನಡ ಮಾಧ್ಯಮದಲ್ಲಿ ಪಿಯುಸಿ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಪಡೆದವರಿಗೆ ಮಾತ್ರ ಸರ್ಕಾರದ ವತಿಯಿಂದ ಸನ್ಮಾನಿಸಲಾಗುತ್ತಿದೆ ವಿನಃ ಕನ್ನಡಿಗರಿಗೆ ಮೀಸಲು ಪರಿಪಾಠವೇ ಇಲ್ಲ. ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮೀಣ ಶಾಲೆಯಲ್ಲಿ ಕಲಿತವರಿಗೆ ಶೇ.15 ರಷ್ಟು ಗ್ರೇಸ್‌ ಮಾರ್ಕ್ಸ್‌ ನೀಡುವ ಆದೇಶ ಜಾರಿಗೊಳಿಸಿದ್ದರು. ಆದರೀಗ ಅದನ್ನು ತೆಗೆದು ಹಾಕಲಾಗಿದೆ.&lt;br /&gt;ಈ ಎಲ್ಲಾ ಹಿನ್ನೆಲೆಯಲ್ಲಿ ಶಾಸ್ತ್ರೀಯ ಭಾಷೆಯೆಂಬುದು ಶಾಸ್ತ್ರೀಗಳ ಭಾಷೆಯಾಗಲಿದೆಯೇ ಹೊರತು ಕನ್ನಡದ ಮಣ್ಣಿನ ಮಕ್ಕಳಿಗೆ ಪ್ರಯೋಜನವಾಗುವ ಸಂಗತಿಯಲ್ಲ. ಹಾಗಿದ್ದೂ ಶಾಸ್ತ್ರೀಯ ಭಾಷೆ ಸ್ಥಾನಮಾನ ಬೇಡವೆಂದಲ್ಲ. ಅದರ ಜತೆಗೆ ಕನ್ನಡ ಕಲಿತರೆ ಸ್ವಾಭಿಮಾನದ ಬಾಳ್ವೆ ಸಾಧ್ಯವೆಂಬ ವಾತಾವರಣ ನಿರ್ಮಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಯಡಿಯೂರಪ್ಪನವರು ಆ ನಿಟ್ಟಿನಲ್ಲಿ ಯೋಚಿಸಿ, ಕಾರ್ಯಪ್ರವೃತ್ತವಾಗಬೇಕಿದೆ.&lt;br /&gt;&lt;br /&gt; &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-4275502693625588534?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/4275502693625588534/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=4275502693625588534' title='0 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/4275502693625588534'/><link rel='self' type='application/atom+xml' href='http://www.blogger.com/feeds/8477112084544236406/posts/default/4275502693625588534'/><link rel='alternate' type='text/html' href='http://horaganavanu.blogspot.com/2008/11/blog-post.html' title='`ಶಾಸ್ತ್ರೀ&apos;ಯ ಭಾಷೆ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>0</thr:total></entry><entry><id>tag:blogger.com,1999:blog-8477112084544236406.post-8388305840634643357</id><published>2008-10-22T08:59:00.000-07:00</published><updated>2008-10-22T09:02:27.462-07:00</updated><title type='text'></title><content type='html'>&lt;p&gt;&lt;strong&gt;&lt;span style="font-size:130%;"&gt;ಮತಾಂತರ- ಅವಾಂತರ&lt;/span&gt;&lt;/strong&gt;&lt;/p&gt;&lt;p&gt;&lt;strong&gt;&lt;span style="font-size:130%;"&gt;&lt;/span&gt;&lt;/strong&gt;&lt;br /&gt;&lt;strong&gt;&lt;em&gt;ನೂರು ದೇವರುಗಳನೆಲ್ಲಾ ನೂಕಾಚೆ ದೂರ,&lt;br /&gt;ಭಾರತಾಂಬೆಯೇ ನಮಗಿಂದು ಪೂಜಿಸುವ ಬಾರ&lt;br /&gt;ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ&lt;br /&gt;ಶ್ರಮವಹಿಸಿ ದುಡಿಯಿರೈ ಸರ್ವ ಹಿತಕೆ&lt;br /&gt;ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು&lt;br /&gt;ಸೇರಿರೈ ಮನುಜ ಮತಕೆ ವಿಶ್ವ ಪಥಕೆ&lt;br /&gt;&lt;/em&gt;&lt;/strong&gt;ಎಂದು ದಾರ್ಶನಿಕ ಕವಿ ಕುವೆಂಪು ಹೇಳಿ ದಶಕಗಳೇ ಮರೆಯಾಗಿ ಹೋದವು. ಆದರೆ ಮತ ವ್ಯಾಮೋಹ, ಧರ್ಮದ ದುರಭಿಮಾನ, ಅನ್ಯ ಧರ್ಮದ ದ್ವೇಷ ದಿನೇ ದಿನೇ ಮತ್ತಷ್ಟು ಉಲ್ಬಣಿಸುತ್ತಿದೆ. ಅದಕ್ಕೆ ಕಾರ್ಲ್‌ಮಾರ್ಕ್ಸ್‌ ಧರ್ಮವನ್ನು ಅಫೀಮು ಎಂದು ಕರೆದಿದ್ದರು.&lt;br /&gt;ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಟಾಟೋಪ, ಹಿಂಸೆ, ಆರೋಪ ಪ್ರತ್ಯಾರೋಪಗಳನ್ನು ಗಮನಿಸಿದರೆ ಧರ್ಮವೆಂಬುದು ಎಷ್ಟರಮಟ್ಟಿಗೆ ವಿಚ್ಛಿದ್ರಕಾರಿಯೆಂಬುದು ಸ್ಪಷ್ಟವಾಗುತ್ತದೆ. ದೇವರನ್ನು ಹತ್ತಿರದಿಂದ ಕಾಣುವ, ದೇವರನ್ನು ಸುಗಮವಾಗಿ ತಲುಪುವ ಭಕ್ತಿ ಮಾರ್ಗವು ಯಾವಾಗ ಸಾಂಸ್ಥಿಕವಾಗಿ ಆಳುವವರು ಹಾಗೂ ಸ್ವಹಿತಾಸಕ್ತ ಗುಂಪುಗಳ ಕೈಯ ಅಸ್ತ್ರವಾಗುತ್ತದೋ ಆವಾಗ ಇಂತಹ ಅವಘಡಗಳು ಸಂಭವಿಸುತ್ತವೆ.&lt;br /&gt;ಭಕ್ತಿಯ ಪರವಶತೆಯಲ್ಲಿ ಮಿಂದು ಹೋದ ನೂರಾರು ವಚನಕಾರರು, ಪುರಂದರದಾಸರು, ಕನಕದಾಸರು, ಶಿಶುನಾಳ ಷರೀಫರು, ತುಕಾರಾಂ, ಸರ್ವಜ್ಞ, ವೇಮನ, ಇಂದಿಗೂ ಇರುವ ನೂರಾರು ತತ್ವಪದಕಾರರು, ಸೂಫಿಸಂತರು ಯಾವುದೇ ಧರ್ಮದ ಗೋಡೆ ಕಟ್ಟಿಕೊಂಡವರಲ್ಲ. ತನ್ನದು ಶ್ರೇಷ್ಠ, ಇತರರದ್ದು ಕನಿಷ್ಠವೆಂಬ ಅಹಂಕಾರವನ್ನು ತೋರಿಸಿದವರಲ್ಲ. ಭಕ್ತಿಯಷ್ಟನ್ನೇ ಉಂಡುಟ್ಟು, ಅದನ್ನು ಇತರರಿಗೂ ಹಂಚಿ ಹೋದವರು. ಧರ್ಮಭೀರುಗಳೆಂದರೆ ನಿಜಕ್ಕೂ ಅವರೆ.&lt;br /&gt;ವಚನಕಾರ ಅಲ್ಲಮಪ್ರಭು ಹೇಳುವಂತೆ `ಭಕ್ತಿಯೆಂಬುದು ತೋರುಂಬ ಲಾಭ'ವಾದಾಗ ಇಂತಹ ಅಡ್ಡ ಪರಿಣಾಮಗಳು, ಸಾಮಾಜಿಕ ಅಸ್ವಸ್ಥತೆ ಘಟಿಸುತ್ತದೆ. ಪರಸ್ಪರ ದ್ವೇಷಿಸುವ ವಾತಾವರಣ ಸೃಷ್ಟಿಸಲಾಗುತ್ತದೆ. ಈಗ ನಡೆಯುತ್ತಿರುವ ಮತಾಂತರ ವಿವಾದ, ಪರವಿರೋಧ ಚರ್ಚೆಗಳು, ಪರಸ್ಪರ ಟೀಕೆಗಳು ಇವೆಲ್ಲವೂ ಧರ್ಮದ ವಿಕಾರತೆಗೆ ಕೈಗನ್ನಡಿಯಾಗಿದೆ ವಿನಃ ನಿಜಾರ್ಥದಲ್ಲಿ ಧರ್ಮದ ಆಚರಣೆಯಲ್ಲ. ಯಾರಿಗೂ ಧರ್ಮ, ಭಕ್ತಿ ಬೇಕಿಲ್ಲ. ಉರಿವ ಮನೆಯಲ್ಲಿ ತನಗೆಷ್ಟು `ಗಳ' ಸಿಗುತ್ತದೆ. ಆ ಜಂತಿ ಬಳಸಿಕೊಂಡ ತನ್ನ ಮನೆ, ಪಕ್ಷ ಹಾಗೂ ಮುಂದಿನ ಚುನಾವಣೆಯಲ್ಲಿ ಓಟು ಗಳಿಸಬಹುದೆಂಬುದು ಎಲ್ಲರ ಲೆಕ್ಕಾಚಾರವಾಗಿದೆ.&lt;br /&gt;&lt;strong&gt;ಮತಾಂತರ- ಅವಾಂತರ&lt;/strong&gt;&lt;br /&gt;ಚರ್ಚ್‌ ಹಾಗೂ ನ್ಯೂಲೈಫ್‌ಗಳಲ್ಲಿ ಮತಾಂತರ ಮಾಡಲಾಗುತ್ತಿದೆ ಎಂಬ ನೆವ ಮುಂದಿಟ್ಟುಕೊಂಡು ರಾಜ್ಯದ ಹತ್ತಾರು ಕಡೆ ಕ್ರೈಸ್ತರ ಮೇಲೆ ಬಜರಂಗಿಗಳು, ವಿಶ್ವಹಿಂದು ಪರಿಷತ್‌ ಹಾಗೂ ಬಿಜೆಪಿ ಬೆಂಬಲಿತ ಮಂದಿ ಸರಣಿ ದಾಳಿ ನಡೆಸಿದರು. ದಾವಣಗೆರೆಯಲ್ಲಿ ಶುರುವಾದ ಈ ಅಮಾನವೀಯ ದಾಳಿ ಮೇನಿಯಾದಂತೆ ಇಡೀ ರಾಜ್ಯವನ್ನು ವ್ಯಾಪಿಸಿತು. ಒರಿಸ್ಸಾದಲ್ಲಿ ನಡೆದ ಹಿಂಸಾಚಾರಕ್ಕೆ ಪ್ರತಿಸ್ಪಂದನೆಯಂತೆ ನಡೆದ ಇಲ್ಲಿನ ದಾಳಿಗೆ ಒರಿಸ್ಸಾದಂತೆ ಯಾವುದೇ ಪ್ರಚೋದನೆಯೂ ಇರಲಿಲ್ಲ.&lt;br /&gt;ಒರಿಸ್ಸಾದಲ್ಲಿ ಸಂಘಪರಿವಾರಕ್ಕೆ ಸೇರಿದ ಸ್ವಾಮಿಯೊಬ್ಬರನ್ನು ಕೊಲೆಗೈದಿದ್ದು ಹಠಾತ್‌ ಕಾರಣವಾದರೆ ಅಲ್ಲಿನ ಪ್ರಕರಣಕ್ಕೆ ಅನೇಕ ವರ್ಷಗಳ ಇತಿಹಾಸವೇ ಇದೆ. ಬುಡಕಟ್ಟು ಸಮುದಾಯವನ್ನು ವಶೀಕರಣ ಮಾಡಿಕೊಳ್ಳಲು ನಕ್ಸಲೀಯ ಮಾವೋವಾದಿಗಳು, ಕ್ರೈಸ್ತ ಮತಾಂತರಿಗಳು ಹಾಗೂ ಸಂಘಪರಿವಾರದ ಮತಾಂತರಿಗಳು ನಿರಂತರವಾಗಿ ಯತ್ನ ನಡೆಸುತ್ತಿದ್ದಾರೆ.&lt;br /&gt;ಜಾತೀಯ ಅವಮಾನ ಹಾಗೂ ಮೇಲ್ಜಾತಿಯ ಭೂಮಾಲೀಕರ ದಬ್ಬಾಳಿಕೆಯಿಂದ ನೊಂದ ಬುಡಕಟ್ಟು ಸಮುದಾಯ ಹಾಗೂ ಕೆಳಜಾತಿಗಳು ಈಗ ಎಲ್ಲರಿಗೂ ಬೇಕಾದವರಾಗಿದ್ದಾರೆ. ಭೂಮಾಲೀಕ ಪದ್ಧತಿ, ಕಠೋರ ಜಾತಿ ವ್ಯವಸ್ಥೆ ವಿರುದ್ಧ ಪ್ರಬಲ ಹೋರಾಟ ರೂಪಿಸುತ್ತಿರುವ ಮಾವೋವಾದಿಗಳು ಅಲ್ಲಿ ತಮ್ಮ ನೆಲೆ ಭದ್ರಪಡಿಸಿಕೊಂಡು ವ್ಯವಸ್ಥೆಯ ವಿರುದ್ಧ ಜನರನ್ನು ಸಂಘಟಿಸುತ್ತಿರುವುದು ಹೊಸತೇನಲ್ಲ. ಕಳೆದ 20 ವರ್ಷಗಳಿಂದಲೂ ಸಿಪಿಐ(ಪಾರ್ಟಿ ಯೂನಿಟಿ) ಹಾಗೂ ಪೀಪಲ್ಸ್‌ ವಾರ್‌ ಅಲ್ಲಿ ಬಲಿಷ್ಠ ನೆಲೆ ಹೊಂದಿದ್ದವು. ನಕ್ಸಲೀಯ ಸಂಘಟನೆಗಳು ಒಗ್ಗೂಡಿ ಸಿಪಿಐ ಮಾವೋವಾದಿ ಎಂದು ಬದಲಾದ ಮೇಲೆ ನಕ್ಸಲೀಯರು ಈ ಪ್ರದೇಶದಲ್ಲಿ ಭದ್ರ ನೆಲೆ ರೂಪಿಸಿಕೊಂಡಿದ್ದಾರೆ.&lt;br /&gt;ಕಷ್ಟದಲ್ಲಿರುವವವರು, ಜಾತಿಯ ಶೋಷಣೆಗೆ ಒಳಗಾದವರು, ರೋಗಿಗಳಿಗೆ ಶುಶ್ರೂಷೆ ನೀಡುತ್ತಿರುವ ಕ್ರೈಸ್ತ ಮಿಷನರಿಗಳು ಅಲ್ಲಿ ಕೆಲಸ ಮಾಡುತ್ತಿವೆ. ಕ್ರೈಸ್ತರ ಸೇವಾಮನೋಭಾವ ಹಾಗೂ ದೇವರನ್ನು ಕಾಣಲು ಜಾತೀಯ ಬೇಧವಿಲ್ಲದೇ ಅವರ ಸಮಾನ ಗುಣವನ್ನು ಕಂಡು ಬುಡಕಟ್ಟು ಸಮುದಾಯ ಮತಾಂತರವಾಗಿರುವುದು ಸುಳ್ಳಲ್ಲ. ಆದರೆ ಆಮಿಷ ಅಥವಾ ಬಲವಂತದ ಮತಾಂತರವೆಂಬುದು ಅಲ್ಲಿ ನಡೆಯುತ್ತಿಲ್ಲ.&lt;br /&gt;ಈ ಇಬ್ಬರ ಪ್ರಾಬಲ್ಯ ಕಂಡ ಸಂಘಪರಿವಾರದವರು ಅಲ್ಲಿ ನೆಲೆಯೂರಲು ಬಯಸಿದ್ದು ಸತ್ಯ. ಜಾತಿಪದ್ಧತಿ, ಭೂಮಾಲೀಕ ಪದ್ಧತಿಯನ್ನು ನೇರವಾಗಿ ಬೆಂಬಲಿಸುವ ಸಂಘಪರಿವಾರದವರು ಕ್ರೈಸ್ತರಾಗಿ ಪರಿವರ್ತಿತರಾದವರನ್ನು ಮತ್ತೆ ಹಿಂದೂಧರ್ಮಕ್ಕೆ ಕರೆತರುವ ಯತ್ನ ಮಾಡುವಲ್ಲಿ ವಿಫಲರಾಗಿರುವುದು ಅಕ್ಷರಶಃ ಸತ್ಯ. ಈ ಹಿನ್ನೆಲೆಯಲ್ಲಿ ಸಂಘರ್ಷ ಅಲ್ಲಿ ನಿರಂತರವಾಗಿ ನಡೆಯುತ್ತಿದೆ. ಪಾದ್ರಿ ಗ್ರಹಾಂ ಸ್ಟೈನ್‌ರನ್ನು ಅವರಿಬ್ಬರ ಹಸುಗೂಸುಗಳ ಸಮೇತ ಜೀವಂತ ದಹಿಸಿದ ಪೈಶಾಚಿಕ ಚಾರಿತ್ರ್ಯವನ್ನು ಸಂಘಪರಿವಾರ ಹೊಂದಿದೆ.&lt;br /&gt;ತಮ್ಮ ಸಂಘಟನಾತ್ಮಕ ಚಟುವಟಿಕೆಗೆ ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಸಂಘಪರಿವಾರದ ಸ್ವಾಮಿಯನ್ನು ತಾವೇ ಹತ್ಯೆ ಮಾಡಿರುವುದಾಗಿ ಮಾವೋವಾದಿಗಳು ಬಹಿರಂಗ ಹೇಳಿಕೆ ನೀಡಿದ್ದಾರೆ. ಹಾಗಿರುವಾಗ ಸ್ವಾಮಿಯನ್ನು ಕ್ರೈಸ್ತರೇ ಕೊಂದಿದ್ದಾರೆಂದು ಆಪಾದಿಸಿ ಕ್ರೈಸ್ತರ ಮೇಲೆ ನಿರಂತರ ಹಲ್ಲೆ ನಡೆಸಿ, ಸಾಮಾಜಿಕ ಕ್ಷೋಭೆಗೆ ಸಂಘಪರಿವಾರದವರು ಕಾರಣರಾದರು. ಅಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರುವುದು ಸಂಘಪರಿವಾರದವರಿಗೆ ಮತ್ತಷ್ಟು ಬಲತಂದುಕೊಟ್ಟಿತ್ತು.&lt;br /&gt;&lt;strong&gt;ಸೌಹಾರ್ದ ಕರ್ನಾಟಕ:&lt;/strong&gt;&lt;br /&gt;ಒರಿಸ್ಸಾದ ಪ್ರಕರಣ, ಅಲ್ಲಿನ ಸಾಮಾಜಿಕ ಹಿನ್ನೆಲೆಯೇ ಬೇರೆ ರೀತಿಯದು. ಆದರೆ ಕರ್ನಾಟಕದ ಪರಿಸ್ಥಿತಿ ಹಾಗಿಲ್ಲ. ಇಲ್ಲಿನ ಕ್ರೆಸ್ತ ಮಿಷನರಿಗಳಿಗೆ ತನ್ನದೇ ಆದ ಇತಿಹಾಸವಿದೆ. ಕನ್ನಡದ ಅರಿವು ಮೂಡಿಸಿದ ಅನೇಕ ಮಿಷನರಿಗಳು ಇಂದಿಗೂ ಆದರ್ಶ ಪ್ರಾಯರಾಗಿದ್ದಾರೆ.&lt;br /&gt;ಕನ್ನಡದ ಮೊದಲ ಪತ್ರಿಕೆ ಎನಿಸಿದ ಮಂಗಳೂರು ಸಮಾಚಾರ ಹಿಂದೆ ಮಿಷನರಿಗಳ ಪ್ರೇರಣೆಯಿದೆ. ಕನ್ನಡ-ಇಂಗ್ಲಿಷ್‌ ನಿಘಂಟು ನೀಡಿದ ರೆವರೆಂಡ್‌ ಕಿಟೆಲ್‌ರಿಂದ ಹಿಡಿದು ಇತ್ತೀಚೆಗೆ ಕನ್ನಡ ನಿಘಂಟು ನೀಡಿದ ಮಂಗಳೂರಿನವರೇ ಆದ ಪ್ರಶಾಂತ ಮಾಡ್ತಾರವರೆಗೆ ಉಜ್ವಲ ಕನ್ನಡ ಪ್ರೇಮದ ಪರಂಪರೆಯಿದೆ.&lt;br /&gt;ಹಾಗೆಯೇ ಬಿ.ಎಲ್‌. ರೈಸ್‌ರಂತಹ ಮಹಾನುಭಾವರು ತನ್ನದೇ ಕೊಡುಗೆ ನೀಡಿದ್ದಾರೆ. ಬೆಂಗಳೂರಿನ ಕ್ರೈಸ್ಟ್‌ ಕಾಲೇಜು ಕನ್ನಡ ಯುವ ಲೇಖಕರ ಪ್ರೋತ್ಸಾಹಕ್ಕೆ, ಅತ್ಯುತ್ತಮ ಕನ್ನಡ ಪುಸ್ತಕ ಪ್ರಕಟಣೆಗೆ ನೀಡಿದ ಕೊಡುಗೆ ಕನ್ನಡದ್ದೇ ಆದ ಒಂದು ವಿಶ್ವವಿದ್ಯಾನಿಲಯ ನೀಡುವ ಕೊಡುಗೆಗೆ ಸಮನಾದುದು.&lt;br /&gt;ಕ್ರೈಸ್ತರು ರಾಜ್ಯದ ನಾನಾಭಾಗಗಳಲ್ಲಿ ನಡೆಸುವ ಶಾಲೆಗಳಂತೂ ನಾಡಿನ ಶೈಕ್ಷಣಿಕ ಅಭಿವೃದ್ಧಿಗೆ ಅನುಪಮ ಕೊಡುಗೆ ನೀಡಿವೆ. ಇಂಗ್ಲಿಷ್‌ ಮೀಡಿಯಂ ಮಾತ್ರವಲ್ಲದೇ ಕನ್ನಡ ಮೀಡಿಯಂ ಶಾಲೆಗಳನ್ನು ಆರಂಭಿಸಿ ತನ್ನದೇ ಆದ ಪಾಲನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿವೆ. ಶೇ.2 ರಷ್ಟಿರುವ ಕ್ರೈಸ್ತರು ತಮ್ಮ ಮಕ್ಕಳಿಗೆ ಮಾತ್ರ ಶಾಲೆ ನಡೆಸಿದ್ದರೆ ಶಾಲೆಯಲ್ಲಿನ ಮಕ್ಕಳ ಸಂಖ್ಯೆ ಒಟ್ಟಾರೆ 50-100ನ್ನೂ ದಾಟುತ್ತಿರಲಿಲ್ಲ. ಮಂಗಳೂರು, ಬೆಂಗಳೂರು, ಉಡುಪಿ, ಶಿವಮೊಗ್ಗ, ಮೈಸೂರು ಹೀಗೆ ರಾಜ್ಯದ ನಾನಾದಿಕ್ಕುಗಳಲ್ಲಿ ಕ್ರೈಸ್ತರ ಶಾಲಾ ಕಾಲೇಜುಗಳಲ್ಲಿ ಕನಿಷ್ಟವೆಂದರೂ 2-3 ಸಾವಿರ ವಿದ್ಯಾರ್ಥಿಗಳ ಸಂಖ್ಯೆ ಇರುತ್ತದೆ. 40-50 ವರ್ಷಗಳಿಂದ ನಡೆಯುತ್ತಿರುವ ಶಾಲೆಯಲ್ಲಿ ಮತಾಂತರ ಮಾಡುವುದೇ ಆಗಿದ್ದರೆ ಇಂದು ಒಬ್ಬನೇ ಒಬ್ಬ ಮಧ್ಯವಯಸ್ಕ ಹಿಂದು ಕಾಣಸಿಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಕ್ರೈಸ್ತ ಶಾಲೆಗಳು ಜಾತ್ಯತೀತ ಮನೋಭಾವ ಹಾಗೂ ಧೋರಣೆಯಿಂದ ಕಾರ್ಯನಿರ್ವಹಿಸುತ್ತಿವೆ. ಎಲ್ಲಿಯೂ ಮತಾಂತರದ ಚಟುವಟಿಕೆಗಳಾಗಲಿ, ಹಿಂದೂ ಧರ್ಮದ ಅವಹೇಳನ ಮಾಡಿರುವುದಾಗಲಿ ಕಾಣಬರುವುದಿಲ್ಲ. ಆ ರೀತಿಯ ದೂರುಗಳು ದಾಖಲಾಗಿಲ್ಲ.&lt;br /&gt;ಇನ್ನು ಆಸ್ಪತ್ರೆ ಸಂಗತಿಯಂತೂ ಹೇಳುವುದೇ ಬೇಡ. ಸಮಾಜ ನಿಕೃಷ್ಟವಾಗಿ ಕಾಣುವ, ತಮ್ಮವರೇ ತಮಗೆ ಬೇಡವಾಗಿರುವಾಗ ಅಂತಹವರನ್ನು ಆಸ್ಪತ್ರೆ, ಅನಾಥಾಲಯದಲ್ಲಿ ಇಟ್ಟುಕೊಂಡು ಶುಶ್ರೂಷೆ, ಆರೋಗ್ಯ ಚಿಕಿತ್ಸೆ ನೋಡಿಕೊಳ್ಳುವ ಸಾರ್ಥಕ ಕೆಲಸ ಮಾಡುತ್ತಿವೆ.&lt;br /&gt;ಹಿಂದೂಗಳೆಲ್ಲಾ ಒಂದು ಎನ್ನುವ ಸಂಘಪರಿವಾರದವರು ಹಿಂದು ಸಮಾಜದ ದುರ್ಬಲರು, ಅನಾಥರು, ವೃದ್ಧರು, ವಿವಿಧ ರೋಗಿಗಳಿಂದ ಬಳಲುತ್ತಿರುವವರಿಗೆ ಯಾಕೆ ಚಿಕಿತ್ಸೆ ನೀಡಿಲ್ಲ. ರಾಜ್ಯದ ಬಹುತೇಕ ಕಡೆ ಕ್ರೈಸ್ತರು ನಡೆಸುತ್ತಿರುವ ಆಸ್ಪತ್ರೆಗಳು ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದು, ರೋಗಿಗಳನ್ನು ಕಾಪಾಡುತ್ತಿವೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದವರನ್ನೆಲ್ಲಾ ಮತಾಂತರ ಮಾಡಿದ್ದರೆ ಅವರೆಲ್ಲಾ ಇಲ್ಲವೆನ್ನುತ್ತಿದ್ದರೆ. ಕ್ರೈಸ್ತರಾದರೆ ಮಾತ್ರ ಚಿಕಿತ್ಸೆ ಎಂದು ಷರತ್ತು ಒಡ್ಡಿದ್ದರೆ ಕ್ರೈಸ್ತರ ಜನಸಂಖ್ಯೆ ಕನಿಷ್ಠವೆಂದರೂ ಶೇ.20 ರಷ್ಟು ದಾಟುತ್ತಿತ್ತು. ಮತಾಂತರ ನಡೆಯುತ್ತಿದೆ ಎಂದು ಸಂಘಪರಿವಾರ ಬೊಬ್ಬೆ ಹೊಡೆಯುತ್ತಿದ್ದರೂ ಕ್ರೈಸ್ತರ ಜನಸಂಖ್ಯೆ ಶೇಕಡಾವಾರು ಪ್ರಮಾಣದಲ್ಲಿ ಇಳಿಮುಖವಾಗಿದೆ. ಬ್ರಿಟಿಷರಿದ್ದಾಗ ಶೇ.2.67ರಷ್ಟಿದ್ದ ಕ್ರೈಸ್ತರ ಪ್ರಮಾಣ 2001ರ ಜನಗಣತಿ ಪ್ರಕಾರ ಶೇ.2.42 ಆಗಿದೆ. ಅಲ್ಲಿಗೆ 0.23ರಷ್ಟು ಇಳಿಮುಖವಾಗಿದೆ.&lt;br /&gt;&lt;strong&gt;ದಾಳಿ ಹಿಂದೆ?&lt;br /&gt;&lt;/strong&gt;ಇಷ್ಟೆಲ್ಲಾ ಸತ್ಯಗಳು ಮುಖಕ್ಕೆ ಹೊಡೆಯುವಂತೆ ಇದ್ದರೂ ಕ್ರೈಸ್ತರ ಮೇಲೆ ಹಲ್ಲೆ ನಡೆಸುವ ಕಾರಣವಾದರೂ ಏನಿತ್ತು. ಮೇಲ್ನೋಟಕ್ಕೆ ಇದು ಒರಿಸ್ಸಾ ಹಲ್ಲೆಯ ಪ್ರತಿಧ್ವನಿ ಎಂದೆನಿಸಿದರು ಸತ್ಯ ಬೇರೆಯೇ ಇದೆ.&lt;br /&gt;ಸಂಘಪರಿವಾರ ರಾಜಕೀಯ ಮುಖವೇ ಆಗಿರುವ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿರುವಾಗ ತನ್ನಿಂತಾನೇ ರಾಜ್ಯದ ಜನ ಆಡಳಿತ ಪಕ್ಷದ ವಿರುದ್ಧವಾದ ನೆಲೆ ಹೊಂದಿರುತ್ತಾರೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರದೇ ಇದ್ದಾಗ, ನಮ್ಮ ಮನೆಮುಂದಿನ ರಸ್ತೆ, ಚರಂಡಿ ಸ್ವಚ್ಛವಾಗದೇ ಇದ್ದಾಗ, ಕುಡಿಯಲು ನೀರು ಸಿಗದೇ ಇದ್ದಾಗ, ಕೈಗೆ ಬರುವ ಸಂಬಳದಲ್ಲಿ ಜೀವನ ನಡೆಸುವುದು ದುಸ್ತರವಾದಾಗ ಸಹಜವಾಗ ಜನ ಆಡಳಿತಾರೂಢ ಪಕ್ಷದ ವಿರುದ್ಧ ಸೆಟೆದು ನಿಲ್ಲುತ್ತಾರೆ. ಅದು ಕಾಂಗ್ರೆಸ್‌ ಇರಲಿ, ಬಿಜೆಪಿ ಇರಲಿ ಅಥವಾ ಕಮ್ಯನಿಸ್ಟರೇ ಇರಲಿ. ಜನರಿಗೆ ಆಳುವ ಪಕ್ಷದ ಸಿದ್ಧಾಂತ ಮುಖ್ಯವಾಗಿರುವುದಿಲ್ಲ. ತಾವು ತಿನ್ನುವ ಕೂಳಿಗೆ ಸಂತ್ರಸ್ತಪಡಬೇಕಾದಾಗ, ರಸ್ತೆಯಲ್ಲಿ ಓಡಾಡುವ ಸ್ಥಿತಿಯಿಲ್ಲದೇ ಇದ್ದಾಗ ಅಧಿಕಾರದಲ್ಲಿರುವ ಪಕ್ಷದ ಬಗ್ಗೆ ಅಸಮಾಧಾನ, ಸಿಟ್ಟು, ಆಕ್ರೋಶ ತೋರ್ಪಡಿಸುತ್ತಾರೆ.&lt;br /&gt;ಅಧಿಕಾರಕ್ಕೇರಿದ ನೂರು ದಿನಗಳಲ್ಲಿ ಕೇವಲ ಬೊಗಳೆ ಬಿಡುತ್ತಾ ಸಾಗಿದ ಬಿಜೆಪಿ ಸರ್ಕಾರದ ಬಗ್ಗೆ ಸಣ್ಣ ಪ್ರಮಾಣದ ಅಸಮಾಧಾನದ ಹೊಗೆ ಏಳುತ್ತಿದೆ. ಗಣಿದೊರೆಗಳ ಕೈಯಲ್ಲಿ ಸರ್ಕಾರ ಕುಣಿಯುತ್ತಿರುವುದು ಜನರಲ್ಲಿ ಅಸಹನೆ ಹುಟ್ಟಿಸಿದೆ. ನೈತಿಕತೆ, ಸೈದ್ಧಾಂತಿಕತೆ ಮೀರಿ ಅನ್ಯ ಪಕ್ಷದವರನ್ನು ಕರೆತರುತ್ತಿರುವುದು ಅಸಹ್ಯ ಹುಟ್ಟಿಸಿದೆ. ಇದು ಬಿಜೆಪಿ ನಿಜಬಣ್ಣವನ್ನು ಬಯಲುಗೊಳಿಸಿದೆ. ಬಿಜೆಪಿ ನಾಯಕರ ಜನಪ್ರಿಯತೆ ಕಡಿಮೆಯಾಗಿ ಆಕ್ರೋಶ ಮಡುಗಟ್ಟತೊಡಗಿದೆ.&lt;br /&gt;ಜನರ ಆಕ್ರೋಶದ ದಿಕ್ಕು, ಗಮನವನ್ನು ಬೇರೆಡೆಗೆ ಸೆಳೆಯಲು ಆಳುವವರ್ಗಗಳು ಈ ರೀತಿಯ ತಂತ್ರವನ್ನು ಹೂಡುವುದು ಇತಿಹಾಸದಲ್ಲಿ ಇದೇ ಮೊದಲಲ್ಲ. ವಿಶ್ವದ ಯಾವುದೇ ದೇಶದ ಚರಿತ್ರೆಯಲ್ಲಿ ಜನರ ಹೋರಾಟದ ದಿಕ್ಕು ತಪ್ಪಿಸಲು, ವ್ಯವಸ್ಥೆಯ ವಿರುದ್ಧದ ಅಸಹನೆಯ ಸಿಟ್ಟನ್ನು ಹಾದಿ ತಪ್ಪಿಸಲು ಇಂತಹ ಉಪಾಯಗಳನ್ನು ವ್ಯವಸ್ಥೆ ಹುಟ್ಟು ಹಾಕುತ್ತಾ ಬಂದಿದೆ.&lt;br /&gt;ಕ್ರೈಸ್ತರ ಮೇಲೆ ಸಂಘಪರಿವಾರ ಕೃಪಾಪೋಷಿತ ಹಲ್ಲೆ ಇದೇ ರೀತಿಯದು. ಬಿಜೆಪಿ ಬಗೆಗಿನ ಅಸಮಾಧಾನವನ್ನು ಕ್ರೈಸ್ತರ ಮೇಲೆ ತಿರುಗಿಸುವಂತೆ ಮಾಡುದರ ಪ್ರಚೋದನೆ ಇದು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವದರಿಂದ ಸಂಘಪರಿವಾರದ ಕೃತ್ಯಗಳನ್ನು ಪೊಲೀಸರು ಕೈಕಟ್ಟಿ ಸುಮ್ಮನೇ ನೋಡುತ್ತಾ ನಿಂತರು. ಕೆಲವೆಡೆ ಪರೋಕ್ಷವಾಗಿ ಬೆಂಬಲಿಸಿದರು. ಹಲ್ಲೆ ನಡೆಯುತ್ತಿದ್ದಾಗಲೂ ಅದನ್ನು ತಡೆಯಲು ವ್ಯಾಪಕ ಬಂದೋಬಸ್ತ್‌ ಕ್ರಮ ಕೈಗೊಳ್ಳಲೇ ಇಲ್ಲ.&lt;br /&gt;ಪ್ರೆಸ್ಸರ್‌ ಕುಕ್ಕರ್‌ ಸಿಡಿಯುವುದನ್ನು ತಪ್ಪಿಸಲು ಸೇಫ್ಟಿವಾಲ್‌ ಫಿಕ್ಸ್‌ಮಾಡಿರುತ್ತಾರೆ. ಆಳುವವರ್ಗಗಳು ಕ್ರೈಸ್ತರು, ಮುಸ್ಲಿಮರ ಮೇಲೆ ಹಲ್ಲೆಯಂತ ಸೇಫ್ಟಿವಾಲ್‌ಗಳನ್ನು ಬಳಸುತ್ತಾರೆಂಬುದಕ್ಕೆ ಇದು ಉತ್ತಮ ನಿದರ್ಶನ.&lt;br /&gt;&lt;strong&gt;ನಾಚಿಕೆಗೇಡು:&lt;br /&gt;&lt;/strong&gt;ಸಂಘಪರಿವಾರ ಚರ್ಚ್‌ಗಳ ಮೇಲೆ ಮಾತ್ರ ಹಲ್ಲೆ ನಡೆಸಲಿಲ್ಲ. ಪ್ರಾರ್ಥನೆಗಾಗಿ ಬಂದಿದ್ದ ಗರ್ಭಿಣಿಯ ಮೇಲೆ ಹಲ್ಲೆ ನಡೆಸಿತು. ಮನೆಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ದಂಪತಿಗಳನ್ನು ಮಾರಾಮಾರಿ ಥಳಿಸಿತು. ಮಹಿಳೆಯರು, ಮಕ್ಕಳೆನ್ನದೇ ಎಲ್ಲರ ಮೇಲೂ ದಾಳಿ ಮಾಡಿತು. ಇಷ್ಟೆಲ್ಲಾ ಆದರೂ ಮಹತ್ವದ ಹೊಣೆಗಾರಿಕೆ ಹೊಂದಿದ್ದ ರಾಜ್ಯದ ಮುಖ್ಯಮಂತ್ರಿ( ಅವರೇ ಹೇಳಿಕೊಂಡಂತೆ 6 ಕೋಟಿ ಕನ್ನಡಿಗರ ಮುಖ್ಯಮಂತ್ರಿ) ಯಡಿಯೂರಪ್ಪ ಹಾಗೂ ಗೃಹಸಚಿವ ವಿ.ಎಸ್‌. ಆಚಾರ್ಯ, ಗಲಭೆ ನಿಯಂತ್ರಿಸುವ ಬದಲಿಗೆ, ಮತಾಂತರ ನಡೆಯುತ್ತಿರುವುದೇ ಹಲ್ಲೆಗೆ ಕಾರಣ ಎಂದು ಪ್ರಕರಣವನ್ನು ವಿಮರ್ಶೆ ಮಾಡಲು ತೊಡಗಿದರು. ಹಲ್ಲೆಗೆ ಕಾರಣ ಹುಡುಕತೊಡಗಿದರು.&lt;br /&gt;ಇದಕ್ಕಿಂತ ನಾಚಿಕೆಗೇಡಿನ ಪ್ರಕರಣ ಇನ್ನೊಂದು ಇರಲಾರದು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಘಟನೆಗೆ ಕಾರಣ ಹುಡುಕುವುದಲ್ಲ. ಅನ್ಯಾಯ, ದೌರ್ಜನ್ಯ ನಡೆದಾಗ ಅದನ್ನು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದು. ಘಟನೆಯ ವಿಶ್ಲೇಷಣೆಯನ್ನು ಮಾಡಲು ಸಮಾಜಶಾಸ್ತ್ರಜ್ಞರು, ಮನಃ ಶಾಸ್ತ್ರಜ್ಞರು ಇರುತ್ತಾರೆ. ಅಥವಾ ಪೊಲೀಸ್‌ ಇಲಾಖೆ ಇರುತ್ತದೆ. ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಮಾತನಾಡುವುದನ್ನು ಕೇಳಿದ್ದರೆ ಇವರಿಬ್ಬರು ಸಂಘಪರಿವಾರದ ದುಷ್ಕೃತ್ಯದ ಹಿಂದೆ ನಿಂತಿರುವುದು ಸ್ಪಷ್ಟವಾಗುತ್ತಿತ್ತು.&lt;br /&gt;&lt;strong&gt;ಮತಾಂತರ:&lt;br /&gt;&lt;/strong&gt;ಹಾಗಂತ ದೇಶದಲ್ಲಿ ಮತಾಂತರ ಹೊಸದಲ್ಲ. ಮಾನವ ಚರಿತ್ರೆ ಆರಂಭವಾದ ಕಾಲದಿಂದಲೂ ಮತಾಂತರ ನಡೆದೇ ಇದೆ. ಬುಡಕಟ್ಟು ಸಮುದಾಯವನ್ನು ವೈದಿಕ ಧರ್ಮಕ್ಕೆ ಮತಾಂತರಿರುವ ಮೂಲಕ ಆರಂಭದಲ್ಲಿ ಆರ್ಯರು ವೈದಿಕ ಮತವನ್ನು ಪ್ರತಿಷ್ಠಾಪಿಸಿದರು.ವೈದಿಕ ಮತ ಅಂಧಾಚರಣೆಗಳ ವಿರುದ್ಧ ಹುಟ್ಟಿಕೊಂಡ ಬೌದ್ಧ ಹಾಗೂ ಜೈನ ಮತಗಳು ಮತಾಂತರವನ್ನು ನಿರ್ಬಿಡೆಯಿಂದ ಮಾಡಿದವು ಅಥವಾ ಜನರೇ ಮನಸೋತು ಮತಾಂತರಗೊಂಡರು. ಮತ್ತೆ ಬಂದ ವೈದಿಕ ಮತಾನುಯಾಯಿಗಳಾದ ಶಂಕರಚಾರ್ಯ, ಮಧ್ವಾಚಾರ್ಯರು ಬೌದ್ಧ, ಜೈನರನ್ನು ವಾಪಸ್‌ ಕರೆತಂದರು. ಭಾರತದಲ್ಲೇ ಜನಿಸಿದ ಬೌದ್ಧಮತ ಇಂದು ಕಣ್ಮರೆಯಾಗಲು ವೈದಿಕ ಮತಾನುಯಾಯಿಗಳೇ ಕಾರಣರಾದರು.&lt;br /&gt;ಮತ್ತೆ ವೈದಿಕ ಮತ ವಿರೋಧಿಸಿ ಅಸ್ತಿತ್ವಕ್ಕೆ ಬಂದ ವೀರಶೈವ ಧರ್ಮ ಮತಾಂತರ ಮಾಡಿತು. ನೂರಾರು ಕೆಳಜಾತಿಗಳು ಲಿಂಗಾಯಿತರಾಗಿ ಪರಿವರ್ತಿತರಾದರು. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರ ತಲೆಮಾರಿನವರು ಹಿಂದೆಂದೋ ಹಿಂದೂ ಧರ್ಮದಿಂದ ವೀರಶೈವ ಧರ್ಮಕ್ಕೆ ಮತಾಂತರಗೊಂಡವರೆ.&lt;br /&gt;ಒಂದು ವೇಳೆ ನೂರಾರು ವರ್ಷಗಳ ಈ ದೇಶವನ್ನು ಆಳಿದ ಮುಸ್ಲಿಂ ಹಾಗೂ ಕ್ರೈಸ್ತ ರಾಜರು ಮತಾಂತರವನ್ನು ಮಾಡಿದ್ದೇ ಆಗಿದ್ದರೆ ಭಾರತದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರು ಹಿಂದುಗಳಾಗಿ ಉಳಿಯುತ್ತಿರಲಿಲ್ಲ. ಮುಸ್ಲಿಮರ ಸಂಖ್ಯೆ ಶೇ.14 ಹಾಗೂ ಕ್ರೈಸ್ತರ ಸಂಖ್ಯೆ ಶೇ.2.4ರಷ್ಟು ಇರುತ್ತಿರಲಿಲ್ಲ. ಈ ಸತ್ಯ ಜನರಿಗೆ ಅರ್ಥವಾಗಬೇಕಾಗಿದೆ. ಮತಾಂತರ ನಡೆಯುತ್ತಿರುವುದು ಶುದ್ಧ ಸುಳ್ಳಾಗಿದೆ. ಅಸ್ತಿತ್ವವನ್ನು ಮರುಸ್ಥಾಪಿಸಿಕೊಳ್ಳಲು, ವ್ಯವಸ್ಥೆ ವಿರುದ್ಧದ ಆಕ್ರೋಶವನ್ನು ಶಮನಗೊಳಿಸಲು ಸಂಘಪರಿವಾರ ನಡೆಸಿದ ಹುನ್ನಾರ ಇದೆಂಬುದು ಸ್ಪಷ್ಟವಾಗಬೇಕಾಗಿದೆ.&lt;br /&gt;&lt;br /&gt;&lt;br /&gt; &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-8388305840634643357?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/8388305840634643357/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=8388305840634643357' title='4 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/8388305840634643357'/><link rel='self' type='application/atom+xml' href='http://www.blogger.com/feeds/8477112084544236406/posts/default/8388305840634643357'/><link rel='alternate' type='text/html' href='http://horaganavanu.blogspot.com/2008/10/blog-post_22.html' title=''/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>4</thr:total></entry><entry><id>tag:blogger.com,1999:blog-8477112084544236406.post-8629135535257701505</id><published>2008-10-22T07:46:00.000-07:00</published><updated>2008-10-22T07:51:29.772-07:00</updated><title type='text'>ಭಯ ಉತ್ಪಾದನೆ: ಆ ಮುಖ ಈ ಮುಖ</title><content type='html'>&lt;div align="center"&gt;&lt;br /&gt;&lt;strong&gt;&lt;span style="font-size:180%;"&gt;  &lt;/span&gt;&lt;span style="font-size:130%;"&gt;ಭಯ ಉತ್ಪಾದನೆ: ಆ ಮುಖ ಈ ಮುಖ&lt;/span&gt;&lt;/strong&gt;&lt;/div&gt;&lt;div align="center"&gt;&lt;span style="font-size:130%;"&gt;&lt;/span&gt; &lt;/div&gt;&lt;br /&gt;&lt;br /&gt;&lt;br /&gt;ನಿಮ್ಮ ಮನೆಯ&lt;br /&gt;ಒಂದು ಕೋಣೆಯಲ್ಲಿ&lt;br /&gt;ಬೆಂಕಿ ಬಿದ್ದಿದ್ದರೆ&lt;br /&gt;ಮತ್ತೊಂದು ಕೋಣೆಯಲ್ಲಿ&lt;br /&gt;ಸುಮ್ಮನೆ ಮಲಗಿ&lt;br /&gt;ನೆಮ್ಮದಿಯಿಂದ ನಿದ್ದೆ ಹೋಗಬಲ್ಲಿರಾ?&lt;br /&gt;&lt;br /&gt;ಭಯೋತ್ಪಾದನೆಯೆಂಬುದು ದೇಶದ ನರನಾಡಿಗಳನ್ನು ವ್ಯಾಪಿಸುತ್ತಿರುವ ಈ ವಿಕೃತ ಹೊತ್ತಿನಲ್ಲಿ ಈ ಪ್ರಶ್ನೆಗೆ ರಾಜಕಾರಣಿಗಳು ಮತ್ತು ಭಯೋತ್ಪಾದಕರ ಹೊರತಾಗಿ ಮತ್ತಾರೂ `ಹೋಗಬಲ್ಲೆವು' ಎಂದು ಯಾರೂ ಹೇಳಲಾರರು.&lt;br /&gt;ಎಲ್ಲಿ ಯಾವಾಗ ಸ್ಪೋಟವಾಗುತ್ತದೋ ನಮ್ಮ ಕಾಲುಕೈಗಳು ಹೊಂದಿಸಲು ಸಿಗದಂತೆ ಚೂರುಪಾರಾಗಿ ಛಿದ್ರಗೊಂಡು ಹರಿದು ಹಾರಿಹೋಗಬಲ್ಲವೋ ಎಂಬ ಭಯದಲ್ಲಿಯೇ ಎಲ್ಲರೂ ದಿನದೂಡಬೇಕಾದ ಭೀತಿಯಲ್ಲಿ ನಾವಿದ್ದೇವೆ. ಇದನ್ನು ನಿಗ್ರಹಿಸಬಲ್ಲ ಶಕ್ತಿಯುಳ್ಳ ರಾಜಕಾರಣಿಗಳು ಆರೋಪ-ಪ್ರತ್ಯಾರೋಪ, ಸಮರ್ಥನೆ-ನಿರಾಕರಣೆ, ದೂಷಣೆ-ಸ್ಪಷ್ಟನೆಯಲ್ಲಿಯೇ ಇಡೀ ಕಾಲವನ್ನು ವ್ಯಯಿಸುತ್ತಿದ್ದಾರೆ. ಭಯೋತ್ಪಾದನೆಯೆಂಬುದು ನಮ್ಮೆಲ್ಲರ ಮೇಲೆ ನಿರಂತರ ಚಾಚಿರುವ ಕರಾಳ ನೆರಳು ಎಂದು ಯಾರಿಗೂ ಅನ್ನಿಸುತ್ತಲೇ ಇಲ್ಲ.&lt;br /&gt;ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾವ ಸಮುದಾಯದ ಓಟುಗಿಟ್ಟಿಸಲು `ಯಾವ ಮಾತು'ಗಳು ಎಷ್ಟರಮಟ್ಟಿಗೆ ಸಫಲವಾಗಬಹುದೆಂಬ ಅಕ್ಷರ ವ್ಯಭಿಚಾರದಲ್ಲಿಯೇ ಎಲ್ಲರೂ ತೊಡಗಿದ್ದಾರೆ. ಕಾಂಗ್ರೆಸ್‌, ಬಿಜೆಪಿ, ಕಮ್ಯುನಿಸ್ಟರು, ಎಸ್ಪಿ ಹೀಗೆ ಯಾವುದೇ ಪಕ್ಷಗಳೂ ಇದರಿಂದ ಹೊರತಾಗಿಲ್ಲ. ಎಲ್ಲರೂ `ಮತಬ್ಯಾಂಕ್‌'ನತ್ತಲೇ ಕಣ್ಣಿಟ್ಟು, ಬಾಯ್ತೆರೆಯುತ್ತಿದ್ದಾರೆ.&lt;br /&gt;`ಭಾರತವೂ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿಲ್ಲ. ಭಯೋತ್ಪಾದಕರು ಭಾರತದ ವಿರುದ್ಧ ಹೋರಾಡುತ್ತಿದ್ದಾರೆ. ರಾಜಕಾರಣಿಗಳು ಭಯೋತ್ಪಾದಕರ ವಿರುದ್ಧ ಹೋರಾಡುತ್ತಿಲ್ಲ. ಅವರು ಪರಸ್ಪರ ಕಚ್ಚಾಡುತ್ತಿದ್ದಾರೆ. ಅವರು ಜನರ ಭದ್ರತೆ ಬಗ್ಗೆ ಚಿಂತಾಕ್ರಾಂತರಾಗಿಲ್ಲ. ಅವರ ಚಿಂತೆಯೇನಿದ್ದರೂ ಜನರ ಓಟಿನ ಮೇಲೆ. ಭಯೋತ್ಪಾದನೆಯ ವಿರುದ್ಧ ಅವರ ಮಾತಿನ ಸಮರ ಏನಿದ್ದರೂ ಕೇವಲ ಮತಗಳಿಕೆಗಷ್ಟೇ ಸೀಮಿತ'( ಔಟ್‌ಲುಕ್‌ನಲ್ಲಿ ರಾಜೇಂದರ್‌ ಪುರಿ).&lt;br /&gt;&lt;strong&gt;ಬದಲಾದ ಭಯೋತ್ಪಾದನೆ:&lt;br /&gt;&lt;/strong&gt;ಗುಜರಾತ್‌ ಗಲಭೆ ನಂತರ ಭಯೋತ್ಪಾದನೆಯ ವ್ಯಾಖ್ಯೆಗಳೇ ಬದಲಾಗಿವೆ. ಸಿಮಿ, ಇಂಡಿಯನ್‌ ಮುಜಾಹಿದಿನ್‌ ಸಂಘಟನೆಗಳ ಹೆಸರು ಬಾಂಬ್‌ಸ್ಪೋಟ ನಡೆದಾಗೆಲ್ಲಾ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಿದೆ. ಅದರೆ ಜತೆಗೆ ಸಂಘಪರಿವಾರ ಪ್ರೇಷಿತ ಕೆಲವು ಸಂಘಟನೆಗಳು ಆತ್ಮಹತ್ಯಾ ದಳದ ರಚನೆಗೆ ಮುಂದಾಗುತ್ತಾ ಕ್ರೈಸ್ತರ ಮೇಲಿನ ದಾಳಿಗೆ ತಾವೇ ಬಾಧ್ಯಸ್ಥರು ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿವೆ. ವಿಧ್ವಂಸಕ ಕೃತ್ಯಗಳ ಮೇಲಾಟದಲ್ಲಿ ಸತ್ಯವನ್ನು ಬಹಿರಂಗ ಪಡಿಸಬೇಕಾದ ಪೊಲೀಸರು ಯಾರ ಮೇಲೋ ಗೂಬೆ ಕೂರಿಸಿ, ತಮ್ಮ ಜವಾಬ್ದಾರಿಯನ್ನು ಮುಗಿಸಿಬಿಡುವ ಆತುರ ತೋರುತ್ತಿದ್ದಾರೆ.&lt;br /&gt;2-3 ದಶಕಗಳ ಹಿಂದೆ ಭಯೋತ್ಪಾದನೆ ಎಂದರೆ ಅದು ತಮಿಳು ಉಗ್ರರೋ, ಅಸ್ಸಾಂನ ಉಲ್ಫಾ ಉಗ್ರರೋ, ಪಂಜಾಬಿನ ಖಾಲಿಸ್ತಾನ್‌ ಉಗ್ರರೋ, ನಾಗಾ ಬಂಡುಕೋರರೋ ಅಥವಾ ನಕ್ಸಲ್‌ ಉಗ್ರರ ಕೃತ್ಯವೆಂದೇ ಪರಿಭಾವಿಸುವ ಕಾಲವೊಂದಿತ್ತು. ಆದರೀಗ ಕಾಲ ಬದಲಾಗಿದೆ. ಇಂದು ದೇಶದುದ್ದಕ್ಕೂ ಎಲ್ಲೇ ಬಾಂಬ್‌ಸ್ಪೋಟ, ವಿಚ್ಛಿದ್ರಕಾರಿ ಘಟನೆ ನಡೆದಾಗ ಅದರ ಹಿಂದೆ ಮುಸ್ಲಿಂ ಬಣ್ಣವುಳ್ಳ ಸಂಘಟನೆಯೊಂದರ ಹೆಸರು ತಳುಕು ಹಾಕಿಕೊಂಡಿರುತ್ತದೆ. ಪೊಲೀಸ್‌ ವೈಫಲ್ಯವೆಂಬ ಆರೋಪ ತಪ್ಪಿಸಿಕೊಳ್ಳಲು ನಡೆಸಲಾಗುವ ಬಂಧನ ಎಂದಿನ ಸರಳೀಕೃತ ಮಾದರಿಯಲ್ಲಿಯೇ ನಡೆಯುತ್ತಿರುತ್ತದೆ. ಅದರಿಂದ ಮತ್ತೊಂದು ದುರಂತ ಘಟನೆ ಅಥವಾ ವಿಧ್ವಂಸಕ ಕೃತ್ಯ ನಿಲ್ಲುವುದಿಲ್ಲ. ದೇಶದ ಇನ್ನೊಂದು ಮೂಲೆಯಲ್ಲಿ ಅದೇ ಮಾದರಿಯ ಘಟನೆಗಳು ನಡೆದಾಗ ಮತ್ತೆ ಅದೇ ರೀತಿಯ ಬಂಧನಗಳು, ವರ್ಣರಂಜಿತ ಹೇಳಿಕೆಗಳು, ಆಕರ್ಷಕ ಫೋಟೋಗಳು ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತವೆ. ವಿಸ್ಪೋಟಗಳಿಗೆ ನಿಲುಗಡೆ ಮಾತ್ರ ಕಾಣುವುದಿಲ್ಲ.&lt;br /&gt;ಅಧಿಕಾರರೂಢ ಗೃಹಮಂತ್ರಿಗಳ ರಾಜೀನಾಮೆಗೆ ಪ್ರತಿಪಕ್ಷಗಳ ಮುಖಂಡರು ಆಗ್ರಹಿಸುತ್ತಾರೆ. ಗೃಹಮಂತ್ರಿಗಳು ಪೊಲೀಸ್‌, ಬೇಹುಗಾರಿಕೆ ಬಲಿಷ್ಠವಾಗಿರುವ ಬಗ್ಗೆ ಸಮರ್ಥನೆ ನೀಡುತ್ತಾರೆ. ಅದೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ವೈಫಲ್ಯ-ಸಾಫಲ್ಯಗಳ ಚರ್ಚೆಯಲ್ಲಿ ದಿನದೂಡುತ್ತಿರುವಾಗಲೇ ಮತ್ತೊಂದು ಬಾಂಬ್‌ಸ್ಪೋಟ ತಲ್ಲಣ ಮೂಡಿಸಿ, ಮತ್ತೊಂದಿಷ್ಟು ಅಮಾಯಕರನ್ನು ಬಲಿತೆಗೆದುಕೊಂಡು ರಕ್ತದೋಕುಳಿ ಹರಿಸಿರುತ್ತದೆ.&lt;br /&gt;ಪೋಟಾ, ಟಾಡಾದಂತಹ ಕಠಿಣ ಕಾಯ್ದೆಗಳ ಅಗತ್ಯವನ್ನು ಪ್ರತಿಪಾದಿಸಲಾಗುತ್ತದೆ. ಇರುವ ಕಾಯ್ದೆಗಳೇ ಸಮರ್ಪಕ ಜಾರಿಯಾಗದೇ ಇರುವಾಗ ಹೊಸ ಕಾಯ್ದೆಗಳನ್ನು ತಂದು ಮುಗ್ಧರ ಬಂಧನಕ್ಕೆ, ಅಮಾಯಕರ ಮೇಲೆ ದೌರ್ಜನ್ಯಕ್ಕೆ ಅವಕಾಶ ಕೊಡುವಂತೆ ಒತ್ತಾಯಿಸಲಾಗುತ್ತದೆ. ಇರುವ ಕಾಯ್ದೆಗಳಲ್ಲಿಯೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವಾಗ ಹೊಸ ಕಾಯ್ದೆಗಳು ಯಾಕೆ ಬೇಕೆಂದು ಯಾರೂ ಪ್ರಶ್ನೆ ಕೇಳುವುದಿಲ್ಲ. ಕರ್ನಾಟಕ ತರಬೇಕೆಂದಿರುವ ಕೋಕಾ ಕಾಯ್ದೆ ವಿರೋಧಿಸುತ್ತಿರುವ ಕೇಂದ್ರದ ಕಾಂಗ್ರೆಸ್‌ ಸರ್ಕಾರ, ಮಹಾರಾಷ್ಟ್ರದಲ್ಲಿ ಅಂಥದೇ ಕಾಯ್ದೆ ತರಲು ಸಮ್ಮತಿ ಸೂಚಿಸುತ್ತದೆ. ಟಾಡಾ ಇದ್ದಾಗ ಆಗಿರುವ ಅನಾಹುತಗಳ ಅರಿವಿದ್ದರೂ ಬಿಜೆಪಿಯ ರಾಷ್ಟ್ರೀಯ ಮುಖಂಡರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಟಾಡಾ ಮರುಜಾರಿ ಮಾಡುವುದಾಗಿ ಹೇಳುತ್ತಿದ್ದಾರೆ.&lt;br /&gt;ಭಯೋತ್ಪಾದನೆಯ ಮೂಲ ಬೇರುಗಳನ್ನು ಕಿತ್ತೊಗೆಯದೇ ಅಲಂಕಾರಿಕ ಗಿಡಗಳ ರೆಂಬೆಕೊಂಬೆ ಕತ್ತರಿಸುವ ರೀತಿಯಲ್ಲಿ `ಕಟಿಂಗ್‌' ಮಾಡಿದರೆ ಏನು ಫಲ?&lt;br /&gt;&lt;strong&gt;ಗುಡ್ಡ ಅಗೆದು...!&lt;br /&gt;&lt;/strong&gt;ಗುಡ್ಡ ಅಗೆದು ಇಲಿಯನ್ನೂ ಹಿಡಿಯಲಿಲ್ಲ ಎಂಬ ಕತೆ ಪೊಲೀಸರು, ಭಯೋತ್ಪಾದನಾ ನಿಗ್ರಹ ದಳಗಳದ್ದಾಗಿದೆ. `ಅಹಮದಾಬಾದ್‌ ಸರಣಿ ಬಾಂಬ್‌ ಸ್ಪೋಟದ ಮಾಸ್ಟರ್‌ ಮೈಂಡ್‌ ಬಂಧನ' ಎಂಬ ಸುದ್ದಿ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ ಬೆನ್ನಲ್ಲೇ ದೆಹಲಿಯಲ್ಲಿ ಸರಣಿ ಸ್ಪೋಟವಾಗಿರುತ್ತದೆ. ಅದರ ಮಗ್ಗುಲಲ್ಲೇ ಲೋಕಸಭೆ ಪ್ರತಿಪಕ್ಷ ನಾಯಕ ಎಲ್‌.ಕೆ. ಅಡ್ವಾಣಿ ಅವರು ನೀಡಿದ `ಗುಜರಾತ್‌ನಲ್ಲಿ ಬಂಧಿತ ಉಗ್ರರ ವಿಚಾರಣೆ ವೇಳೆ ದೆಹಲಿ ಸ್ಪೋಟದ ಸಂಚು ಬಯಲುಗೊಂಡಿರುವುದನ್ನು ನರೇಂದ್ರ ಮೋದಿಯವರು ಕೇಂದ್ರ ಗೃಹಸಚಿವರಿಗೆ ಸ್ಪಷ್ಟಪಡಿಸಿದ್ದರು. ಆದರೂ ಕೇಂದ್ರ ಅಪೇಕ್ಷಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ವೈಫಲ್ಯ ಪ್ರದರ್ಶಿಸಿತು' ಎಂಬ ಆಪಾದನೆಯೂ ಪ್ರಕಟಗೊಂಡಿರುತ್ತದೆ.&lt;br /&gt;ಮುಂಬೈ, ದೆಹಲಿ, ಸೂರತ್‌, ಅಹಮದಾಬಾದ್‌ ಕೊನೆಗೆ ಬೆಂಗಳೂರಿನವರೆಗೂ ಬಾಂಬ್‌ಸ್ಪೋಟದ ವಿಧ್ವಂಸಕ ಕೃತ್ಯ ನಡೆಯುತ್ತಲೇ ಇದೆ. ಹೀಗೆ ನಡೆದಾಗಲೆಲ್ಲಾ ಪೊಲೀಸ್‌ ವೈಫಲ್ಯವೆಂಬ ಹುಯಿಲು ಪ್ರತಿಪಕ್ಷಗಳಿಂದ ಕೇಳಿ ಬರುತ್ತದೆ. ಕೇಂದ್ರ ಗೃಹಸಚಿವರ ರಾಜಿನಾಮೆ ಒತ್ತಾಯದ ಕೂಗು ಮೊಳಗುತ್ತದೆ. ಹಿಂದೆ ಇದೇ ಬಿಜೆಪಿ ನೇತೃತ್ವದ ಎನ್‌ಡಿ ಎ ಸರ್ಕಾರವಿದ್ದಾಗ ಗೋಧ್ರಾ ಹತ್ಯಾಕಾಂಡ, ಅದರ ಬೆನ್ನಲ್ಲೇ ಗುಜರಾತ್‌ ನರಮೇಧ, ಅಕ್ಷರಧಾಮದ ಮೇಲೆ ದಾಳಿ. ಇದರ ಬೆನ್ನಲ್ಲೇ ಸಂಸತ್‌ನ ಮೇಲೆ ದಾಳಿಯೂ ನಡೆದಿತ್ತು. ಆಗಲೂ ಆಡಳಿತ ಪಕ್ಷ ವಿಫಲವಾಗಿದೆಯೆಂಬ ಕೂಗೆದ್ದಿತ್ತು. ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗಿತ್ತು. ಹಾಗಂತ ಭಯೋತ್ಪಾದನೆ ಮಟ್ಟ ಹಾಕುವ ಕೆಲಸ ಯಾವ ಪಕ್ಷಗಳಿಂದಲೂ ನಡೆದಿಲ್ಲ, ನಡೆಯುತ್ತಿಲ್ಲವೆಂಬುದು ಸುಡುವಾಸ್ತವ.&lt;br /&gt;ಆತ್ಮಹತ್ಯೆ, ರಸ್ತೆ ಅಪಘಾತಗಳು ಮಾಮೂಲಾಗಿರುವಂತೆಯೇ ಭಾರತೀಯರಿಗೆ ಈಚೆಗೆ ಬಾಂಬ್‌ಸ್ಪೋಟವೂ ನಿತ್ಯದ ಸಂಗತಿಯಾಗಿದೆ. ಭಯೋತ್ಪಾದಕರ ಹೆಸರಿನಲ್ಲಿ ನಡೆಯುವ ಬಂಧನವೂ ಸಹಜವೆಂಬಂತಾಗಿಬಿಟ್ಟಿದೆ.&lt;br /&gt;ಈ ಎಲ್ಲಾ ವಿದ್ಯಮಾನಗಳನ್ನು ಪರ್ಯಾಲೋಚಿಸಿದಾಗ ಎರಡು ಸಂಗತಿಗಳು ಮೇಲ್ನೋಟಕ್ಕೆ ಕಂಡು ಬರುತ್ತವೆ. ಪೊಲೀಸರು ನಿಷ್ಕ್ರಿಯರಾಗಿದ್ದಾರೆಂದು ಬೊಬ್ಬಿಡುವುದು ಹಾಗೂ ಅವರು ತಮ್ಮ ನಿಷ್ಕ್ರಿಯತೆಯ ಅಪವಾದವನ್ನು ಹೋಗಲಾಡಿಸಲು ಯಾರನ್ನಾದರೂ ಬಂಧಿಸಿ, ಸುಲಭವಾಗಿ ಉಗ್ರರ ಹಣೆಪಟ್ಟಿ ಕಟ್ಟಿಬಿಡುವುದು.&lt;br /&gt;ಗುಡ್ಡ ಅಗೆದಾಗ ಕನಿಷ್ಠ ಇಲಿಯಾದರೂ ಸಿಗಬೇಕು. ಆದರೆ ಪೊಲೀಸರು ನಡೆಸುವ ಕಾರ್ಯಾಚರಣೆಗಳಲ್ಲಿ ಕನಿಷ್ಠ ಇಲಿಗಳೂ ಸಿಗುವುದಿಲ್ಲ. ಯಾಕೆಂದರೆ ಅವರು ಬಂಧಿಸುವ ವ್ಯಕ್ತಿಗಳು, ನಡೆದ ವಿಧ್ವಂಸಕ ಕೃತ್ಯಗಳಿಗೂ ತಾಳಮೇಳ ಸಂಬಂಧವೇ ಇರುವುದಿಲ್ಲ. ದೆಹಲಿ ಸ್ಪೋಟದ ಬೆನ್ನಲ್ಲೇ ರಾಜ್ಯದ ನಾನಾಕಡೆ `ಉಗ್ರ'ರನ್ನು ಬಂಧಿಸಲಾಗಿದೆ. ಬಿಜಾಪುರ, ಮಣಿಪಾಲ, ಮಂಗಳೂರು, ಚಿಕ್ಕಮಗಳೂರಿನ ಕೊಪ್ಪ ಹೀಗೆ ಎಲ್ಲಾ ಕಡೆ ದೆಹಲಿ, ಉತ್ತರಪ್ರದೇಶ, ಮುಂಬೈ ಹಾಗೂ ಕರ್ನಾಟಕ ಪೊಲೀಸರ ಕಾರ್ಯಾಚರಣೆಯಲ್ಲಿ ಸಾಕಷ್ಟು ಬಂಧನಗಳಾಗಿವೆ. ಹೀಗೆ ಮೇಲಿಂದ ಮೇಲೆ ಬಂಧನ, ಸಾಕಷ್ಟು ವಿಧ್ವಂಸಕ ವಸ್ತುಗಳ ವಶವಾಗುತ್ತಿದ್ದರೂ ಮತ್ತೆ ಸ್ಟೋಟಗಳು ಮರುಕಳಿಸುತ್ತಿವೆ.&lt;br /&gt;ಹಾಗಾದರೆ ಬಂಧಿಸಲ್ಪಟ್ಟವರು ಯಾರೆಂಬುದು ಪ್ರಶ್ನೆಯಾಗಿದೆ. ಮಾಸ್ಟರ್‌ ಮೈಂಡ್‌ಗಳು, ಸಿಮಿ, ಮುಜಾಹಿದಿನ್‌ ರೂವಾರಿಗಳು ಪೊಲೀಸರ ವಶವಾಗುತ್ತಿದ್ದರೂ ಸ್ಪೋಟಗಳು ಯಾಕೆ ನಿಲ್ಲಿತ್ತಿಲ್ಲ? ಮೇಲ್ನೋಟಕ್ಕೆ ಪೊಲೀಸರು ನಿಜವಾದ ಆರೋಪಿಗಳನ್ನು ಬಂಧಿಸುತ್ತಿಲ್ಲವೆಂಬುದನ್ನು ಇದು ಹೇಳುತ್ತಿದೆಯೇ?&lt;br /&gt;&lt;strong&gt;ಪೂರ್ವಗ್ರಹ?&lt;/strong&gt;&lt;br /&gt;ಒಂದು ಪೊಲೀಸ್‌ ಠಾಣೆ ಸರಹದ್ದಿನಲ್ಲಿ ಕಳುವು, ಅತ್ಯಾಚಾರ, ದರೋಡೆ, ಕೊಲೆ ನಡೆದರೆ ಇಂತಹವರೇ ನಡೆಸಿದ್ದಾರೆಂಬ ಶಂಕೆ ಪೊಲೀಸರಿಗೆ ಇರುತ್ತದೆ. ಚುನಾವಣೆ, ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ `ರೌಡಿ ಎಲಿಮೆಂಟ್ಸ್‌'ಗಳನ್ನು ಪೂರ್ವಭಾವಿಯಾಗಿ ಬಂಧಿಸಲಾಗುತ್ತದೆ. ಇದು ಪೊಲೀಸರ ಮಾಮೂಲು ಕ್ರಮ. ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲೂ ಇಂತಹದೇ ಪ್ರಕರಣಗಳು ಮರುಕಳಿಸುತ್ತಿವೆಯೇ ಎಂಬ ಅನುಮಾನವೂ ಕಾಡಲಾರಂಭಿಸಿದೆ.&lt;br /&gt;ಸೆ.22 ರಂದು ದೆಹಲಿಯ ಜಾಮಿಯಾ ನಗರದಲ್ಲಿ ನಡೆದ `ಉಗ್ರರ ಹತ್ಯೆ- ಪೊಲೀಸ್‌ ಹೀರೋ ಮೋಹನ್‌ ಚಂದ್‌ಶರ್ಮ' ಪ್ರಕರಣದ ಪೋಸ್ಟ್‌ ಮಾರ್ಟಂ ವರದಿಗಳು ಇದನ್ನೇ ಬಹಿರಂಗ ಪಡಿಸಿವೆ.&lt;br /&gt;ಈ ಹತ್ಯೆ ಪ್ರಕರಣದಲ್ಲಿ ಮೃತಪಟ್ಟ ಅತಿಫ್‌ ಅಮೀನ್‌ ಹಾಗೂ ಸಾಜಿದ್‌ ಕುಕೃತ್ಯಗಳಲ್ಲಿ ಭಾಗಿಯಾಗಿಲ್ಲ, ಅವರು ನಿರಪರಾಧಿಗಳು ಇರಬೇಕೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು `ದ ಟೆಲಿಗ್ರಾಫ್‌' ಪತ್ರಿಕೆಯ ಅಂಕಣಕಾರ ಮುಕುಲ್‌ ಕೇಶವನ್‌ ಅ.2 ರ ತಮ್ಮ ಬರಹದಲ್ಲಿ ವಿಶದವಾಗಿ ಹೇಳಿದ್ದಾರೆ. ವಿಶ್ವದ ಅತ್ಯಂತ ಹೆಮ್ಮೆಯ ಪ್ರಜಾತಾಂತ್ರಿಕ ಗಣರಾಜ್ಯವು ಬಹುಮತೀಯರ ಪ್ರಭುತ್ವವಾಗಿ ಬದಲಾಗುತ್ತಿರುವುದರ ಸಂಕೇತ ಇದಾಗಿದೆ ಎಂದು ಹೇಳಿದ್ದಾರೆ.&lt;br /&gt;ಈ ಪ್ರಕರಣ ಕುರಿತು ಮಲೆಯಾಳಂ ಪತ್ರಿಕೆಯೊಂದರಲ್ಲಿ ವಿಶ್ಲೇಷಣೆ ಮಾಡಿರುವ ಸದಾನಂದ ಮೆನನ್‌ ಕೂಡ, ಈ ಘಟನೆ ನಂತರ ಬಂಧಿಸಲ್ಪಟ್ಟ ಮೂವರನ್ನು ಪಾಲೇಸ್ತೈನ್‌ ಉಗ್ರರ ಮಾದರಿಯಲ್ಲಿ ಮುಸುಕು ಹಾಕಿ ಮಾಧ್ಯಮಗಳ ಮುಂದೆ ಪ್ರದರ್ಶಿಸಿರುವುದರ ಉದ್ದಿಶ್ಯವನ್ನು ಪ್ರಶ್ನಿಸುತ್ತಾ, ಮುಸ್ಲಿಂ ಸಮುದಾಯಕ್ಕೆ ಸೇರಿದವರೇ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆಂಬುದನ್ನು ಒತ್ತಿ ಹೇಳಲು ಈ ರೀತಿ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.&lt;br /&gt;ಸಮಾಜವಾದಿ ಪಕ್ಷದ ಮುಖಂಡ ಅಮರಸಿಂಗ್‌ ಈ ಜಾಮಿಯಾನಗರ ಪ್ರಕರಣದಲ್ಲಿ ಬಂಧಿತರಾಗಿರುವ ವ್ಯಕ್ತಿಗಳ ಕಾನೂನು ರೀತ್ಯ ಹೋರಾಟಕ್ಕೆ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್‌ ಸಚಿವರಾದ ಕಪಿಲ್‌ ಸಿಬ್ಬಲ್‌, ದಿಗ್ವಿಜ್‌ಸಿಂಗ್‌, ಸಲ್ಮಾನ್‌ಖುರ್ಷಿದ್‌ ಕೂಡ ಆರಂಭದಲ್ಲಿ ಈ ಪ್ರಕರಣ ಕುರಿತು ಆಕ್ಷೇಪವೆತ್ತಿದ್ದರು.&lt;br /&gt;&lt;strong&gt;ಯಾವುದು ಭಯೋತ್ಪಾದನೆ?&lt;br /&gt;&lt;/strong&gt;ನೆಮ್ಮದಿಯಿಂದ, ತಮ್ಮ ಪಾಡಿಗೆ ತಾವು ಬದುಕುತ್ತಿರುವ ಸಮಾಜ ಅಥವಾ ಸಮುದಾಯವನ್ನು ಭಯಕ್ಕೆ ದೂಡುವುದೆಲ್ಲವೂ ಭಯೋತ್ಪಾದನೆಯೇ. ಆದರೆ ಬಾಂಬ್‌ಸ್ಪೋಟದಂತಹ ವಿದ್ರೋಹದ ಚಟುವಟಿಕೆಗಳು ಮಾತ್ರ ಭಯೋತ್ಪಾದನೆ ಎಂಬ ವ್ಯಾಖ್ಯೆ ಪಡೆಯುತ್ತಿರುವುದು ಸಲ್ಲದ ಸಂಗತಿ.&lt;br /&gt;ಗುಜರಾತ್‌ನಲ್ಲಿ ತಿಂಗಳುಗಟ್ಟಲೇ ನಡೆದ ಗಲಭೆ, ಕರ್ನಾಟಕದಲ್ಲಿ ಕ್ರೈಸ್ತರ ಪ್ರಾರ್ಥನಾ ಮಂದಿರಗಳ ನಡೆದ ದಾಳಿ ಎಲ್ಲವೂ ಭಯೋತ್ಪಾದಕ ಕೃತ್ಯಗಳೆಂದು ನಾವ್ಯಾಕೆ ಕರೆಯುವುದಿಲ್ಲ. ಬಾಂಬ್‌ಸ್ಪೋಟದ ಕೃತ್ಯಗಳೆಂತೆಯೇ ಇವು ಕೂಡ ಹಿಂಸೆಯ &lt;em&gt;ವೈಭವೀಕರಣವಲ್ಲವೇ?&lt;br /&gt;&lt;/em&gt;ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಸಿಪಿ ಎಂ ಪಾಲಿಟ್‌ಬ್ಯುರೋ ಸದಸ್ಯೆ ೃಂದಾ ಕಾರಟ್‌, ಮಹಾರಾಷ್ಟ್ರ ನಾಂದೇಡ್‌, ಥಾನೆ, ತಮಿಳು ನಾಡಿನ ತೇನ್‌ಕಾಶಿಯಲ್ಲಿ ವಿಶ್ವಹಿಂದೂ ಪರಿಷತ್‌, ಆರೆಸ್ಸೆಸ್‌ ಹಾಗೂ ಬಿಜೆಪಿ ಮುಖಂಡರ ಮನೆಯಲ್ಲಿ ಬಾಂಬ್‌ ತಯಾರಿಕೆ ನಡೆಯುತ್ತಿದ್ದುದು, ಆಕಸ್ಮಿಕ ಸ್ಪೋಟ ಸಂಭವಿಸಿದ್ದರ ಬಗ್ಗೆ ಮಾತನಾಡಿದ್ದಾರೆ.&lt;br /&gt;ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ 2006ರಲ್ಲಿ ನಾಂದೇಡ್‌ನಲ್ಲಿ ನಡೆದ ಬಾಂಬ್‌ಸ್ಪೋಟಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದಾಗ ಮಹಾರಾಷ್ಟ್ರದಾದ್ಯಂತ ಕೋಮುಗಲಭೆ ಹುಟ್ಟುಹಾಕಲು ಸಂಚು ಬಯಲಿಗೆ ಬಂದಿತ್ತೆಂದು ಇತ್ತೀಚಿನ ಔಟ್‌ಲುಕ್‌ ಸಂಚಿಕೆ ವಿಸ್ತೃತ ವರದಿ ನೀಡಿದೆ.&lt;br /&gt;ಶಿವಸೇನೆ ಆತ್ಮಹತ್ಯಾದಳ ರಚಿಸಲು ಮುಂದಾಗಿದ್ದರೆ, ಶ್ರೀರಾಮಸೇನೆ ಕೂಡ ಆತ್ಮಹತ್ಯಾದಳ ರಚಿಸುವುದಾಗಿ ಘೋಷಿಸಿದೆ. ಭಯೋತ್ಪಾದನೆ ವಿರೋಧಿಸುವುದಾಗಿ ಹೇಳುತ್ತಿರುವ ಸಂಘಟನೆಗಳು ಆತ್ಮಹತ್ಯಾದಳಗಳನ್ನು ಸಂಘಟಿಸಿ, ವಿಸ್ಪೋಟಕ ಕೃತ್ಯಗಳಿಗೆ ಕೈಯಿಕ್ಕಿದರೆ ಪ್ರಜಾಪ್ರಭುತ್ವಕ್ಕೆ ಎಲ್ಲಿ ಬೆಲೆ ಬಂದೀತು?&lt;br /&gt;ಭಯೋತ್ಪಾದನೆಯನ್ನು ಅದು ಮುಸ್ಲಿಮರೇ ಮಾಡಲಿ, ಹಿಂದುಗಳೇ ಮಾಡಲಿ, ಸಿಖ್ಖರೇ ಮಾಡಲಿ, ಅಸ್ಸಾಮಿಯರೇ ಮಾಡಲಿ, ತಮಿಳರೇ ಮಾಡಲಿ ಅದು ಅಕ್ಷಮ್ಯ. ಯಾರೂ ಯಾರಿಗೂ ಪ್ರತಿಸ್ಪರ್ಧಿಯಾಗಿ ಅದನ್ನು ಮಾಡಕೂಡದು.&lt;br /&gt;ಅಹಿಂಸಾ ಪರಮೋ ಧರ್ಮ ಎಂದು ಪ್ರತಿಪಾದಿಸಿದ, ದಯವೇ ಧರ್ಮದ ಮೂಲವಯ್ಯಾ ದಯೆಯಿಲ್ಲದ ಧರ್ಮ ಅದಾವುದಯ್ಯ ಎಂದು ಪ್ರತಿಪಾದಿಸಿದ ಭಾರತೀಯರ ಸಂಸ್ಕೃತಿ ಹಾಗೆ ಉಳಿಯಬೇಕಾದರೆ ಎಲ್ಲರೂ ಹಿಂಸೆಯನ್ನು ಖಂಡಿಸಬೇಕು. ಹಿಂಸಾ ಪ್ರತಿಪಾದಕರ ವಿರುದ್ಧ ಒಂದಾಗಬೇಕು. ಬುದ್ದ, ಮಹಾವೀರ, ಗಾಂಧಿ ನೆಲೆಸಿದ ನಾಡಿನಲ್ಲಿ ಹಿಂಸೆಯ ತಾಂಡವನೃತ್ಯಕ್ಕೆ ಧ್ವನಿ ಸೇರಿಸಿದರೆ ಅನಾಗರಿಕ ಕಾಲಕ್ಕೆ, ಶಿಲಾಯುಗದ ಕಾಲಕ್ಕೆ ಮತ್ತೆ ಹೋಗುವುದರಲ್ಲಿ ಸಂಶಯವಿಲ್ಲ.&lt;br /&gt;ಶಿಲಾಯುಗದ ಕಾಲದ ಜನ, ಒಳ್ಳೆಯ ಬೇಲಿಗಳು ಒಳ್ಳೆಯ ನೆರೆ ಹೊರೆಯವರನ್ನು ಸೃಷ್ಟಿಸುತ್ತವೆ ಎಂದು ನಂಬಿದ್ದರು ಎಂದು ರಾಬಟ್‌ಫ್ರಾಸ್ಟ್‌ ತನ್ನ ಪದ್ಯದಲ್ಲಿ ಹೇಳುತ್ತಾನೆ. ಅದು ಮತ್ತೆ ಮರುಕಳಿಸಬಾರದಲ್ಲವೇ?&lt;br /&gt;`ಮಳೆ ಬಂದಾಗ ಓಡಿ ಹೋಗಿ ಮರದ ಕೆಳಗೆ ನಿಂತು ಆಸರೆ ಪಡೆಯುವವರು ಅದು ಯಾವ ಜಾತಿಯ ಮರ, ತನ್ನ ಬಗಲಲ್ಲಿ ನಿಂತವರು ಯಾವ ಜಾತಿ, ಯಾವಧರ್ಮದವರು ಎಂದು ನೋಡುವುದಿಲ್ಲ. ಭಾರತವೆಂಬ ಮರವನ್ನು ಆಶ್ರಯಿಸುವವರು ಕೂಡ ಹೀಗೆ ಮಳೆಯಿಂದ ಆಸರೆ ಪಡೆಯಲು ನಿಂತವರೆಂಬುದನ್ನು ಮರೆಯಬಾರದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8477112084544236406-8629135535257701505?l=horaganavanu.blogspot.com' alt='' /&gt;&lt;/div&gt;</content><link rel='replies' type='application/atom+xml' href='http://horaganavanu.blogspot.com/feeds/8629135535257701505/comments/default' title='Post Comments'/><link rel='replies' type='text/html' href='http://www.blogger.com/comment.g?blogID=8477112084544236406&amp;postID=8629135535257701505' title='1 Comments'/><link rel='edit' type='application/atom+xml' href='http://www.blogger.com/feeds/8477112084544236406/posts/default/8629135535257701505'/><link rel='self' type='application/atom+xml' href='http://www.blogger.com/feeds/8477112084544236406/posts/default/8629135535257701505'/><link rel='alternate' type='text/html' href='http://horaganavanu.blogspot.com/2008/10/blog-post.html' title='ಭಯ ಉತ್ಪಾದನೆ: ಆ ಮುಖ ಈ ಮುಖ'/><author><name>ಹೊರಗಣವನು</name><uri>http://www.blogger.com/profile/02086735188423253549</uri><email>noreply@blogger.com</email><gd:image rel='http://schemas.google.com/g/2005#thumbnail' width='33' height='11' src='http://1.bp.blogspot.com/_gAz_d3MDX1I/SQCIRgnwVGI/AAAAAAAAAA8/k4XtamgCL4c/S220/vaiga2.jpg'/></author><thr:total>1</thr:total></entry></feed>
